90ರ ಹೊಸ್ತಿಲಲ್ಲಿ ಬಿ.ವಿ. ಕಕ್ಕಿಲ್ಲಾಯ: ಹೊಸ ಪೀಳಿಗೆಯೊಂದಿಗೆ ಒಂದು ಸಂವಾದ

90ರ ಹೊಸ್ತಿಲಲ್ಲಿ ಬಿ.ವಿ. ಕಕ್ಕಿಲ್ಲಾಯ: ಹೊಸ ಪೀಳಿಗೆಯೊಂದಿಗೆ ಒಂದು ಸಂವಾದ

 ನಮ್ಮ ನಾಡಿನ ಹಿರಿಯ ಮುತ್ಸದ್ಧಿ ಶ್ರೀ ಬಿ.ವಿ. ಕಕ್ಕಿಲ್ಲಾಯರಿಗೆ ಇನ್ನು ತೊಂಭತ್ತರ ಹರೆಯ. ಭಾರತ ಕಮ್ಯೂನಿಸ್ಟ್ ಪಕ್ಷದ ನಾಯಕರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣ ಚಳುವಳಿಯ
ರೂವಾರಿಗಳಲ್ಲೊಬ್ಬರಾಗಿ, ರಾಜ್ಯಸಭೆ ಹಾಗೂ ಕರ್ನಾಟಕ ವಿಧಾನಸಭೆಗಳ ಸದಸ್ಯರಾಗಿ, ಚಿಂತನಶೀಲ ಬರಹಗಾರರಾಗಿ, ಕಾರ್ಮಿಕರ ನಾಯಕರಾಗಿ ಶ್ರೀ ಬಿ.ವಿ. ಕಕ್ಕಿಲ್ಲಾಯರ ಸೇವೆಯನ್ನು ಮತ್ತು ಜನಪರ ಹೋರಾಟಗಳನ್ನು ನೆನಪಿಸಿಕೊಳ್ಳುತ್ತ, ಕರ್ನಾಟಕದ ಮತ್ತು ರಾಷ್ಟ್ರದ ಪ್ರಸಕ್ತ ರಾಜಕೀಯ ಹಾಗೂ ಸಾಮಾಜಿಕ ಸನ್ನಿವೇಶದಲ್ಲಿ ಇಂದಿನ ಜನಾಂಗದ ಮುಂದಿರುವ ಸವಾಲುಗಳ ಬಗೆಗೆ ವಿಚಾರಸಂಕಿರಣಗಳನ್ನು, ಉಪನ್ಯಾಸಗಳನ್ನು, ಚರ್ಚೆಯನ್ನು ಈ ಸಂದರ್ಭದಲ್ಲಿ ಆಯೋಜಿಸುತ್ತಿದ್ದೇವೆ. ಬನ್ನಿ, ಭಾಗವಹಿಸಿ

ವಿವರಗಳಿಗೆ: http://kakkilaya.com/kakkilaya.pdf