ವಿಧ: ರುಚಿ
June 07, 2021
ಬೆಳ್ತಿಗೆ ಅಕ್ಕಿ ನೆನೆಸಿದ್ದು, ಅವಲಕ್ಕಿ, ಬೆಳ್ತಿಗೆ ಅಕ್ಕಿಯ ಅನ್ನ ನಯವಾಗಿ ರುಬ್ಬಿ, ಅದಕ್ಕೆ ಮಜ್ಜಿಗೆ, ಉಪ್ಪು ಸೇರಿಸಿ ಮುನ್ನಾ ದಿನವೇ ಇಡಬೇಕು. ಬೆಳಿಗ್ಗೆ ಚೆನ್ನಾಗಿ ಮಿಶ್ರ ಮಾಡಿ ಕಾದ ಕಾವಲಿ ಅಥವಾ ತವಾದಲ್ಲಿ ಎರೆದು, ಬೆಂದಾಗ, ಬೇಕಾದರೆ ಕವುಚಿ ಹಾಕಿ ಬೇಯಿಸಬೇಕು. ತುಪ್ಪ, ಬೆಣ್ಣೆ, ತೆಂಗಿನೆಣ್ಣೆ ಹಾಕಿ ತಿನ್ನಲು ಬಹಳ ರುಚಿ. ಸಾಂಬಾರ್, ಪಲ್ಯ, ಚಟ್ನಿ ಜೊತೆಗೂ ಉಪಯೋಗಿಸಬಹುದು.
-ರತ್ನಾ. ಕೆ.ಭಟ್, ತಲಂಜೇರಿ
ವಿಧ: ಪುಸ್ತಕ ವಿಮರ್ಶೆ
June 05, 2021
'ಸರದಾರ' ಪುಸ್ತಕವು ಹೆಸರೇ ಹೇಳುವಂತೆ ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಜೀವನದ ಮೇಲೆ ಚಿತ್ರಿತವಾಗಿದೆ. ಖ್ಯಾತ ವಾಗ್ಮಿ, ಲೇಖಕ ಚಕ್ರವರ್ತಿ ಸೂಲಿಬೆಲೆ ಇವರ ಲೇಖನಿಯಿಂದ ಹೊರ ಬಂದ ಹೊತ್ತಗೆ ಇದು. ಸರ್ದಾರ್ ಪಟೇಲರ ಬಗ್ಗೆ ಹತ್ತು ಹಲವಾರು ಪುಸ್ತಕಗಳು ಹೊರಬಂದಿವೆ. ಆದರೂ ಚಕ್ರವರ್ತಿಯವರ ಬರವಣಿಗೆ ಧಾಟಿ ಬಹು ಸುಂದರ ಮತ್ತು ಅಪರೂಪ. ಸರ್ದಾರ್ ಪಟೇಲರ ಬಗ್ಗೆ ಅವರು ಬರೆದ ಬೆನ್ನುಡಿ ಹೀಗಿದೆ “ಹಾರೊಲ್ಡ್ ಮ್ಯಾಕ್ ಮಿಲನ್ (ಬ್ರಿಟೀಷ್ ಪ್ರೀಮಿಯರ್) ವೇವೆಲ್ಲರ ಬಳಿ ಒಂದು ಮಾತು…
ವಿಧ: ಪುಸ್ತಕ ವಿಮರ್ಶೆ
June 03, 2021
‘ಕೆಫೆ ಕಾಫಿ ಡೇ’ ಎಂಬ ಸಂಸ್ಥೆಯ ಮಾಲೀಕ ಸಿದ್ಧಾರ್ಥ್ ಮಂಗಳೂರಿನ ನೇತ್ರಾವತಿ ನದಿಯ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡದ್ದು ೨೦೧೯ರ ದೊಡ್ದ ಸಂಗತಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಸಿದ್ಧಾರ್ಥ ಪುಟ್ಟದಾದ ‘ಕೆಫೆ ಕಾಫಿ ಡೇ’ ಎಂಬ ಅಂಗಡಿಯನ್ನು ತೆರೆದರು. ಅದು ಅವರ ಭಾಗ್ಯದ ಬಾಗಿಲೇ ತೆರೆಯಿತು. ಅದರ ಉನ್ನತಿಯೇ ಅವರ ಸಾವಿಗೂ ಕಾರಣವಾದದ್ದು ಮಾತ್ರ ದುರಂತವೇ ಸರಿ. ೧೯೯೬ರಲ್ಲಿ ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ತಲೆ ಎತ್ತಿದ ಮೊದಲ ‘ಅಡ್ಡಾ’ ಶ್ರೀಮಂತ ಯುವಕ-…
ವಿಧ: ಪುಸ್ತಕ ವಿಮರ್ಶೆ
June 02, 2021
ಕವಿ, ಸಾಹಿತಿ, ಅಧ್ಯಾಪಕರಾದ ಶ್ರೀ ಹಾ.ಮ.ಸತೀಶ (ಹಾಲುಮಜಲು ಸತೀಶ) ಇವರ ಪುಸ್ತಕ *ಪರಸ್ಪರ* ವೈಚಾರಿಕ ಲೇಖನಗಳನ್ನೊಳಗೊಂಡ ಹೊತ್ತಗೆ. ಒಟ್ಟು *೨೭* ಲೇಖನಗಳು ಶ್ರೀಯುತರ ಕೈಯಿಂದ ಬರೆಯಲ್ಪಟ್ಟಿದೆ. *ಮಾನವ* -ಮೊದಲು ಮಾನವನಾಗು, ಮನಸ್ಸನ್ನು ನಿರ್ಮಲವಾಗಿಟ್ಟುಕೊ, ಮೂರು ದಿನದ ಬಾಳ್ವೆಯಲಿ ಹಗರಣವೇತಕೆ? ರಗಳೆ ಬಾರದಿರಲಿ. ಮನುಜಾ ವಿಶ್ವ ಮಾನವನಾಗು, ಜಗದಗಲ ಪಸರಿಸು ಎಂಬ ಸಂದೇಶ ಮನಸೆಳೆಯಿತು, ಎಲ್ಲರಿಗೂ ಮಾದರಿ.
ಮಾ ಎಂದರೆ ತಾಯಿ, ನವ ಎಂದರೆ ಹೊಸ. ತಾಯ ಗರ್ಭದಿಂದ ನವ ಮೂಡಿ, ಬುವಿಗೆ ಬಿದ್ದು,…
ವಿಧ: ಪುಸ್ತಕ ವಿಮರ್ಶೆ
June 01, 2021
'ಪಂಚಮಗಳ ನಡುವೆ' ಎಂಬ ಈ ಸತ್ಯಕಾಮರ ಕೃತಿಯ ವಿಷಯ ಬಹು ಚರ್ಚಿತ. ಸತ್ಯಕಾಮರೇ ತಮ್ಮ ಮುನ್ನುಡಿಯಲ್ಲಿ ಬರೆದ ಮಾತುಗಳನ್ನು ಓದಿದರೆ ನಿಮಗೆ ನಿಜಕ್ಕೂ ಕೃತಿಯ ಬಗ್ಗೆ ಕುತೂಹಲ ಮೂಡತೊಡಗುತ್ತದೆ. ‘ಅನುಭವಗಳು ತರಂಗಗಳಂತೆ ಚಲನೆ ನೇರ ನಿಟ್ಟಿನಲ್ಲಲ್ಲ' ಎಂದು ತಮ್ಮ ಮುನ್ನುಡಿಯನ್ನು ಪ್ರಾರಂಭಿಸುವ ಇವರು ಮುಂದುವರೆದು ಬರೆಯುತ್ತಾರೆ..."ನೀವು ಪುಟಗಳನ್ನು ತೆರೆದು ಓದುತ್ತಿರುವುದು ಒಂದು ಬದುಕನ್ನು. ಆ ಬದುಕಿನ ಹಿಂದೆ ಒಂದು ಪ್ರಾಮಾಣಿಕವಾದ ಅನುಭವ ಮಾತ್ರ ಇಲ್ಲ ; ಸಶಕ್ತವಾದ ವೈಜ್ಞಾನಿಕ ನೆಲಗಟ್ಟೂ ಇದೆ…
ವಿಧ: ಪುಸ್ತಕ ವಿಮರ್ಶೆ
May 29, 2021
ಸ್ಮಶಾನ ಭೈರಾಗಿ ಪುಸ್ತಕವನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನಂಟಿಸಿದ ಮತ್ತು ಅವರಲ್ಲಿ ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಖ್ಯಾತಿ ಇವರದ್ದು. ಅಕ್ಷರ ಸೌಲಭ್ಯವಂಚಿತ ಕುಟುಂಬದಿಂದ ಬಂದ ಇವರ ಬರಹಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಟಿತ ಗೌರವ ಪ್ರಶಸ್ತಿ ದೊರೆತಿದೆ. ಇಷ್ಟೊಂದು ಪುಸ್ತಕಗಳನ್ನು ಬರೆದರೂ ಬಡತನದಿಂದಲೇ ಬದುಕಿ…
ವಿಧ: ಬ್ಲಾಗ್ ಬರಹ
May 29, 2021
ನಮ್ಮ ರಾಷ್ಟ್ರದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಂಬಯಿನಗರ ಒಂದು ಪ್ರಮುಖಪಾತ್ರ ವಹಿಸಿತ್ತು. ಗಾಂಧೀಜಿಯವರು ಈ ನಗರದ ಒಬ್ಬ ಹೆಮ್ಮೆಯ ನಾಗರೀಕರಾಗಿದ್ದರು. ಬೊಂಬಾಯಿಗೆ ಬಂದಾಗಲೆಲ್ಲ ಅವರು 'ಮಣಿಭವನ'ದಲ್ಲೇ ತಂಗುತ್ತಿದ್ದರು. ಸ್ವಾತಂತ್ರ್ಯ ಬಂದಮೇಲೆ ೧೯೫೯ ರ ಮಾರ್ಚ್ ೩ ರಂದು ಮಣಿಭವನವನ್ನು ಮರುಸಂದರ್ಶಿಸಿದ ಪಂಡಿತ್, ಜವಹರ್ಲಾಲ್ ನೆಹರುರವರು ಗಮನಿಸಿದ್ದು : "ಮುಂಬಯಿನ ಜನರಿಗೆ ಮಣಿಭವನ ಸ್ವಾತಂತ್ರ್ಯ ಹೋರಾಟಗಾರರ ಒಂದು ನೆನಪಿನ ಪ್ರತೀಕವಾಗಿದೆ. ಮಹಾತ್ಮ ಗಾಂಧಿಯವರು ವಾಸವಾಗಿದ್ದ ಸ್ಥಳವದು…
ವಿಧ: ಬ್ಲಾಗ್ ಬರಹ
May 28, 2021
ಈ ಮಾತುಗಳ ಹಿನ್ನೆಲೆಯಲ್ಲಿ ಒಂದು ಘಟನೆ, ನಮ್ಮ ವಠಾರದಲ್ಲಿ ನಡೀತು ನೋಡಿ. ಬಾಲ್ಯದ ಅದೊಂದು ಘಟನೆಯ ಅನುಭವ ನನ್ನ ನೆನಪಿನಲ್ಲಿ ಅತ್ಯಂತ ಗಟ್ಟಿಯಾಗಿ ಉಳಿದಿರುವ ಸಂಗತಿಗಳಲ್ಲೊಂದು. ಅದ್ಯಾಕೊ ನನಗೆ ಆಕೆಯ ಛಲ ಅಷ್ಟು ಮುಖ್ಯವೇ, ಅಥವಾ ನಾವು ಜೀವನದಲ್ಲಿ ಛಲವಂತರಾಗಿರಬೇಕು, ಎನ್ನುವ ವಿಷಯ ಬಂದಾಗ ಇದನ್ನು ಉದಾಹರಿಸಬಹುದೆ ? ಎನ್ನುವ ವಿಷಯಗಳಲ್ಲಿ ಗೊಂದಲವೇ ಆಗಿತ್ತು. ಒಟ್ಟಿನಲ್ಲಿ ಈ ಒಂದು ಚಿಕ್ಕ ಘಟನೆ ನನ್ನ ಮನಸ್ಸಿನಾಳದಲ್ಲಿ ಉಳಿಯಿತು.
ನಮ್ಮ ಮಾತುಗಳು, ಹಾಗೂ ನಾವು ಮಾಡುವ ಕಾರ್ಯಗಳೂ…
ವಿಧ: ಪುಸ್ತಕ ವಿಮರ್ಶೆ
May 27, 2021
ಮಲೆನಾಡಿನ ರೋಚಕ ಕತೆಗಳು ಸರಣಿಯ ೯ನೇ ಭಾಗವೇ ‘ಹೇಮಾವತಿ ತೀರದ ಕೌತುಕ ಕತೆಗಳು' ಎಂಬ ಕಥಾ ಸಂಕಲನ. ಹೇಮಾವತಿ ನದಿಗೆ ಹೊಂದಿಕೊಂಡು ಬರೆದ ಕತೆಗಳು ಇವು. ಹಿಂದಿನ ಕತೆಗಳಂತೆಯೇ ನೈಜ ಪರಿಸರದ ಚಿತ್ರಣ ಇಲ್ಲಿದೆ. ಕಾಡು- ಮೇಡು, ಬೆಟ್ಟ -ಗುಡ್ಡ, ನದಿ -ತೊರೆ, ಕಾಡು ಪ್ರಾಣಿಗಳು, ಹಾವು- ಚೇಳು, ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು, ದನ, ಎಮ್ಮೆ, ಕಾಫಿ-ಕಾಳುಮೆಣಸು ಎಲ್ಲವೂ ಈ ಪುಸ್ತಕದ ಕತೆಗಳಲ್ಲಿ ಇವೆ. ಗಿರಿಮನೆ ಶ್ಯಾಮರಾವ್ ಅವರು ಬರೆದ ಬೆನ್ನುಡಿಯನ್ನು ಗಮನಿಸಿದರೆ ನಿಮಗೆ ಪುಸ್ತಕ ಓದ ಬೇಕೆಂಬ…
ವಿಧ: ಪುಸ್ತಕ ವಿಮರ್ಶೆ
May 25, 2021
ಸೂತ್ರಧಾರ ಮತ್ತು ಇತರ ಕಥೆಗಳು ಶೈಲಜಾ ಸುರೇಶ್ ರಾವ್ ನಾಯಕ್ ಅವರ ಪ್ರಥಮ ಕಥಾ ಸಂಕಲನ. ಈ ಕಥಾ ಸಂಕಲನದಲ್ಲಿ ಒಟ್ಟು ಹದಿಮೂರು ಕಥೆಗಳಿವೆ. ಆ ಹದಿಮೂರು ಕಥೆಗಳಲ್ಲಿ ಎರಡು ಕಥೆಗಳನ್ನು ಶೈಲಜಾ ಅವರ ಮಗಳಾದ ಅಶ್ವಿನಿಯವರು ಬರೆದಿದ್ದಾರೆ. ಅಮ್ಮ-ಮಗಳು ಸೇರಿ ಜೊತೆಯಾಗಿ ಕಥಾ ಸಂಕಲನ ರಚನೆ ಮಾಡಿದ್ದಾರೆ. ಶೈಲಜಾ ಅವರು ಬರೆದ ಕಥೆಗಳು ಚಿಕ್ಕದಾಗಿದ್ದು, ನಮ್ಮ-ನಿಮ್ಮೆಲ್ಲರ ಮನೆಯ ಕಥೆಗಳಂತೆಯೇ ಇವೆ. ಈ ಕಥೆಗಳು ನಮ್ಮ ನೆರೆಹೊರೆಯಲ್ಲೇ ನಡೆದಷ್ಟು ಆಪ್ತವಾಗಿವೆ. ಪ್ರತಿಯೊಂದು ಕಥೆ ಭಾವನಾತ್ಮಕವಾಗಿದೆ.…