ರಾವಣನ ಪುನರ್ಜನ್ಮದ ಕಣಸು

ರಾವಣನ ಪುನರ್ಜನ್ಮದ ಕಣಸು

ಇತ್ತೀಚೆಗೆ ಅನೇಕ ’ಸುಧಾ’ಗಳನ್ನು ಇನ್ನೊಮ್ಮೆ ನೋಡಿ , ಬೇಕಾದ ಹಾಳೆ ಹರಿದು ಇಟ್ಟುಕೊಂಡು ( ಬೇಡದ ಹಾಳೆಗಳನ್ನೂ ಹರಿಯಬೇಕಾಗುತ್ತದೆ ; ಆ ವಿಷಯ ಇನ್ನೊಮ್ಮೆ ಬರೆವೆ) ವಿಲೇವಾರಿ ಮಾಡಿದೆ.
ಅದರಲ್ಲಿ ರಾವಣನ ಪುನರ್ಜನ್ಮದ ಕಣಸು ಎಂಬ ಧಾರಾವಾಹಿ ಬಂದಿತ್ತು .. ಎಷ್ಟೋ ರಾಮಾಯಣ, ಮಹಾಭಾರತ ಓದಿದ್ದೇನೆ ... ತಿಣುಕಿದನು ಫಣಿರಾಯ ರಾಮಾಯಣಗಳ ಭಾರದಲಿ ಅಂತ ಇದೆಯಲ್ಲ ... ಅವರ ದೃಷ್ಟಿಯಲ್ಲಿ , ಇವರ ಕಣ್ಣಿನಲ್ಲಿ ಇತ್ಯಾದಿ .. ಅದಕ್ಕೆ ಓದಿರಲಿಲ್ಲ .
ಇದರಲ್ಲಿ ಇರುವದಾದರು ಏನು .. ಅಂತ ನೋಡಿದೆ . ನೋಡೋಣ, ರಾವಣನ ಪುನರ್ಜನ್ಮವೇ ? ಏನದು ? ಅವನ ಕಣಸು ಏನು ? ಅಂತ .

ರಾವಣ ಸೋತು ಸಾಯುವ ಮೊದಲು ಆಸೆಪಡುತ್ತಾನೆ, ಸೀತೆ ಅವನನ್ನ ಅಪ್ಪಿಕೋಬೇಕು , ಅವನು ರಾಮನನ್ನು ಸೋಲಿಸಿ ಸೀತೆಯನ್ನು ಅವನಿಗೆ ಒಪ್ಪಿಸಬೆಕು . ಅಂತ .. ಪಾರ್ವತೀನೋ ಇನ್ನಾರೋ ಹಾಗೇ ಆಗಲಿ ಅಂತ ವರಕೊಡ್ತಾರೆ , ಈ ಬಯಕೆ ಈಡೇರೋದು ... ಅವನ ಮುಂದಿನ ಜನ್ಮದಲ್ಲಿ ... ರಾವಣ, ಕುಂಭಕರ್ಣರು ಲವಕುಶರಾಗಿ ಹುಟ್ಟಿ ,, ಸೀತೆ ಅವ್ರನ್ನ ಅಪ್ಪಿಕೊಂಡು - ಮಕ್ಕಳಲ್ವೇ ? , ಅವರು ರಾಮನನ್ನು ಸೋಲಿಸಿ ಸೀತೆಯನ್ನು ರಾಮನನ್ನು ಒಂದುಗೂಡಿಸ್ತಾರೆ ...

ಕೇಳಿದ್ರಾ ಎಲ್ಲಾದರೂ ಈ ತರ ರಾವಣ, ಕುಂಭಕರ್ಣರು ಲವಕುಶರಾಗಿ ಹುಟ್ಟಿರೋದು ?

Rating
No votes yet