ಮರೆಯಾಗುತ್ತಿರುವ ಪೂರ್ವ ಶಿಷ್ಟ ಕೃಷಿ ಪದ್ದತಿಗಳು (ಭಾಗ ೨)
1 day 8 hours ago - Ashwin Rao K Pನೀರಿನ ಹರಿವು ಮತ್ತು ಪದ್ದತಿ: ಕೆಳಗೆ ಹರಿಯುವ ನೀರು ಮೂಲತಹ ಯಾವ ರೀತಿಯಲ್ಲಿ ಹರಿಯುತ್ತಿತ್ತೋ ಅದೇ ರೀತಿಯಲ್ಲಿ ಹರಿದು ಹೋಗುತ್ತಿರಬೇಕು. ಒಂದು ವೇಳೆ ಕೃಷಿ ಉದ್ದೇಶ, ಮನೆ ಅಥವಾ ಕಟ್ಟಡ ಮಾಡುವಾಗ ಅದನ್ನು ಬದಲಿಸುವ ಸಂದರ್ಭ ಬಂದಲ್ಲಿ ಅದರ ಹರಿವಿನ ವೇಗ ಹಿಂದಿನಂತೆಯೇ ಇರುವಂತೆ ಬದಲಾವಣೆ ಮಾಡಬೇಕು. ನೀರು ನಿಂತು ಚಲಿಸುವುದು, ಇದರಿಂದ ಮೇಲಿನ ಹೊಲದವರಿಗೆ ತೊಂದರೆ ಆಗುವುದು ಆಗಲೇ ಬಾರದು. ಪ್ರತೀಯೊಬ್ಬರ ಹೊಲದ ನೀರು ಕೆಳಗಿನ ತಗ್ಗಿನ ಜಾಗಕ್ಕೆ ಹರಿದು ಹೋಗಲೇ ಬೇಕು. ಇದಕ್ಕೆ ತಗ್ಗಿನ ಜಾಗದವನು ಆಕ್ಷೇಪ ವ್ಯಕ್ತಪಡಿಸುವಂತಿಲ್ಲ. ಹಾಗೆಂದು ಮನಬಂದಂತೆ ನೀರನ್ನು ಕೆಳಗಿನ ಹೊಲದ ಬದಿಗೆ ಹರಿದು ಹೋಗಲು ಬಿಡಬಾರದು. ಎಲ್ಲಿ ಸಹಜವಾಗಿ ನೀರು ಹರಿದು ಹೋಗುತ್ತಿತ್ತೋ ಆದೇ ತೋಡು ( ಕಾಲುವೆ)ಗೆ ನೀರು ಹರಿಯುವಂತೆ ವ್ಯವಸ್ಥೆ ಮಾಡಿ ನೀರನ್ನು ಹರಿ ಬಿಡಬೇಕು. ನೀರು ಹರಿಯುವ ದಾರಿಯನ್ನು ಮುಚ್ಚುವುದು, ಅದಕ್ಕೆ ತಡೆ ಮಾಡುವುದು, ನೀರು ನಿಂತು ಜೌಗು ಉಂಟಾಗುವಂತೆ ಮಾಡುವುದು ಸಲ್ಲದು.
ಹೊಲದ ಮೂಲಕ ಹರಿದು ಹೋಗುವ ನೀರಿನ ತೋಡು ಇದ್ದಲ್ಲಿ, ಅದರಲ್ಲಿ ಬೇಸಿಗೆಯಲ್ಲಿ ನೀರು ಹರಿದುಹೋಗುತ್ತಿದ್ದರೆ ಅದನ್ನು ಮೇಲಿನ ಜಾಗದವನು ಪೂರ್ತಿ ಕಟ್ಟ (ತಡೆ) ಹಾಕಿ ಕೆಳಗೆ ನೀರು ಹರಿದು ಹೋಗದಂತೆ ತಡೆಯುವಂತಿಲ್ಲ. ಅವನು ತನ್ನ ಹೊಲದ ಮಟ್ಟದಷ್ಟು ಮಾತ್ರ ಅದಕ್ಕೆ ಒಡ್ಡು ಹಾಕಬಹುದು. ಆ ಒಡ್ಡಿನ ಮೂಲಕ ಹೆಚ್ಚುವರಿ ನೀರು ಕೆಳಕ್ಕೆ ಹರಿದುಹೋಗಬೇಕು. ಕೆಳಭಾಗದ ಫಲಾನುಭವಿಯ ಹೊಲಕ್ಕೆ ನೀರು ಇಲ್ಲದಂತೆ ಆಗಬಾರದು. ಹಾಗೆಂದು ಯಾರೇ ಒಡ್ಡು ಹಾಕಿದರೂ ಮೇಲಿನವವರ ಹೊಲದಲ್ಲಿ ಜೌಗು ಸ್ಥಿತಿ ಉಂಟಾಗಬಾರದು.
ತೋಟ ಅಥವಾ ಬೇಸಾಯ ಮಾಡುವ ಕ್ರಮ:
ಹಿಂದೆ ಪ್ರತೀಯೊಬ್ಬರೂ ಅವರವರ ಜಾಗಕ್ಕೆ ಅಗಳು ಹಾಕುವ ಪದ್ದತಿ ಇತ್ತು. ಅವರವರ ಹೊಲದ ಬೌಂಡರಿಗಳು… ಮುಂದೆ ಓದಿ...