ಪರಾಮರ್ಶೆಯ ಮಹತ್ವ

ಪರಾಮರ್ಶೆಯ ಮಹತ್ವ

ಸಹಸಾ ವಿದಧೀತ ನ ಕ್ರಿಯಾಮ್
ಅವಿವೇಕಃ ಪರಮಾಪದಾಂ ಪದಮ್
ವೃಣತೇ ಹಿ ವಿಮೃಶ್ಯಕಾರಿಣಮ್
ಗುಣಲುಬ್ಧಾಃ ಸ್ವಯಮೇವ ಸಂಪದಃ||

ಅರ್ಥ: ದುಡುಕಿನಿಂದ ಯಾವ ಕೆಲಸವನ್ನೂ ಮಾಡಬಾರದು. ಅವಿವೇಕವು ದೊಡ್ಡ ಆಪತ್ತಿಗೆ ದಾರಿಯಾಗುತ್ತದೆ. ಯೋಚನೆ ಮಾಡಿ ಕೆಲಸ ಮಾಡುವವನನ್ನು ಗುಣಗಳ ಪಕ್ಷಪಾತಿಯಾದ ಸಂಪತ್ತುಗಳು ತಾವಾಗಿಯೇ ಹಿಂಬಾಲಿಸಿ ಬರುತ್ತವೆ.