ನೀನ್ಯಾಕೆ ಬರೆಯೊಲ್ಲ ಗಂಭೀರ ಕವಿತೆ?

ನೀನ್ಯಾಕೆ ಬರೆಯೊಲ್ಲ ಗಂಭೀರ ಕವಿತೆ?

ಕವನ


ನೀನ್ಯಾಕೆ ಬರೆಯೊಲ್ಲ ಗಂಭೀರ ಕವಿತೆ?

ಕಾಮೆಂಟು, ಲೈಕು ಕುಕ್ಕೋದ್ರಲ್ಲೇನೈತೆ


ಸೃಜನಶೀಲತೆ ತೋರಲೇನು ಕೊರತೆ?

ಬತ್ತಿತೇ ನಿನ್ನಯ ಭಾವನೆಯ ಒರತೆ?

ಎಂದು ಕೇಳಿದೆ ಒಮ್ಮೆ ನನ್ನ ಮನವ..|1|

ಕಾಡ್ತೋಟದಲ್ಲಿ ಉರುಳಿದ್ದ ಫಲ ನಾನು


ನೀ ಹೆಕ್ಕದೇ ಬಿಟ್ಟ ತಾಂಬೂಲ ನಾನು


ಸುತ್ತ ಕಳೆ ಬೆಳೆಯಲು ತಲೆಯೆತ್ತಿ ನಿಂತೆ


ಇನ್ನರ್ಧ ಅಡಿಯಲೇ ನೀ ಕಾಣ್ವೆಯೆಂಬಂತೆ|2|


ನಿಡಿದಾಗಿ, ಇಡಿಯಾಗಿ ನಾ ತುಂಬಿ ಬೆಳೆದೆ


ಹಾರೋ ದಣಿದಕ್ಕಿಗಳ ಕುಳ್ಳಿರಿಸೆ ಕರೆದೆ


ಹೂವಾಗಿ, ಫಲವಾಗಿ ಬಾಲ್ಯ ರೂಪವೇ ಆದೆ.

ನೀನಿಂದು ಹೊಗಳುವ ಸಿಹಿನೀರ ಪಂಪಾದೆ|3|


ಮರಿಯಳಿಲು ಬಳಿ ಬಂತು ನಾನೂ ಆಡಲೇ ಅಂತು


ಹಾರೋ ಮಂಗವು ಬಂತು , ಸಿಹಿನೀರು ಬೇಕಂತು


ಪ್ರತಿದಿನಾ ಕೊರೆದ ದುಂಬಿ ನಿನ್ನೆನಪೇ ತಂತು


ಎಷ್ಟೋ ವರುಷದ ಬಳಿಕ ನೀ ಹೊಗಳೋ ತಾಂಬೂಲ


ಬಣ್ಣ ಬೇರೆಯದಾದ್ರೂ ನಂದೇ ಅಂಶದ ಫಲ