ಸಾವಿನಾಚೆಯ ಪ್ರೀತಿಗಳು

ಸಾವಿನಾಚೆಯ ಪ್ರೀತಿಗಳು

ಕವನ

ಮನಸ್ಸಿನಾಳದ ನೋವುಗಳಿಗೆ ಮುಲಾಮು ಹಚ್ಚುವರಿದ್ದರೆ ಬನ್ನಿ

ಅದು ಪ್ರೀತಿಯಿಂದ ಆಗಬೇಕೇ ಹೊರತು ದ್ವೇಷದಿಂದಲ್ಲ 

 

ಮನೆ ಮನದಂಗಳದಲ್ಲಿ ಮಹಾಮಾರಿ ವಕ್ಕರಿಸಿದೆ ನೋಡು

ಕೊರೋನಾಕ್ಕಿಂತಲೂ ಭಯಂಕರ ಮನುಷ್ಯರ ಒಳಗೆ ಪ್ರೀತಿಯಿಲ್ಲದ್ದು

ಕಾರಣವೂ ಇಲ್ಲದಿಲ್ಲ ? ಮನುಷ್ಯ ಸಂಘಜೀವಿ !

 

ಹುಟ್ಟುವಾಗ ಮಗು ಅಮ್ಮನ ಅಳಿಸಿ ಹುಟ್ಟುತ್ತದೆ

ಅದೇ ಸಾಯುವಾಗ ತಾನೇ ಅತ್ತು ಸಾಯುತ್ತದೆ

ಬದುಕೇ ಒಂದು ವಿಚಿತ್ರ ಸಂತೆಯಿದ್ದಂತೆ

ಅರಿತುಕೊಂಡರೆ ಅರಿವಿನ ಬಾಳು ಸರಾಗ !

ತರಿದುಕೊಂಡರೆ ಅಮಾವಾಸ್ಯೆಯ ನಗುವಿನಂತೆ ದುಃಖಗಳ ಸಾಗರ !!

 

ಕಪ್ಪೆಗಳಿಗೂ ಮದುವೆಯಾಗುತ್ತವೆ ಬಾವಿಯಲ್ಲಿ ವಟರ್ ವಟರ್  !

ಇಂದು ಮನುಷ್ಯರಲ್ಲೂ ಮದುವೆಯಾಗುತ್ತದೆ ನಾಳೆಗೆ ಡೈವರ್ಸ್ ಇಲ್ಲೂ ವಟರ್ ವಟರ್!!

 

ಸಂಬಂಧಗಳು ಪ್ರೀತಿಗಳ ಉಳಿಸುವ ಶಿಕ್ಷಣವಿಂದು ಎಲ್ಲಿದೆ ?

ಭಾವನೆಗಳ ಜೀವಂತ ಕೊಲ್ಲುವ ಶಿಕ್ಷಣವೇ ಎಲ್ಲೆಲ್ಲೂ ಇವೆ !

ಅದನ್ನು ಕಲಿತವರ ಮಾನಸಿಕ ನೆಮ್ಮದಿಯೇ ಹಾಳಾಗಿ ಹೋಗಿದೆ !

ಮಾನವೀಯತೆಯ ಬದಲು ಕೊಲೆ ಸುಲಿಗೆ ಭ್ರಷ್ಟಾಚಾರವೇ ದೇಶದಲ್ಲಿ ವಿಜೃಂಭಿಸಿದೆ!

ಇಂದಿನ ಜನಕ್ಕೆ ಶಿಕ್ಷಣವೇ ಮಹಾಮಾರಿಯಾಗಿದೆ !

 

ಇಂದಿನ ಮನೆಗಳಲ್ಲಿ ಯಜಮಾನರೇ ಇಲ್ಲ 

ಆದ ಕಾರಣ ಯಜಮಾನಿಕೆಯೂ ಇಲ್ಲ ಅದಕ್ಕೇ ಇರಬೇಕು ? 

ಹುಟ್ಟಿದ ಕೂಸಿನಿಂದ ಹಿಡಿದು ಸಾಯುವ ಮುದುಕಿಯವರೆಗೂ ಎಲ್ಲರೂ ಯಜಮಾನರೇ ?

ಇದರಿಂದ ಸಂಸಾರ ಸಂಸಾರದೊಳು ಮುಳುಗಿ ನೈಜತೆಯಿಲ್ಲದ 

ಪಯಣದೊಂದಿಗೆ ಕೊನೆಗೆ ಮಸಣದ ದಾರಿ ಹಿಡಿಯುತ್ತದೆ !!

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್