ವಿಧ: ಪುಸ್ತಕ ವಿಮರ್ಶೆ
April 20, 2021
ಬಿಟ್ ಕಾಯಿನ್ ಕುರಿತ 'ನಿಗೂಢ ನಾಣ್ಯ' ಎಂಬ ರೋಚಕ ಕಾದಂಬರಿ ಬರೆದ ವಿಠಲ ಶೆಣೈ ಅವರ ಕೃತಿಯೇ ‘ತಾಳಿಕೋಟೆಯ ಕದನದಲ್ಲಿ’. ಈ ಕಾದಂಬರಿಯಲ್ಲಿ ಹಂಪಿಯ ದೇಗುಲಗಳೂ ಇವೆ, ಕೆಲವೊಂದು ಚಾರಿತ್ರಿಕ ಪಾತ್ರಗಳೂ ಜೀವಂತವಾಗಿವೆ. ವೈಕುಂಠರಾವ್ ಎಂಬ ವ್ಯಕ್ತಿ ತನ್ನ ಆತ್ಮೀಯ ಗೆಳೆಯ ವಿಶ್ವನಾಥನನ್ನು ಆಗುಂಬೆ ಘಾಟಿಯಲ್ಲಿ ಕಾರ್ ಅಪಘಾತವಾಗುವಂತೆ ಮಾಡಿ ಕೊಂದು ಬಿಡುವಲ್ಲಿಂದ ಪ್ರಾರಂಭವಾಗುವ ಪುಸ್ತಕವು ಒಂದು ರೀತಿಯಲ್ಲಿ ಪತ್ತೇದಾರಿ ಕಾದಂಬರಿಯಂತೆ ಓದಿಸಿಕೊಂಡು ಹೋಗುತ್ತದೆ. ಅನಿರೀಕ್ಷಿತ ತಿರುವುಗಳು ನಮ್ಮನ್ನು…
ವಿಧ: ಪುಸ್ತಕ ವಿಮರ್ಶೆ
April 17, 2021
ಅಂಗಡಿಯಲ್ಲಿ ಕನ್ನಡ ನುಡಿ ಎಂಬುವುದು ಒಂದು ಪುಟ್ಟ ಪುಸ್ತಕ. ಆದರೆ ಬಹಳ ಮಾಹಿತಿ ಪೂರ್ಣವಾಗಿದೆ. ಕನ್ನಡಾಭಿಮಾನವನ್ನು ಸ್ವಲ್ಪಮಟ್ಟಿಗೆ ಬಡಿದೆಬ್ಬಿಸ ಬಲ್ಲ ಪುಸ್ತಕ ಇದು. ನಿಮ್ಮ ಕನ್ನಡ ಜ್ಞಾನವನ್ನು ವ್ಯವಹಾರಿಕವಾಗಿ ಎಲ್ಲೆಲ್ಲಾ ಬಳಸಬಹುದು ಎಂಬುವುದಾಗಿ ಈ ಪುಸ್ತಕ ಹೇಳುತ್ತದೆ. ಪುಸ್ತಕದ ಬೆನ್ನುಡಿಯಲ್ಲಿ ಬರೆದಂತೆ “ಗ್ರಾಹಕ ಹಕ್ಕುಗಳ ಬಗ್ಗೆ ನಾನಾ ರೀತಿಯ ಜಾಗೃತಿ ಅಭಿಯಾನಗಳು ಎಲ್ಲೆಡೆ ನಡೆಯುತ್ತಾ ಇರುತ್ತವೆ. ತೂಕ, ಅಳತೆ, ಪ್ರಮಾಣ, ಬೆಲೆ, ಗುಣಮಟ್ಟ, ಸೇವೆ ಇವೆಲ್ಲವುಗಳ ಬಗ್ಗೆ ಜನರಲ್ಲಿ…
ವಿಧ: ಬ್ಲಾಗ್ ಬರಹ
April 15, 2021
ಇದು ಬಾಳಾಸಾಹೇಬ ಲೋಕಾಪುರ ಅವರ ಕಾದಂಬರಿ. ಅಥಣಿ ಭಾಗದ ಹಳ್ಳಿಯ ಜನರ ಕತೆ ಇದು. ಅಲ್ಲಿಯ ಮಾತಿನ ರೀತಿ ಹಾಗೂ ಜೈನ ಧರ್ಮದ ಕುರಿತಾದ ತಿಳಿವಳಿಕೆ ನಮಗೆ ಆಗುತ್ತದೆ.
ಅಲ್ಲಿ ನನಗೆ ಇಷ್ಟವಾದ ಒಂದು ಪುಟ - ಯಥಾವತ್ತಾಗಿ ಇಲ್ಲಿದೆ. (ಇದು ಒಂದು ಪ್ರವಚನದ ಭಾಗ)
"ನೋಡ್ರಿ ಜೀವನಾ ಹಿಂಗ ಏತಿಲಾ... ರಾಜಮತಿ ದೊಡ್ಡ ರಾಜಕುಮಾರಿ ಆಗಿದ್ದಳು. ರಾಜಕುಮಾರ ನೇಮಿನಾಥರ ಕೈ ಹಿಡಿದು ರಾಜ್ಯಭೋಗದ ಕನಸು ಅವಳಿಗಿತ್ತು. ಅದು ಅವಳ ಮದುವಿ ದಿನಾ ಕೈಯಲ್ಲಿ ಹೂವಿನ ಹಾರ, ಸುತ್ತಲೂ ದಾಸಿಯರು, ತಮ್ಮ ಅರಮನಿ…
ವಿಧ: ಪುಸ್ತಕ ವಿಮರ್ಶೆ
April 15, 2021
ಬದರ್ ಎಂಬ ಪುಸ್ತಕದ ಮೂಲ ಲೇಖಕರು ಷೇಕ್ ಕರೀಮುಲ್ಲಾ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ವಿನುಕೊಂಡ ಪಟ್ಟಣದಲ್ಲಿ ಜೂನ್ 01, 1964ರಲ್ಲಿ ಜನಿಸಿದರು. ವೃತ್ತಿಯಿಂದ ಶಿಕ್ಷಕರಾಗಿದ್ದಾರೆ. ಕಾವ್ಯವೇ ಇವರ ಅಚ್ಚುಮೆಚ್ಚಿನ ಸಾಹಿತ್ಯ ಪ್ರಕಾರ. 2006ನೇ ಇಸವಿಯಲ್ಲಿ ಮುಸ್ಲಿಂ ಬರಹಗಾರರ ಸಂಘವನ್ನು ಸ್ಥಾಪಿಸಿ ವ್ಯವಸ್ಥಾಪಕರಾಗಿ ಮುಸ್ಲಿಂ ಸಾಹಿತಿಗಳನ್ನು ಒಂದೇ ವೇದಿಕೆಗೆ ಕರೆದುತರುವ ಮಹತ್ವವಾದ ಕಾರ್ಯಕ್ಕೆ ನಾಂದಿ ಹಾಡಿದರು. ಪ್ರಗತಿಪರ ಮುಸ್ಲಿಂ ಬರಹಗಾರರಾಗಿ ಇವರು ಜನಮಾನಸವನ್ನು ಸೂರೆಗೊಂಡಿದ್ದಾರೆ.…
ವಿಧ: ಪುಸ್ತಕ ವಿಮರ್ಶೆ
April 14, 2021
೮೦-೯೦ರ ದಶಕದಲ್ಲಿ ಬೆಂಗಳೂರನ್ನು ಆಳುತ್ತಿದ್ದ ಡಾನ್ ಗಳು ಮತ್ತು ರೌಡಿಗಳ ಬಗ್ಗೆ ತಮ್ಮದೇ ಆದ ಶೈಲಿಯಲ್ಲಿ ಬರೆದು ‘ಕರ್ಮವೀರ’ ಪತ್ರಿಕೆಯ ಪ್ರಸಾರವನ್ನು ಹೆಚ್ಚಿಸಿದ ಕೀರ್ತಿ(?!) ರವಿ ಬೆಳಗೆರೆಯವರಿಗೆ ಸಲ್ಲಬೇಕು. ರೌಡಿಗಳನ್ನು ವೈಭವೀಕರಿಸಿ ಬರೆಯುತ್ತಾರೆ ಎಂಬುದು ರವಿ ಬೆಳಗೆರೆಯ ಮೇಲಿದ್ದ ಆಪಾದನೆ. ಭೂಗತ ಲೋಕದ ಆಗುಹೋಗುಗಳನ್ನು ಬಹಳ ಹತ್ತಿರದಿಂದ ನೋಡಿದವರು ಇವರು. ಈ ಪುಸ್ತಕದಲ್ಲಿ ನೀಡಲಾದ ಎಲ್ಲಾ ವ್ಯಕ್ತಿಗಳನ್ನು ಮುಖಃತ ಕಂಡು ಸಂದರ್ಶನ ಮಾಡಿ ಲೇಖನ ಬರೆದಿದ್ದಾರೆ. ಆದುದರಿಂದ ಈ…
ವಿಧ: ಪುಸ್ತಕ ವಿಮರ್ಶೆ
April 10, 2021
ವೈಚಾರಿಕ ಸಮರಕ್ಕೆ ‘ಓಪನ್ ಚಾಲೆಂಜ್' ಎಂಬ ಪುಸ್ತಕವನ್ನು ಬರೆದವರು ಪ್ರವೀಣ್ ಕುಮಾರ್ ಮಾವಿನಕಾಡು. ಇವರು ಹುಟ್ಟಿ ಬೆಳೆದದ್ದು ಮಲೆನಾಡಿನಲ್ಲಿ. ಚಿಕ್ಕಮಗಳೂರಿನಲ್ಲಿ ಎರಡು ವರ್ಷಗಳ ಕೈಗಾರಿಕಾ ತರಭೇತಿ ಮುಗಿಸಿ ನೇರವಾಗಿ ಸೇರಿದ್ದು ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದೊಳಗೆ. ಅಲ್ಲಿ ಕಮ್ಯೂನಿಸ್ಟ್ ಕಾರ್ಮಿಕ ಸಂಘಟನೆಗಳ ಕಾರ್ಯ ಚಟುವಟಿಕೆಗಳ ಹತ್ತಿರದ ಪರಿಚಯವಾಯಿತು. ಓದಿನ ಸಮಯದಲ್ಲಿ ತರಂಗ, ಮಂಗಳ ಮುಂತಾದ ವಾರಪತ್ರಿಕೆಗಳಲ್ಲಿ ಮತ್ತು ಸ್ಥಳೀಯ ದಿನಪತ್ರಿಕೆಗಳಲ್ಲಿ ಆಗಾಗ ಚುಟುಕು, ಹನಿಗವನ,…
ವಿಧ: ಪುಸ್ತಕ ವಿಮರ್ಶೆ
April 08, 2021
*ಕಟೀಲು ಸಿತ್ಲ ರಂಗನಾಥ ರಾವ್ ಅವರು ಸಂದರ್ಶಿಸಿ ನಿರೂಪಿಸಿದ "ರಂಗವಿಚಿಕಿತ್ಸೆ" ಯಕ್ಷಗಾನ ರಂಗತಜ್ಞ ಡಾ. ಕೆ. ಎಂ. ರಾಘವ ನಂಬಿಯಾರ್ ಅವರ ರಂಗ ವಿಚಾರಗಳು*
"ರಂಗವಿಚಿಕಿತ್ಸೆ" (ಯಕ್ಷಗಾನ ರಂಗತಜ್ಞ ಡಾ. ಕೆ. ಎಂ. ರಾಘವ ನಂಬಿಯಾರ್ ಅವರ ರಂಗ ವಿಚಾರಗಳು), ಕಟೀಲು ಸಿತ್ಲ ರಂಗನಾಥ ರಾವ್ ಅವರು ಸಂದರ್ಶಿಸಿ, ನಿರೂಪಿಸಿದ ಕೃತಿ. 90 ಪುಟಗಳ, 99 ರೂಪಾಯಿ ಬೆಲೆಯ, 2018ರಲ್ಲಿ ಪ್ರಕಟವಾದ ಕೃತಿಯನ್ನು ಯಕ್ಷರಂಗ ಕಟೀಲು ಸಿತ್ಲ ಫೌಂಡೇಶನ್ (ರಿ) ಉಡುಪಿ - ಬೆಂಗಳೂರು (ನಂ. 6 - 81 - ಸಿ 2, ಅಡ್ಕದಕಟ್ಟೆ…
ವಿಧ: ಪುಸ್ತಕ ವಿಮರ್ಶೆ
April 06, 2021
ಪತ್ರಕರ್ತ ಪ್ರತಾಪ್ ಸಿಂಹ ವಿಜಯ ಕರ್ನಾಟಕ ಹಾಗೂ ಕನ್ನಡ ಪ್ರಭ ಪತ್ರಿಕೆಗಳಲ್ಲಿ ಬರೆಯುತ್ತಿದ್ದ ಅಂಕಣ ಬರಹಗಳ ಸಂಗ್ರಹವೇ ಬೆತ್ತಲೆ ಜಗತ್ತು. ಈಗ ಇಲ್ಲಿರುವುದು ಅದರ ಹದಿನೈದನೇ ಭಾಗ. ಪ್ರತಿ ಶನಿವಾರ ಪ್ರತಾಪ್ ಸಿಂಹ ಅವರ ಅಂಕಣವನ್ನು ಕಾಯುತ್ತಿದ್ದ ದೊಡ್ಡದಾದ ಓದುಗ ಸಮೂಹ ಇತ್ತೆಂದರೆ ಸುಳ್ಳಲ್ಲ. ತೀಕ್ಷ್ಣವಾಗಿ ಚಾಟಿ ಬೀಸುವಂತಹ ರಾಜಕೀಯ ಲೇಖನಗಳಿಂದ ಹಿಡಿದು. ಕ್ರೀಡೆ, ಸಾಹಿತ್ಯ, ಸಿನೆಮಾ ಮುಂತಾದ ಎಲ್ಲಾ ವಿಚಾರಗಳನ್ನು ಅಧ್ಯಯನ ಮಾಡಿ ಬರೆಯುತ್ತಿದ್ದರು. ಪ್ರತಿಯೊಂದು ಲೇಖನಗಳಿಗೆ ಸೂಕ್ತ ಆಧಾರ…
ವಿಧ: ಪುಸ್ತಕ ವಿಮರ್ಶೆ
April 03, 2021
‘ಮುತ್ತಜ್ಜಿಯ ಪಾಕಶಾಲೆ’ ಪುಸ್ತಕದ ಹೆಸರೇ ಹೇಳುವಂತೆ ಇದೊಂದು ಪಾಕ ಸಲಹೆಯ ಪುಸ್ತಕ. ಸುಮಾರು ೬೦ ವರ್ಷಗಳ ಹಿಂದೆ ನಮ್ಮ ಅಜ್ಜಿ, ಮುತ್ತಜ್ಜಿಯವರು ತಯಾರು ಮಾಡುತ್ತಿದ್ದ ವಿವಿಧ ಬಗೆಯ, ಅಪರೂಪದ ಅಡುಗೆಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಪುಸ್ತಕದಲ್ಲಿನ ಪಾಕಗಳನ್ನು ತಯಾರಿಸಿದ್ದು ಎಲ್ಲರ ಪ್ರಿಯರ ‘ಕೋಲಾರಜ್ಜಿ' ಸರಸ್ವತಮ್ಮ. ಸರಸ್ವತಮ್ಮನವರು ಹುಟ್ಟಿದ್ದು ತಮಿಳುನಾಡಿನ ಕೃಷ್ಣಗಿರಿಯಲ್ಲಿ. ೧೯೧೫ ಡಿಸೆಂಬರ್ ೨೦ರಂದು. ತನ್ನ ಹದಿಮೂರನೆಯ ವಯಸ್ಸಿನಲ್ಲಿ ನಂದಿಗಿರಿ ರಾವ್ ಅವರನ್ನು ವಿವಾಹವಾಗಿ…
ವಿಧ: ಪುಸ್ತಕ ವಿಮರ್ಶೆ
April 01, 2021
‘ನನ್ನ ತಮ್ಮ ಶಂಕರ್' ಎನ್ನುವ ಪುಸ್ತಕ ಖ್ಯಾತ ಚಿತ್ರನಟ, ನಿರ್ದೇಶಕ ಶಂಕರ್ ನಾಗ್ ಅವರ ಜೀವನ ಕಥನ ಅವರ ಅಣ್ಣನ ದೃಷ್ಟಿಯಲ್ಲಿ. ಬದುಕಿದ ಕೇವಲ ೩೬ ವರ್ಷಗಳಲ್ಲಿ ಶಂಕರ್ ಸಾಧಿಸಿದ್ದು ಬಹಳ. ಪಾದರಸದ ವ್ಯಕ್ತಿತ್ವ, ದೂರದರ್ಶಿ ಚಿಂತನೆ ಇವೆಲ್ಲಾ ಮೇಳೈಸಿದ ಅಪರೂಪದ ವ್ಯಕ್ತಿ ಶಂಕರ್ ನಾಗ್. ಇವರ ಸಾವಿನ ಬಳಿಕ ಅನಂತನಾಗ್ ಒಂದು ರೀತಿಯಲ್ಲಿ ಕುಸಿದು ಹೋಗಿದ್ದರು. ಆದರೆ ಸಾಹಿತಿ, ಪತ್ರಕರ್ತ ಲಂಕೇಶ್ ಅವರ ಮಾತಿಗೆ ಕಟ್ಟುಬಿದ್ದು ತಮ್ಮ ಹಾಗೂ ಶಂಕರ್ ನಾಗ್ ಒಡನಾಟವನ್ನು ಲಂಕೇಶ್ ಪತ್ರಿಕೆಯಲ್ಲಿ ಬರೆಯಲು…