ಆಯುರ್ವೇದ ಹರಿಕಾರ

ಆಯುರ್ವೇದ ಹರಿಕಾರ

ಕವನ

ಮಹಾವಿಷ್ಣುವಿನ ಅವತಾರ ಪುರುಷ ನೀನು

ಆದಿನಾರಾಯಣ ಭಗವಾನ್  ಧನ್ವಂತರಿ ಚೈತನ್ಯ

ವೇದ ಪುರಾಣ ಶಾಸ್ತ್ರಂಗಳಲ್ಲಿ ನಿನ್ನ ನಾಮ

ಆಯುರ್ವೇದದ ಮೂಲ ದೇವಾನುದೇವತೆ||

 

ಸಮುದ್ರಮಥನ  ಸುಸಂದರ್ಭ ಉದ್ಭವಿಸಿದೆ

ಸುರಾಸುರರಿಗೆ ಔಷಧವ ಹಚ್ಚಿದೆ|

ಶ್ರೀಗಂಧ ಲೇಪಿತ ಶಂಖ ಚಕ್ರಧರೇ

ಅಮೃತ ಕಲಶ ಹಸ್ತೇ ಸಮುದ್ರವಾಸಹರೇ||

 

ಗಿಡಸಸ್ಯಮೂಲಿಕಾ  ಆಯುರ್ವೇದ ಹರಿಕಾರ

ಆದಿದೇವ ನಮಸ್ತುಭ್ಯಂ  ಮೃತ್ಯುನಾಶನಂ|

ಉಲ್ಲಾಸ ಚೈತನ್ಯ ದಾಯಕನು

ರೋಗರುಜಿನಗಳ ಶಮನಕಾರಕನು||

 

ಲೋಕವ್ಯಾಪಿಸಿದ ಮಹಾಮಾರಿಯ ಹೊಡೆದೋಡಿಸು

ಮತ್ತಷ್ಟೂ ಮರುಕಳಿಸದಂತೆ ಸಹಕರಿಸು|

ಜನರಿಗೆ ನೆಮ್ಮದಿ ಸೌಖ್ಯವನು  ಕರುಣಿಸು

ಧನ್ವಂತರಿ ದೇವನೇ ಅನವರತ ಮನೆ ಮನಗಳಲಿ ನೆಲೆಸು||

 

(ಅಕ್ಟೋಬರ್ ೨೨ರ ‘ಧನ್ವಂತರಿ ಜಯಂತಿ’ ಪ್ರಯುಕ್ತ) 

-ರತ್ನಾ ಕೆ.ಭಟ್ ತಲಂಜೇರಿ

ಚಿತ್ರ್