ಪ್ರಶ್ನಾವಳಿ

ಪ್ರಶ್ನಾವಳಿ

ಬರಹ

೧. ’ಬಸವಯ್ಯ, ನೀನು ಕಲಿತವನು, ಲೋಕವೆಂಬುದು ಮಾಯೆ ಎಂದರಿತ ಸುಜ್ಞಾನಿ, ಪ್ರೇಮದೀ ಚಂಚಲತೆಯನ್ನು ಕಾವ್ಯಗಳನ್ನೋದಿ ತಿಳಿದವನು’ ಕುವೆಂಪು ವಿರಚಿತ ಯಾವ ನಾಟಕದ ಸಾಲುಗಳಿವು?

೨. ಅಗ್ನಿವರ್ಷ ಎಂಬ ಹಿಂದಿ ಚಲನಚಿತ್ರ ಯಾವ ಕನ್ನಡ ನಾಟಕವನ್ನು ಆಧರಿಸಿದೆ ಮತ್ತು ಅದರ ಕರ್ತೃ ಯಾರು?

೩. ಕನ್ನಡ ಕಾದಂಬರೀ ಪ್ರಪಂಚದಲ್ಲಿ ವಾಣಿಜ್ಯ ಜಗತ್ತನ್ನು ಮೊದಲು ಪರಿಚಯಿಸಿದ ಕಾದಂಬರಿಯ ಹೆಸರೇನು?

೪. ಕನ್ನಡಕ್ಕೊಂದು ಶಾಸ್ತ್ರೀಯ ನಿಘಂಟು ನೀಡಿದ ಹೆಗ್ಗಳಿಕೆ ಕಿಟೆಲರದು. ಅದಿರಲಿ, ಕನ್ನಡದ ಯಾವುದೇ ನಿಘಂಟಿನಲ್ಲಿ ಮೊದಲು ಕಾಣಸಿಗುವ ಪ್ರಾಣಿ ಯಾವುದು?

೫. ಯೇಸುಕ್ರಿಸ್ತನ ಕೊನೆಯ ಕ್ಷಣಗಳನ್ನು ದಾಖಲಿಸಿರುವ ಗೋವಿಂದ ಪೈಯವರ ಕಥನಕವನದ ಶೀರ್ಷಿಕೆ ಏನು?