ಚಿಕ್ಕಮಗಳೂರಿನ ಅನುವನಹಳ್ಳಿಯಲ್ಲಿ ರೋಮನ್ನರ ಮತ್ತು ಶಾತವಾಹನರ ಹೆಜ್ಜೆ ಗುರುತುಗಳು

ಚಿಕ್ಕಮಗಳೂರಿನ ಅನುವನಹಳ್ಳಿಯಲ್ಲಿ ರೋಮನ್ನರ ಮತ್ತು ಶಾತವಾಹನರ ಹೆಜ್ಜೆ ಗುರುತುಗಳು

'ಅನುವನಹಳ್ಳಿ' ಎಂಬುದು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಶಿವನಿ ಹೋಬಳಿಯ ಒಂದು ಚಿಕ್ಕ ಹಳ್ಳಿ. ಒಂದು ಸಾವಿರಕ್ಕಿಂತ ಸ್ವಲ್ಪ ಹೆಚ್ಚು ಜನರಿರಬಹುದೇನೋ! 

ಈ ಊರಿಗೆ ತುಂಬಾ ಹಳೆಯ ಅಂದರೆ ರೋಮನ್ನರ ಮತ್ತು ಶಾತವಾಹನರ ಕಾಲದ ಇತಿಹಾಸ ಇರುವುದು ಇತ್ತೀಚಿಗೆ ಬೆಳಕಿಗೆ ಬಂದಿರುವ ವಿಷಯ. ಇಲ್ಲಿ ನಾಗರೀಕತೆ, ಜನಜೀವನ ಕಡಿಮೆ ಅಂದರೂ ಕ್ರಿಸ್ತ ಪೂರ್ವ 3ನೆ ಶತಮಾನದಿಂದಲೇ ಇದೆ ಎಂದು ಹೇಳಬಹುದು. ಇಲ್ಲಿ ಶಾತವಾಹನರ ಆಯುಧಾಗರ ಅತ್ವ ಆಯುಧ ನಿರ್ಮಾಣ ಮಾಡುವ ಕಾರ್ಖಾನೆ ಇತ್ತು ಅನ್ನುವುದು ಒಂದು ವಾದವಾದರೆ, ಇಲ್ಲಿನ ಕಾಡಲ್ಲಿ ಬೆಳೆಯುತ್ತಿದ್ದ ಗಿಡ ಮೂಲಿಕೆಗಳನ್ನ ಬಳಸಿಕೊಂದು ಔಷಧಗಳನ್ನ ತಯಾರಿಸುತ್ತಿದ್ದ ಕಾರ್ಖಾನೆ ಇತ್ತು ಅನ್ನುವುದು ಇನ್ನೊಂದು ವಾದ.   

ಅನುವನಹಳ್ಳಿಯಲ್ಲಿ  ರೋಮನ್ನರ ನಾಣ್ಯಗಳು.
ಕರ್ನಾಟಕದಲ್ಲಿ ಈ ಶತಮಾನದಲ್ಲಿ ಇದೇ  ಮೊದಲ ಬಾರಿಗೆ ರೋಮನ್ನರ ನಾಣ್ಯಗಳು ದೊರೆತದ್ದು ಈ ಊರಲ್ಲೇ. ಇದಕ್ಕೂ ಮೊದಲು 1909 ರಲ್ಲಿ ಚಂದ್ರವಳ್ಳಿಯಲ್ಲಿ ದೊರೆತಿದ್ದವು. ಅನುವನಹಳ್ಳಿಯ ಹಾಳೂರು ಎಂಬಲ್ಲಿ ತಮ್ಮ ಜಮೀನಿನಲ್ಲಿ A.V. ಜಯಣ್ಣ ಎಂಬ ರೈತ ಮೊದಲು ಆ ಹಾಳೂರು ಜಾಗದಲ್ಲಿ 1990-91 ರಲ್ಲಿ ವಿವಿಧ ರೂಪದ ಮಡಿಕೆ ಚೂರುಗಳನ್ನು ನೋಡುತ್ತಾರೆ. ಅಲ್ಲಿ ಸಿಕ್ಕ ವಸ್ತುಗಳ ಬಗ್ಗೆ ಪುರಾತತ್ವ ಇಲಾಖೆಗೆ ಹಲವು ಬಾರಿ ಪತ್ರ ಬರೆಯುತ್ತಾರೆ. ಇದರ ಜಾಡು ಹಿಡಿದು ಮೈಸೂರಿನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರದ 60 ವಿದ್ಯಾರ್ಥಿಗಳ ತಂಡವೊಂದು,  N.S. ರಂಗರಾಜು ಎಂಬ ಪ್ರೊಫೆಸರರ ಮುಂದಾಳತ್ವದಲ್ಲಿ ಅಲ್ಲಿ ಸಂಶೋಧನೆ ನಡೆಯುತ್ತದೆ. ಆ ಅನುವನಹಳ್ಳಿಯ ಹಾಳೂರಿನ 35 ಎಕರೆ ಪ್ರದೇಶವನ್ನು ಸಂಶೋಧನೆ ನಡೆಸಿದಾಗ ಅಲ್ಲಿ ಶಾತವಾಹನರ ಮತ್ತು ರೋಮನ್ನರ ಹೆಜ್ಜೆಗುರುತುಗಳಿಗೆ ಸಾಕ್ಷಿಯಾಗಿ ಅನೇಕ ವಸ್ತುಗಳು ಬೆಳಕಿಗೆ ಬರುತ್ತವೆ. ಆ ತಂಡವು ಸಂಶೋಧನೆ ನಡೆಸಿದಾಗ ಅಲ್ಲಿ ರೋಮನ್ನರ 4 ಬೆಳ್ಳಿ ನಾಣ್ಯಗಳು ಮತ್ತು ಮಡಿಕೆ ಕುಡಿಕೆಗಳ ಚೂರುಗಳು ಅಲ್ಲಿ ದೊರೆತಿವೆ. ಅಲ್ಲದೆ ಹಲವು ಆಕಾರದ ಮತ್ತು ಹಲವು ತೂಕದ ಕಲ್ಲುಗಳು ದೊರೆತಿವೆ.
 

ಈ ಊರಿನಲ್ಲಿ ಕ್ರಿಸ್ತಪೂರ್ವದ.. ಅದೂ ದೂರದ ರೋಮನ್ನರ ನಾಣ್ಯಗಳು ಸಿಕ್ಕಿವೆ ಅಂದರೆ ಏನರ್ಥ?!. ಆಗಲೇ ಇಲ್ಲಿ ವ್ಯಾಪಾರ ಏರ್ಪಟ್ಟಿತ್ತು, ಈ ವ್ಯಾಪಾರದ ಉದ್ದೇಶದಿಂದ ಹೊರಗಿನವರು ಇಲ್ಲಿನರೊಂದಿಗೆ ನಂಟನ್ನು ಹೊಂದಿದ್ದರು ಅನ್ನುವುದು ಅನ್ನುವುದೇ ಅರ್ಥ!!   ಇಲ್ಲಿ ಹೊರ ರಾಜ್ಯಗಳ / ದೇಶಗಳ ನಾಣ್ಯಗಳು ಸಿಗುತ್ತವೆ ಅಂದರೆ ಏನನ್ನು ಕೊಂಡುಕೊಳ್ಳಲು ಆ ಜನ ಇಲ್ಲಿಗೆ ಭೇಟಿ ಕೊಟ್ಟಿರಬಹುದು ಅನ್ನುವುದನ್ನ ಹುಡುಕುತ್ತ ಹೋದಂತೆ ನಮಗೆ ಎರಡು ಸಾಧ್ಯತೆಗಳು ಕಾಣುತ್ತವೆ.   ಒಂದು ಇಲ್ಲಿನ ಆಯುಧ ಕಾರ್ಖಾನೆ ಇಂದೊಂದು ಇಲ್ಲಿನ ಕಾಡಿನಲ್ಲಿ ಸಿಕ್ಕುತ್ತುತ್ತಿದ್ದ ಗಿಡಮೂಲಿಕೆಗಳಿಂದ ತಯಾರಾಗುತ್ತಿದ್ದ ಔಶಧಗಳ ವ್ಯಾಪಾರ!

ಅನುವನಹಳ್ಳಿಯಲ್ಲಿ ಶಾತವಾಹನರ (ಕ್ರಿಸ್ತ ಪೂರ್ವ ೩ನೇ ಶತಮಾನ) ಕಾಲದ ಆಯುಧಗಳು!

ಅನುವನಹಳ್ಳಿಯಲ್ಲಿ ಸಿಕ್ಕಿರುವ  ಪುರಾತತ್ವ ವಸ್ತುಗಳು 

 

ಅನುವನಹಳ್ಳಿಯಲ್ಲಿ ದೊರೆತಿರುವ ರೋಮನ್ನರ ಬೆಳ್ಳಿ ನಾಣ್ಯಗಳು

ನಾಣ್ಯಗಳಲ್ಲದೆ ಕೆಲವೊಂದು ಆಯುಧಗಳು ಸಲಕರಣೆಗಳೂ ಈ ಊರಲ್ಲಿ ದೊರೆತಿದ್ದು ಅವು ಕ್ರಿಸ್ತ ಪೂರ್ವ 1200 ರಿಂದ ಕ್ರಿ.ಪೂ 800 ರವು ಎಂದು ತಿಳಿದು ಬಂದಿದೆ. ಅಲ್ಲಿ 20 ಕ್ಕೂ ಹೆಚ್ಚು ಪಾಲಿಶ್ ಆಗಿರುವ ಆಯುಧಗಳು ಮತ್ತು ಆಗಿನ ಬೆಣಚುಕಲ್ಲಿನ ಸುಣ್ಣಗಳು. ಕಚ್ಚಾವಸ್ತುಗಳ, ಚಕ್ಕೆಯ ಆಯುಧಗಳನ್ನು ತೆಗೆದಿರುವ ಕೋರ್ ಗಳು, ಇಲ್ಲಿ ಹೇರಳವಾಗಿ ದೊರೆತಿವೆ. ಈ ಎಲ್ಲ ಅಂಶಗಳನ್ನ ಗಮನಿಸಿದರೆ ಇಲ್ಲಿ ಸೂಕ್ಷ್ಮ ಕಲ್ಲಿನ ಆಯುಧಗಳನ್ನು ತಯಾರಿಸುವ ಕೈಗಾರಿಕೆ ಇತ್ತೆಂದು ಕಂಡುಬರುತ್ತದೆ ಎಂದು ರಂಗರಾಜು ಅವರು ಅಭಿಪ್ರಾಯ ಪಟ್ಟಿದ್ದಾರೆ.

ನವ ಶಿಲಾಯುಗದ ಸಂಸ್ಕೃತಿ ಹಾಗೂ ಬೃಹತ್ ಶಿಲಾಯುಗದ ಅನೇಕ ವಸ್ತುಗಳು ಇಲ್ಲಿ ದೊರೆತಿವೆ. ಅನುವನಹಳ್ಳಿಯಿಂದ 10 ಕಿ.ಮೀ. ದೂರದ ಚನ್ನಗಿರಿ ತಾಲ್ಲೂಕಿನ ಬಸವಾಪುರದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಕಬ್ಬಿಣದ ಅದಿರನ್ನು ಕರಗಿಸಿ ಮಣ್ಣಿನ ಕೊಳವೆಗಳ ಮೂಲಕ ಸಂಗ್ರಹಿಸಿರುವುದು  ಕಂಡುಬಂದಿದೆ. ಇಲ್ಲಿ  ಬೃಹತ್ ಶಿಲಾಯುಗದಲ್ಲಿ  ಕಬ್ಬಿಣ ತಯಾರಿಸುವ ಕೈಗಾರಿಕೆ ಇರುವುದನ್ನು ತೋರಿಸಿದೆ ಎಂದು ರಂಗರಾಜು  ಅಭಿಪ್ರಾಯ ಪಟ್ಟಿದ್ದಾರೆ. 800 BC -400 BC ಯಲ್ಲಿ ಕಬ್ಬಿಣ ಯುಗದಲ್ಲಿ ಬಳಸಿರಬಹುದಾದ ಆಯುಧಗಳು ಅವು ಎಂದು ಹೇಳಿದ್ದಾರೆ. 30 ಶಾತವಾಹನರ ನಾಣ್ಯಗಳು ದೊರೆತಿವೆ. ಇವಲ್ಲದೆ ಶಾತವಾಹನರ ಕಾಲದ ಅನೇಕ ಮಡಿಕೆಯ ಚೂರುಗಳು,ಸುಟ್ಟ ಮಣ್ಣಿನ ಗೊಂಬೆಗಳು, ದಂತ, ಬೆಲೆಬಾಳುವ ಮಣಿಗಳು, ಬಳೆ ಚೂರುಗಳು ಪತ್ತೆಯಾಗಿವೆ.

ಅನುವನಹಳ್ಳಿಯಲ್ಲಿ ಔಷಧ ತಯಾರಿಕೆ  
ಚಿಕ್ಕಮಗಳೂರು ಜಿಲ್ಲೆಯು ಹಲವು ಸಸ್ಯವರ್ಗಗಳಿಗೆ ಮೊದಲಿನಿಂದಲೂ ತುಂಬಾ ಜನಪ್ರಿಯ. ಆದ್ದರಿಂದ ಈ ಪ್ರದೇಶವು ಶಾತವಾಹನರ ಕಾಲದಲ್ಲಿ ಆರೋಗ್ಯ ಕೇಂದ್ರವಾಗಿತ್ತೆಂದು ನಂಬಿದ್ದಾರೆ. ಆ  ಕಾಲದಲ್ಲಿ ಭಾರತಕ್ಕೆ ಬಂದಿದ್ದ ರೋಮನ್ನರು ಇಲ್ಲಿಯ ಗಿಡಮೂಲಿಕೆಯಿಂದ ತಯಾರಿಸುವ  ಔಷಧಗಳನ್ನ ತಮ್ಮ ದೇಶಕ್ಕೆ ರಫ್ತು ಮಾಡುವ ಸಲುವಾಗಿ ಇಲ್ಲಿಗೆ ಬಂದಿರಬಹುದು ಎಂದು ಹೇಳಿದ್ದಾರೆ.

ಇದಲ್ಲದೆ 1881 ರಿಂದ 1886 ರಲ್ಲಿ Bruce Foote ಎಂಬ ವಿದೇಶಿ ಸಂಶೋಧಕ ಚಿಕ್ಕಮಗಳೂರು ಜಿಲ್ಲೆಯ ಕಡೂರು, ಲಿಂಗದಹಳ್ಳಿ, ನಿಡಘಟ್ಟ, ಸಖರಾಯಪಟ್ಟಣ, ಕಾಲದುರ್ಗಗಳಲ್ಲಿ ಓಡಾಡಿ ಶಿಲಾಯುಗದಲ್ಲಿ ಮಾನವ ಬಳಸಿದ್ದ ಕೈಯಿ೦ದ ಬಳಸುವ ಕಲ್ಲಿನ ಆಯುಧಗಳು ಮತ್ತು ಹಸ್ತಕೃತಿಗಳನ್ನು ಬೆಳಕಿಗೆ ತಂದಿದ್ದ .

ಅನುವನಹಳ್ಳಿ - ಹೆಸರಿನ ಹಿನ್ನೆಲೆ. 

'ಅನುವನಹಳ್ಳಿ' ಎಂಬ ಹೆಸರು ಕೇಳಲು ತುಂಬಾ ಅಪರೂಪದ ಪದ ಅಂತ ಅನಿಸುತ್ತೆ. ಆ  ಊರಿಗೆ ಅನುವನಹಳ್ಳಿ ಎಂಬ ಹೆಸರು ಹೇಗೆ ಬಂತು ಎಂದು ಹಿರಿಯರನ್ನು ಕೇಳಿದಾಗ "ಎಲ್ಲದಕ್ಕೂ ಅನುವಾಗಿರುವ ಹಳ್ಳಿ - ಅನುವನಹಳ್ಳಿ" ಎಂದು ಹೇಳುವುದುಂಟು. ಅಚ್ಚಗನ್ನಡ ಪದವಾದ "ಅನುವು" ಪದದ ಅರ್ಥ ಹೀಗಿದೆ. Ka. anu, anuvu, anavu fitness, propriety, nicety, loveliness, that is pleasing, charming or beautiful, worth, merit, readiness, success, proper or correct way, scheme, device.  "ಹಳ್ಳಿ"  ಅನ್ನೋ ಪದಕ್ಕೆ hermitage, temple (esp. of Buddhists and Jains), palace, workshop, sleeping place, school, room ಅನ್ನೋ ಮೂಲ ಅರ್ಥದ ಜೊತೆ Ka. paḷḷi, haḷḷi settlement, abode, hamlet, village ಅನ್ನೋ ಅರ್ಥವಿರುವುದೇ ಎಲ್ರಿಗೂ ತಿಳಿದೇ ಇದೆ.
 
"ವನಕ್ಕೆ ಅನುವಾಗಿ ಬೆಳೆದಿರುವ ಹಳ್ಳಿ ಅನುವನಹಳ್ಳಿ" ಎಂದು ಕೂಡ ಕೆಲವರು ಹೇಳುವರು. ಇಲ್ಲಿ ಮೂಲತಹ ಔಷಧ ಗಿಡ ಮೂಲಿಕೆಗಳ ಕಾಡು ಇದ್ದಿರಬಹುದು.

ಅನುವನಹಳ್ಳಿ ಶಾಸನ: 
ಕ್ರಿಸ್ತ ಶಕ ೧೧೪೧ ರದ್ದು ಎನ್ನಬಹುದಾದ ಶಾಸನ ಈ ಊರಿನ ಅಮೃತೇಶ್ವರ ದೇವಾಲಯದಲ್ಲಿ ಸಿಕ್ಕಿದೆ. ಈ ಶಾಸನನ ಪೂರ್ಣ ಪಾಠ ಈ ಕೆಳಗಿನ ಕೊಂಡಿಯಲ್ಲಿ ಇದೆ.   
https://archive.org/stream/epigraphiacarnat06myso/epigraphiacarnat06myso...

65

At Anuvanahalli (^ame hobli), on a stone io the right of the Amrit^kvara temple.
namas tunga &c. |1

svasti samadliigata-pancha-maha-sabda maha-mandalesvaram Dvai’avati-pura-varadhisvaram Yadava-
kulambara-dyumani samyaktva-cbudamani malaparolganda malara bal-gandady-aneka-namavali-sama-
lankritan appa Siiman-maha-maiidalesvararp Tribhuvana-malla Hoysala-Devaru Gangavadi-tombha-
ttaru-saairama diishta-nigra[i)a]-si3hta-pratipalanadiii a-chandrakka-taram-bara rajyam saluttam ire|[
svasti Satyavakya Kougulivarmma dharmma-malik’ajadhiraja vaiidi-jana*kalpa-bhuja Kolala-pura-
varadbisvara prathama-Mahesvara Nandagiri-natha manuja-Mandbata nanniya-Gauga jayad-uttaranga
mada-gajendi'a-laachana viaiydga-kafichana Padinavati- de vi-labdha-vara-prasada mrigamadamoda
ripu-nivahakam dbaua. . . . Ganga-kula-kamala-marttanda aniyode ganda '''Kodauga-bartya rana-ranga.
dbira bil-anka-kara para-mandala-surekara esuvar aditya kann-arabiaata ahava-jattalatta vairi-gbara-
tta saranagata-vajra-panjara vairi-dik-kuujarakehatriya-pavitra manuja-Mandliata para-bala-bbayan-
kara satya-ratnakara bantara bava marevuge kava tappe tappuva namadi-samasta-pra§asti-sahita Sri-
maba-mandalika-Vaijarasaru Asandiya nelavidagi sukba-sankatba-vinodadim rajyam geyyuttam ire |
svasti samasta-guua-sam[paani] nudidu matt enaa(dagam) gotra-pavitram paraugana-putra satya-
ratoakara kudi kutake tappuvara ganda berage balivara ganda S'iva-pada-sekara srimatu Ka}a-Gau-

^ A

dana madavahge Kala-Gaudi ivara su-putra-kola-dipaka satya-Radheya nudidante ganda Srimatu Ala-
Gaudana madavalige Dugga-Gaiidi aru banda bedidad illannalu a-gaudana maga Kala-Gauda gotra-
kula-tilaka biriya-bailalu kanduga 2 {here follow further details of gift) inisuvam Ala-Gaudana magam
Kala-Gaudanu tandeb maganu ibbarum viddu kala kacbcbi dhara-purvva madidaru Amritasakti-
panditarige {uswxl final verse) svasti srima[tu] Chalukya-chakravartti-Jagadekamalla-varSada ? 3 neya
S'ukla-saravatsarada Palguna-suddba-punnami-Somavarad andii bittaru i tumbiua gadde Bageya-
kereya kanduga biriya-kereya kelagc hattu kolaga heggf de-Racbimeyanu Ilala-Gaudanu ibbarum viddu
bittaru Ketojana patra Dekojage bittaru {usual final phrases)

ಅನುವನಹಳ್ಳಿ ಊರಿನ ಈಗಿನ ಜನ ಜೀವನದ ಚಿತ್ರಣ:

ಇಲ್ಲಿ ಅರೆಮಲೆನಾಡಿನ ವಾತಾವರಣ ಇರುತ್ತದೆ. ತೆಂಗು, ಅಡಿಕೆ, ಬಾಳೆ, ಈರುಳ್ಳಿ, ಕಡ್ಲೆ, ರಾಗಿ, ಜೋಳ, ಹುರಳಿ, ಮುಂತಾದವುಗಳನ್ನು ಮುಖ್ಯ ಬೆಳೆಗಳಾಗಿ ಬೆಳೆಯುತ್ತಾರೆ. ಜನರ ಮುಖ್ಯ ಕಸುಬು ವ್ಯವಸಾಯವಾಗಿದೆ.

ಇಲ್ಲಿ ಬಸವಣ್ಣ, ಅಮೃತೇಶ್ವರ, ಶ್ರೀರಾಮ, ಬೊಮ್ಮ ದೇವರು, ಬೀರಪ್ಪ, ಅಜ್ಜಯ್ಯ, ಇನ್ನು ಅನೇಕ ಗುಡಿಗಳಿವೆ. ವರ್ಷಕ್ಕೊಮ್ಮೆ ವರ್ಷಕ್ಕೊಮ್ಮೆ ನಡೆಯುವ ಇಲ್ಲಿ ನಡೆಯುವ  ಉಮಾಮಹೇಶ್ವರನ ಜಾತ್ರೆ ಪ್ರಸಿದ್ಧಿ. ಈ ಸಮಯದಲ್ಲಿ ಇಲ್ಲಿ ದೊಳಿಯಪ್ಪನ ಪೂಜೆ ಮತ್ತು ಮೆರವಣಿಗೆ ಊರತುಂಬ ನಡೆಯುತ್ತೆ. ಇದು ಕರಾವಳಿ ಪ್ರದೇಶಗಳಲ್ಲಿ ನಡೆಯುವ ಭೂತಾರಾಧನೆಯನ್ನು ಹೋಲುತ್ತದೆ. ದೊಳಿಯಪ್ಪನನ್ನು ಪೂಜಿಸುವ ಮತ್ತು ಆಹ್ವಾನಿಸುವ ರೂಢಿ ಒಂದು ಕುಲಕ್ಕೆ ಮಾತ್ರ ಸೀಮಿತವಾಗಿದೆ. ಆ ಕುಟುಂಬದಲ್ಲಿ ಸಾಂಪ್ರದಾಯಿಕವಾಗಿ ಒಬ್ಬ ಪುರುಷನನ್ನು ದೊಳಿಯಪ್ಪನಿಗೆ ಬಿಡುತ್ತಾರೆ.  ಹೀಗೆ ಯಾವ ಮೇಲು ಕೀಳು ಎಂಬ ಭೇದವಿಲ್ಲದೆ ಊರಿನ ಎಲ್ಲ ಜನರು ದೊಳಿಯಪ್ಪನಿಗೆ ಪೂಜೆ ಸಲಿಸುತ್ತಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಕೇಳಿಕೊಳ್ಳುತ್ತಾರೆ. ಹಾಗೆ ಅದು ಈಡೇರಿದಾಗ ಮುಂದಿನ ವರ್ಷದ ಜಾತ್ರೆಯಲ್ಲಿ ತಮ್ಮ ಮನೆಮುಂದೆ ದೊಳಿಯಪ್ಪ ಮನೆಯ ಬಾಗಿಲಿಗೆ ಬಂದಾಗ ಪೂಜೆ ಮಾಡಿ ಸೇವೆ ಸಲ್ಲಿಸುತ್ತಾರೆ.  ಇದು ಆ ಹಳ್ಳಿಯ ಈಗಿನ ಜೀವನ ಚಿತ್ರಣ.
 

Rating
No votes yet