ಮನಸ್ಸಿನ ಮನಸ್ಸೆ...

ಮನಸ್ಸಿನ ಮನಸ್ಸೆ...

ಬರಹ

ಮನಸ್ಸಿನ ಆಳ ಚಿಂತೆಗೆ ಮೀರಿದ್ದು, ಚಿಂತಿಸುವವನಿಗೆ ಮೀರಿದ್ದು, ಮನಸ್ಸಿದ್ದವನು ಮನುಷ್ಯ. ಒಳ್ಳೆ ಮನಸ್ಸು ಅಥವಾ ಒಳ್ಳೆಯದನ್ನು ಯೋಚಿಸುವ ಮನಸ್ಸು ಒಂದುಕಡೆಯಾದರೆ, ಎಲ್ಲೊ ಕೆಲವು ಬಾರಿ ಬೇಡವಾದದ್ದು ಅಥವಾ ಸರಿಯಲ್ಲ ಎಂಬುದು ಹುಟ್ಟುವುದು ಸಹಜ. ಅಂದರೇ, ಎರಡು ಮನಸ್ಸು ಇದೆ ಎಂಬ ಭಾವನೆಯಲ್ಲ, ಮನಸ್ಸಿನಲ್ಲಿ ಎರಡು ತರಹದ ಭಾವನೆಗಳು ಉಂಟು ಎಂದರ್ಥ. ನಿಂತನೀರಿನಂತೆ ಯೋಚಿಸುವ ಮನಸ್ಸು, ಅದು ತಿಳಿನೀರಾಗಿರಬಹುದು ಅಥವಾ ಮಲಿನವಾಗಿರಬಹುದು ಇದು ಒಂದು ವರ್ಗದ ಮನಸ್ಸು. ತೂಗುವ ಉಯ್ಯಾಲೆಯ ಪರಿ ಹಾಗೂ ಅಲ್ಲ ಹೀಗೂ ಅಲ್ಲ ಎಂದು ಎರಡು ಭಾವನೆಯನ್ನು ಒಪ್ಪಿಕೊಳ್ಳದೆ ಕೊನೆಗೆ ಏನೂ ಮಾಡದೆ ಸುಮ್ಮನ್ನೆ ಇರುವುದು. ಹರಿಯುವ ನೀರಿಗೆ ಹಲವು ದಾರಿ, ಝರಿಯಾಗಿ ಹರಿದರು ಸಾಕು ಹೊಳೆಯಾಗುವ ಸಾಮರ್ಥ್ಯ ಹೊಂದಿರುತ್ತದೆ. ಹೀಗೆ ಒಳ್ಳೆಯದ್ದನ್ನು ಯೋಚಿಸುವ ಮನಸ್ಸು ಕಲ್ಪನೆಯ ಅಲೆಗಳನ್ನು ಸೃಷ್ಟಿಸಬಹುದು. ಏನಿದು, ಬರೀ ನೀರು, ಅಲೆ, ಹೊಳೆ, ಉಯ್ಯಾಲೆ ಅಂತೀರಾ... ಪ್ರತಿಯೊಬ್ಬರ ಒಳಗೆ ತಮ್ಮನ್ನು ತಾವು ಎಚ್ಚರಿಸಿಕೊಳ್ಳಲು ಒಬ್ಬ ವ್ಯಕ್ತಿ ಇರುತ್ತಾನೆ, ಅದೇ ಮನಸ್ಸು, ಈ ಮನಸ್ಸು ನಿಮ್ಮನ್ನು ನೆಡೆಸುವವನು. ಒಳ್ಳೆದಾರಿಯೇ ಆಗಲಿ, ಅಂದರೆ ಏಳಿಗೆಯ ದಾರಿ ಕಡೆ ನಡೆಸುತ್ತಾನೆ, ಕೆಲವೊಮ್ಮೆ ತಪ್ಪು ಮಾಡುವಂತೆ ಮಾಡುವನು ಅವನೇ. ಮನಸ್ಸಿನ ವರ್ತನೆ, ಅದರಿಂದ ನಿಮ್ಮ ನಡವಳಿಕೆ, ಎಲ್ಲವೂ ಮನಸ್ಸಿನ ಮೇಲೆ ವಾತಾವರ್ಣದ, ಸ್ನೇಹದ, ಪ್ರೀತಿಯ ಭಾವನೆಗಳು ಪರಿಣಮಿಸುವ ಕಾರಣ ಬಲವಾಗುತ್ತದೆ. ಮನಸ್ಸು ನಮ್ಮೊಳಗಿನ ಗೆಳೆಯ, ನಮ್ಮ ಸಂತೋಷ, ದುಃಖ ಎಲ್ಲವನ್ನು ಸ್ವೀಕರಿಸುವವನು ಮನಸ್ಸು ಎಂಬ ಸ್ನೇಹಿತ. ಒಳ್ಳೆಯದು, ಕೆಟ್ಟದ್ದು ಎಂಬ ಎರಡು ಭಾವನೆಗಳ ಒಡೆಯ ಈ ಮನಸ್ಸು, ಅವುಗಳ ಮಧ್ಯೆ ಜಗಳ ಬಂದಾಗ ಸರಿಯಾಗಿ ನಿರ್ಧರಿಸಿ ನಮ್ಮನ್ನು ಸರಿಯಾದ ನಡೆಸುವವನು ಮನಸ್ಸು. ಮನಸ್ಸಿನ ಮಾತುಗಳು ಬಹಳ ಸೂಕ್ಷ್ಮ, ಮನಸ್ಸು ಪ್ರಯಾಣಿಸುವ ಗಾಡಿಯ ಎರಡು ಎತ್ತುಗಳು, ಒಳ್ಳೆಯ ಕಡೆ ದೃಷ್ಟಿಯನ್ನು ಹರಿಸುವುದಾದರೆ ಎರಡು ಕಣ್ಣುಗಳು. ಸರಿಯಾದ ಹಾದಿಯಲ್ಲಿ ನಡೆಯಬೇಕಾದರೆ ಎರಡು ಕಾಲುಗಳು, ಒಂದು ಒಳ್ಳೆಯ ಕೆಲಸ ಮಾಡಬೇಕಾದರೆ ಎರಡು ಕೈಯಿಗಳು. ಹೀಗೆ, ಎರಡು ಭಾವನೆಗಳು ಮನಸ್ಸಿಗೆ ಆಧಾರ. ಜೀವನದಲ್ಲಿ ಯಾವುದೇ ವಿಷಯವಾಗಲಿ ಮನಸ್ಸಿಗೆ ಬಿಡಿ, ಮನಸ್ಸು ಹೇಳಿದ್ದನ್ನು ಮಾಡಿ, ಮನಸ್ಸು ಮಾಡಿ ಕೆಲಸಗಳನ್ನು ಮಾಡಿ. ಮಾತುಗಳನ್ನು ಆಡುವ ಮುನ್ನ ಮನಸ್ಸನ್ನು ಕೇಳಿ. ಮನಸ್ಸು ನಿಮ್ಮ ಗೆಳೆಯ ಅವನಿಗೆ ಯಾವುದೆ ಅಹಿತಕರವಾದದ್ದು ಮಾಡಬೇಡಿ, ಅವನಿಗೆ ಇಷ್ಟವಿಲ್ಲದ ಕೆಲಸ ನಮಗೂ ಬೇಡ, ನೋವು ಮಾಡದೆ ಸ್ನೇಹ ಉಳಿಸಿ, ಪ್ರೀತಿಯನ್ನು ಗೆಲ್ಲಿ.

ಮನಸ್ಸಿದ್ದರೆ ನರ ಮನುಷ್ಯ,
ಬಯಸಿ ಬರೀ ಹರುಷ,
ಇರಲಿ ಕಹಿಯ ಸ್ಪರ್ಶ,
ಜೀವನ ಜೇನಾಗಲಿ ಪ್ರತಿ ನಿಮಿಷ...

-ಸೋಮು...