ವಿಧ: ಪುಸ್ತಕ ವಿಮರ್ಶೆ
March 20, 2021
ಇದೊಂದು ಪುಟ್ಟ ಪುಸ್ತಕದಲ್ಲಿ ಒಂದು ಕಾಲಕ್ಕೆ ಇಡೀ ರಾಷ್ಟ್ರದ ಕುತೂಹಲ ಕೆರಳಿಸಿದ ಆರುಷಿ ಹತ್ಯಾ ಪ್ರಕರಣದ ವಿವರಗಳಿವೆ. ರವಿ ಬೆಳಗೆರೆಯವರು ಕ್ರೈಂ ಸಾಹಿತ್ಯವನ್ನು ಬಹಳ ಸೊಗಸಾಗಿ ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಬರೆಯುತ್ತಾರೆ. ಆದರೆ ಈ ಆರುಷಿ ಹತ್ಯೆಯ ಪುಸ್ತಕವನ್ನು ಸ್ವಲ್ಪ ಗಡಿಬಿಡಿಯಲ್ಲಿ ಬರೆದು ಮುದ್ರಿಸಿದಂತೆ ತೋರುತ್ತದೆ. ಕೆಲವೆಡೆ ಕಥೆ ಓದುತ್ತಾ ಓದುತ್ತಾ ಬೇರೆ ಕಡೆಗೆ ತಿರುಗುತ್ತದೆ. ಆದರೂ ಈ ಪುಸ್ತಕ ಬರೆಯಲು ಅವರು ತೆಗೆದುಕೊಂಡ ಶ್ರಮ ಅಭಿನಂದನೀಯ. ಏಕೆಂದರೆ ಎಲ್ಲೂ ದೊರೆಯದ…
ವಿಧ: ಬ್ಲಾಗ್ ಬರಹ
March 19, 2021
ಈ ದಿನ ರಾಯನು ಚಿಟ್ಟಿ ಚಿಟ್ಟಿ ಬ್ಯಾಂಗ್ ಬ್ಯಾಂಗ್. ಅನ್ನುವ ಒಂದು ಸಿನಿಮಾ ಬಗ್ಗೆ ಹೇಳಿದ . ಚಂದಮಾಮಾ ಕತೆಗಳಂತೆ. ಅದ್ಭುತ ರಮ್ಯ ಕತೆಗಳ ಸಾಲಿಗೆ ಸೇರುವ ಇದು ಮನೋರಂಜಕವಾಗಿಯೂ ಕಣ್ಣಿಗೆ ಆನಂದವನ್ನುಂದು ಮಾಡುವುದಾಗಿಯೂ ಇತ್ತಂತೆ. ಇಂಗ್ಲಂಡಿನ ಗುಡ್ಡ ಬೆಟ್ಟ ಸಮುದ್ರ ಹುಲ್ಲುಗಾವಲುಗಳ ಸುಂದರ ದೃಶ್ಯಾವಳಿಗಳು ಇವೆಯಂತೆ.
ಜತೆಗೆ ಒಂದು ಶರ್ಲಾಕ್ ಹೋಮ್ಸ ಚಿತ್ರದ ಒಂದು ಅರ್ಧ ಭಾಗವನ್ನು ನೋಡಿದ. ಶರ್ಲಾಕ್ ಹೋಮ್ಸನ ಜೀವನದಲ್ಲಿ ಭಾವನೆಗಳಿಗೆ ಎಡೆಯೇ ಇಲ್ಲ. ಕೇವಲ ಬುದ್ದಿಶಕ್ತಿ ಹಾಗೂ ತರ್ಕಗಳು ಅಲ್ಲಿ…
ವಿಧ: ಪುಸ್ತಕ ವಿಮರ್ಶೆ
March 18, 2021
ನಾತಲೀಲೆ ಇದು ಕಥೆಗಾರ ಎಸ್.ಸುರೇಂದ್ರನಾಥ್ ಅವರ ಮೊದಲ ಕಥಾ ಸಂಕಲನ. ಈ ಸಂಕಲನದಲ್ಲಿ ಎಂಟು ಕಥೆಗಳಿವೆ. ನಟ, ನಿರ್ದೇಶಕ ಟಿ.ಎನ್.ಸೀತಾರಾಮ್ ಹಾಗೂ ಕಥೆಗಾರ ವಿವೇಕ್ ಶಾನಭಾಗ ಇವರ ಮಾತುಗಳು ಬೆನ್ನುಡಿಯಲ್ಲಿ ಅಚ್ಚಾಗಿವೆ. ‘ನಮ್ಮ ಬದುಕಿನ ಬೆಳಕಿನ ಭಾಗಗಳಲ್ಲಿ ನಮ್ಮನ್ನು ವಿಚಿತ್ರ ರೀತಿಯಲ್ಲಿ ಬೆರಗುಗೊಳಿಸುವ ಮಾರ್ಕ್ವೈಜ್ ಮತ್ತು ನಮ್ಮ ಎದೆಯ ಕತ್ತಲ ಭಾಗಗಳನ್ನು ಪೋಲೀಸ್ ನಂತೆ ತಟ್ಟುವ ಕಾಫ್ಕಾ ನನ್ನ ಇಷ್ಟದ ಕಥೆಗಾರರು. ಅವರಿಬ್ಬರೂ ಒಟ್ಟಿಗೆ ಸೇರುವುದು ಕಷ್ಟ. ಅವರಿಬ್ಬರೂ ಒಂದೇ ಪಾತಳಿಯಲ್ಲಿ…
ವಿಧ: ಪುಸ್ತಕ ವಿಮರ್ಶೆ
March 16, 2021
ಓಶೋ ಅವರ ಚಿಂತನೆಗಳು ಬಹಳ ಪ್ರಭಾವಶಾಲಿ. ಇವರ ಪ್ರವಚನಗಳ ಕುರಿತಾದ ಪುಸ್ತಕಗಳು ಹಾಟ್ ಸೇಲ್ ಆಗುತ್ತವೆ. ಓಶೋ ಅವರೇ ಹೇಳುವಂತೆ “ಪ್ರತಿಯೊಬ್ಬರೂ ಪ್ರೇಮದ ಬಾಗಿಲ ಬಳಿಯೇ ಹೋಗುತ್ತಿರುವರು. ವೇಶ್ಯೆಯ ಬಳಿ ಹೋಗುತ್ತಿರಲಿ, ದೇವಸ್ಥಾನಕ್ಕೆ ಹೋಗುತ್ತಿರಲಿ, ಹೋಗುತ್ತಿರುವುದು ಮಾತ್ರ ಪ್ರೇಮದ ದ್ವಾರದ ಬಳಿಗೇ. ಆಯ್ಕೆ ತಪ್ಪಾಗಿರಬಹುದಾದರೂ, ಆಕಾಂಕ್ಷೆ ಪ್ರೇಮದ್ದೇ. ಪ್ರೇಮದ ಅಮೃತವರ್ಷ ಸುರಿಯಲೆಂದು ನೀವು ಬಯಸುವಿರಾದರೆ ನಿಮ್ಮ ಪಾತ್ರೆ ಅಮೃತವನ್ನು ಸಂಬಾಳಿಸಲು ಯೋಗ್ಯವಾಗಿರುವುದಿಲ್ಲ. ಆದ್ದರಿಂದಲೇ…
ವಿಧ: ಬ್ಲಾಗ್ ಬರಹ
March 16, 2021
ರಾಯನು ಅದು ಹೇಗೋ kannadapustaka.org ಎಂಬ ತಾಣದವರ ಸಂಪರ್ಕಕ್ಕೆ ಬಂದಿದ್ದನು. ಅವರು ಕಣ್ಣಿನ ತೊಂದರೆ ಇರುವ ಶಾಲಾಮಕ್ಕಳಿಗೆಂದು ಒಂದು ಆ್ಯಪ್ ಮಾಡಿ ಪಠ್ಯ ಪುಸ್ತಕಗಳನ್ನು ಅದರ ಮೂಲಕ ಧ್ವನಿ ಕಡತಗಳನ್ನು ಮಾಡಿ ಹಂಚಲಿದ್ದಾರಂತೆ . ಅವರು ಆಗೀಗ ಶಾಲಾ ಪುಸ್ತಕದ ಫೋಟೋ ಪ್ರತಿಯನ್ನು, ಜತೆಗೆ ಅದರ ಪಠ್ಯಪ್ರತಿಯನ್ನು ರಾಯನಂಥ ಕೆಲವು ಸ್ವಯಂ ಸೇವಕರಿಗೆ ಈ ಮೇಲ್ ಮೂಲಕ ಕಳಿಸುತ್ತಾರಂತೆ. ಅಂಥದೊಂದು ೪ ಪುಟಗಳ ಪಾಠವನ್ನು ಇವನು ಒಂದು ಗಂಟೆಯ ಸಮಯ ಖರ್ಚು ಮಾಡಿ ಪ್ರೂಫ್ ರೀಡಿಂಗ್ ಮಾಡಿ ಕಳಿಸಿದನಂತೆ. ಇದು…
ವಿಧ: ಪುಸ್ತಕ ವಿಮರ್ಶೆ
March 13, 2021
ರಂಗಮ್ಮ ಹೊದೇಕಲ್ ವೃತ್ತಿಯಲ್ಲಿ ಶಿಕ್ಷಕಿ. ಮನೆಯಲ್ಲಿನ ಬಡತನ, ಅಸಹಾಯಕತೆ, ಒಂಟಿತನ, ಬದುಕಿನ ಪ್ರತಿ ಹೆಜ್ಜೆಯೂ ಒಂದು ನೋವಿನ ‘ಕ್ರಿಯೆ’ಯಾಗಿ ಈ ಹುಡುಗಿಯನ್ನು ಕಾಡಿ ಕಾಡಿ, ಈ ಹೊತ್ತು ‘ಕವಿ'ಯನ್ನಾಗಿಸಿರುವುದು ಸುಳ್ಳಲ್ಲ. ರಂಗಮ್ಮ ಹೊದೇಕಲ್ ಆರ್ದ್ಯ ಹೃದಯದ ‘ಹೂ’ ಹುಡುಗಿ! ಎಂದು ಬರೆಯುತ್ತಾರೆ ತುಮಕೂರು ಜಿಲ್ಲಾ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾದ ಶ್ರೀಮತಿ ಬಿ.ಸಿ.ಶೈಲಾ ನಾಗರಾಜ್. ಶೈಲಾ ನಾಗರಾಜ್ ಅವರು ರಂಗಮ್ಮ ಅವರ ಶಕ್ತಿ ಎಂದರೆ ತಪ್ಪಾಗಲಾರದು. ಶೈಲಾ ನಾಗರಾಜ್ ಅವರ ಹೆಸರಿನಲ್ಲೇ ‘…
ವಿಧ: ಬ್ಲಾಗ್ ಬರಹ
March 12, 2021
ಇವತ್ತು ರಾಯನಿಗೆ ಕೊರೋನಾ ಲಸಿಕೆ ನೀಡುವಿಕೆ ಬಗ್ಗೆ ತಿಳಿಯಬೇಕು ಎನಿಸಿತಂತೆ. 60 ವರ್ಷಕ್ಕೂ ಮೀರಿದವರಿಗೆ ಮತ್ತು 45 ರಿಂದ 60 ವರ್ಷರು ಮತ್ತು ವಿವಿಧ ರೋಗ ಸಮಸ್ಯೆಗಳಿರುವವರಿಗೆ ಲಸಿಕೆ ನೀಡಿಕೆ ಶುರುವಾಗಿದೆಯಂತೆ, ಅದು ಹೇಗೆ , ಎಲ್ಲಿ, ಎಂತು ಎಂದೆಲ್ಲ ತಿಳಿಯಬೇಕೆನಿಸಿತು. ಅದೂ ತಾನಿರುವ ಊರಿನಲ್ಲಿ . ಅದನ್ನು ಹೇಗೆ ತಿಳಿಯಬೇಕು? ಅವನಿಗೆ ಹೊಳೆದದ್ದು ಪತ್ರಿಕೆಗಳ ಸ್ಥಳೀಯ ಆವೃತ್ತಿಗಳು, ಅವನ್ನು ಕುಳಿತಲ್ಲಿಯೇ ಹೇಗೆ ಪಡೆಯಬೇಕು? ಆಗ ಉಪಯೋಗಿಸಿದ್ದು - kannada daily newspapers ಎಂಬ…
ವಿಧ: ಬ್ಲಾಗ್ ಬರಹ
March 12, 2021
ಮೊದಲಿಗೆ ಯೂಟ್ಯೂಬಿನಲ್ಲಿರುವ ಈ ಹಾಡನ್ನು ಕೇಳಿಬಿಡಿ - https://youtu.be/rxOUK7UbW2U .
ಇದನ್ನು ಜಿಮ್ ರೀವ್ಸ್ ಹಾಡಿದ್ದಾರೆ. ಇದು country Music ಎಂಬ ಪ್ರಕಾರಕ್ಕೆ ಸೇರಿದೆ.
ಅದರ ಪಠ್ಯ ಇಲ್ಲಿದೆ
Lonely and
Just walking in the rain (Just walking in the rain)
Getting soaking wet
Torturing my heart
By trying to forget. (trying to forget)
Just walking in the rain
So alone and blue
All because my heart
Still remembers you.…
ವಿಧ: ಪುಸ್ತಕ ವಿಮರ್ಶೆ
March 11, 2021
*ಡಾ. ವಿಠ್ಠಲ ಭಂಡಾರಿ ಹಾಗೂ ಯಮುನಾ ಗಾಂವ್ಕರ್ ಅವರ "ಜೋಯ್ಡಾ: ಕಾಡೊಳಗಿನ ಒಡಲು"*
"ಜೋಯ್ಡಾ: ಕಾಡೊಳಗಿನ ಒಡಲು" (ಮಾನವ ವಸತಿಯ ನಕಾಶೆಯಲ್ಲಿ ಜೋಯ್ಡಾ ಉಳಿಸೋಣ) ಕೃತಿಯನ್ನು ಡಾ. ವಿಠ್ಠಲ ಭಂಡಾರಿ ಹಾಗೂ ಯಮುನಾ ಗಾಂವ್ಕರ್ ದಂಪತಿಗಳು ಜಂಟಿಯಾಗಿ ರಚಿಸಿದ್ದಾರೆ. 184 + 4 ಪುಟಗಳ, 140 ರೂಪಾಯಿ ಬೆಲೆಯ ಕೃತಿಯನ್ನು 2017ರಲ್ಲಿ ಆರ್. ವಿ. ಭಂಡಾರಿ ನೆನಪಿನ 32ನೇ ಪುಸ್ತಕ ಮಾಲೆಯಾಗಿ ಬಂಡಾಯ ಪ್ರಕಾಶನ (ಅರೇಅಂಗಡಿ, ಹೊನ್ನಾವರ - 581 334, ಉತ್ತರ ಕನ್ನಡ ಜಿಲ್ಲೆ) ಪ್ರಕಟಿಸಿದೆ.
ಬಂಡಾಯ ಪ್ರಕಾಶನದ…
ವಿಧ: ಪುಸ್ತಕ ವಿಮರ್ಶೆ
March 09, 2021
‘ನಮ್ಮ ವೃತ್ತಪತ್ರಿಕೆಗಳ ಕಥೆ’ ಎಂಬ ಪುಟ್ಟ ಪುಸ್ತಕವು ಹಳೆಯ ಕಾಲದ ಪತ್ರಿಕೆಗಳ ಬಗ್ಗೆ ಕೊಂಚ ಮಾಹಿತಿ ನೀಡುತ್ತದೆ. ಇದು ಕನ್ನಡಕ್ಕೆ ಅನುವಾದ ಮಾಡಿದ ಪುಸ್ತಕವಾದುದರಿಂದ ಭಾಷೆ ಸ್ವಲ್ಪ ಕಗ್ಗಂಟಾಗಿಯೇ ಇದೆ. ೧೯೯೨ರಲ್ಲಿ ಮೊದಲ ಮುದ್ರಣ ಕಂಡ ಈ ಪುಸ್ತಕವು ೨೦೦೪ರಲ್ಲಿ ನಾಲ್ಕನೇ ಮುದ್ರಣವಾಗಿದೆ.
ಈ ಪುಸ್ತಕದಲ್ಲಿ ಪತ್ರಿಕೆಗಳ ಪ್ರಾರಂಭದ ದಿನಗಳನ್ನು ತಿಳಿಸಲಾಗಿದೆ. ಒಂದೆಡೆ ಬರೆಯುತ್ತಾರೆ ‘ ಇಂದಿನ ವೃತ್ತಪತ್ರಿಕೆಗಳ ಜನನ ಮೂಲವನ್ನು ನಾವು ಕಾಣಬೇಕಿದ್ದಲ್ಲಿ ಜೂಲಿಯಸ್ ಸೀಸರನ ರೋಮನ್ ಕಾಲಕ್ಕೆ…