ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸ್ಟೇಟಸ್ ಕತೆಗಳು (ಭಾಗ ೧೩೭೬) - ಕೂಗು

ಊರಿನ ಕೊನೆಯಲ್ಲಿ ಒಂದು ಗ್ರಾಮ ಪಂಚಾಯಿತಿ ಇದೆ. ಅದಕ್ಕೆ ಹೊಂದಿಕೊಂಡು ಗ್ರಂಥಾಲಯ ಒಂದು ಹಿಂದೆ ಇತ್ತಂತೆ. ಈಗ ಅಲ್ಲಿ ಗ್ರಂಥಾಲಯದ ಯಾವ ಸುಳಿವು ಕಾಣುತ್ತಿಲ್ಲ. ಗೋಡೆಗಳಷ್ಟೇ ಉಳಿದಿವೆ. ಚಾವಣಿಗಳು ಮಾಯವಾಗಿವೆ. ಪುಸ್ತಕಗಳು ದೂಳು ಹಿಡಿದು ಕರಗಿ ಹೋಗಿದೆಯೋ, ಓದುವವರಿಲ್ಲದೆ ಆ ಜಾಗಕ್ಕೆ ಬಂದೇ ಇಲ್ಲವೋ ಗೊತ್ತಿಲ್ಲ. ಆ ಊರಿನಲ್ಲಿ ಯಾವ ಮನೆಯಲ್ಲೂ ಪುಸ್ತಕಗಳು ಸಿಗುತ್ತಿಲ್ಲ. ಓದುವ ಹವ್ಯಾಸ ಒಬ್ಬರಿಗೂ ಇಲ್ಲ.

Image

ಬ್ರೆಡ್ ದಹಿ ವಡಾ

Image

ಮೊಸರನ್ನು ಒಂದು ಬೋಗುಣಿಯಲ್ಲಿ ಹಾಕಿ ಉಪ್ಪು ಸೇರಿಸಿರಿ. ಒಗ್ಗರಣೆಗೆ ಎಣ್ಣೆ ಕಾಯಿಸಿ. ಸಾಸಿವೆ ಸಿಡಿಸಿ, ಉದ್ದಿನ ಬೇಳೆ, ಕಡಲೆಬೇಳೆ, ಹಸಿರು ಮೆಣಸಿನಕಾಯಿ, ಕೆಂಪು ಮೆಣಸಿನಕಾಯಿ, ಕರಿಬೇವು ಮತ್ತು ಗೇರುಬೀಜದ ತುಂಡುಗಳನ್ನು ಸೇರಿಸಿ ನಸುಗೆಂಪಾಗುವಷ್ಟು ಹುರಿದು ಮೊಸರಿನ ಮೇಲೆ ಹಾಕಿರಿ.

ಬೇಕಿರುವ ಸಾಮಗ್ರಿ

ಬ್ರೆಡ್ ಹಾಳೆಗಳು ೪, ಹಾಲು ೩ ಚಮಚ, ಗಟ್ಟಿ ಮೊಸರು ೨ ಕಪ್, ಎಣ್ಣೆ ೨ ಚಮಚ, ಸಾಸಿವೆ ಅರ್ಧ ಚಮಚ, ಉದ್ದಿನ ಬೇಳೆ ೧ ಚಮಚ, ಕಡಲೆಬೇಳೆ ೧ ಚಮಚ, ಹಸಿರು ಮೆಣಸಿನಕಾಯಿ ೧, ಹೆಚ್ಚಿದ ಕೆಂಪು ಮೆಣಸಿನಕಾಯಿ ೧, ಕರಿಬೇವು ಸೊಪ್ಪು ೬ ಎಲೆಗಳು, ಹೆಚ್ಚಿದ ಕೊತ್ತಂಬರಿಸೊಪ್ಪು ೨ ಚಮಚ, ಗೇರುಬೀಜದ ಚೂರುಗಳು ೨ ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ನಾವೆಲ್ಲರೂ ಒಂದೇ ಅಲ್ಲವೇ?

ಮಗುವು ಪ್ರಶ್ನೆ ಕೇಳಲು ನಾವು ಸಹಕರಿಸುವುದು ಮಗುವಿನ ವ್ಯಕ್ತಿತ್ವ ವಿಕಸನದ ಒಂದು ಮಾರ್ಗ ಎಂದೇ ಹೇಳಬಹುದು. ಈ ವಿಷಯಕ್ಕೆ ಸಂಬಂಧಿಸಿದಂತೆ ನಾನೊಂದು ಅನುಭವವನ್ನು ಹಂಚಿಕೊಳ್ಳ ಬಯಸುತ್ತೇನೆ.

Image

ಸ್ಟೇಟಸ್ ಕತೆಗಳು (ಭಾಗ ೧೩೭೫) - ನಂಬಿಕೆ

ಆತನ ಗೆಲುವಿನ ನಿರೀಕ್ಷೆ ಅದ್ಭುತವಾಗಿತ್ತು. ಆತನಿಗೆ ನೂರು ಪ್ರತಿಶತಃ ಗೆಲುವಿನ‌ ನಂಬಿಕೆ ಇತ್ತು. ನಗರಸಭಾ ಸದಸ್ಯನಾಗುವುದು ಅಷ್ಟು ಸುಲಭದ ಮಾತೇನಲ್ಲ, ಪರಿಚಯವಿಲ್ಲದ ಊರಿನಲ್ಲಿ ಒಂದು ವರ್ಷಗಳ ಕಾಲ ಅವಿರತವಾಗಿ ಶ್ರಮವಹಿಸಿ ದುಡಿದ. ಎಲ್ಲರ ಮನೆ ಮಗನಾದ. ಚುನಾವಣೆ ಪ್ರಚಾರಕ್ಕೆ ಪ್ರತಿ‌ಮನೆಯ ಕದ ತಟ್ಟಿದ. ಈಗಾಗಲೇ ಅವರ ಹೃದಯ ಮುಟ್ಟಿದ ಕಾರಣ ಅದೇನು ಕಷ್ಟ ಅನ್ನಿಸಲೇ ಇಲ್ಲ.

Image

ನೋಟ್ ಬುಕ್

ಪುಸ್ತಕದ ಲೇಖಕ/ಕವಿಯ ಹೆಸರು
ಡಾ, ಕೆ.ಶಿವಲಿಂಗಪ್ಪ ಹಂದಿಹಾಳು
ಪ್ರಕಾಶಕರು
ಕವನ ಪ್ರಕಾಶನ, ಬಳ್ಳಾರಿ
ಪುಸ್ತಕದ ಬೆಲೆ
ರೂ. ೩೦೦.೦೦, ಮುದ್ರಣ: ೨೦೨೫

ಮಕ್ಕಳಿಗಾಗಿ ಪುಸ್ತಕಗಳು ಬರುವುದು ಅಪರೂಪವೇ ಆಗಿರುವ ಸಮಯದಲ್ಲಿ ಡಾ. ಕೆ.ಶಿವಲಿಂಗಪ್ಪ ಹಂದಿಹಾಳು ಇವರು ಮಕ್ಕಳ ಕಥಾ ಸಂಕಲನ ‘ನೋಟ್ ಬುಕ್’ ಹೊರತಂದಿದ್ದಾರೆ. ಈ ಕಥಾ ಸಂಕಲನಕ್ಕೆ ತಮ್ಮ ಅನಿಸಿಕೆಗಳನ್ನು ಬರೆದ್ದಾರೆ ಕಿರಣ್ ಭಟ್. ಅವರು ತಮ್ಮ ಅನಿಸಿಕೆಯಲ್ಲಿ “ಬಹುಷ: ನಾವು ಎಂಟನೆಯ ತರಗತಿಯಲ್ಲಿ ಓದುತ್ತಿದ್ದ ಸಮಯ. ಸದಾನಂದನೆಂಬ ಕಿಲಾಡಿ ಹುಡುಗನೊಬ್ಬ ಒಂದು ದಿನ ವಿಶೇಷ ವಸ್ತುವೊಂದನ್ನು ತಂದ.

ಯಾವುದು ಮುಖ್ಯ - ಯಾವುದು ತಪ್ಪು ದಾರಿ?

ಆಗಬೇಕಾದ ಕೆಲಸಗಳು - ನಾವು ಸದಾ ಚರ್ಚಿಸುತ್ತಿರುವ ವಿಷಯಗಳು. ದೇಶ ಅಥವಾ ರಾಜ್ಯದಲ್ಲಿ ಇಂದಿನ ದಿನಗಳಲ್ಲಿ ಅತ್ಯಂತ ಅನಿವಾರ್ಯವಾಗಿ, ತೀವ್ರವಾಗಿ, ಅತ್ಯಗತ್ಯವಾಗಿ ಚರ್ಚೆಯಾಗಬೇಕಾದ ವಿಷಯಗಳು.

Image

ಸಂತ ಬೈಜೀದ್

ಇಂದು ಸಂತ ಬೈಜೀದ್ ನ ಬಗ್ಗೆ ತಿಳಿದುಕೊಳ್ಳೋಣ. ಇದು ಒಂದು ನಡೆದ ಘಟನೆ. ಈ ಕಥೆಯನ್ನು ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಒಂದು ಪ್ರವಚನದಲ್ಲಿ ಹೇಳಿದ್ದರು. 

Image

ವಿದ್ಯೆಯ ಉಪಯೋಗ

ಒಂದು ರಾಜ್ಯದ ರಾಜ ವಿಹಾರಾರ್ಥವಾಗಿ ಮಲೆನಾಡಿನ ಕಡೆಗೆ ಹೊರಟಿದ್ದ. ಪರಿವಾರದಲ್ಲಿ ರಾಜನೊಂದಿಗೆ ಆತನ ಮಗ, ಅವನ ಗುರುಗಳು, ರಾಜಭಟರು, ಆಗಷ್ಟೇ ಸೇನೆಗೆ ಸೇರಿದ್ದ ಕೆಲವು ಸೈನಿಕರು, ಸೇವಕರು ಇದ್ದರು.

Image