"ಮಲ್ಲಾಡಿಹಳ್ಳಿಯಲ್ಲಿ ಶ್ರೀ ರಾಘವೇಂದ್ರಸ್ವಾಮಿ, ಮತ್ತು ಶ್ರೀ ಸೂರ್ದಾಸ್ ಜೀ ರವರ ಸ್ಮಾರಕ ದ ಭೇಟಿ" !

"ಮಲ್ಲಾಡಿಹಳ್ಳಿಯಲ್ಲಿ ಶ್ರೀ ರಾಘವೇಂದ್ರಸ್ವಾಮಿ, ಮತ್ತು ಶ್ರೀ ಸೂರ್ದಾಸ್ ಜೀ ರವರ ಸ್ಮಾರಕ ದ ಭೇಟಿ" !

ನಾನು (ವೆಂಕಟೇಶ್) ಮತ್ತು ನನ್ನ ಶ್ರೀಮತಿ ಸರೋಜ  ’ಶ್ರೀ ರಾಘವೇಂದ್ರ ಸ್ವಾಮಿಗಳು ಮತ್ತು ಶ್ರೀ ಸೂರ್ದಾಸ್ ಜೀ ರವರ ಸ್ಮಾರಕವಾಗಿ ನಿರ್ಮಿಸಲ್ಪಟ್ಟ "ಸಮಾಧಿ ಮಂದಿರ-ಧ್ಯಾನಮಂದಿರ-ಅತಿಥಿ ಗೃಹ ಸಮುಚ್ಛಯ ಸ್ಮಾರಕ" ವನ್ನು ನೋಡಲು  ೨೦೧೬ ರ, ಮಾರ್ಚ್ ತಿಂಗಳಿನ ಕೊನೆಯಲ್ಲಿ ಹೋಗಿದ್ದೆವು.
 
 ಸ್ವಾಮಿ ರಾಮಕೃಷ್ಣ ಪರಮಹಂಸರ ಸಮಾಧಿ ಮಂದಿರದ ಶೈಲಿಯಲ್ಲೇ ನಿರ್ಮಿಸಿರುವ  ಈ ಸ್ಮಾರಕ ಮಲ್ಲಾಡಿಹಳ್ಳಿಯ ನಿಷ್ಥಾವಂತ ಭಕ್ತರ ಅಂತರಂಗದ ಭಾವವನ್ನು ಪ್ರತಿಧ್ವನಿಸುತ್ತದೆ.  ವಿಶ್ವದಾದ್ಯಂತ ಭಕ್ತರು ಮತ್ತು ಶ್ರದ್ಧಾಳುಗಳನ್ನು ಹೊಂದಿದ ಶ್ರೀ ರಾಘವೇಂದ್ರರು ನಿತ್ಯವಂದ್ಯರು ಮತ್ತು ಪ್ರಾತಃಸ್ಮರಣೀಯರು. 
 
ಚಿತ್ರದುರ್ಗದ ಮಲ್ಲಾಡಿಹಳ್ಳಿಯಲ್ಲಿ ಕಂಗೊಳಿಸುತ್ತಿರುವ ಈ ವಿದ್ಯಾ ಮಂದಿರ, ಹಾಗು ಯೋಗಾಶ್ರಮದ ತಾನವಾಗಿರುವ ಶಿಕ್ಷಣ ಸಂಷ್ಟೇಗಳನ್ನು ಶ್ರೀ ಮರುಘರಾಜೇಂದ್ರ ಸ್ವಾಮಿಗಳು ಅತ್ಯಂತ ಭಕ್ತಿ, ಶ್ರದ್ಧೆ ಮತ್ತು ಅಬಿಮಾನಗಳಿಂದ ಪೋಷಿಸುತ್ತಿದ್ದಾರೆ. ಬೆಂಗಳೂರು ಮೈಸೂರಿಗೆ ಭೇಟಿಕೊಡುವ ಎಲ್ಲ ಪರ್ಯಟಕರಿಗೂ  ಈ ತಾಣ ಒಂದು ಯಾತ್ರಾಸ್ಥಳದಂತೆ ಪಾವನವಾದ ಜಾಗ !
‘’ಸಮಾಧಿ ಮಂದಿರ-ಧ್ಯಾನಮಂದಿರ-ಅತಿಥಿ ಗೃಹ ಸಮುಚ್ಛಯ ಸ್ಮಾರಕ" ನಿರ್ಮಾಣವಾಗಿದೆ
 
ಶ್ರೀ ರಾಘವೇಂದ್ರ ಸ್ವಾಮಿಗಳ  ಅಭಿಮಾನಿಗಳು, ಶಿಷ್ಯರು, ಸಹೃದಯ ದಾನಿಗಳ, ಉದಾರ ಬುದ್ಧಿಯುಳ್ಳವರ ದಾನದಿಂದ ಸ್ವಾಮೀಜಿಯವರ ದಿವ್ಯಚೇತನಗಳಿಗೆ ತಮ್ಮ ಕೃತಜ್ಞತೆಯ ಕುರುಹಾಗಿ ‘’ಸಮಾಧಿ ಮಂದಿರ-ಧ್ಯಾನಮಂದಿರ-ಅತಿಥಿ ಗೃಹ ಸಮುಚ್ಛಯ” ಸ್ಮಾರಕವೊಂದನ್ನು ಕಟ್ಟುವ, ಬೃಹತ್  ವೆಚ್ಚದ  ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು, ಅದು ಈಗ ಕಾರ್ಯಗತ ಗೊಂಡಿದೆ. 
 
ಹಮ್ಮಿಕೊಂಡಿರುವ ಪ್ರಮುಖವಾದ ೩ ಯೋಜನೆಗಳೆಂದರೆ :
 
೧. ಮಾತೃಮಂದಿರ : ಸಮಾಜ ಮತ್ತು ಕುಟುಂಬದಿಂದ ಪರಿತ್ಯಕ್ತ್ಯರಾದ ಮತ್ತು ಶೋಷಿತ ಮಹಿಳೆಯರ ಪುನರ್ವಸತಿ ಯೋಜನೆ. 
 
೨. ತಿರುಕರಂಗ ತರಬೇತಿ ಮತ್ತು ಸಂಶೋಧನಾ ಕೇಂದ್ರ : 
 
ಸ್ವಾಮೀಜಿಯವರು ರಂಗಚಟುವಟಿಕೆಗಳ ಬಗೆಗೆ ಅಪಾರ ಆಸಕ್ತಿಯನ್ನು ಹೊಂದಿದ್ದರು. ಅವರು ತಮ್ಮ ಪೂರ್ವಾಶ್ರಮದಲ್ಲಿ ಅಂಬಾಪ್ರಸಾದ ನಾಟಕ ಮಂಡಳಿಯಲ್ಲಿ ಪ್ರಮುಖ ಸೇವೆಯನ್ನು ಸಲ್ಲಿಸಿದವರು. ನಟರಾಗಿ ನಾಟಕಕಾರರಾಗಿ ತಮ್ಮ ಸಾಂಸ್ಕೃತಿಕ ವ್ಯಕ್ತಿತ್ವವನ್ನು ವ್ಯಕ್ತಗೊಳಿಸಿದ ಪೂಜ್ಯ ಸ್ವಾಮೀಜಿಯವರಿಗೆ "ತಿರುಕರಂಗ ರಂಗತರಬೇತಿ  ಮತ್ತು ಸಂಶೋಧನಾ ಕೇಂದ್ರವು'" ಅತ್ಯುತ್ಕೃಷ್ಟ ಜಂಗಮ ಸ್ಮಾರಕವೆನ್ನಿಸುವುದು.
 
೩. ಕೇಂದ್ರ ಗ್ರಂಥಾಲಯ : ಅನಾಥಸೇವಾಶ್ರಮವು ಜ್ಞಾನವನ್ನು ನೀಡುವ ಪ್ರಧಾನ ಮಾರ್ಗವಾದ ಮುದ್ರಿತ ಅಕ್ಷರ ಮಾಧ್ಯಮವನ್ನು ಒದಗಿಸುವ ಕೇಂದ್ರವಾಗಿ ಕೆಲಸ ಮಾಡುತ್ತಾ ಜನತೆಗೆ ಜ್ಞಾನದ ಮಾರ್ಗವನ್ನು ತೆರೆಯುವುದು. ಈ ಕೇಂದ್ರ ಗ್ರಂಥಾಲಯವು ಮಲ್ಲಾಡಿಹಳ್ಳಿ ಮತ್ತು ಸುತ್ತಮುತ್ತಲಿನ ಅಧ್ಯಯನಾಸಕ್ತಿ ಹೊಂದಿರುವ ಜನರಿಗೆ ಓದಿನ ಅವಕಾಶವನ್ನು ಒದಗಿಸುತ್ತದೆ. 
 
೪. ಬಡವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ : ಇದನ್ನು ಅರ್ಹ ಬಡ ಹಾಗೂ ಅನಾಥ ಮಕ್ಕಳ ಶೈಕ್ಷಣಿಕ ಸದುಪಯೋಗಗಳಿಗಾಗಿ ಬಳಸಿಕೊಳ್ಳಲಾಗುವುದು. 
 
೫. ರಂಗಕಲೆ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ನಿಧಿ 
 
ಈ ನಿಧಿಯನ್ನು ಆಶ್ರಮದಲ್ಲಿ ವರ್ಷಪೂರ್ತಿ  ನಡೆಯುವ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಿಗೆ  ಹಾಗೂ ವಿಶೇಷವಾಗಿ “ತಿರುಕನೂರಿನಲ್ಲಿ ರಂಗದಾಸೋಹ” ಕಾರ್ಯಕ್ರಮಕ್ಕೆ ವಿನಿಯೋಗಿಸುವ ನಿರ್ಣಯವನ್ನು ತೊಡಲಾಗಿದೆ.
 
ಐತಿಹ್ಯ :
 
ಮೂಲತಃ  ಕೇರಳದಲ್ಲಿ ಒಬ್ಬ ಸದ್ಗೃಹಸ್ತರು, ಸ್ಜೋತಿಷಿಗಳು ಹಾಗೂ ವೇದಪಾರಂಗತರಾಗಿದ್ದ   'ಅನಂತ ಪದ್ಮನಾಭ ನಂಬೂದರಿ',  ಪದ್ಮಾಂಬಳ್,  ಎಂಬ  ಬ್ರಾಹ್ಮಣ ಪರಿವಾರದಲ್ಲಿ  ಜನ್ಮವೆತ್ತಿ ತಮ್ಮ ಬಾಲ್ಯದಿನಗಳನ್ನು ಬಹಳ ಅಸ್ವಸ್ಥತೆಯಿಂದ ನರಳಿದ 'ಕುಮಾರಸ್ವಾಮಿ'ಯನ್ನು ಅವರ  ತಾಯಿಗಳು ದಕ್ಷಿಣ ಕನ್ನಡದ ಮೂಕಾಂಬಿಕ  ದೇವಿಯ ಶರನಿಗೆ ಕರೆತರುತ್ತಾರೆ. ಹಲವಾರು ದೇವರಗಳ ಉಪಾಸನೆಗಳಿಂದ  ಕೃಪಾ ಕಟಾಕ್ಷ ಹಾಗು ವೈದ್ಯಕೀಯ ನೆರವಿನಿಂದ ಬಾಲಕನಿಗೆ ಮಾತಾಡುವ ಶಕ್ತಿ ಪ್ರಾಪ್ತವಾಗುತ್ತದೆ. ಮಂತ್ರಾಲಯದ ಯತಿಗಳು ಕುಮಾರಸ್ವಾಮಿಗೆ 'ರಾಘವೇಂದ್ರ'ನೆಂದು ನಾಮಕರನ ಮಾಡಿ ಹರಸಿದ ಮೇಲೆ, ದಿನೇ ದಿನೇ ರಾಹವೆಮ್ದ್ರನು ಇತರ ಬಾಲಕರ ತರಹ ಪ್ರವ್ರುದ್ಧಮಾನಕ್ಕೆ ಬರುವ ಹೊತ್ತಿಗೆ, ಅವನ ವೃದ್ಧ ಮಾತಾ ಪಿತೃಗಳು ಅವನನ್ನು ಬಾರಕೂರಿನ ಶ್ರೀ ನರಸಿಂಹಯ್ಯ, ಪುಥಲಿಬಾಯಿ ಎಂಬ  ಒಂದು ಸದ್ಗೃಹಸ್ತ  ಕುಟುಂಬಕ್ಕೆ ಒಪ್ಪಿಸಿ ಅಸು ನೀಗುತ್ತಾರೆ. 
 
ಬಾರಕೂರಿನಲ್ಲಿ  ರಾಘವೇಂದ್ರ ಬಾಲ್ಯದಿಂದಲೇ ದೇವರನ್ನು ಕಾಣುವ ಗೀಳನ್ನು ಬೆಳೆಸಿಕೊಂಡು ಅದನ್ನು ಸಾರ್ಥಕಗೊಳಿಸಲು  ದೇಶದಾದ್ಯಂತ  ಮಠ, ಮಂದಿರಗಳೆಂದು ಅಲೆದಾಡುತ್ತಾ ಕಂಡ ಕಂಡ ಸಾಧು ಸಂತರನ್ನು ಭೇಟಿಯಾಗಿ  ತಮ್ಮ ಮನದಾಸೆಯನ್ನು ತಿಳಿಸುತ್ತಾ ಯಾವ ಉತ್ತರವೂ ದೊರೆಯದಿದ್ದಾಗ ಕೊನೆಗೆ ಸ್ವಾಮಿ ಶಿವಾನಂದರ ಆಶ್ರಯಕ್ಕೆ ಬಂದು ಅವರ ಆಶ್ರಯದಲ್ಲಿ  ಧ್ಯಾನ ಮಾರ್ಗವನ್ನು ಹಿಡಿದರು. ಬ್ರಹ್ಮಚರ್ಯದ ವ್ರತಧಾರಣೆ ಮಾಡಿದರು. ಸ್ವಾಮಿ ಶಿವಾನಂದರ ಮಾರ್ಗದರ್ಶನದ ಪ್ರಕಾರದ ಮೇರೆಗೆ  ಬರೋಡಾಕ್ಕೆ ಹೋಗಿ , ಪ್ರೊ.ರಾಜರತ್ನ ಮಾಣಿಕ್‌ರಾಯ್‌ರವರ ಶಿಷ್ಯತ್ವ ವಹಿಸಿ ಯೋಗ ಮತ್ತು ದೈಹಿಕ ಶಿಕ್ಷಣದ ತರಬೇತಿಯನ್ನು ಪಡೆದು ಬಿ.ಪಿ.ಇ ಎನ್ನುವ ಪದವಿಯನ್ನು ಗಳಿಸಿದರು. 
 
ಅಲ್ಲಿಂದ ಮುಂದೆ  ಈಗಿನ ಪಾಕಿಸ್ತಾನದಲ್ಲಿರುವ  ಕರಾಚಿನಗರಕ್ಕೆ ಗೆ ಹೋಗಿ ಅಂದಿನ ಅತ್ಯಂತ ಪ್ರಸಿದ್ಧ ಆಯುರ್ವೇದ ತಜ್ಞರಾದ ಪಂಡಿತ್ ಲಕ್ಷ್ಮಣಬಾಬಾರವರಲ್ಲಿ ಆಯುರ್ವೇದ ವೈದ್ಯ ವಿದ್ಯೆಯ ಜ್ಞಾನವನ್ನು ಗಳಿಸಿದರು. ಹೀಗೆ ವೈದ್ಯ ಮತ್ತು ಯೋಗ ವಿದ್ಯೆಗಳ ಸಂಚಯನ ಮಾಡಿಕೊಂಡ ಈ ತರುಣರು ಮಹಾತ್ಮ  ಗಾಂಧೀಜಿಯವರ ಪ್ರಭಾವಕ್ಕೆ ಒಳಪಟ್ಟು ಗ್ರಾಮೀಣ ಭಾರತದ ಸೇವೆಗಾಗಿ ತಮ್ಮನ್ನು ತಾವು ಮುಡಿಪಾಗಿಟ್ಟರು. ಮುಂದೆ,  ಅವರು  ಮೈಸೂರು ಸಂಸ್ಥಾನಕ್ಕೆ ಬಂದು ಕರಾವಳಿ ಮತ್ತು ಮಧ್ಯ ಕರ್ನಾಟಕ ಭಾಗದ ಗ್ರಾಮೀಣ ಪ್ರದೇಶಗಳ ಯುವಕರಿಗಾಗಿ ೪೧ ದಿನಗಳ ಯೋಗ ಶಿಬಿರಗಳನ್ನು ನಡೆಸುತ್ತಾ, ಜೀವನ ಮೌಲ್ಯಗಳನ್ನು ಜಾಗತೃಗೊಳಿಸುತ್ತಾ ಊರುರು ಸುತ್ತುತ್ತಿದ್ದರು.  ಹಾಗೆ ನಡೆಸಿದ ಅಲೆದಾಟದ  ಸಮಯದಲ್ಲಿ ರಾಘವೇಂದ್ರರು  ೧೯೪೨ ರ ಡಿಸೆಂಬರ್ ತಿಂಗಳಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿ ಎಂಬ ಗ್ರಾಮದಲ್ಲಿ ತಮ್ಮ ಶಿಬಿರವನ್ನು ಹಮ್ಮಿಕೊಂಡರು  
 
ಮಲ್ಲಾಡಿಹಳ್ಳಿಯ ಶಿಬಿರ ಮುಗಿಯುವ ಸಮಯದಲ್ಲಿ ದೇಶದಲ್ಲಿ  ಕಾಲರಾ ಮಾರಿಯ ಹಾವಳಿ ಆರಂಭವಾಯಿತು. ಮಲ್ಲದಿಹಲ್ಲಿಯಲ್ಲೂ  ಹೊಕ್ಕ ಕಾಲರಾ ಜನರಲ್ಲಿ ಸಾವಿನ ಭೀತಿಯನ್ನು ಬಿತ್ತಿತು. ಇನ್ನೂ ಮಲ್ಲಾಡಿಹಳ್ಳಿಯಲ್ಲಿಯೇ ಉಳಿದಿದ್ದ .ರಾಘವೇಂದ್ರ ರಾಯರು  ಪ್ರತಿ ಮನೆಗಳಿಗೂ ಹೋಗಿ ತಮಗೆ ತಿಳಿದಿದ್ದ  ಆಯುರ್ವೇದಿಕ ಜೌಷದೊಪಚಾರಗಳನ್ನು ನೀಡಿ ರೋಗಿಗಳನ್ನು ಬದುಕಿಸಿದರು.  ತಾವು ವಾಸಿಸುವ  ಪರಿಸರದ ಸ್ವಚ್ಛತೆಗಳ ಬಗ್ಗೆ ಮನದಟ್ಟು ಮಾಡಿಕೊಟ್ಟರು. ಜೀವನ ವಿಧಾನವನ್ನು ನಿಯಂತ್ರಿಸಿಕೊಟ್ಟು, ಶುಚಿತ್ವಕ್ಕೆ ಹೆಚ್ಚು ಆದ್ಯತೆ ಕೊಟ್ಟು, ಬಿಸಿಯಾದ, ತಾಜಾ ಆಹಾರ ಸೇವನೆಯ ಮಹತ್ವವನ್ನು ತಿಳಿಸಿಕೊಟ್ಟರು ,
 
ರಾಘವೇಂದ್ರರ ಎಲ್ಲರನ್ನು ಒಂದೆ ಸಮನೆ ಕಾಣುವ ಮುಕ್ತ ಮನಸ್ಸಿನ  ಸೇವೆಯಿಂದ ಊರಿನ ಜನರಿಗೆ  ಅವರಲ್ಲಿ ಅಪಾರ ಗೌರವ, ಪ್ರೀತಿ ವಿಶ್ವಾಸಗಳು ಒಡಮೂಡಿದವು ಅವರನ್ನು ಈ ಊರಿನಲ್ಲೇ ಶಾಶ್ವತವಾಗಿ ಉಳಿಯುವಂತೆ ಪ್ರೀತಿ ಪೂರ್ವಕವಾಗಿ ಒತ್ತಾಯಿಸಿದರು. ಸಹೃದಯರಾಗಿದ್ದ ರಾಘವೇಂದ್ರರು,  ಇನ್ನೂ ಹಲವಾರು ಗ್ರಾಮಗಳಲ್ಲಿನ ಜನರಿಗೆ ಉಪಕರಮಾಡುವ ಆಶೆಯಿರುವುದನ್ನು ತಿಳಿಸಿ, ಮತ್ತೊಂದು ಗ್ರಾಮಕ್ಕೆ ಹೋಗುವ ಸಿದ್ಧತೆಯಲ್ಲಿದ್ದರು.  ಹೋಗುವ ಮೊದಲು ತಮ್ಮ ಮಾಳೇನಹಳ್ಳಿಯ ಗುರು, ಶಂಕರ ಲಿಂಗ ಭಗವಾನರ ಆಶೀರ್ವಾದಗಳಿಸಲು ಹೊದರು.  ಆಗ ಭಗವಾನರು, ಏನೂ ಸಾಮಾನ್ಯ ನಾಗರಿಕೆ ಸೌಲಭ್ಯತೆಗಳೇ ಇಲ್ಲದ ಮಲ್ಲಾಡಿಹಳ್ಳಿ, ನಮ್ಮ ರಾಷ್ಟ್ರದ ಉದಾಹರಣೆಯಂತಿದ್ದು  ಅಲ್ಲೇ ಇದ್ದು,ತಮ್ಮ ಯೋಗದಾನವನ್ನು ಮಾಡಲು ಆಜ್ಞೆಯಿತ್ತರು. ಹಿರಿಯ  ಯತಿ ಶಂಕರಲಿಂಗ ಭಗವಾನರ ಆಜ್ಞಾನುಸಾರ ಮಲಾಡಿಹಳ್ಳಿಯಲ್ಲೇ  ತಮ್ಮ ಜೀವನವನ್ನು ಕಳೆಯಲು ರಾಘವೇಂದ್ರರು  ನಿಶ್ಚಯಿಸಿದರು 
 
‘ವ್ಯಾಯಾಮ್ ಮೇಷ್ಟ್ರು’ ಎಂದು  ಸ್ಥಳೀಯ ಜನರಿಂದ ಕರೆಸಿಕೊಳ್ಲ್ಪಡುತ್ತಿದ್ದ ರಾಘವೇಂದ್ರರಿಗೆ, ತಮ್ಮ ಬಾಲ್ಯದ ದಿನಗಳ ಅಸ್ಪಸ್ಟ ನೆನಪುಗಳು ಬಂದವು. ತಂದೆ ತಾಯಂದಿರ ಮರಣದ ಬಳಿಕ ತಾವು ಅನಾಥರಂತೆ ಬೆಳೆದು ಬಂದ ಪರಿ ಅದೆಷ್ಟೋ ವರ್ಷಗಳ ಬಳಿಕ ಅವರಿಗೆ ತಿಳಿಯಿತು. ಹೀಗಾಗಿ ರಾಘವೇಂದ್ರರು  ಅನಾಥರ, ಬಲಹೀನರ , ರೋಗಿಗಳ  ಮತ್ತು ಬಡವರ ಜೀವನ ಶೈಲಿಯನ್ನು ಸುಧಾರಿಸಿ ಅವರ ಜೀವಿನದಲ್ಲಿ ಬೆಳಕು ಮೂಡಿಸುವ  ದಿಟ್ಟಿನಲ್ಲಿ ತಮ್ಮ ಮುಂದಿನ  ಜೀವನವನ್ನು ಮುಡಿಪಾಗಿಟ್ಟರು  
 
ಸೇವಾಶ್ರಮದ ಶುಭಾರಂಭ
ಭಾರತಿಯ ಪರಂಪರೆಯ ಯೋಗ, ವ್ಯಾಯಾಮಗಳನ್ನೂ ಅತ್ಯಂತ ನಿಷ್ಥೆ ಪ್ರೀತಿ ವಿಶ್ವಾಸದಿಂದ ಬೋಧಿಸಿ ಗ್ರಾಮೀಣ  ಜನರಿಗೆ ಸ್ವತಃ ತಾವೇ ೫ ದಶಕಗಳ ಕಾಲ ತಪ್ಪದೆ ಆಷಧಿಗಳನ್ನೂ ವಿತರಿಸುತ್ತಿದ್ದರು  ಯಾವ ಸಾಂಪ್ರದಾಯಿಕ ಮಠಕ್ಕೆ ಸೇರದೆ, ನಿಸ್ವಾರ್ಥ, ಪಾರದರ್ಶಿ  ಆದರ್ಶ ಜೀವನವನ್ನು ನಡೆಸುತ್ತಿದ್ದ 'ರಾಘವೇಂದ್ರರನ್ನು' ಮಲ್ಲಾಡಿಹಳ್ಳಿಯ ಮತ್ತು ಸುತ್ತಮುತ್ತಲಿನ ಜನತೆ, ಅವರ ಸಮಾಜಮುಖಿ  ವ್ಯಕ್ತಿತ್ವವನ್ನು ಮನಗಂಡು “ಸ್ವಾಮೀಜಿ” ಎಂದು ಕರೆದರು. ವಾಸ್ತವವಾಗಿ ರಾಘವೇಂದ್ರರು ತಮ್ಮನ್ನು 'ತಿರುಕ' ಎಂದೆ ಸಂಬೋಧಿಸಿಕೊಳ್ಳುತ್ತಿದ್ದರು. 'ತಿರುಕ' ಎನ್ನುವ ಹೆಸರಿನಲ್ಲೇ ಹಲವಾರು ಪುಸ್ತಕಗಳನ್ನು ರಚಿಸಿದ ಅವರು, ಮಲ್ಲಾಡಿಹಳ್ಳಿ ಜನರಿಗೆ ಪ್ರೀತಿಯ  ‘ಶ್ರೀ ರಾಘವೇಂದ್ರ ಸ್ವಾಮೀಜಿ’ಯಾದರು.
 
೧೯೪೩ನೇ ಇಸವಿ ಮಹಾಶಿವರಾತ್ರಿಯ ಶುಭದಿನದಂದು ಊರಿನವರು ಪ್ರೀತಿಯಿಂದ ನೀಡಿದ ಒಂದು ನಿವೇಶನ, ಮತ್ತು 'ಸಂಕಜ್ಜಿ' ಎಂಬ ಹಿರಿಯಳು ನೀಡಿದ ಒಂದು ಕಾಣಿಕೆಯ ಗಂಟುಗಳನ್ನು ಇಟ್ಟುಕೊಂಡು ಆಶ್ರಮದ ಶುಭಾರಂಭ ಮಾಡಿದರು. ಅಸಂಖ್ಯಾತ ಜನರ ಬದುಕಿಗೆ ಅಧಾರವಾದ ಆ ತಾಣ  ‘ಅನಾಥಸೇವಾಶ್ರಮ’ ರೂಪ ತಾಳಿತು..ರಾಘವೇಂದ್ರ ಸ್ವಾಮೀಜಿಯವರ ಮೂಲ ಮಂತ್ರ  ಕೇವಲ  “ಸೇವೆ"  ಇವರ ವ್ಯಕ್ತಿತ್ವದಿಂದ ಪ್ರಭಾವಿತರಾದ, ಹೊಳಲ್ಕೆರೆಯ  ಪ್ರಾಥಮಿಕ ಶಾಲೆಯ ಉಪಾಧ್ಯಾಯ ವೃತ್ತಿಯಲ್ಲಿದ್ದ  ಸೂರ್ಯನಾರಾಯಣರಾವ್ ಎನ್ನುವವರು ಶಿಷ್ಯರಾದರು. ಗುರುವಿನಿಂದ ‘ಸೂರ್‌ದಾಸ್‌ಜಿ’ ಎಂದು ನಾಮಕರಣಗೊಂಡು ಗುರುವಿನ ಜೊತೆಜೊತೆಗೇ ಹೆಗಲು ಕೊಟ್ಟು ದುಡಿಯಲು ನಿಂತರು. ಇಬ್ಬರೂ ಕೂಡಿ ಆಶ್ರಮವನ್ನು ಬೆಳಸತೊಡಗಿದರು
 
ಇತರ ಸ್ವಾಮೀಜಿಗಳಂತೆ ಕಾವಿ ಧರಿಸದ ಪಾದಪುಜೆ ಮೊದಲಾದ ವಿಧಿ-ವಿಧಾನಗಳಲ್ಲೇ ಕಾಲ ವ್ಯಯಿಸದ  ಗುರು ಶಿಷ್ಯರಿಬ್ಬರೂ, ಕೇವಲ ಖಾದಿ ಬಟ್ಟೆಯ ಬಿಳಿಯ ಚಡ್ಡಿ ಮತ್ತು ಅರ್ಧ ತೋಳಿನ ಅಂಗಿ ಧರಿಸುತ್ತಿದ್ದರು.  ಕಟ್ಟುನಿಟ್ಟಿನ ದಿನಚರಿ, ಮತ್ತು  ಶಿಸ್ತಿನ ಸಿಪಾಯಿಗಳಾದ ಇವರದು ಸರಳ ಜೀವನ. ಸೇವೆಗಾಗಿಯೇ  ತಮ್ಮ ಬದುಕು. ಇವರ  ನಿಸ್ವಾರ್ಥ, ಅಂತಃಕರಣ ಪೂರಿತ ಸೇವಾಕೈಂಕರ್ಯದಿಂದ ಪ್ರಭಾವಿತಗೊಂಡ ಜನ ಉದಾರವಾಗಿ ದೇಣಿಗೆ  ನೀಡಿದರು. ಜಾತಿ, ಮತ, ಪಂಥಗಳ ಹಂಗಿಲ್ಲದೆ ರಾಘವೇಂದ್ರ ಸ್ವಾಮಿಗಳು ತಮ್ಮ  ‘ಜೋಳಿಗೆ’  ಯಿಂದ ಭಿಕ್ಷೆಮಾಡಿ ಗಳಿಸಿದ ಹಣವನ್ನು  ಆಶ್ರಮದ ವಿದ್ಯಾರ್ಥಿಗಳ ಊಟದ ವ್ಯವಸ್ತೆಗಾಗಿ, ಮತ್ತು ಶಾಲಾ ಕಾಲೇಜ್ ಗಳ ಸ್ಥಾಪನೆ ಮತ್ತು ಪೋಷಣೆಗಾಗಿ ವ್ಯಯಿಸುತ್ತಿದ್ದರು. 
 
೧೯೪೩ ರಲ್ಲಿ ಆಶ್ರಮ ಪ್ರಾರಂಭವಾದಾಗಿನಿಂದ ಯೋಗ ಶಿಕ್ಷಣ ಮತ್ತು ಆಯುರ್ವೇದ ಚಿಕಿತ್ಸೆ ಜೊತೆ ಜೊತೆಗೇ ಸಾಗುತ್ತ ಬಂದವು. ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಸುಲಭವಾಗಿ ಶಿಕ್ಷಣಾನುಕೂಲ ಒದಗಿಸುವುದಕ್ಕಾಗಿ  :
 
* ೧೯೫೦ ರಲ್ಲಿ ರಾಷ್ಟ್ರೀಯ ವಿವಿಧೋದ್ಧೇಶ ಪ್ರೌಢಶಾಲೆಯನ್ನು ಆರಂಭಿಸಿದರು. ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ವಸತಿಗೃಹ ವ್ಯವಸ್ಥೆ ಹೊಂದಿದ್ದ ಈ ಶಾಲೆಯಲ್ಲಿ ಈ ಊರಿನ, ಸುತ್ತಮುತ್ತಲ ಗ್ರಾಮಗಳ ಮಕ್ಕಳಲ್ಲದೆ ಕರ್ನಾಟಕದ ಬೇರೆ ಬೇರೆ ಭಾಗಗಳಿಂದಲೂ ವಿದ್ಯಾರ್ಥಿಗಳು ಬಂದು ಕಲಿಯಲಾರಂಭಿಸಿದರು. 
 
* ೧೯೫೮ ರಲ್ಲಿ ಸರ್ವಸೇವಾ ಬೋಧಕ ಶಿಕ್ಷಣಾಲಯ-ಎಂಬ ಶಿಕ್ಷಕರ ತರಬೇತಿ ಸಂಸ್ಥೆ ಆರಂಭವಾಯಿತು. ಇದರ ಉದ್ದೇಶ ಯುವ ಜನತೆಯಲ್ಲಿ ಜೀವನ ಮೌಲ್ಯಗಳನ್ನು ಬೋಧಿಸಲು ಅರ್ಹರಾದ ಶಿಕ್ಷಕರನ್ನು ಸಿದ್ಧಪಡಿಸುವುದು.
 
* ೧೯೬೯ ರಲ್ಲಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳನ್ನು ಒಳಗೊಂಡ ಪದವಿಪೂರ್ವ ಕಾಲೇಜನ್ನು ಪ್ರಾರಂಭಿಸಿದರು. 
 
 
 *೧೯೭೯ ರಲ್ಲಿ ವೃತ್ತಿಶಿಕ್ಷಣ ವಿಭಾಗವೂ ಆರಂಭವಾಯಿತು. ಸ್ವಉದ್ಯೋಗಕ್ಕೆ ದಾರಿಯಾಗಿ ಬೆಳೆದು ನೂರಾರು, ಸಾವಿರಾರು ಜೀವಿಗಳ ಜೀವನಕ್ಕೆ ಆಧಾರ ಒದಗಿಸಿತು

* ೧೯೬೮ ರಲ್ಲಿ ಆಶ್ರಮದ ರಜತ ಮಹೋತ್ಸವದ ನೆನಪಿಗಾಗಿ ರಜತ ಮಹೋತ್ಸವ ದೈಹಿಕ ಶಿಕ್ಷಣ ಸ್ವಾಮೀಜಿವವರ ಶತಮಾನೋತ್ಸವದ ನೆನಪಾಗಿ ಶತಮಾನೋತ್ಸವ ದೈಹಿಕ ಶಿಕ್ಷಣ ಮಹಾವಿದ್ಯಾಲಯಗಳನ್ನು ಪ್ರಾರಂಭಿಸಿದರು. ಆಶ್ರಮದ ಆವರಣದಲ್ಲಿ ವಿಶಿಷ್ಠವಾದ ಧನ್ವಂತರಿ ಆಸ್ಪತ್ರೆ ಸಮುಚ್ಛಯ ಮತ್ತು ವಿಶ್ವಯೋಗ ಮಂದಿರಗಳನ್ನು ಕಟ್ಟಿಸಿದರು.
 
* ಆಶ್ರಮದ ಆವರಣದಲ್ಲಿ ವಿವಿಧ ಬಗೆಯ ಸಸ್ಯಮೂಲಿಕೆಗಳ ಔಷಧಿವನಗಳನ್ನು ಕೈಯಾರೆ ಬೆಳೆಸಿದರು. ಜನರಿಗೆ ಶಿಕ್ಷಣ, ಆರೋಗ್ಯ,ಸಂಸ್ಕೃತಿ, ಕಲೆ-ಹೀಗೆ ಹತ್ತು ಹಲವು ಅಂಶಗಳ ಬಗ್ಗೆ ಪರಿಜ್ಞಾನ ಮೂಡಿಸಲು ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆಶ್ರಮವನ್ನು ಬೆಳೆಸುತ್ತಾ ಹೋದರು.
 
* ವಿಶ್ವಸ್ತ ಸಂಸ್ಥೆಯ ಆಶ್ರಯದಲ್ಲಿ ಉಳಿದೆಡೆಗಳಲ್ಲಿಯೂ ಶಾಲಾ ಕಾಲೇಜುಗಳು ಸ್ಥಾಪನೆಗೊಂಡವು.
 
* ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ದುಮ್ಮಿಯಲ್ಲಿ, ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ದೇವರಹಳ್ಳಿ ಹಾಗೂ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಶೆಟ್ಟಿಹಳ್ಳಿಗಳಲ್ಲಿ ಪ್ರೌಢಶಾಲೆಗಳಿವೆ. 
 
* ಮೈಸೂರಿನ ಕುವೆಂಪು ನಗರದಲ್ಲಿ ಶ್ರೀ ರಾಘವೇಂದ್ರ ಗುರುಕುಲ ವಿದ್ಯಾಪೀಠ ಸ್ವತಂತ್ರ ವಿಜ್ಞಾನ ಪಿ.ಯು.ಕಾಲೇಜು ಹಾಗೂ ಸಮೀರ ಶಿಕ್ಷಕರ ತರಬೇತಿ ಕೇಂದ್ರಗಳು ಸ್ಥಾಪಿತವಾಗಿ ಆಶ್ರಮದ ಮೂಲೋದ್ದೇಶವನ್ನು ನೆರೆವೇರಿಸುತ್ತಿವೆ.
 
* ಪ್ರತಿ ವರ್ಷ ಆಕ್ಟೋಬರ್ ತಿಂಗಳ ೪ ರಿಂದ ೨೫ರವರೆಗೆ ೨೧ ದಿನಗಳ ಯೋಗ ಶಿಬಿರವನ್ನು ನಡೆಸುತ್ತಿದ್ದರು. 'ಪಾತಂಜಲಿ ಮಹರ್ಷಿಗಳ ಹೆಸರಿನಲ್ಲಿ  ಮೂಲಯೋಗ ಶಿಕ್ಷಣ ಶಿಬಿರ' ಸ್ಥಾಪನೆಯಾಯಿತು ಇದರಿಂದ ದೇಶದ ನಾನಾ ಭಾಗಗಳಿಂದ ಬಂದ ಸಾವಿರಾರು ಆಸಕ್ತರು ಲಾಭ ಪಡೆದರು.
 
ಸ್ವಾಮೀಜಿಯವರು ಬೇರೆ ಬೇರೆ ಕಡೆಗಳಲ್ಲಿ ಯೋಗ ಪ್ರದರ್ಶನ ನೀಡುತ್ತಿದ್ದರು. ಆಶ್ರಮದಲ್ಲಿ ಪ್ರತಿದಿನ ಬೆಳಿಗ್ಗೆ ಮಾರುತಿಯ ಪ್ರಾರ್ಥನೆಯೊಂದಿಗೆ ಸೂರ್ಯನಮಸ್ಕಾರ, ಗುರುನಮಸ್ಕಾರ ಮತ್ತು ಅಗತ್ಯವಾದ ಕೆಲವು ಯೋಗಾಸನಗಳ ಅಭ್ಯಾಸ ನೀಡಲಾಗುತ್ತದೆ. ಸಾಯಂಕಾಲ ಭಜನೆ. ಸ್ವಾಮೀಜಿಯವರು ಯೋಗದ ನಂತರದ ಸ್ಥಾನವನ್ನು ಆಯುರ್ವೇದ ಚಿಕಿತ್ಸೆಗೆ ನೀಡಿದ್ದರು.
 
* ’ನಾಡೀ’ವಿದ್ಯೆಯಲ್ಲಿ ವಿಶೇಷ ಪರಿಣಿತರಾದ ಇವರಲ್ಲಿ ಔಷಧಿ ಪಡೆಯಲು ದೂರದ ಊರುಗಳಿಂದ ಜನ ಬರುತ್ತಿದ್ದರು.ಇವರಿಗೆ ಉಚಿತವಾಗಿ ಚಿಕಿತ್ಸೆಯನ್ನು ನೀಡಿ ದೀರ್ಘಾವಧಿ ಕಾಯಿಲೆಗಳಾದ ಅಸ್ತಮಾ, ಚರ್ಮರೋಗಗಳು, ಮುಂತಾದವುಗಳನ್ನು ಗುಣಪಡಿಸುತ್ತಿದ್ದರು.ಔಷಧಿ ತಯಾರಿಕಾ ತಜ್ಞರಾದ ಇವರು ಆಸ್ಪತ್ರೆಗೆ ಸೇರಿದಂತೆ ಒಂದು ಸಾಂಪ್ರದಾಯಿಕ ಔಷಧ ತಯಾರಿಕಾ ಘಟಕವನ್ನು ಪ್ರಾರಂಭಿಸಿದರು. 
 
* ಔಷಧಿ ಮೂಲಿಕಾ ವನವನ್ನು ಮುತುವರ್ಜಿಯಿಂದ ಬೆಳೆಸಿದರು. ಅನವತರವೂ ಜನ ಸೇವೆಯಲ್ಲಿ ನಿರತರಾದ ಇವರನ್ನು ಜನರಷ್ಟೇ ಅಲ್ಲ-ಸರ್ಕಾರ,ಸಂಘ ಸಂಸ್ಥೆಗಳೂ ಗುರುತಿಸಿದವು.
ಪ್ರಶಸ್ತಿಗಳು 
*,ಪ್ರಾಮಾಣಿಕ,ಹಾಗೂ ನಿಷ್ಠಾಂತ ವೈದ್ಯಕೀಯ ಚಿಕಿತ್ಸೆಯನ್ನು ಗುರುತಿಸಿದ ಕರ್ನಾಟಕ ಸರ್ಕಾರವು ಇವರಿಗೆ “ಅಭಿನವ ಧನ್ವಂತರಿ” ಪ್ರಶಸ್ತಿಯನ್ನು ೬ ಸಲ ನೀಡಿ ಗೌರವಿಸಿತು.
* ರಾಜ್ಯ ಸರ್ಕಾರವು ಇವರನ್ನು ರಾಜ್ಯ ಯೋಗ ಶಿಕ್ಷಣ ಮಂಡಳಿಯ ಗೌರವ ನಿರ್ದೇಶಕರೆಂದು ನೇಮಿಸಿ ಗೌರವಿಸಿತು. 
 
* ಸರ್ಕಾರವು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣದಲ್ಲಿ ಯೋಗ ಶಿಕ್ಷಣಕ್ಕೆ ಪಠ್ಯವಸ್ತು ರಚಿಸಿಕೊಡಲು ಕೇಳಿಕೊಂಡಿತು. ಹೀಗೆ ಸ್ವಾಮೀಜಿಯವರು ತಮ್ಮ ಸೇವಾತತ್ಪರತೆಯಿಂದ ಜನರ ಹೃದಯಗಳಲ್ಲಿ ಸ್ಥಿರವಾಗಿ ನಿಂತರು.
 
* ಸ್ವಾಮೀಜಿಯವರ ನೇತೃತ್ವದಲ್ಲಿ ಸುಮಾರು ೮೦ ಎಕರೆಗಳಷ್ಟು ವಿಸ್ತಾರವಾಗಿ ವಿವಿಧ ರೀತಿಯಲ್ಲಿ ಬೆಳೆದು ನಿಂತ ಮಲ್ಲಾಡಿಹಳ್ಳಿಯಲ್ಲಿಯ ಅನಾಥಸೇವಾಶ್ರಮದ ಆವರಣ ಮತ್ತು ಹೊಳಲ್ಕೆರೆ ತಾಲ್ಲೂಕಿನ ದುಮ್ಮಿ,ಚನ್ನಗಿರಿ ತಾಲ್ಲೂಕಿನ ದೇವರಹಳ್ಳಿ,ಶಿಕಾರಿಪುರ ತಾಲ್ಲೂಕಿನ ಶೆಟ್ಟಿಹಳ್ಳಿ ಮತ್ತು ಮೈಸೂರಿನ ಕುವೆಂಪು ನಗರದಲ್ಲಿನ ಆವರಣ. 
 
* ಸ್ವಾಮೀಜಿತವರು ಬ್ರಹ್ಮೀಭೂತರಾದ ನಂತರದಲ್ಲಿ ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಪೀಠಾಧಿಪತಿಗಳಾದ ಶ್ರೀ ಶಿವಮೂರ್ತಿ ಮುರುಘ ಶರಣರ ನೇತೃತ್ವದಲ್ಲಿ,ಅವರ ದಿವ್ಯ ಅಧ್ಯಕ್ಷತೆಯಲ್ಲಿ ಮುಂದುವರಿಯುತ್ತಿದೆ.
* ಅರಸು ಮನೆತನಕ್ಕೆ ಗುರುಪೀಠವಾದ ಬೃಹನ್ಮಠ ಪರಂಪರೆಯಲ್ಲಿ ಬಂದಿರುವ ಶ್ರೀ ಮುರುಘಶರಣರೂ ಸಹಾ ಶ್ರೀ ರಾಘವೇಂದ್ರ ಸ್ವಾಮೀಜಿಯವರಂತೆಯೇ ವಿಶಿಷ್ಠ ವ್ಯಕ್ತಿತ್ವವನ್ನು ಹೊಂದಿದವರು . ಶ್ರೀ ಶರಣರು ಸಮಾಜದ ಸುಧಾರಣೆ ಹಾಗೂ ಪ್ರತಿಯೊಬ್ಬನ ಹೃದಯದಲ್ಲಿ ವೈಚಾರಿಕತೆಯ ಕಿಡಿಯನ್ನು ಉದ್ದೀಪಿಸಲು, ಜಾತಿ ಮತಗಳ ಬೇಧವಿಲ್ಲದ ಸೌಹರ್ದತೆಯ ಸಮಾಜವನ್ನು ನಿರ್ಮಿಸಲು ದುಡಿಯುತ್ತಿರುವ ವಿಶಿಷ್ಠ ಚೇತನರು, 
 
* ಸಮಾಜದ ಕ್ಷೇಮವೆಂದರೆ ಸಾಮಾಜಿಕ ನೈತಿಕತೆ ಮತ್ತು ವ್ಯಕ್ತಿತ್ವದ ವಿಕಸನ. ಹೀಗೆ ಶ್ರೀ ರಾಘವೇಂದ್ರ ಸ್ವಾಮೀಜಿ ಮತ್ತು ಶ್ರೀ ಶಿವಮೂರ್ತಿ ಮುರುಘ ಶರಣರ ಸೇವಾಕಾಂಕ್ಷೆಗಳ ಮೂಲ ಬೇರುಗಳು ಒಂದೇ ಆಗಿದ್ದು ರಾಘವೇಂದ್ರಸ್ವಾಮೀಜಿಯವರು ಕಂಡ ಕನಸುಗಳು ಇವರ ನೇತೃತ್ವದಲ್ಲಿ ಕವಲೊಡೆಯುತ್ತಿವೆ.
ಬ್ರಹ್ಮೀಭೂತ ಶ್ರೀಶ್ರೀ ಗಳ ಧ್ಯೇಯೋಧ್ಯೇಶಗಳ ಅಡಿಗಲ್ಲಿನ ಮೇಲೆಯೇ ಈಗಲೂ ಆಶ್ರಮದ ಚಟುವಟಿಕೆಗಳೂ ಕಾರ್ಯಕ್ರಮಗಳೂ ನಡೆಯುತ್ತಿವೆ.
 
* ಶಿಕ್ಷಣ ಕ್ಷೇತ್ರದಲ್ಲಿನ ಸ್ವಾಮೀಜಿಯವರ ಸೇವೆಯನ್ನು ಮುಂದುವರೆಸುವಂತೆ ಹೊಸ ಶೈಕ್ಷಣಿಕ ಸಂಸ್ಥೆಗಳು ರೂಪಗೊಳ್ಳುತ್ತಿವೆ.
 
* ೧೯೯೮-೯೯ ರಲ್ಲಿ ಶ್ರೀ ರಾಘವೇಂದ್ರ ಗುರುಕುಲ ವಿದ್ಯಾಪೀಠ ಪ್ರಾಥಮಿಕ ಶಾಲೆ,
 
*  ೨೦೦೪ ರಲ್ಲಿ ಶ್ರೀ ರಾಘವೇಂದ್ರ ಕೈಗಾರಿಕಾ ತರಬೇತಿ ಸಂಸ್ಥೆ, ಶ್ರೀ ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯ, ಶ್ರೀ ರಾಘವೇಂದ್ರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಅದಕ್ಕೆ ಹೊಂದಿಕೊಂಡಂತೆ ಆಸ್ಪತ್ರೆ,ಔಷಧಿ ತಯಾರಿಕಾ ಘಟಕಗಳು ಆರಂಭವಾಗಿ ಮುನ್ನೆಡೆದಿವೆ.
 
* ಆಸ್ಪತ್ರೆಯು ಪುರುಷರಿಗೆ, ಸ್ರ್ತೀಯರಿಗೆ ಪ್ರತ್ಯೇಕವಾಗಿ ೧೦೦ ಹಾಸಿಗೆಗಳನ್ನು ಹೊಂದಿದ್ದು ಪಂಚಕರ್ಮ ಚಿಕಿತ್ಸಾ ಘಟಕವನ್ನೂ ಒಳಗೊಂಡಿದೆ. 
 
* ೨೦೧೦ ರ ಆಗಸ್ಟ್ ತಿಂಗಳಲ್ಲಿ ಆಶ್ರಮದಲ್ಲಿ ೪೦ ಕಂಪ್ಯೂಟರ್‌ಗಳು ಇರುವ ಸುಸಜ್ಜಿತ ಶ್ರೀ ರಾಘವೇಂದ್ರ ಕಂಪ್ಯೂಟರ್ ತರಬೇತಿ ಕೇಂದ್ರ ಮತ್ತು ಅತ್ಯುತ್ತಮ ಸಂಗೀತ ಶಿಕ್ಷಕರು ವಾದ್ಯವಾದನಗಳಿರುವ ಸಮರ್ಥವಾದ ಶ್ರೀ ಸೂರುದಾಸ್‌ಜಿ ಸಂಗೀತ ವಿದ್ಯಾಲಯಗಳು ಸ್ಥಾಪನೆಗೊಂಡಿದ್ದು ಆಶ್ರಮದ ವಿದ್ಯಾರ್ಥಿಗಳು ಇವುಗಳ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ.
 
* ಆಶ್ರಮದ ಈಗಿನ ಆಡಳಿತ ಮಂಡಳಿಯು ಸ್ವಾಮೀಜಿಯವರ ಸೇವೆಯ ಆದರ್ಶವನ್ನು ಇಟ್ಟುಕೊಂಡು ಈ ಹಿಂದುಳಿದ ಹಳ್ಳಿಗಾಡಿನ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಪಟ್ಟಣಗಳಲ್ಲಿ ಲಭ್ಯವಾಗುವ ಎಲ್ಲ ಶೈಕ್ಷಣಿಕ ಅನುಕೂಲತೆಗಳನ್ನು ಒದಗಿಸುವ ಪ್ರಯತ್ನ ಮಾಡುತ್ತಿದೆ. ಯೋಗ ತರಬೇತಿ ಶಿಬಿರಗಳು, ಭಜನೆ, ಸೂರ್ಯನಮಸ್ಕಾರ ಇತ್ಯಾದಿ ಚಟುವಟಿಕೆಗಳು ಹಿಂದಿನಂತೆಯೇ ಮುಂದುವರಿದಿದ್ದು ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ವಿಶೇಷ ಯೋಗ ತರಬೇತಿ ತರಗತಿಗಳು ನಿತ್ಯ ನಡೆಯುತ್ತಿವೆ. ಆ ವಿದ್ಯಾರ್ಥಿಗಳು ರಾಜ್ಯ,ರಾಷ್ರ್ಷಮಟ್ಟಗಳಲ್ಲಿ ಸ್ಪರ್ಧಿಸಿ ಆಶ್ರಮಕ್ಕೆ ಕೀರ್ತಿ ತರುತ್ತಿದ್ದಾರೆ.
 
* ಈ ಭಾಗದ ಜನಮನದಲ್ಲಿದ್ದ ಬಡತನ,ಅನಕ್ಷರತೆ,ನಿರ್ಲಕ್ಷಗಳನ್ನು ತೊಡೆದು ಹಾಕುವಲ್ಲಿ ಯಾವುದೇ ಗುರು ಮಾಡದಿದ್ದಷ್ಟು ಕೆಲಸಗಳನ್ನು ಶ್ರೀ ರಾಘವೇಂದ್ರ ಸ್ವಾಮೀಜಿಯವರು ಕೈಗೊಂಡರು. ಹೀಗಾಗಿ ಇಲ್ಲಿನ ಜನ ಅವರನ್ನು ತಮ್ಮ ನಿಜವಾದ ಗುರುಗಳೆಂದು ಸ್ವೀಕರಿಸಿ ಕೃತಜ್ಞತಾ ಪೂರ್ವಕವಾಗಿ ಪ್ರತಿವರ್ಷವೂ ಸೆಷೆಂಬರ್ ೨೧ ಮತ್ತು ೨೨ ನೇ ದಿನಾಂಕಗಳಲ್ಲಿ ‘ಗುರುವಂದನೆ’ ಎಂಬ ವಿಶಿಷ್ಟ ಕಾರ್ಯಕ್ರಮದ ಮೂಲಕ ತಮ್ಮ ಗೌರವವನ್ನು ಸಲ್ಲಿಸುತ್ತಿದ್ದಾರೆ.
 
* ಸ್ವಾಮೀಜಿಯವರ ದಿವ್ಯಚೇತನಗಳಿಗೆ ನಮ್ಮ ಕೃತಜ್ಞತೆಯ ಕುರುಹಾಗಿ ‘’ಸಮಾಧಿ ಮಂದಿರ-ಧ್ಯಾನಮಂದಿರ-ಅತಿಥಿ ಗೃಹ ಸಮುಚ್ಛಯ” ಸ್ಮಾರಕವೊಂದನ್ನು ಕಟ್ಟುವ, ೧ ಕೋಟಿ ರೂಪಾಯಿಗಳಷ್ಟು ವೆಚ್ಚದ ಬೃಹತ್ ಯೋಜನೆಯನ್ನು ಹಮ್ಮಿಕೊಂದು  ಅದು ಫಲಕಾರಿಯಾಗಿದೆ.ಅದಕ್ಕಾಗಿ ಹಮ್ಮಿಕೊಂಡಿರುವ ಪ್ರಮುಖವಾದ ೩ ಯೋಜನೆಗಳೆಂದರೆ :
 
 ೧. ಮಾತೃಮಂದಿರ : ಸಮಾಜ ಮತ್ತು ಕುಟುಂಬದಿಂದ ಪರಿತ್ಯಕ್ತ್ಯರಾದ ಮತ್ತು ಶೋಷಿತ ಮಹಿಳೆಯರ ಪುನರ್ವಸತಿ ಯೋಜನೆ. 
 
೨. ತಿರುಕರಂಗ ತರಬೇತಿ ಮತ್ತು ಸಂಶೋಧನಾ ಕೇಂದ್ರ : ಸ್ವಾಮೀಜಿಯವರು ರಂಗಚಟುವಟಿಕೆಗಳ ಬಗೆಗೆ ಅಪಾರ ಆಸಕ್ತಿಯನ್ನು ಹೊಂದಿದ್ದರು. ಅವರು ತಮ್ಮ ಪೂರ್ವಾಶ್ರಮದಲ್ಲಿ ಅಂಬಾಪ್ರಸಾದ ನಾಟಕ ಮಂಡಳಿಯಲ್ಲಿ ಪ್ರಮುಖ ಸೇವೆಯನ್ನು ಸಲ್ಲಿಸಿದವರು. ನಟರಾಗಿ ನಾಟಕಕಾರರಾಗಿ ತಮ್ಮ ಸಾಂಸ್ಕೃತಿಕ ವ್ಯಕ್ತಿತ್ವವನ್ನು ವ್ಯಕ್ತಗೊಳಿಸಿದ ಪೂಜ್ಯ ಸ್ವಾಮೀಜಿಯವರಿಗೆ ತಿರುಕರಂಗ ರಂಗತರಬೇತಿ ಮತ್ತು ಸಂಶೋಧನಾ ಕೇಂದ್ರವು ಅತ್ಯುತ್ಕೃಷ್ಟ ಜಂಗಮ ಸ್ಮಾರಕವೆನ್ನಿಸುವುದು. 
 
೩. ಕೇಂದ್ರ ಗ್ರಂಥಾಲಯ : ಅನಾಥಸೇವಾಶ್ರಮವು ಜ್ಞಾನವನ್ನು ನೀಡುವ ಪ್ರಧಾನ ಮಾರ್ಗವಾದ ಮುದ್ರಿತ ಅಕ್ಷರ ಮಾಧ್ಯಮವನ್ನು ಒದಗಿಸುವ ಕೇಂದ್ರವಾಗಿ ಕೆಲಸ ಮಾಡುತ್ತಾ ಜನತೆಗೆ ಜ್ಞಾನದ ಮಾರ್ಗವನ್ನು ತೆರೆಯುವುದು. ಈ ಕೇಂದ್ರ ಗ್ರಂಥಾಲಯವು ಮಲ್ಲಾಡಿಹಳ್ಳಿ ಮತ್ತು ಸುತ್ತಮುತ್ತಲಿನ ಅಧ್ಯಯನಾಸಕ್ತಿ ಹೊಂದಿರುವ ಜನರಿಗೆ ಓದಿನ ಅವಕಾಶವನ್ನು ಒದಗಿಸುತ್ತದೆ.
 
 ೪. ಬಡವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ : ಇದನ್ನು ಅರ್ಹ ಬಡ ಹಾಗೂ ಅನಾಥ ಮಕ್ಕಳ ಶೈಕ್ಷಣಿಕ ಸದುಪಯೋಗಗಳಿಗಾಗಿ ಬಳಸಿಕೊಳ್ಳಲಾಗುವುದು.
 
 ೫. ರಂಗಕಲೆ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ನಿಧಿ : ಇದನ್ನು ಆಶ್ರಮದಲ್ಲಿ ವರ್ಷವಿಡೀ ನಡೆಯುವ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಹಾಗೂ ವಿಶೇಷವಾಗಿ “ತಿರುಕನೂರಿನಲ್ಲಿ ರಂಗದಾಸೋಹ” ಕಾರ್ಯಕ್ರಮಕ್ಕೆ ವಿನಿಯೋಗಿಸಲಾಗುವುದು.
* ಸ್ವಾಮೀಜಿಯವರಿಗೆ ಅತ್ಯಂತ ಪ್ರಿಯವಾದ ಮತ್ತೊಂದು ಅಂಶವೆಂದರೆ ರಂಗಕಲೆ.ಸ್ವತಃ ಅಭಿನಯ ಆಸಕ್ತಿಯುಳ್ಳ ಅವರು ಉತ್ತಮ ಬರಹಗಾರರೂ ಆಗಿದ್ದರು, ತಾವೇ ನಾಟಕಗಳನ್ನು ರಚಿಸಿ, ತಾವೂ ಅಭಿನಯಿಸಿ, ಇತರರನ್ನೂ ಅಭಿನಯಿಸುವಂತೆ ಮಾಡುತ್ತಿದ್ದರು.ಅವರ ಪುಣ್ಯಸ್ಮರಣೆಯ ನಿಮಿತ್ತ ಪ್ರತಿವರ್ಷ ಜನವರಿ ೯ ರಿಂದ ೧೩ ರವರೆಗೆ ‘ತಿರುಕನೂರಿನಲ್ಲಿ ರಂಗದಾಸೋಹ’ ಎಂಬ ಹೆಸರಿನಲ್ಲಿ ನಾಟಕೋತ್ಸವ ನಡೆಸಲಾಗುತ್ತಿದೆ. 
 
* ಉತ್ತಮ ನಾಟಕಗಳನ್ನು ಆಧುನಿಕ ರಂಗ ಸಜ್ಜಿಕೆಗಳೊಂದಿಗೆ, ಶ್ರೇಷ್ಠ ನಿರ್ದೇಶಕರ ನಿರ್ದೇಶನದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿ ಪ್ರದರ್ಶಿಸಲಾಗುತ್ತಿದೆ. ಇದನ್ನು ನೋಡಲು ಹತ್ತಾರು ಸಾವಿರ ಪ್ರೇಕ್ಷಕರು ಸೇರುತ್ತಾರೆ. ಉತ್ಸಾಹದಿಂದ ಪಾಲ್ಗೊಂಡು ಹರ್ಷಿಸುತ್ತಾರೆ.
 
ಆಶ್ರಮದ ಮತ್ತಷ್ಟು ಬೆಳವಣಿಗೆಗಳು :
 
೧. ಪ್ರಸುತ್ತದಲ್ಲಿ ವಸತಿಗೃಹಗಳ ನವೀಕರಣ, ಶಾಲಾ ಕಾಲೇಜು ಕಟ್ಟಡಗಳ ನವೀಕರಣ. 
ಆಶ್ರಮ ನಿವಾಸಿಗಳ ವಸತಿಗೃಹಗಳ ದುರಸ್ತಿ-ನವೀಕರಣ ಮುಂತಾದ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. 
೨. ಶಿಕ್ಞಣ ಮಹಾವಿದ್ಯಾಲಯದ ಹೊಸ ಕಟ್ಟಡದ ಸುಧಾರಿಸಲಾಗುತ್ತಿದೆ.
ವಿದ್ಯುಚ್ಛಕ್ತಿಯ ಕೊರೆತೆಯಿಂದ ಓದುವ ಮಕ್ಕಳಿಗೆ ತೊಂದರೆಯಾಗಬಾರದೆಂದು ಜನರೇಟರ್ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ.
 
೩. ಇದರ ಜೊತೆಗೆ ಇನ್ನಷ್ಟು ವಸತಿಗೃಹಗಳ ನಿರ್ಮಾಣ ಆಗಬೇಕಾಗಿದೆ. ಈ ಎಲ್ಲಾ ಕೆಲಸಗಳಲ್ಲಿ ಆಶ್ರಮ ಸಕ್ರಿಯವಾಗಿ ತೊಡಗಿಕೊಂಡಿದೆ.
 
ಪ್ರತಿವರ್ಷ ನವೆಂಬರ್ ೧೪ ರಂದು, ಈ ಕಾರ್ಯಕ್ರಮ ಈ ಕಾರ್ಯಕ್ರಮವು ಶ್ರದ್ಧೆ, ಭಕ್ತಿ ಮತ್ತು ಉತ್ಸಾಹಗಳಿಂದ ಆಚರಿಸಲ್ಪಡುತ್ತಿದೆ  ಜಾನಪದ ಕಲಾತಂಡಗಳು, ಸ್ತಬ್ಧಚಿತ್ರಗಳಿದ ಕೂಡಿದ ಮೆರವಣಿಗೆಯು ಬೆಳಗಿನಲ್ಲಿ ಮನಸೆಳೆದರೆ ನಂತರದ ಸಭಾ ಕಾರ್ಯಕ್ರಮದಲ್ಲಿ ಸಾಹಿತ್ಯಲೋಕದ ವಿಶೇಷ ಚಿಂತಕರು, ಗಣ್ಯವ್ಯಕ್ತಿಗಳು, ಸಾಹಿತಿಗಳು, ಭಾಷಾ ತಜ್ಞರು ಮುಂತಾದವರಿಂದ ಉಪನ್ಯಾಸಗಳು, ಪ್ರಬಂಧ ಮಂಡನೆಗಳು ನಡೆಯುತ್ತವೆ. ಇದೊಂದು ವಿಶಿಷ್ಟಪೂರ್ಣ ಆಚರಣೆಯಾಗಿದೆ.
 

Comments