ನಗೆಹನಿಗಳು ( ಹೊಸವು ?) - ಹದಿನಾರನೇ ಕಂತು
-61-
- "ಗಂಡಸು , ಮನೆಯ ಯಜಮಾನ" ಪುಸ್ತಕ ನಿಮ್ಮಲ್ಲಿದೆಯೇ ?
-ಕತೆಪುಸ್ತಕಗಳ ವಿಭಾಗದಲ್ಲಿ ನೋಡಿ, ಸರ್
-62-
-ನಿನ್ನ ಗಂಡ ಸುರೇಶ ದಿನಾ ಮನೆಗೆ ತಡಮಾಡಿ ಬರ್ತಿದ್ನಲ್ಲ , ಅದನ್ನು ಹೇಗೆ ತಪ್ಪಿಸಿದೆ ?
-ಅವನು ತಡಮಾಡಿ ಮನೆಗೆ ಬಂದು ಬಾಗಿಲು ಬಡಿದಾಗಲೆಲ್ಲ "ಯಾರು? ರಮೇಶನಾ?" ಅಂತ ಕೇಳುವುದಕ್ಕೆ ಶುರು ಮಾಡಿದೆ .ಅಷ್ಟೇ
-63-
-ಅವರಿಬ್ಬರೂ ಮದುವೆ ತನಕ ಬಂದು ತಲುಪಿದ್ದು ಹೇಗೆ ?
-ಅದೇ ಹಳೆಯ ಕತೆ , ಮೊದಲು ಒಳ್ಳೆಯ ಸ್ನೇಹಿತರಾಗಿದ್ದರು , ಆಮೇಲೆ ಮನಸ್ಸು ಬದಲಾಯಿಸಿದರು.
-64-
- ಜೋರು ಮಳೆ ಶುರುವಾಗಿದೆ , ನನ್ನ ಹೆಂಡತಿ ಪೇಟೆಗೆ ಬೇರೆ ಹೋಗಿದ್ದಾಳೆ , ಚಿಂತೆಯಾಗಿದೆ.
- ಚಿಂತಿಸಬೇಡಿ , ಯಾವುದಾದರೂ ಅಂಗಡಿ ಒಳಗೆ ಹೋಗಿರ್ತಾರೆ , ಅಷ್ಟೇ.
- ಅದಕ್ಕೇ ನನಗೆ ಚಿಂತೆಯಾಗಿರೋದು.
Rating