ಎಲ್ಲ ಪುಟಗಳು

ವಿಧ: ರುಚಿ
June 21, 2021
ತುಂಡು ಮಾಡಿದ ಹಲಸಿನಕಾಯಿ ಸೊಳೆಯನ್ನು ಉಪ್ಪು, ಸ್ವಲ್ಪ ಬೆಲ್ಲ, ಹಸಿಮೆಣಸಿನಕಾಯಿ, ನೀರುಳ್ಳಿ ಹಾಕಿ ಬೇಯಿಸಿಕೊಳ್ಳಬೇಕು. ತೆಂಗಿನಕಾಯಿತುರಿ, ಚಿಟಿಕೆ ಹುಣಿಸೆ ಹಣ್ಣು ಸೇರಿಸಬೇಕು. ಒಣಮೆಣಸು, ಮೆಂತೆ, ಉದ್ದಿನಬೇಳೆ, ಜೀರಿಗೆ, ತೊಗರಿಬೇಳೆ, ಕರಿಬೇವು ಎಲೆ, ಸಣ್ಣ ತುಂಡು ಚೆಕ್ಕೆ, ಲವಂಗ, ಚಿಟಿಕೆ ಶುಂಠಿ ಪೌಡರ್, ಇಂಗಿನ ಹುಡಿ ಹಾಕಿ ಫ್ರ್ಯೆ ಮಾಡಿ, ನಯವಾಗಿ ರುಬ್ಬಬೇಕು. ಕಡಲೆ ಕಾಳು ಬೇಯಿಸಿ ‌ಸೇರಿಸಿ, ರುಬ್ಬಿದ ಮಿಶ್ರಣ ಸೇರಿಸಿ ಮಿಶ್ರ ಮಾಡಿ, ಸಣ್ಣ ಉರಿಯಲ್ಲಿ ಕುದಿಸಿ ಕೆಳಗಿಳಿಸಿ,…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
June 17, 2021
“ಅಚ್ಚ ಕನ್ನಡ ಪ್ರದೇಶವಾದ ಕಾಸರಗೋಡಿನ ಚಿನ್ನಾ... ಎಲ್ಲರಿಗೂ ಚಿನ್ನದ ಮನಸ್ಸಿನ ವ್ಯಕ್ತಿಯಾಗಿ ಬೆಳೆದವರು. ವೃತ್ತಿಯಲ್ಲಿ ವ್ಯಾಪಾರಿಯಾಗಿದ್ದರೂ, ಪ್ರವೃತ್ತಿಯಲ್ಲಿ ನಟನಾಗಿ, ನಿರ್ದೇಶಕನಾಗಿ, ಬೆಳಕು ವಿನ್ಯಾಸ, ರಂಗವಿನ್ಯಾಸ, ವಸ್ತ್ರ ವಿನ್ಯಾಸಗಳಲ್ಲಿ ಪಳಗಿದವರು. ಪ್ರಗತಿಶೀಲ ರಂಗಭೂಮಿಯ ಕೃಷಿಕನಾಗಿ, ಸಂಗೀತದ ಒಳಮಜಲುಗಳನ್ನು ಅರಿತವರಾಗಿ, ಒಳ್ಳೆಯ ಸಂಘಟಕರಾಗಿ ಸಾಧನೆಗೈದವರು. ಲಾರಿ ನಾಟಕ, ಸಂಗೀತ ರಥ, ಯಕ್ಷತೇರು... ಹೀಗೆ ಸಾಗುತ್ತದೆ ಆವರ ಅಭಿಯಾನಗಳ ಸರಮಾಲೆಗಳು. ಚಲನಚಿತ್ರ, ಧಾರವಾಹಿ,…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
June 15, 2021
ಈ ಹೊತ್ತಗೆಯು ಕೇರಳದ ಸುಪ್ರಸಿದ್ಧ ವಿಷವೈದ್ಯರಾದ ರಾಜಾ ಕೇರಳವರ್ಮರು ರಚಿಸಿರುವ ‘ವಿಷಚಿಕಿತ್ಸೆ' ಗ್ರಂಥದ ಕನ್ನಡದ ಭಾಷಾಂತರವಾಗಿದೆ. ಇದನ್ನು ಕನ್ನಡಕ್ಕೆ ಅನುವಾದಿಸಿರುವವರು ‘ಆಯುರ್ವೇದ ವಿಶಾರದ' ‘ಬಿಷಕ್' ಎಂದು ಬಿರುದಾಂಕಿತರಾದ ಡಾ॥ ವಿಶ್ವನಾಥರಾವ್ ಅವರು. ಈ ವಿಭಾಗದಲ್ಲಿ ಮಾನವನ ಆರೋಗ್ಯಕ್ಕೆ ಹಾಗೂ ಒಮ್ಮೊಮ್ಮೆ ಪ್ರಾಣಕ್ಕೂ ಅಪಾಯವನ್ನೊಡ್ಡುವ ಅನೇಕ ವಿಷವಿರುವ ಪ್ರಾಣಿಗಳು, ಸಸ್ಯಗಳು ಹಾಗೂ ಖನಿಜಗಳ ವಿಚಾರವಾಗಿ ಸವಿಸ್ತಾರವಾದ ವರ್ಣನೆ ಮಾತ್ರವಲ್ಲದೆ, ಆಯಾ ವಿಷಗಳು ಉತ್ಪತ್ತಿ ಮಾಡುವ…
ವಿಧ: ರುಚಿ
June 15, 2021
ಸ್ವಚ್ಛ ಗೊಳಿಸಿ, ಬೀಜಗಳನ್ನು ತೆಗೆದ ಖರ್ಜೂರಗಳನ್ನು, ಮಿಕ್ಸಿಯಲ್ಲಿ ನಯವಾಗಿ ರುಬ್ಬಿ, ಬಾಣಲೆಗೆ ಹಾಕಿ, ತುಪ್ಪ ಸೇರಿಸಿ ಚೆನ್ನಾಗಿ ಹುರಿಯಬೇಕು. ತೆಂಗಿನಕಾಯಿ ರುಬ್ಬಿ ಹಾಲು ಹಿಂಡಿ ಇಟ್ಟುಕೊಂಡಿರಬೇಕು. ಸಾಧಾರಣ ಫ್ರ್ಯೆ ಆಗುವಾಗ (ಹಸಿ ಪರಿಮಳ ಹೋಗುವಲ್ಲಿವರೆಗೆ) ಎರಡನೇ ಸಲ ಹಿಂಡಿ ತೆಗೆದ ತೆಂಗಿನಕಾಯಿ ಹಾಲನ್ನು ಸೇರಿಸಿ, ಹುಡಿ ಮಾಡಿದ ಬೆಲ್ಲ ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು.(ಖರ್ಜೂರ ಪಾಯಸಕ್ಕೆ ಬೆಲ್ಲ ಸ್ವಲ್ಪ ಜಾಸ್ತಿ ಹಾಕಬೇಕು) ಬೆಲ್ಲ ಕರಗಿದ ಮೇಲೆ, ಹುಡಿ ಮಾಡಿದ ಏಲಕ್ಕಿ ಹಾಕಿ, ಮೊದಲು…
ವಿಧ: ಪುಸ್ತಕ ವಿಮರ್ಶೆ
June 14, 2021
ನಿನ್ನೆಯ ಬೆನ್ನಿಗೆ ಇಂದು ಬಂದು ಅದು ನಾಳೆಗಳಾದಾಗ ಅಲ್ಲಿ ಕೆಲವೊಂದು ಇತಿಹಾಸಗಳು ಸೃಷ್ಟಿಯಾಗುತ್ತವೆ. ಆ ಇತಿಹಾಸ ನಂಬಲಾರ್ಹ ಎನ್ನಬೇಕಾದರೆ ಅದಕ್ಕೆ ಬಲವಾದ ಸಾಕ್ಷಿಗಳು ಇರಬೇಕು. ಅದು ವ್ಯಕ್ತಿ, ವಸ್ತು ಇಲ್ಲ ಕಥನಗಳಾಗಿರಬಹುದು. ತುಳುನಾಡಿನಲ್ಲಿ ಶೋಷಿತರ, ಧಮನಿತರ ಧ್ವನಿಯಾಗಿ ಕಾಣುವಂತದ್ದು ಪಾಡ್ದನಗಳು. ಅವುಗಳಲ್ಲಿ ಉಲ್ಲೇಖ ಮಾಡಲ್ಪಟ್ಟ ಸ್ಥಳ ನಾಮ, ವ್ಯಕ್ತಿ,  ವಂಶ, ಸಾಮಾಜಿಕ ಕಟ್ಟುಪಾಡುಗಳು ಇತಿಹಾಸದ ಸತ್ಯಾಸತ್ಯತೆಯನ್ನು ಬಹಳವಾಗಿ  ಪುಷ್ಟೀಕರಿಸುತ್ತದೆ. ಈ ರೀತಿಯ ಎಲ್ಲಾ ಅರ್ಹತೆ…
ವಿಧ: ರುಚಿ
June 14, 2021
ನೆನೆಸಿದ ದೋಸೆ ಅಕ್ಕಿ, ನೆನೆಸಿದ ಮೆಂತೆ, ತೊಳೆದ ಅವಲಕ್ಕಿ, ರಾಗಿಹುಡಿ (ಹಾಕದಿದ್ದರೂ ಆಗುತ್ತದೆ), ಉಪ್ಪು, ಸ್ವಲ್ಪ ತೆಂಗಿನಕಾಯಿ ತುರಿ, ಜಜ್ಜಿದ ಹಸಿ ಶುಂಠಿ, ಬೆಲ್ಲ ಎಲ್ಲವನ್ನೂ ನುಣ್ಣಗೆ ರುಬ್ಬಿ, ಅರ್ಧ ಗಂಟೆ ಮುಚ್ಚಿಡಬೇಕು. ಮಾಮೂಲಿನಂತೆ ಕಾವಲಿಯಲ್ಲಿ ದೋಸೆ ಎರೆದು ತುಪ್ಪ ಅಥವಾ ತೆಂಗಿನ ಎಣ್ಣೆ, ಬೆಣ್ಣೆ ಹಾಕಿ ಕವುಚಿ ಹಾಕಿ ಮಗುಚಿ. ಬಿಸಿ ಬಿಸಿ ಮೆಂತೆ ದೋಸೆ ಬಹಳ ರುಚಿ. ಆರೋಗ್ಯಕರ ದೋಸೆ ಇದು.  
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
June 12, 2021
“ಆರು ತಿಂಗಳ ಕಾಲ ಸತತವಾಗಿ ಮನಸ್ಸನ್ನು ಕೇಂದ್ರೀಕರಿಸಿ, ಅಡಿಗರ ಕವನಗಳನ್ನು ಮನನ ಮಾಡಿಕೊಂಡು, ಅವುಗಳ ಅರ್ಥವಂತಿಕೆಯನ್ನು ಕಂಡುಕೊಳ್ಳುತ್ತ, ಆಲೋಚಿಸಿದ್ದನ್ನು ಸ್ಪಷ್ಟವಾಗುವಂತೆ ಬರೆಯಲಿಕ್ಕೆ ಹಲವು ಬಾರಿ ಪ್ರಯತ್ನಿಸಿ, ಮತ್ತೆ ಮತ್ತೆ ತಿದ್ದುತ್ತ ಈ ಮಹಾಪ್ರಬಂಧವನ್ನು ಸಿದ್ಧ ಪಡಿಸುವುದಕ್ಕೆ ಅಣ್ಣಮ್ಮನವರು ಪಟ್ಟ ಪರಿಶ್ರಮ ಅಷ್ಟಿಷ್ಟಲ್ಲ. ಇಂಥ ಪರಿಶ್ರಮವನ್ನು ಕಾಲೇಜಿನ ಉಪನ್ಯಾಸಕರು ಜೀವನದಲ್ಲಿ ಒಮ್ಮೆ ತೆಗೆದುಕೊಂಡರೆ, ಅವರು ತೋರಿಸಿದ ಧಾರಣ ಶಕ್ತಿ, ಧೀಮಂತಿಕೆ ಅವರದ್ದಲ್ಲ ಅನ್ನಿಸುವುದು…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
June 10, 2021
ಪತ್ರಕರ್ತ ಲೇಖಕ ಕೆ.ಗಣೇಶ್ ಕೋಡೂರು ಅವರ ಪುಟ್ಟ ಪುಸ್ತಕವೇ ‘ ಒನ್ ಮಿನಿಟ್ ಸಕ್ಸಸ್'. ಲೇಖಕರ ಪ್ರಕಾರ ಬದುಕಿನ ಅತಿ ದೊಡ್ಡ ಗೆಲುವನ್ನು ಆ ಕೊನೆಯ ಒಂದು ನಿಮಿಷವೇ ನಿರ್ಧರಿಸುತ್ತದೆ. ಒಂದು ನಿಮಿಷವೆಂದರೆ ಅದು ಕೇವಲ ಅರವತ್ತು ಸೆಕೆಂಡುಗಳಲ್ಲ. ಬರೀ ಅರವತ್ತು ಸೆಕೆಂಡುಗಳಲ್ಲಿ ಏನು ಮಾಡಲಿಕ್ಕೆ ಸಾಧ್ಯ ಎಂದುಕೊಂಡು ಸುಮ್ಮನುಳಿದು ಬಿಟ್ಟಿರೋ, ಅದೇ ಸಮಯ ನಿಮ್ಮ ಬಳಿ ಮುಂದೆ ಅರವತ್ತು ವರ್ಷಗಳ ಪೆನಾಲ್ಟಿ ಕೇಳುತ್ತದೆ. ಅದೇ ನೀವು ಈ ಒಂದು ನಿಮಿಷವನ್ನೂ ಸುಮ್ಮನೆ ಬಿಡದೇ ಇಟ್ಟುಕೊಂಡ ಟಾರ್ಗೆಟ್ಟನ್ನು…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
June 08, 2021
ಯೋಗರಾಜ್ ಭಟ್ ನಿರ್ದೇಶನದ, ಗಣೇಶ್ ಹಾಗೂ ಪೂಜಾ ಗಾಂಧಿ ಅಭಿನಯದ ‘ಮುಂಗಾರು ಮಳೆ' ಸಿನೆಮಾ ಬಿಡುಗಡೆಯಾಗಿ, ಸೂಪರ್ ಹಿಟ್ ಆದದ್ದು ಈಗ ಇತಿಹಾಸ. ಆ ಸಮಯದಲ್ಲಿ ಮಳೆಯಲ್ಲಿ ನೆನೆಯುತ್ತಾ, ಸುಂದರ ಪರಿಸರದಲ್ಲಿ ವಿಹರಿಸುತ್ತಾ, ಕರ್ಣ ಮನೋಹರವಾದ ಹಾಡುಗಳನ್ನು ಕೇಳುತ್ತಾ ಆನಂದಿಸಿದ್ದು ಈಗ ನೆನಪಾಗುತ್ತದೆ. ‘ಪ್ರೀತಿ ಮಧುರ ತ್ಯಾಗ ಅಮರ' ಎಂದು ಹೇಳುವ ಕೊನೇ ದೃಶ್ಯ ಬಹುತೇಕರ ಕಣ್ಣಂಚನ್ನು ಒದ್ದೆ ಮಾಡಿದ್ದು ಸುಳ್ಳಲ್ಲ. ಮುಂಗಾರು ಮಳೆ ಸಿನೆಮಾದ ಹಿಂದಿನ ಕಥೆಯನ್ನು ನಿರ್ದೇಶಕ ಯೋಗರಾಜ್ ಭಟ್ ಅವರು…
ವಿಧ: ಪುಸ್ತಕ ವಿಮರ್ಶೆ
June 07, 2021
ನಾಡಿನ ಖ್ಯಾತ ಸಾಹಿತಿವರೇಣ್ಯರಾದವರಿಂದ ರಚಿಸಲ್ಪಟ್ಟ ೬೪ ಶ್ರೇಷ್ಠ ಕವನಗಳು, ಕವಿಕಾವ್ಯ ಪರಿಚಯ ಇವುಗಳನ್ನು ಒಳಗೊಂಡ ಹೊತ್ತಗೆಯೇ ‘ನನ್ನದು ಈ ಕನ್ನಡ ನಾಡು'. ಕನ್ನಡ ನಾಡು ನುಡಿಯ ಬಗ್ಗೆ ಯುವಜನರಲ್ಲಿ ಆಸಕ್ತಿ ಮೂಡಿಸಬೇಕೆಂಬ ಉದ್ದೇಶದಿಂದ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹೊರತಂದ ಕವನಗಳ ಗುಚ್ಛವಿದು. ಮುನ್ನುಡಿ,ಹಿನ್ನುಡಿ ಎಂದು ಪ್ರತ್ಯೇಕವಾಗಿ ಇಲ್ಲ. ಪ್ರಧಾನ ಸಂಪಾದಕರಾದ ಬಿ.ಎಂ.ಇದಿನಬ್ಬ ಇವರೇ ಪುಸ್ತಕವನ್ನು ಹೊರತಂದ ಆಶಯವನ್ನು ಬರೆದಿರುತ್ತಾರೆ. ನಮ್ಮ ಕನ್ನಡ ನಾಡು ನುಡಿಗೆ ಈಗ ಒದಗಿರುವ…