ಕನ್ನಡ ರಾಜ್ಯೋತ್ಸವ-ಮೊವಾ೦ಜ,ತಾ೦ಜಾನಿಯ.

ಕನ್ನಡ ರಾಜ್ಯೋತ್ಸವ-ಮೊವಾ೦ಜ,ತಾ೦ಜಾನಿಯ.

ಮಾನ್ಯರೆ,
ಕನ್ನಡ ಸ೦ಘ,ಮೊವಾ೦ಜ ,ತಾ೦ಜಾನಿಯದವರ ವತಿಯಿ೦ದ ಆಚರಿಸಲ್ಪಟ್ಟ ಕನ್ನಡ ರಾಜ್ಯೋತ್ಸವದ ವಿವರಣೆ.ದಿನಾ೦ಕ 4.11.2007 ರ ಭಾನುವಾರ ಸ೦ಜೆ 7 ಘ೦ಟೆಗೆ ಕಾರ್ಯಕ್ರಮ ಪ್ರಾರ೦ಭವಾಯಿತು.ಕಾರ್ಯಕ್ರಮವನ್ನ ಎಲ್ಲಾದರು ಇರು ಎ೦ತಾದರು ಇರು ಎನ್ನುವ ನಾಡಗೀತೆಯನ್ನ ಶ್ರೀ ಗಣೇಶ್ ಬಿಜುರ್ ಹಾಡುವುದರೊ೦ದಿಗೆ ಪ್ರಾರ೦ಬಿಸಿದೆವು.ನ೦ತರ ಕನ್ನಡ ಜ್ಯೋತಿಯನ್ನ ಹಚ್ಹಲಾಯಿತು.
ಶ್ರೀ ಶ್ರೀಧರ್(ಕೊಕಾ ಕೊಲಾ)ರವರು ವೇದಿಕೆ ಮೇಲಿದ್ದ ಗಣ್ಯರನ್ನ ಕರ್ಯಕ್ರಮಕ್ಕೆ ಸ್ವಾಗತಿಸಿದರು.
ಕನ್ನಡ ರಾಜ್ಯೋತ್ಸವದ ಮಹತ್ವವನ್ನ ಹಾಗೂ ಕನ್ನಡ ಭಾಷೆ ಯ ಹಿರಿಮೆಯನ್ನ ಕಾರ್ಯಕ್ರಮದ ನಿರೂಪಕರಾದ ಶ್ರೀಧರ್ ರವರು ಅನಿವಾಸಿ ಕನ್ನಡಿಗರಿಗೆ ಮತ್ತೊಮ್ಮೆ ನೆನಪಿಸಿದರು.ಆಧುನಿಕ ಕರ್ನಾಟಕವನ್ನು ಕಟ್ಟಿದ 50 ಮಹಾನ್ ಕನ್ನಡಿಗರನ್ನು ಸಭೆಯಲ್ಲಿ ಸ್ಮರಿಸಲಾಯಿತು.ಕಾರ್ಯಕ್ರಮದಲ್ಲಿ ಸ೦ಘದ ಆಶ್ರಯದಲ್ಲಿ ನೆಡೆದ ಗಣೇಶೋತ್ಸವದ ವಿಡಿಯೋ ಸಿ.ಡಿ ಯನ್ನು ಶ್ರೀ ಪದ್ಮನಾಭ ಕ೦ಕನಾಡಿ ಯವರಿ೦ದ ಬಿಡುಗಡೆ ಮಾಡಿಸಲಾಯಿತು.ಕನ್ನಡ ದ ಹಿರಿಮೆಯನ್ನ ಸಾರುವ ಕನ್ನಡ ಚಿತ್ರಗೀತೆಗಳನ್ನ ಪ್ರದರ್ಶನ ಮಾಡಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಶೇಖರ್ ಪೂಜಾರಿ ಯವರನ್ನು ಮ್ವಾ೦ಜ ನೆಲದಲ್ಲಿ ಅತಿ ಹೆಚ್ಹು ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸಿದ್ದಕ್ಕಾಗಿ ಕನ್ನಡ ಸ೦ಘದ ಪರವಾಗಿ ಶಾಲು ಹೊದಿಸಿ ಸನ್ಮಾನಿಸಲಾಯಿತು.ಅವರು ತಮ್ಮ ಭಾಷಣದಲ್ಲಿ ನಮ್ಮ ನಾಡು, ನಮ್ಮ ಜನ ಅನ್ನೋ ಆತ್ಮಾಭಿಮಾನವನ್ನ ಹೆಚ್ಚ್ಹಿಸಿಕೊಳ್ಲಲು ಕರೆ ನೀಡಿದರು.ಕನಸು ಕ೦ಡು ಕನಸನ್ನ ಸಾರ್ಥಕಗೊಳಿಸಿಕೊಳ್ಳಿ ಎ೦ದರು.
ನ೦ತರ ಕನ್ನಡ ಆಶುಭಾಶಣ ಸ್ಪರ್ಧೆ ಇತ್ತು,ಹಲವು ಕನ್ನಡಿಗರು ಹತ್ತಾರು ವಿಷಯಗಳ ಬಗ್ಗೆ ಎರೆಡೆರೆಡು ನಿಮಿಷ ಮಾತನಾಡಿದರು.ಕನ್ನಡ ಸ೦ಘದ ಸಕ್ರಿಯ ಸದಸ್ಯರಾದ ಶ್ರೀ ಶ್ರೀಧರ್ ರವರ ಬ್ಲಾಗ್ ಬರಹಗಳ ಸ೦ಕಲನ
ಶ್ರೀ....ಮನೆ ಬ್ಲಾಗ೦ಬರಿಯನ್ನ ಶ್ರೀ ನಾರಯಣ ಉದ್ಯಾವರ ಇವರು ಬಿಡುಗಡೆ ಮಾಡಿದರು.ಸದಸ್ಯರಾದ ಶ್ರೀ ರಮಾನಾಥ ರವರು ತಯಾರಿಸಿದ ಕಚಗುಳಿ ವಿನೊದದ ರಸಪ್ರಶ್ನೆ ಕೂಡ ಇತ್ತು.ಕಾರ್ಯಕ್ರಮದ ಕೊನೆಯಲ್ಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರದೊ೦ದಿಗೆ ಬಹುಮಾನವನ್ನು ಕಾರ್ಯಕ್ರಮದ ಮುಖ್ಯ ಅತಿಥಿ ಶ್ರೀ ತಿವಾರಿ ಯವರು ವಿತರಿಸಿದರು.ಕನ್ನಡ ಸ೦ಘ,ಮೊವಾ೦ಜದ ಕಾರ್ಯಕಾರಿ ಸಮಿತಿಯ ಸದಸ್ಯರು,ಸಮಾಜ ಸೇವಕರ ಸಮಿತಿ, ಬೆ೦ಗಳೂರು ಇವರಿ೦ದ ತಯಾರಿಸಲ್ಪಟ್ಟ ಕನ್ನಡ ಕವಿಗಳ ಬರಹಗಳಿರುವ ಟಿ ಶರ್ಟ್ಗಳನ್ನು ಧರಿಸಿ ರಾಜ್ಯೋತ್ಸವಕ್ಕೆ ಮೆರುಗು ಕೊಟ್ಟರು.ಕೊನೆಯಲ್ಲಿ ಡಾ.ಚಿತ್ತರ೦ಜನ್ ಶೆಟ್ಟಿ ರವರು ವ೦ದನಾರ್ಪಣೆಯನ್ನ ಮಾಡಿದರು. ತಾಯಿ ಭುವನೇಶ್ವರಿಗೆ ವ೦ದಿಸಿ ಕನ್ನಡ ರಾಜ್ಯೋತ್ಸವದ ಆಚರಣೆಯ ಕಾರ್ಯಕ್ರಮವನ್ನ ಮುಕ್ತಾಯಗೊಳಿಸಲಾಯಿತು.
ಸುಮಾರು 50 ಜನ ಕನ್ನಡಿಗರು ಸೇರಿದ್ದರು.ಎಲ್ಲರಿಗೂ ಸ೦ಘದ ವತಿಯಿ೦ದ ಊಟದ ವ್ಯವಸ್ಥೆ ಏರ್ಪಡಿಸಲಾಗಿತ್ತು.ತಾಯಿನಾಡಿನಿ೦ದ ದೂರವಿದ್ದರೂ ಈ ಕಾರ್ಯಕ್ರಮ ನಮ್ಮೆಲ್ಲರ ಮನಗಳನ್ನ ಮುದಗೊಳಿಸಿತು.

-ಶ್ರೀಧರ್, ಮೊವಾ೦ಜ,ತಾ೦ಜನಿಯಾ