ಎಲ್ಲ ಪುಟಗಳು

ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
March 09, 2021
- ಇದನ್ನು ನೆಟ್ ನಲ್ಲಿ ಓದಬಹುದು. ಡೌನ್ಲೋಡ್ ಕೂಡ ಮಾಡಬಹುದು. ಲಿಂಕ್ ಅನ್ನು ಮುಂದೆ ಕೊಟ್ಟಿದ್ದೇನೆ - ಈ ಪುಸ್ತಕದ ಮೂಲ ಮತ್ತು ಓದುವುದರ ಲಾಭ ತಿಳಿಯಲು ನಾನು ಹಾಕಿರುವ ಫೋಟೋದ ಭಾಗವನ್ನು ಓದಿ. - ಈ ಪುಸ್ತಕವು ಒಬ್ಬ ಸಂಸಾರಿಗನು ಹೇಳಿದಂತೆ ಅವನ ಬದುಕಿನ ಚಿತ್ರಣ. ಬದುಕಿನ ಭಾಗವಾದ ಹೆಂಡತಿಯ ಕುರಿತು ಮೆಚ್ಚಿಗೆಯ ಮಾತುಗಳಿವೆ.  - ' ಮನುಷ್ಯನು ಹುಟ್ಟಿ ಬಂದುದರ ಸಾರ್ಥಕ್ಯವೇನು? ಹಣಗಳಿಕೆ , ಲೋಕದ ಮತ್ತು ದೇವರ ಸೇವೆ. ಮನುಷ್ಯನು ಹಣ, ಕೀರ್ತಿ ಮತ್ತು ದೇವರ ಪ್ರೀತಿ ಇವುಗಳ ಹೊರತು ಮತ್ತೇನೂ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
March 09, 2021
ಈ ರಾಯನ ಅನುದಿನದ ದಿನಚರಿ ನನಗೆ ಹೀಗೆ ಗೊತ್ತಾಗುತ್ತದೆ ಎಂದಿರೋ ? ಈ ರಾಯ ನನ್ನ ಇತ್ತೀಚಿನ ಹೊಸ ಸ್ನೇಹಿತ. ಇವನ ಬಗ್ಗೆ ನನಗೆ ಗೌರವ, ಕುತೂಹಲ. ಆದರೆ ಕೆದಕುವ ಪ್ರಶ್ನೆಗಳನ್ನು ಕೇಳುವುದು ತರವಲ್ಲ ಎ೦ದು ಅವನ ಖಾಸಗಿ ವಿಷಯ ಕೇಳಿಲ್ಲ, ಅದು ನನ್ನ ಜಾಯಮಾನವೂ ಅಲ್ಲ. (ನನಗೆ ಪುರಸೊತ್ತೂ ಇಲ್ಲ ಅನ್ನಿ). ಅನಗತ್ಯವಾಗಿ ಯಾರ ಜೀವನದಲ್ಲಿಯೂ ತಲೆ ಹಾಕಬಾರದಂತೆ , ತಾನಾಗಿ ನಮಗೆ ಏನು ದಕ್ಕುವುದೋ , ಏನು ತಿಳಿದು ಬರುವುದೋ ಅಷ್ಟರಿಂದ ತೃಪ್ತಿ ಪಡಬೇಕಂತೆ . ಈ ಮನುಷ್ಯ ನನಗೆ ದಿನಾಲೂ ಸಿಗುತ್ತಾನೆ. ತನ್ನ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
March 07, 2021
ಬ್ರಹ್ಮನಿಯಮದ ಎದಿರು ಆತ್ಮಶಕ್ತಿ (ಮಾನವ ಪ್ರಯತ್ನ) ಎಷ್ಟು ಸಫಲ? ಎಂಬ ಗಂಭೀರ ಪ್ರಶ್ನೆಯನಿಟ್ಟು ಕೊಂಡು ಸಿನಿಮಾ ಆರಂಭವಾಗುತ್ತದೆ. ಇದಕ್ಕೆ ಉತ್ತರವು ಕೊನೆಯ 2-3 ನಿಮಿಷಗಳಲ್ಲಿ ಸಿಗುತ್ತದೆ. ಈ ಸಿನಿಮಾ ಯೂ ಟ್ಯೂಬಲ್ಲಿ ಇದೆ.     ಇದು ಶ್ರೀ ಶ್ರೀ ಶ್ರೀ ಭಂ ಭಂ ಭಂ ಸ್ವಾಮಿಗಳ ಆಶೀರ್ವಾದದಿಂದ ತಯಾರಾದ ಸಿನಿಮಾ ಎ೦ದು ಟೈಟಲ್ಸ ನಲ್ಲಿದೆ.  ಇನ್ನೊಂದು ಕಡೆ ಯಜ್ಞನಾರಾಯಣ ಎಂಬ ಹೆಸರನ್ನು ಎಗ್ನನಾರಾಯಣ ಎಂದು ಬರೆದಿರುವುದನ್ನು ಗಮನಿಸಬಹುದು.   ಸಿನಿಮಾದ ನಾಯಕ ಉದಯ ಕುಮಾರ್. ಆದರೆ ರಾಜಕುಮಾರ್ ಒಂದು…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
March 06, 2021
ಧರ್ಮ, ತತ್ತ್ವ ದರ್ಶನ ಹಾಗೂ ಪುರಾಣ ಈ ವಿಚಾರಗಳನ್ನು ಒಳಗೊಂಡ ಮಾಹಿತಿಯನ್ನು ಪುಸ್ತಕದ ಮೂಲಕ ಹಂಚಿಕೊಂಡಿದ್ದಾರೆ ಈ ಕೃತಿಯ ಲೇಖಕರಾದ ಡಾ. ಎಂ.ಪ್ರಭಾಕರ ಜೋಶಿಯವರು. ಇವರು ನಿವೃತ್ತ ಪ್ರಾಂಶುಪಾಲರು, ಹಿರಿಯ ಸಂಸ್ಕೃತಿ ತಜ್ಞ, ಅಗ್ರಪಂಕ್ತಿಯ ಅರ್ಥದಾರಿ, ಕಲಾವಿಮರ್ಶಕ, ಸಂಶೋಧಕ, ಕವಿ, ಅಂಕಣಕಾರ, ಕಲಾ ಕಾರ್ಯಕರ್ತ ಹಾಗೂ ನಾಡಿನ ಬಹುಶ್ರುತ ವಿಧ್ವಾಂಸರಲ್ಲೊಬ್ಬರು. ಇವರು ಈ ಪುಸ್ತಕದಲ್ಲಿ ಭಾರತೀಯ ದರ್ಶನ ಶಾಸ್ತ್ರ, ಚಿಂತನ ವಿಧಾನ, ಪುರಾಣ ವಿಚಾರಗಳನ್ನು ಪಂಥೀಯ ಅತಿವಾದಗಳಿಲ್ಲದ, ಒಂದು ಉದಾರ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
March 05, 2021
ವಾರಕ್ಕೊಂದು ನಿಯಮಿತ ದಿನ ಕೆಲವು ಚಿಕ್ಕ ಕೆಲಸ ಮಾಡಬೇಕಿದ್ದರೂ ಅದು ಈತನಕ ಸಾಧ್ಯವಾಗಿರಲಿಲ್ಲ. ಇವತ್ತು ಮಾಡಿ ಹೊಸ ಪದ್ಧತಿ ಶುರು ಮಾಡಿದನು.    ಹೆಂಡತಿಯು ಮನೆಯಲ್ಲಿ ಖಾಲಿ ಆಗಿದ್ದ ಹೊಸ ಪೇಂಟ್ ಡಬ್ಬಗಳನ್ನು ನೀರಿನಲ್ಲಿ ನೆನೆಸಿ ಇಟ್ಟಿದ್ದಳು - ಮುಂದೆ ಗಿಡಗಳನ್ನು ಅವುಗಳಲ್ಲಿ ಹಚ್ಚುವ ಸಲುವಾಗಿ. ಅವನ್ನು ಕೂತು ಪೇಂಟ್ ಕೆರೆದು ಕೊಟ್ಟನಂತೆ.     ಎಂ ಎಸ್ ಶ್ರೀರಾಮ ಅವರ 'ಭಾಸ್ಕರ್ ರಾಯರ ಕಥೆಗಳು - ನಡೆಯಲಾರದ ದೂರ, ಹಿಡಿಯಲಾರದ ಬಸ್' ಎಂಬ ಪುಸ್ತಕದ ಓದನ್ನುಮುಂದುವರಿಸಿ ಅದನ್ನು ಮುಗಿಸಿದನು.…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
March 04, 2021
ಯಾರಿವನು ಈ ರಾಯ ? ಅವನು ಯಾರಿದ್ದರೂ ನಮಗೆ ಏನು? ಅವನು ಏನು ಮಾಡುತ್ತಾನೆ ಎನ್ನುವುದು ಅವನನ್ನು ವಿವರಿಸಲಿ. ಹಿಂದೆ ಏನು ಮಾಡಿದನು ನಮಗೆ ಗೊತ್ತಿಲ್ಲ. ಬೇಡ ಕೂಡ. ಮುಂದೆ ಏನು ಮಾಡಲಿದ್ದಾನೆ ಎನ್ನುವುದು ಅವನಿಗೇ ಗೊತ್ತಿಲ್ಲ, ಇನ್ನು ನಮಗೇನು ಗೊತ್ತಾದೀತು? ಅವನು ಇವತ್ತು ಏನು ಮಾಡುತ್ತಿದ್ದಾನೆ ಎನ್ನುವುದಷ್ಟನ್ನೇ ನೋಡೋಣ ಆಯಿತೆ? ಅವನು ಕೇ. ಫ. ಅವರ ಹಾಸ್ಯ ಲೇಖನಗಳಲ್ಲಿನ ಪಾಂಡು ತರಹದ ಮನುಷ್ಯ ಎ೦ದು ನನಗೆ ಅನಿಸುತ್ತದೆ. ( ಆ ಪಾಂಡು ಎಂಥವನು ಅಂತ ನಿಮಗೆ ಗೊತ್ತಿಲ್ಲದಿದ್ದರೆ ಅದನ್ನು ನಿಮಗೆ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
March 04, 2021
ರವಿ ಬೆಳಗೆರೆಯವರ ನಿಧನದ ಬಳಿಕ ಹೊರ ಬಂದ ಪುಸ್ತಕಗಳಲ್ಲಿ ಇದು ಒಂದು. ಬಹಳ ಹಿಂದೆ ‘ಒಟ್ಟಾರೆ ಕಥೆಗಳು' ಹೆಸರಿನಲ್ಲಿ ಹಲವಾರು ಕಥೆಗಳು ಪ್ರಕಟವಾದುದ್ದಿದೆ. ಆ ಪುಸ್ತಕದ ಪ್ರತಿಗಳು ಮುಗಿದಿದ್ದವು. ಅವೇ ಕಥೆಗಳಿಗೆ ಇನ್ನಷ್ಟು ಕಥೆಗಳನ್ನು ಸೇರಿಸಿ ರವಿ ಬೆಳಗೆರೆಯವರ ಸಮಗ್ರ ಕಥೆಗಳನ್ನು ಪುಸ್ತಕ ರೂಪದಲ್ಲಿ ಹೊರತರಲಾಗಿದೆ. ಒಂದು ರೀತಿಯಲ್ಲಿ ಈ ಪುಸ್ತಕವನ್ನು ಓದಿದರೆ ರವಿ ಬೆಳಗೆರೆಯವರ ಎಲ್ಲಾ ಕಥೆಗಳನ್ನು ಒಂದೇ ಗುಕ್ಕಿನಲ್ಲಿ ಓದಿದಂತೆ ಆಗುತ್ತದೆ. ಬೆಳಗೆರೆಯವರ ಕಥೆಗೆಗಳಿಗೆ ತಮ್ಮದೇ ಆದ ಶೈಲಿ ಇದೆ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
March 01, 2021
ಸಪ್ನ ಬುಕ್ ಹೌಸ್ ಅವರು ಪ್ರಕಾಶಿಸಿದ ಜಗತ್ತಿನ ಪ್ರಸಿದ್ಧ ವ್ಯಕ್ತಿಗಳು ಪುಸ್ತಕವು ವಾಲ್ಮೀಕಿಯಿಂದ ರಾಜೀವ್ ಗಾಂಧಿವರೆಗಿನ ೩೦೪ ಸ್ತ್ರೀ-ಪುರುಷರ ಜೀವನ - ಸಾಧನೆಗಳ ಮೂಲಕ ಪ್ರಪಂಚದ ಇತಿಹಾಸದ ಒಂದು ಇಣುಕುನೋಟವನ್ನು ತೋರಿಸಲು ಲೇಖಕರು ಹೊರಟಿದ್ದಾರೆ. ತಾಯಿನಾಡಿಗಾಗಿ ದುಡಿದವರ ಬಗ್ಗೆ ಯುವಜನರಿಗೆ ಪರಿಚಯ ಮಾಡಿಕೊಟ್ಟು, ಅವರು ಸಮಾಜದ ಹಿರಿಯರ ಸದ್ಗುಣಗಳಿಂದ ಸ್ಪೂರ್ತಿ ಪಡೆದು, ತ್ಯಾಗ ಮಾಡಬಲ್ಲವರಾಗಿ, ಸಿದ್ಧಿ ಪಡೆಯುವಂತೆ ಮಾಡಬೇಕು. ವಿವಿಧ ಯುಗದ, ವಿವಿಧ ಕ್ಷೇತ್ರಗಳ, ಅನೇಕ ಹಿರಿಯ ಚೇತನಗಳ ಹಾಗೂ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
February 27, 2021
ರಘು ಇಡ್ಕಿದು ಇವರು ವೃತ್ತಿಯಲ್ಲಿ ಉಪನ್ಯಾಸಕರು. ಇವರು ಉತ್ತಮ ಕವಿ ಹಾಗೂ ಬರಹಗಾರರು. ಇವರ ಹಲವಾರು ಪುಸ್ತಕಗಳು ಈಗಾಗಲೇ ಪ್ರಕಟವಾಗಿವೆ. ಕೊರಗ ತನಿಯ ಎಂಬುವುದು ಇವರು ಬರೆದಿರುವ ಕನ್ನಡ ನಾಟಕ. ಡಾ.ಬಿ.ಎ.ವಿವೇಕ್ ರೈ ಅವರು ತಮ್ಮ ಮುನ್ನುಡಿಯಲ್ಲಿ ಬರೆಯುತ್ತಾರೆ “ತುಳು ಮತ್ತು ಕನ್ನಡದಲ್ಲಿ ನಿರಂತರ ಸಾಹಿತ್ಯ ಕೃಷಿ ಮಾಡುತ್ತಾ ಬರುತ್ತಿರುವ ರಘು ಇಡ್ಕಿದು ತಮ್ಮ ಸಜ್ಜನಿಕೆ, ಭಾಷಾ ಪ್ರೀತಿ, ಸಾಹಿತ್ಯ ಸೃಷ್ಟಿ ಮತ್ತು ಸಮತೋಲನದ ಜೀವನದೃಷ್ಟಿಗಳ ಕಾರಣವಾಗಿ ಕರಾವಳಿಯ ಹೊಸ ಪೀಳಿಗೆಯ ಲೇಖಕರಲ್ಲಿ…
ಲೇಖಕರು: Shreerama Diwana
ವಿಧ: ಪುಸ್ತಕ ವಿಮರ್ಶೆ
February 25, 2021
*ಉಪ್ಪುಂದ ಚಂದ್ರಶೇಖರ ಹೊಳ್ಳರ ಅಭಿನಂದನ ಗ್ರಂಥ "ಉಪ್ಪುಂದದ ಹೊಳಪು"* " ಉಪ್ಪುಂದದ ಹೊಳಪು" , ಉಪ್ಪುಂದ ಚಂದ್ರಶೇಖರ ಹೊಳ್ಳರ ಅಭಿನಂದನ ಗ್ರಂಥ. ಡಾ. ಕನರಾಡಿ ವಾದಿರಾಜ ಭಟ್ಟರು ಪ್ರಧಾನ ಸಂಪಾದಕರು. ನೀಲಾವರ ಸುರೇಂದ್ರ ಅಡಿಗ, ಯು. ಗಣೇಶ ಪ್ರಸನ್ನ ಮಯ್ಯ, ಎಂ. ಪ್ರಕಾಶ ಪಡಿಯಾರ್, ಸಂತೋಷ ಕೋಣಿ ಹಾಗೂ ಪ್ರಕಾಶ್ಚಂದ್ರ ಶೆಟ್ಟಿ ಹಲ್ನಾಡು ಇವರು ಸಂಪಾದಕೀಯ ಮಂಡಳಿ ಸದಸ್ಯರು.. 16 + 314 + 16 ಪುಟಗಳ, 400 ರೂಪಾಯಿ ಬೆಲೆಯ ಗ್ರಂಥವನ್ನು 2016ರಲ್ಲಿ "ಕುಂದ ಅಧ್ಯಯನ ಕೇಂದ್ರ" (ಶಂಕರ ಕಲಾ ಮಂದಿರ,…