ಬೇಳೂರು ಸುದರ್ಶನರಿಗೆ ಅಭಿನಂದನೆಗಳು

ಬೇಳೂರು ಸುದರ್ಶನರಿಗೆ ಅಭಿನಂದನೆಗಳು

ಸಂಪದದಲ್ಲಿ ಸದಸ್ಯರಾಗಿರುವ [http://sampada.net/user/262|ಬೇಳೂರು ಸುದರ್ಶನ]ರನ್ನು ಲಕ್ನೋದ ಪ್ರತಾಪ ನಾರಾಯಣ ಮಿಶ್ರಾ ಸ್ಮಾರಕ ಯುವ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಇಂದಿನ (ಸಪ್ಟೆಂಬರ್ 24, 2005) [http://www.kannadaprabha.com/NewsItems.asp?ID=KPD20050923130652&Title=District+Page&lTitle=%C1%DBd%C0+%C8%DB%7D%E6%25&Topic=0&dName=%86%E6MV%DA%D7%DA%E0%C1%DA%DF&Dist=1|ಕನ್ನಡಪ್ರಭದಲ್ಲಿ] ಸುದ್ದಿ ಬಂದಿದೆ. ಕನ್ನಡಪ್ರಭ ಪತ್ರಿಕೆಯ ಅಂತರಜಾಲ ತಾಣದ ಒಂದು ತೊಂದರೆಯೆಂದರೆ ನಾನು ಇಲ್ಲಿ ಕೊಟ್ಟಿರುವ ಲಿಂಕ್ಅನ್ನು ನೀವು ಈ ದಿನವೇ (24/9/05) ಕ್ಲಿಕ್ ಮಾಡಿ ಓದಬೇಕು. ನಾಳೆಗೆ ಅದು ದೊರೆಯಲಾರದು. ಬೇಳೂರು ಸುದರ್ಶನ ಅವರ ಬ್ಲಾಗ್ ಸೈಟ್ [http://beluru.blogspot.com/|ಇಲ್ಲಿದೆ]. ಬೇಳೂರು ಸುದರ್ಶನ ಅವರು ವಿಜಯ ಕರ್ನಾಟಕ ಪತ್ರಿಕೆಯ ಮ್ಯಾಗಝಿನ್ ವಿಭಾಗದ ಸಂಪಾದಕರಾಗಿದ್ದಾಗ ಅವರು ನನ್ನಿಂದ [http://www.vishvakannada.com/ile/|eಳೆ] ಎಂಬ ಹೆಸರಿನಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬಗ್ಗೆ ಕಾಲಂ ಬರೆಸುತ್ತಿದ್ದರು. ಅದು ತುಂಬ ಜನಪ್ರಿಯವೂ ಆಗಿತ್ತು.

ಬೇಳೂರು ಸುದರ್ಶನ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

ಸಿಗೋಣ,
ಪವನಜ

Rating
No votes yet

Comments