ನನ್ನ ಜೊತೆ ಇರಬೇಕು ಅಪ್ಪಾ
ಸಂತೆಗೆ ಹೋಗುವಾಗ
- Read more about ನನ್ನ ಜೊತೆ ಇರಬೇಕು ಅಪ್ಪಾ
- Log in or register to post comments
ಸಂತೆಗೆ ಹೋಗುವಾಗ
ಖ್ಯಾತ ಕವಿ ಖಲೀಲ್ ಗಿಬ್ರಾನ್ ಅವರು ಹಲವಾರು ಕಥೆಗಳನ್ನೂ ಬರೆದಿದ್ದಾರೆ. ಅದರಲ್ಲೂ ಅವರ ಪುಟ್ಟ ಕಥೆಗಳು ಬಹಳ ಅರ್ಥಪೂರ್ಣ. ಅಂತಹ ಎರಡು ಕಥೆಗಳನ್ನು ಸಂಗ್ರಹಿಸಿ ಇಲ್ಲಿ ಪ್ರಕಟಿಸಲಾಗಿದೆ.
ಉದಯೋನ್ಮುಖ ಕಥೆಗಾರ್ತಿ ಶುಭಶ್ರೀ ಭಟ್ಟ ಅವರ ನೂತನ ಕಥಾ ಸಂಕಲನ ‘ಬಿದಿಗೆ ಚಂದ್ರಮನ ಬಿಕ್ಕು’ ಬಿಡುಗಡೆಯಾಗಿದೆ. ಈ ಕೃತಿಗೆ ಖ್ಯಾತ ಬರಹಗಾರ ವಿಕಾಸ ನೇಗಿಲೋಣಿ ಮುನ್ನುಡಿಯನ್ನು ಬರೆದಿದ್ದಾರೆ. ಅವರ ಮುನ್ನುಡಿಯ ಕೆಲವು ಸಾಲುಗಳು …
ಬೆಂಗಳೂರು ಅಂತರಾಷ್ಠ್ರೀಯ ಚಲನಚಿತ್ರೋತ್ಸವ, ನಟ್ಟು - ಬೋಲ್ಟು, ಕನ್ನಡ ಚಿತ್ರರಂಗದವರ ಬೇಜವಾಬ್ದಾರಿ, ಉಪಮುಖ್ಯಮಂತ್ರಿ ಶಿವಕುಮಾರ್ ಅವರ ನಿಷ್ಟುರತೆ, ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಸರ್ಕಾರದ ನಡುವೆ ಸಂಪರ್ಕ ಸೇತುವೆಯ ಕೊರತೆ.
ಮೊಳಕೆಯೊಡೆದು ಮರವಾಗಬೇಕು ಅನ್ನುವ ಕಾರಣಕ್ಕೆ ಬೇರೆ ಬೇರೆ ತರದ ಬೀಜಗಳನ್ನು ನೆಲಕ್ಕೆ ಹಾಕಿದ್ರು. ಎಲ್ಲದಕ್ಕೂ ಸರಿಯಾದ ಪ್ರಮಾಣದ ನೀರು, ಗೊಬ್ಬರ ಎಲ್ಲವನ್ನು ನೀಡಿದರು. ಆದರೆ ಕೆಲವೊಂದು ಗಿಡಗಳ ಎಲೆಗಳು ಸ್ವಲ್ಪ ಅಗಲವಾಗಿಯೂ ಇನ್ನೂ ಕೆಲವು ಎಲೆಗಳು ಸ್ವಲ್ಪ ಸಪೂರವಾಗಿಯೂ ಬೆಳೆಯೋದಕ್ಕೆ ಪ್ರಾರಂಭವಾಯಿತು. ಒಂದಷ್ಟು ಗಿಡಗಳನ್ನು ಒಬ್ಬೊಬ್ಬರಿಗೆ ಜವಾಬ್ದಾರಿ ವಹಿಸುವುದು ಅಂತ ಮನೆ ಯಜಮಾನ ತೀರ್ಮಾನ ಮಾಡಿಬಿಟ್ಟ.
ಹಾಲನ್ನು ಚೆನ್ನಾಗಿ ಕುದಿಸಿ ಆರಿಸಿ. ಬೆಣ್ಣೆ ಹಣ್ಣಿನ ತಿರುಳನ್ನು ತೆಗೆದು ಮಿಕ್ಸಿಯಲ್ಲಿ ತಿರುವಿ ಕುದಿಸಿಟ್ಟ ಹಾಲಿಗೆ ಸೇರಿಸಿ ಸಕ್ಕರೆ, ಏಲಕ್ಕಿ ಪುಡಿ ಎಲ್ಲ ಹಾಕಿ ಚೆನ್ನಾಗಿ ಕದಡಿ. ಫ್ರಿಜ್ನ ಫ್ರೀಜರ್ನಲ್ಲಿರಿಸಿ ಗಟ್ಟಿ ಆಗುವಾಗ ತಿನ್ನಿ. ಬಹಳ ರುಚಿಯಾಗಿರುವ ಈ ಐಸ್ಕ್ರೀಮನ್ನು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಚಪ್ಪರಿಸಿಕೊಂಡು ತಿನ್ನುತ್ತಾರೆ.
ಹಾಲು ೧ ಲೀ., ಸಕ್ಕರೆ ೧ ಕಪ್, ಬೆಣ್ಣೆ ಹಣ್ಣು (ಬಟರ್ ಫ್ರುಟ್ ಅಥವಾ ಅವಕಾಡೋ) ೧, ಏಲಕ್ಕಿ ಪುಡಿ ೧/೪ ಚಮಚ.
ಕಣ್ಣಿನಲ್ಲಿ ನೋಡುವ ಕ್ರಿಯೆ ಹೇಗೆ ಎಂದು ತಿಳಿದೆವು. ಇದು ಬೆಳಕಿನ ಶಕ್ತಿ ರಾಸಾಯನಿಕ ಶಕ್ತಿಯಾಗಿ, ರಾಸಾಯನಿಕ ಶಕ್ತಿ ವಿದ್ಯುತ್ ಶಕ್ತಿಯಾಗಿ ಬದಲಾವಣೆಯಾಗುವ ಒಂದು ಸಂಕೀರ್ಣ ಕ್ರಿಯೆ. ಮತ್ತೆ ಆಲ್ಬಮ್ನಲ್ಲಿ ಫೋಟೋಗಳನ್ನು ಹುಡುಕಿ ತಾಳೆ ನೋಡಬೇಕು ಮತ್ತೆ ಗುರುತು ಹಿಡಿಯಬೇಕು. ಹೇಗೆ ಎನ್ನುತ್ತೀರಾ? ನಿಮ್ಮ ಮನೆಯ ಅಂಗಳದಲ್ಲಿ ಒಂದು ಪಾರಿವಾಳ ತನ್ನ ಕತ್ತು ಕೊಂಕಿಸುತ್ತಾ ಓಡಾಡುತ್ತಿದೆ ಎಂದಿಟ್ಟುಕೊಳ್ಳೋಣ.
ಕೃಷ್ಣನಂತೆ ಸಂಕಿರ್ಣ ವಾಹಿನಿಯಾಗಿ
ಬುದ್ಧನಂತೆ ಸ್ಥಾಯಿರಸಿಕನಾಗಿ
ಬರಗಾಲ ಫಕೀರನಾಗಿ ತೆವಳಿದ್ದೇನೆ
ತಿಳಿಯಾಗಲು ಕಾಲವೂ ಹಪಹಪಿಸಿದ್ದೇನೆ
ಚೈತನ್ಯ ಸತ್ತಾಗಲೆಲ್ಲ ಸ್ಫೂರ್ತಿಯ ಸೆಲೆಗಾಗಿ ಹುಡುಕಿ,
ಹೊಸ ಉತ್ಸಾಹದಲ್ಲಿ ಧುಮುಕಿದ್ದೇನೆ.
ತೀರಸ್ಕೃತನಾಗಿದ್ದೇನೆ, ದಣಿದಿದ್ದೇನೆ, ಸೋತಿದ್ದೇನೆ,
ಸೃಜನಶೀಲತೆ ಇಲ್ಲದೆ, ಬರವಣಿಗೆಯೇ ಜೊಳ್ಳು ಅನ್ನಿಸಿದ್ದೂ ಇದೇ!
ಮಾಡಿರಬಹುದು ತಪ್ಪುಗಳನ್ನು, ಕಂಡದ್ದನ್ನು ತಿದ್ದಿದ್ದೇನೆ
ನೋಯಿಸಿರಬಹುದು, ನಿತ್ಯವೂ ಮರುಗಿದ್ದೇನೆ
ಭಾವ, ಬುದ್ಧಿಯ ಅಲಗಕ್ಕೆ ಸಿಕ್ಕು ಮಾಡಿರಬಹುದು
ಕೆಲವನ್ನು, ಸಿದ್ಧನಿದ್ದೇನೆ ಬಲಿಯಂತೆ ತಲೆತಗ್ಗಿಸಿ ನಿಲ್ಲಲು
ಉಪಕಾರ ಸ್ಮರಿಸದಿರಬಹುದು ಮುಖಸ್ತುತಿಯಾಗಿ
ಕ್ರೌರ್ಯದ ಏರು ಹೊಸ್ತಿಲಿನಲ್ಲಿ
ಫೆಬ್ರವರಿ ತಿಂಗಳು ಬಂತೆಂದರೆ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಪರೀಕ್ಷೆಗಳ ಒತ್ತಡ ಶುರು. ಮುಂದಿನ ಮೂರು ತಿಂಗಳು ವಿದ್ಯಾರ್ಥಿಗಳಿಗೂ ಹೆತ್ತವರಿಗೂ ದಿನದಿನವೂ ಹೆಚ್ಚುವ ಒತ್ತಡ. ಮುಂದೆ ಏನಾಗುತ್ತದೋ ಎಂಬ ಆತಂಕ.
ಹತ್ತನೆಯ ಮತ್ತು ಪಿಯುಸಿ (ಅಥವಾ 11ನೇ ಹಾಗೂ 12ನೇ) ತರಗತಿಯ ವಿದ್ಯಾರ್ಥಿಗಳು ಮತ್ತು ಅವರ ಹೆತ್ತವರಿಗಂತೂ ಇದು ಅಗ್ನಿಪರೀಕ್ಷೆಯ ಕಾಲ. ಯಾಕೆಂದರೆ ವಿದ್ಯಾರ್ಥಿಗಳ ಮುಂದಿನ ಬದುಕು ಈ ಪರೀಕ್ಷೆಗಳ ಫಲಿತಾಂಶದ ಮೇಲೆ ಅವಲಂಬಿತವಾಗಿರುತ್ತದೆ.