ವಿಧ: ಪುಸ್ತಕ ವಿಮರ್ಶೆ
January 23, 2021
ನಾವೆಲ್ಲಾ ಸಣ್ಣವರಿರುವಾಗ ಓದುತ್ತಿದ್ದ ಪುಸ್ತಕವಿದು. ‘ಅರೇಬಿಯನ್ ನೈಟ್ಸ್' ಎಂಬ ಪುಸ್ತಕದ ಕಥೆಗಳನ್ನು ಅರೇಬಿಯದ ಇರುಳು ಎಂಬ ಹೆಸರಿನಲ್ಲಿ ಎಸ್. ರಮಾನಂದ ಇವರು ಅನುವಾದಿಸಿದ್ದಾರೆ. ಪ್ರಕಾಶಕರು ಪ್ರಸ್ತಾವನೆಯಲ್ಲಿ ಅರೇಬಿಯನ್ ನೈಟ್ಸ್ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೀಡಿದ್ದಾರೆ. ಈ ಪುಸ್ತಕದಲ್ಲಿ ಹಲವಾರು ಸಣ್ಣ ಹಾಗೂ ದೊಡ್ಡ ಕಥೆಗಳು ಇವೆ. ಬಹಳ ಹಿಂದೆ ಮಧ್ಯಪೂರ್ವ ದೇಶಗಳು ಎಂದು ಕರೆಯಲ್ಪಡುವ ಅರೇಬಿಯಾದಲ್ಲಿ ಅರಸರು (ಖಲೀಫರು) ಆಳುತ್ತಿದ್ದರು. ಶಹರಿಯಾರ್ ಎಂಬ ದೊರೆಯು ಆಳುತ್ತಿದ್ದ…
ವಿಧ: ರುಚಿ
January 22, 2021
ಚಕ್ಕೋತಾ ತಿರುಳಿಗೆ ಉಪ್ಪು ಮತ್ತು ಬೆಲ್ಲ ಬೆರೆಸಿ ಇಡಬೇಕು. ತೆಂಗಿನಕಾಯಿ ತುರಿಗೆ ಒಂದು ಚಮಚ ಸಾಸಿವೆ, ಒಣಮೆಣಸು ಕುಮ್ಟೆ (ಖಾರ ತುಂಬಾ ಬೇಕಾದರೆ ಎರಡು ಕಾಯಿಮೆಣಸು) ಸೇರಿಸಿ ರುಬ್ಬಿ, ತಿರುಳಿಗೆ ಹಾಕಿ ಚೆನ್ನಾಗಿ ಮಿಶ್ರ ಮಾಡಿ, ಒಗ್ಗರಣೆ ತುಪ್ಪದಲ್ಲಿ ಕೊಡಬೇಕು. ರುಚಿಯಾದ ಸಾಸಿವೆ ರೆಡಿ.(ಹುಳಿ ಮತ್ತು ಒಗರು ಇರುವ ಕಾರಣ ಮೊಸರು,ಮಜ್ಜಿಗೆ ಹಾಕುವುದು ಬೇಡ)
-ರತ್ನಾ ಭಟ್ ತಲಂಜೇರಿ
ವಿಧ: ಪುಸ್ತಕ ವಿಮರ್ಶೆ
January 21, 2021
ಬಿ. ಸಚ್ಚಿದಾನಂದ ಹೆಗ್ಡೆಯವರ "ತುಳು ಭಾಷೆ - ತುಳುನಾಡು"
ಉಡುಪಿ ಅಂಬಲಪಾಡಿಯ ಬಿ. ಸಚ್ಚಿದಾನಂದ ಹೆಗ್ಡೆಯವರ 32 ಲೇಖನಗಳ ಸಂಕಲನ "ತುಳು ಭಾಷೆ - ತುಳು ನಾಡು" (ಪುರಾಣ ಜಾನಪದಗಳಲ್ಲಿ ತುಳುನಾಡವರು). ಶ್ರೀನಿವಾಸ ಪುಸ್ತಕ ಪ್ರಕಾಶನ ಸಂಸ್ಥೆಯು ಪ್ರಕಟಿಸಿದ, 174 ಪುಟಗಳ ಕೃತಿಯಲ್ಲಿ ಬೆಲೆಯನ್ನು ನಮೂದಿಸಲಾಗಿಲ್ಲ.
ಕೃತಿಯಲ್ಲಿ ಎ. ರಾಜೀವಲೋಚನ ಅವರ "ಪ್ರಕಾಶಕರ ಮಾತು", ಮೈಸೂರಿನ ವಿಜಯನಾಥ ಭಟ್ಟ ("ಕೌಂಡಿನ್ಯ") ಅವರ "ಮುನ್ನುಡಿ" ಮತ್ತು ಕೃತಿಯ ಲೇಖಕ ಸಚ್ಚಿದಾನಂದ ಹೆಗ್ಡೆಯವರ "ಪ್ರಸ್ತಾವನೆ" ಇದೆ…
ವಿಧ: ಬ್ಲಾಗ್ ಬರಹ
January 21, 2021
ಮೊದಲು ಪುರಾಣದ ಕತೆ ನೆನಪಿಸುವೆ. ಶಂತನು ರಾಜನು. ದೇವವ್ರತನು ಅವನ ಬೆಳೆದ ಮಗನು. (ಮುಂದೆ ಅವನೇ ಭೀಷ್ಮ ಎಂದು ಪ್ರಖ್ಯಾತಿ ಹೊಂದಿದನು. ) ಶಂತನುವು ಒಂದು ಸಲ ಮತ್ಸ್ಯಗಂಧಿಯನ್ನು ನೋಡಿ ಮರುಳಾದನು. ಅವಳು ಇವನನ್ನು ಮದುವೆಯಾಗಲು ಒಂದು ಶರತ್ತು ವಿಧಿಸಿದಳು . ಅದೇನಪ್ಪಾ ಎಂದರೆ ಮುಂದೆ ತನಗೆ ಹುಟ್ಟುವ ಮಗನಿಗೇ ಪಟ್ಟ ಬರಬೇಕು ಅಂತ.
ಈ ಕತೆ ನಿಮಗೆಲ್ಲ ಗೊತ್ತು.
ಈಗ ವಾಗ್ದೇವಿ ಎಂಬ ಈ ಕಾದಂಬರಿಗೆ ಬನ್ನಿ. ಇದು ಕನ್ನಡದ ಆರಂಭಿಕ ಸಾಮಾಜಿಕ ಕಾದಂಬರಿಗಳಲ್ಲಿ ಒಂದು. ಬೋಳಾರ ಬಾಬುರಾವ್ ಎಂಬವರು…
ವಿಧ: ಪುಸ್ತಕ ವಿಮರ್ಶೆ
January 19, 2021
ಪತ್ರಕರ್ತ, ಲೇಖಕರಾದ ವಿಶ್ವೇಶ್ವರ ಭಟ್ ಅವರು ಬರೆದ ಪತ್ರಿಕೋದ್ಯಮದ ಕುರಿತಾದ ಅಪರೂಪದ ಪುಸ್ತಕ. ಅವರೇ ತಮ್ಮ ಬೆನ್ನುಡಿಯಲ್ಲಿ ಹೇಳುವಂತೆ ‘ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಪುಸ್ತಕಗಳು ನಮ್ಮಲ್ಲಿ ಹೆಚ್ಚಿಲ್ಲ. ಅದರಲ್ಲೂ ಕನ್ನಡದಲ್ಲಿ ಇರುವ ಪುಸ್ತಕಗಳು ಕೆಲವೇ ಕೆಲವು. ಇಂಗ್ಲೀಷ್ ಪುಸ್ತಕಗಳಲ್ಲಿ ವಿದೇಶಿ ಸರಕುಗಳೇ ಹೆಚ್ಚು. ಭಾರತದ ಸಂದರ್ಭದಲ್ಲಿ ಬರೆದ ಕೃತಿಗಳೂ ಹೆಚ್ಚಿಲ್ಲ. ಇದು ಪತ್ರಿಕೋದ್ಯಮದ ಮೇಷ್ಟು-ವಿದ್ಯಾರ್ಥಿಗಳಿಗೆ ಕೊರತೆಯೇ. ಈ ಸಂಗತಿಯನ್ನು ಗಮನದಲ್ಲಿರಿಸಿಕೊಂಡು ರೂಪಿಸಿದ ಕೃತಿಯಿದು…
ವಿಧ: ಪುಸ್ತಕ ವಿಮರ್ಶೆ
January 16, 2021
೧೯೯೪ರಲ್ಲಿ ಮುದ್ರಿತವಾದ ‘ಪಾಲ್ಗಡಲ ಮುತ್ತುಗಳು' ಎಂಬ ಹನಿ ಕವನಗಳ ಸಂಗ್ರಹ ಪುಸ್ತಕದಲ್ಲಿ ಹನಿಗವನಗಳನ್ನು ರಚಿಸಿರುವ ಹಲವಾರು ಕವಿಗಳು ಈಗ ಬಹಳಷ್ಟು ಖ್ಯಾತನಾಮರಾಗಿದ್ದಾರೆ. ಈ ಪುಸ್ತಕವನ್ನು ತಮ್ಮದೇ ಆದ ನವೀನ ಪ್ರಕಾಶನದಿಂದ ಸಂಪಾದನೆ ಮಾಡಿರುವ ಧನಂಜಯ ಕುಂಬ್ಳೆಯವರೂ ಈಗ ಉತ್ತಮ ಕವಿ, ಉಪನ್ಯಾಸಕರಾಗಿದ್ದಾರೆ. ‘ನವೀನ' ಎಂಬ ಅಂಚೆ ಕಾರ್ಡು ಮಾಸಿಕವನ್ನು ಬಹಳ ಹಿಂದೆ ಅವರು ಪ್ರಕಟಿಸುತ್ತಿದ್ದ ನೆನಪು ನನಗೆ ಈಗಲೂ ಇದೆ.
ಸಂಪಾದಕರ ಮಾತು ಇದರಲ್ಲಿ ಧನಂಜಯ ಕುಂಬ್ಳೆಯವರು ಬರೆಯುತ್ತಾರೆ ‘ ಹನಿಗವನವು…
ವಿಧ: ಪುಸ್ತಕ ವಿಮರ್ಶೆ
January 14, 2021
ಆಂಗ್ಲ ಬರಹಗಾರ ಪಾಲ್ ಕೊಯೆಲ್ಹೋ ಬರೆದ ದಿ ಆಲ್ ಕೆಮಿಸ್ಟ್ ಎಂಬ ಇಂಗ್ಲೀಷ್ ಪುಸ್ತಕದ ಮಾಹಿತಿಯನ್ನು ‘ಸಂಪದ’ದಲ್ಲಿ ಬಹಳ ಹಿಂದೆ ನೀವು ಗಮನಿಸಿರಬಹುದು. ಈ ಪುಸ್ತಕ ಅದರದ್ದೇ ಕನ್ನಡ ಅನುವಾದ. ಕನ್ನಡ ಮಾತ್ರ ಬಲ್ಲವರಿಗೆ ಅರ್ಥವಾಗುವಂತೆ ಸರಳವಾಗಿ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ ಕಿರಣ್ ಕುಮಾರ್ ಅವರು.
ಈ ಪುಸ್ತಕದ ಬೆನ್ನುಡಿಯಲ್ಲಿ ಲೇಖಕರು ಬರೆಯುತ್ತಾರೆ. ‘ಓದುಗರ ಜೀವನವನ್ನು ಶಾಶ್ವತವಾಗಿ ಬದಲಾಯಿಸುವಂತಹ ಪುಸ್ತಕಗಳು ದಶಕಗಳಲ್ಲಿ ಒಮ್ಮೆ ಪ್ರಕಟಗೊಳ್ಳುತ್ತವೆ. ಪಾಲೋ ಕೊಯೆಲ್ಹೋರವರ ‘ದ…
ವಿಧ: ಪುಸ್ತಕ ವಿಮರ್ಶೆ
January 12, 2021
ಪತ್ರಕರ್ತ ಲೇಖಕ ಶ್ರೀರಾಮ ದಿವಾಣರ ಮೊದಲ ಪ್ರಕಟಿತ ಲೇಖನಗಳ ಸಂಗ್ರಹ ಪುಸ್ತಕ ಇದು. ‘ಬರೆದದ್ದನ್ನೆಲ್ಲ ಪ್ರಕಟಿಸಬಾರದು, ಮುದ್ರಿಸಬಾರದು. ಆದರೆ ಆಯ್ದ ಲೇಖನಗಳನ್ನಾದರೂ ಪ್ರಕಟಿಸಬಹುದಲ್ವಾ?’ ಎಂಬ ಮಾತುಗಳನ್ನು ಹೇಳಿದವರು ನೇರ ನಡೆ-ನುಡಿಯ ನಿರ್ಭೀತ ಸಾಹಿತಿ, ಬೆಂಗಳೂರಿನ ‘ಪುಸ್ತಕ ಮನೆ'ಯ ಶ್ರೀ ಹರಿಹರ ಪ್ರಿಯರು. ಇವರ ಈ ಮಾತಿನಿಂದ ಪ್ರೇರಣೆಗೊಂಡು ಶ್ರೀರಾಮ ದಿವಾಣರು ‘ಕೃಷ್ಣಾರ್ಪಣ' ಎಂಬ ಕೃತಿಯನ್ನು ಹೊರ ತಂದಿದ್ದಾರೆ.
ಎಪ್ಪತ್ತೆರಡು ಪುಟಗಳ ಈ ಪುಸ್ತಕದಲ್ಲಿ ಒಟ್ಟು ೩೧ ಲೇಖನಗಳಿವೆ. ಆರಂಭದ…
ವಿಧ: ಪುಸ್ತಕ ವಿಮರ್ಶೆ
January 09, 2021
ವಿಶ್ವೇಶ್ವರ ಭಟ್ ಅವರು ವಿಜಯ ಕರ್ನಾಟಕ ದಿನ ಪತ್ರಿಕೆಯ ಸಂಪಾದಕರಾಗಿದ್ದ ಸಮಯದಲ್ಲಿ ಬರೆದ ಅಂಕಣ ಬರಹಗಳ ಸಂಗ್ರಹವೇ ‘ನೂರೆಂಟು ಮಾತು'. ಈ ಪುಸ್ತಕವು ಎರಡನೇ ಭಾಗವಾಗಿದೆ. ವಿಶ್ವೇಶ್ವರ ಭಟ್ ಅವರ ಬರವಣಿಗೆಯ ಶೈಲಿಯ ಪ್ಲಸ್ ಪಾಯಿಂಟ್ ಎಂದರೆ ಅವರ ಬರಹಗಳಲ್ಲಿ ವಿವಿಧತೆ ಇದೆ ಮತ್ತು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಅವರು ಬರೆಯುವ ಬರಹಗಳಿಗೆ ಸೂಕ್ತ ದಾಖಲೆಗಳನ್ನೂ ಕೊಡುತ್ತಾರೆ. ಐದು ವರ್ಷಗಳಲ್ಲಿ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಬರೆದ ಅಂಕಣ ಬರಹಗಳನ್ನು ಬೇರೆ ಬೇರೆ ಭಾಗಗಳಾಗಿ ಓದುಗರ…
ವಿಧ: ರುಚಿ
January 08, 2021
ಕಿತ್ತಳೆ ಸಿಪ್ಪೆಯನ್ನು ಸ್ವಚ್ಛಗೊಳಿಸಿ, ಸಣ್ಣಗೆ ಕತ್ತರಿಸಿಡಿ. ಬಾಣಲೆಯಲ್ಲಿ ಒಗ್ಗರಣೆಗೆ ತಯಾರು ಮಾಡಿ, ಅದು ತಯಾರಾಗುವಾಗ, ಮೊದಲೇ ತುಂಡು ಮಾಡಿದ ಸಿಪ್ಪೆಯನ್ನು ಸೇರಿಸಿ ಚೆನ್ನಾಗಿ ಹುರಿಯಬೇಕು. ಒಗ್ಗರಣೆಗೆ ತುಪ್ಪ ಬಳಸಿದರೆ ಒಳ್ಳೆಯದು. ಅರಶಿನ ಹುಡಿ,ಇಂಗು, ಬೆಳ್ಳುಳ್ಳಿ, ಕರಿಬೇವು ಸೇರಿಸಬೇಕು. ಫ್ರೈ ಆದಾಗ, ಹುಣಿಸೇ ಹಣ್ಣು ಕಿವುಚಿದ ನೀರು, ಉಪ್ಪು, ಬೆಲ್ಲ(ಜಾಸ್ತಿ), ಐದಾರು ಕಾಯಿಮೆಣಸು, ಸಾರಿನ ಪುಡಿ ಹಾಕಿ ಕುದಿಸಬೇಕು. ಮಂದ ಉರಿಯಲ್ಲಿ ಕುದಿಸಿ ಕೆಳಗಿಳಿಸಬೇಕು. ತುಂಬಾ ನೀರು ಹಾಕಬಾರದು…