ಓ ಶಿವನೇ

ಓ ಶಿವನೇ

ನೀನು ಸೃಷ್ಟಿಸಿದ ಮಾನವನು ಹೇಗಾಗಿದ್ದಾನೆ ನೋಡು ಓ ಶಿವನೇ,
 
ಇವನ ಬಾಳಿನಲ್ಲಿ ಚೈತನ್ಯವನ್ನು ತುಂಬಲು ಆಸೆಯನ್ನು ನೀ ನೀಡಿದೆ, 
ಆದರೆ ಅದನ್ನು ದುರಾಸೆಯನ್ನಾಗಿ ಪರಿವರ್ತಸಿ,
ತನ್ನ ನೆಮ್ಮದಿಯನ್ನು ಹೇಗೆ ಹಾಳು ಮಾಡಿಕೊಂಡಿದ್ದಾನೆ ನೋಡು ಓ ಶಿವನೇ.
 
ಇವನಿಗೆ ಬದುಕಲು ಸುಂದರವಾದ ಪರಿಸರವನ್ನು ನೀ ನೀಡಿದೆ,
ಆದರೆ ಆ ಪರಿಸರವನ್ನೇ ನಾಶಮಾಡಿ,
ಸುಂದರ ಬದುಕು ಕಟ್ಟಲು ಹೊರಟಿದ್ದಾನೆ, ಅದು ಸಾಧ್ಯವೇ ಓ ಶಿವನೇ.
 
ಜೀವನದಲ್ಲಿ ಏನಾದರೂ ಸಾಧಿಸಲು ‘ನಾನು’ ಅನೋದನು ನೀ ನೀಡಿದೆ,
ಇಂದು ಇವನು  ಇಡೀ  ವಿಶ್ವಕ್ಕೆ ನಾನೇ ಅಧಿಪತಿ ಎಂದು,
ಹೇಗೆ ಹೊಡೆದಾಡಿಕೊಂಡು ಸಾಯುತ್ತಿದ್ದಾನೆ ನೋಡು ಓ ಶಿವನೇ, 
 
ಬಾಳಿನಲ್ಲಿ ಪ್ರೀತಿಯನ್ನು  ತುಂಬಲು  ಸಂಬಂಧಗಳ ಆಸರೆಯನ್ನು ನೀ ನೀಡಿದೆ 
ಆದರೆ  ಇವನು ಅವುಗಳನ್ನು ತನ್ನ ಸ್ವಾರ್ಥಕ್ಕೆ  ಬಳಿಸಿ,
ಅವುಗಳಿಗೆ ಬೆಲೆಯೆ ಇಲ್ಲದಾಗೆ ಮಾಡಿದ್ದಾನೆ ಓ ಶಿವನೇ
 
ಈ ಭೂಮಿ ಮೇಲೆ ಬದುಕಲು ಪುಟ್ಟ ಜಾಗವನ್ನು ನೀ ನೀಡಿದೆ,
ಆದರೆ ಇವನು ದುಡ್ಡಿನ ವ್ಯಾಮೋಹದಲ್ಲಿ
ಇಡೀ  ಭೂಮಿಯನ್ನು ಕೊಂಡುಕೊಳ್ಳಲು ಹೊರಟಿದ್ದಾನೆ ಓ ಶಿವನೇ.
 
ಭೂಮಿಯ ಮೇಲೆ ನೀನು ಸೃಷ್ಟಿಸಿದ ಬುದ್ಧಿ ಜೀವಿ ಇವನೇ ಅಲ್ಲವೇ
ಆದರೆ ಇಂದು ಇವನು ಬುದ್ಧಿಯಿಲ್ಲದ ಜೀವಿಯಾಗಿ ಉಳಿದಿದ್ದಾನೆ ಓ ಶಿವನೇ.
 
ನೀನು ಮುಂದೆ ಸೃಷ್ಟಿಸಲು ಹೊರಟಿರುವ,
ಮಾನವನಲ್ಲಿ ಇವುಗಳನ್ನು ಸರಿಪಡಿಸಲಿಲ್ಲ ಎಂದರೆ,
ನೀನು ಸೃಷ್ಟಿಸಿದ ಈ ಸುಂದರ ಜಗತ್ತಿಗೆ ಉಳಿಗಾಲಿಲ್ಲ ಓ ಶಿವನೇ. 
 
 

Comments

Submitted by kavinagaraj Mon, 02/15/2016 - 15:08

ಜಗತ್ತೇ ಹೀಗೆ! ಅದು ಇರುವಂತೆ ಒಪ್ಪಿಕೊಳ್ಳಬೇಕಾಗಿದೆ. ಸೃಷ್ಟಿ, ಸ್ಥಿತಿ. ಲಯಗಳಿದ್ದರೇನೇ ಜಗತ್ತು ಸುಂದರ, ಪರಿಪೂರ್ಣವಾಗುವುದು! ಸದಾ ಸುಂದರವಾಗಿರಲಿ ಎಂದು ಬಯಸುವುದೇ ಕವಿಹೃದಯ!!

Submitted by Nagaraj Bhadra Mon, 02/15/2016 - 22:46

In reply to by kavinagaraj

ನಮಸ್ಕಾರ ಸರ್.ಪ್ರತಿಕ್ರಿಯೆಗೆ ವಂದನೆಗಳು. ಕವಿ ಮನಸ್ಸು ಯಾವಾಗಲೂ ಸುಂದರ ಜಗತ್ತನು ಬಯಸುತ್ತದೆ ಸರ್.ನೀವು ಹೇಳಿದು ನಿಜ.