ಒಂದಿಷ್ಟು ಹನಿಗಳು…

ಒಂದಿಷ್ಟು ಹನಿಗಳು…

ಕವನ

ಚಾಟಿ ಏಟು 

ಅವಮಾನದ

ಚಾಟಿ

ಎಲ್ಲ ಕಡೆಯಿಂದಲೂ

ಬಂದು

ಎನ್ನನು

ಹೊಡೆಯಲಿ ಛಡಿ...

 

ಅಪರಿಪೂರ್ಣನಾದ

ನಾನು- ಒಬ್ಬ ಸಭ್ಯ

ಮನುಷ್ಯನಾದಾದರೂ ಆಗಿ

ಸಮಾಜಕೆ

ಸೂಕ್ತ ವ್ಯಕ್ತಿಯಾದರೂ

ಆದೇನು ಬಿಡಿ!

***

ಮಿಮಿಕ್ರಿ 

ವಿದೇಶಗಳಲ್ಲಿ

ನಡೆಯುವುದು

ನಿಜವಾದ

ರಾಜಕೀಯ

ಹಾಗೂ ಮಿಲಿಟರಿ

ಕ್ರಾಂತಿ...

 

ನಮ್ಮಲ್ಲಿ

ನಡೆಯುವುದು-

ರಾಜಕಾರಣಿಗಳು

ಬೇಳೆ ಬೇಯಿಸಿಕೊಳ್ಳುವ

ಮಿಮಿಕ್ರಿಯ

ಭ್ರಾಂತಿ!

***

ಅಭಿನವ ಶ್ರೀಕೃಷ್ಣ! 

ಎಲ್ಲ

ಪಕ್ಷದವರೂ

ಪ್ರೀತಿಸುವ

ಮಾನವೀಯ

ಸಜ್ಜನಿಕೆಯ

ರಾಜಕಾರಣೀ...

 

ಎಲ್ಲರ

ಹೃನ್ಮನಗಳ

ಗೆದ್ದು ಬೀಗಿದ

ಮಹಾಭಾರತದ

ಅಭಿನವ

ಶ್ರೀಕೃಷ್ಣ ನೀ!

***

ಮೌನ 

ಹೌದು

'ಮೌನ'

ಜಗತ್ತಿನ

ಅತಿ

ಸುಂದರ

ಮಾತು...

 

ದಿನವೂ

ಇದನ್ನೇ

ಆಡುತ್ತಿದ್ದರೆ-

ಸಿಗಲಾರದೇನೋ

ತಿನ್ನಲು ಒಂದು

ತುತ್ತೂ!

***

ಮಾತು 

ಕಚ್ಛಾ

ಪದಾರ್ಥಗಳವು-

ಕಾರ್ಖಾನೆಗಳಲಿ

ಸಂಸ್ಕರಣಗೊಂಡು

ಸುಂದರ ವಸ್ತುಗಳಾಗಿ

ಹೊರಬರುವಂತೆ...

 

ಮಾತುಗಳು-

ನಮ್ಮ

ಮನಸ್ಸೆಂಬ

ಕಾರ್ಖಾನೆಯೊಳಗೆ

ಮಥಿಸರಳಿ

ಹೊರಬರಲಿ!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್