ವಿಧ: ಪುಸ್ತಕ ವಿಮರ್ಶೆ
May 11, 2021
ಪತ್ರಕರ್ತರಾದ ವಿಶ್ವೇಶ್ವರ ಭಟ್ ಇವರು ಬರೆದ ಬಿಡಿ ಬರಹಗಳ ಸಂಗ್ರಹವೇ ‘ಅಕ್ಷರಗಳೊಂದಿಗೆ ಅಕ್ಕರೆಯ ಯಾನ'. ಈ ಪುಸ್ತಕದಲ್ಲಿ ವಿಶ್ವೇಶ್ವರ ಭಟ್ ಅವರ ವಿವಿಧ ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳು ಇವೆ. ಕೆಲವೊಂದು ಲೇಖನಗಳು ಈಗಲೂ ಪ್ರಸ್ತುತವೆನಿಸುತ್ತವೆ. ಸಾಹಿತಿ ಮನು ಬಳಿಗಾರ್ ಅವರು ತಮ್ಮ ಮುನ್ನುಡಿಯಾದ ‘ಎದೆಯಾಳದ ಎರಡು ಮಾತು' ಇದರಲ್ಲಿ ವಿಶ್ವೇಶ್ವರ ಭಟ್ ಹಾಗೂ ಅವರ ಬರಹಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದ್ದಾರೆ.
ಅವರು ಒಂದೆಡೆ ಬರೆಯುತ್ತಾರೆ “ಹಲವಾರು ರಾಷ್ಟ್ರಗಳನ್ನು ಸುತ್ತಾಡಿ…
ವಿಧ: ಪುಸ್ತಕ ವಿಮರ್ಶೆ
May 08, 2021
ನಾಗರಾಜ ವಸ್ತಾರೆ ಇವರು ಬರೆದ ವಿಭಿನ್ನ ಶೈಲಿಯ ಸಣ್ಣ ಕಥೆಗಳ, ಕವನಗಳ ಸಂಗ್ರಹವೇ ‘ಹಕೂನ ಮಟಾಟ' ಬೆಂಗಳೂರಿನಲ್ಲಿ ಆರ್ಕಿಟೆಕ್ಟ್ ಆಗಿರುವ ಇವರನ್ನು ೨೦೦೨ರಲ್ಲಿ ದೇಶದ ಪ್ರತಿಭಾನ್ವಿತ ಹತ್ತು ಯುವ ವಿನ್ಯಾಸಕಾರರಲ್ಲಿ ಒಬ್ಬರು ಎಂದು ಗುರುತಿಸಿದ್ದರು. ಇವರು ಉತ್ತಮ ಕಥೆಗಾರರು. ಇವರ ಹಲವಾರು ಕಥೆ, ಕವನ ಹಾಗೂ ಬರಹಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಬೆಳಕು ಕಂಡಿದೆ.
ನಾಗರಾಜ ವಸ್ತಾರೆ ತಮ್ಮ ಮುನ್ನುಡಿಯಾದ ‘ನಮಸ್ಕಾರ' ಇಲ್ಲಿ ಬರೆದಂತೆ “ನಾನು ಬರಹದಲ್ಲಿ ತೊಡಗಿದ್ದು ಈ ಉದ್ಧಾಮ ಊರಿನಲ್ಲೊಂದು…
ವಿಧ: ಪುಸ್ತಕ ವಿಮರ್ಶೆ
May 06, 2021
ಮಲೆನಾಡಿನ ರೋಚಕ ಕತೆಗಳು ಸರಣಿಯ ೭ನೇ ಭಾಗವೇ ‘ಮುಂಗಾರಿನ ಕರೆ'. ಮಲೆನಾಡಿನ ಗುಡ್ಡ ಬೆಟ್ಟಗಳಲ್ಲೇ ತಮ್ಮ ಜೀವನವನ್ನು ಸಾಗಿಸುತ್ತಿರುವ ಗಿರಿಮನೆ ಶ್ಯಾಮರಾವ್ ಅವರು ಬರೆಯುವ ಪ್ರತೀ ಕಾದಂಬರಿಯನ್ನು ಅನುಭವಿಸಿಯೇ ಬರೆದಿದ್ದಾರೆ ಅನಿಸುತ್ತೆ. ಪುಸ್ತಕದ ಪ್ರತೀ ಪುಟದಲ್ಲಿ ಪರಿಸರವಿದೆ, ಕಾಡು ಇದೆ, ಗುಡ್ಡ ಬೆಟ್ಟಗಳಿವೆ, ಆನೆ, ಜಿಂಕೆ, ನರಿ, ಕಾಡು ಕೋಣ, ದನ ಮುಂತಾದ ಪ್ರಾಣಿಗಳಿವೆ. ಏಲಕ್ಕಿ, ಕಾಫಿಯ ಘಮವಿದೆ, ಹರಿಯುವ ತೊರೆ, ನದಿಗಳಿವೆ, ಪುರಾತನ ಬಂಗಲೆಯಿದೆ, ರಕ್ತ ಹೀರುವ ಜಿಗಣೆಗಳಿವೆ, ಕಾಡುವ…
ವಿಧ: ಪುಸ್ತಕ ವಿಮರ್ಶೆ
May 04, 2021
ಅಯೋಧ್ಯೆ -ವಿನಾಶಕಾರಿ ವೋಟ್ ಬ್ಯಾಂಕ್ ರಾಜಕೀಯ ಎಂಬ ಪುಸ್ತಕದ ಮೂಲ ಲೇಖಕರು ಮಧು ಲಿಮಯೆ. ಭಾರತದ ಹಿರಿಯ ಸಮಾಜವಾದಿ ಚಿಂತಕ ಮಧು ಲಿಮಯೆ ವಿದ್ಯಾರ್ಥಿ ದೆಸೆಯಲ್ಲೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದವರು. ತಮ್ಮ ೧೮ನೆಯ ಪ್ರಾಯದಲ್ಲಿ ಜೈಲಿನ ರುಚಿ ಕಂಡವರು. ಮುಂದೆ ಜೈಲಿಗೆ ಹೋಗುವುದು ಮಾಮೂಲಾಗಿ ಬಿಟ್ಟಿತು. ‘ಭಾರತದಿಂದ ತೊಲಗಿ' ಆಂದೋಲನದ ಕಾಲದಲ್ಲಿ ಭೂಗತರಾದರು. ತುರ್ತು ಪರಿಸ್ಥಿತಿಯ ಸಮಯದಲ್ಲಿ ೧೮ ತಿಂಗಳ ಕಾಲ ಜೈಲಿನಲ್ಲಿ ಬಂದಿಯಾಗಿದ್ದರು.
ಲೋಕಸಭೆಗೆ ನಾಲ್ಕು ಸಲ ಆಯ್ಕೆಯಾಗಿ ಅಪ್ರತಿಮ…
ವಿಧ: ಪುಸ್ತಕ ವಿಮರ್ಶೆ
May 02, 2021
ಆಧುನಿಕ ಜೀವನ ಹಲವು ಸವಾಲುಗಳನ್ನೂ ಬಿಕ್ಕಟ್ಟುಗಳನ್ನೂ ನಮಗೆ ಎದುರಾಗಿಸುತ್ತದೆ. ಇಂತಹ ನಿರಂತರ ಬದಲಾವಣೆಯ ಪ್ರವಾಹದಲ್ಲಿ ಇವುಗಳ ಸೂಕ್ಷ್ಮತೆಗಳನ್ನು ತಮ್ಮ ಬದುಕಿನ ಅನುಭವಗಳ ಬಲದಿಂದ ನಮ್ಮೆದುರು ತೆರೆದಿಡುತ್ತ ನಮ್ಮ “ಅಂತರಂಗದ ಮೃದಂಗ”ವನ್ನು ಮೀಟಿ, ಚಿಂತನೆಗೆ ತೊಡಗಿಸುವುದರಲ್ಲಿ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಹತ್ತು ಪ್ರಬಂಧಗಳು ಯಶಸ್ವಿಯಾಗುತ್ತವೆ.
“ನರಹಳ್ಳಿಯವರ ಹರಟೆಗಳಲ್ಲಿ ಅವರ ಇಡೀ ಆಪ್ತ ವಲಯವೇ ಮೂಡಿ ಬಂದಿದೆ ಎಂದರೆ ಅದು ಅತಿಶಯೋಕ್ತಿಯಲ್ಲ. … ಅವರೆಲ್ಲರೂ ಈ ಬರಹಗಳಿಂದಾಗಿ ನಮ್ಮ…
ವಿಧ: ಪುಸ್ತಕ ವಿಮರ್ಶೆ
May 01, 2021
‘ರೇಷ್ಮೆ ರುಮಾಲು’ ಎಂಬ ಕಾದಂಬರಿಯನ್ನು ಒಮ್ಮೆ ನೀವು ಓದಲೆಂದು ಕೈಗೆತ್ತಿಕೊಂಡರೆ, ಮುಗಿಯುವ ತನಕ ಕೆಳಗಿಡಲಾರಿರಿ, ಅಂತಹ ಕಥಾ ವಸ್ತುವನ್ನು ಹೊಂದಿದ ರೋಚಕ ಕಾದಂಬರಿ ಇದು. “ಬ್ರಿಟೀಷ್ ಅಧಿಕಾರಿ ಫಿಲಿಪ್ ಮೆಡೋಸ್ ಟೇಲರ್ ಹೀಗೊಂದು ಪುಸ್ತಕ ಬರೆಯುವ ತನಕ ಭಾರತ ದೇಶದಲ್ಲಿ ಥಗ್ ಸಂಪ್ರದಾಯ ಅಂತ ಒಂದಿದೆ ಎಂಬುವುದು ಹೊರ ಜಗತ್ತಿಗೆ ಗೊತ್ತೇ ಇರಲಿಲ್ಲ. ಅತ್ಯಂತ ಸಂಭಾವಿತ ಜೀವನ ಸಾಗಿಸುತ್ತಲೇ ವರ್ಷಕ್ಕೊಂದು ಬಾರಿ ತಂಡ ಕಟ್ಟಿಕೊಂಡು ಯಾತ್ರೆ ಹೊರಡುತ್ತಿದ್ದ ಥಗ್ಗರು ದಾರಿಯುದ್ದಕ್ಕೂ ನೂರಾರು…
ವಿಧ: ಪುಸ್ತಕ ವಿಮರ್ಶೆ
April 29, 2021
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಗತ್ ಸಿಂಗ್ ಹೆಸರು ಸದಾಕಾಲ ಮುಂಚೂಣಿಯಲ್ಲಿ ಇದ್ದೇ ಇರುತ್ತದೆ. ೨೦೦೭ರಲ್ಲಿ ಭಗತ್ ಸಿಂಗ್ ಜನ್ಮಶತಮಾನೋತ್ಸವವನ್ನು ಆಚರಿಸಲಾಗಿತ್ತು. ಈ ಸಮಯದಲ್ಲಿ ಹೊರ ತಂದ ಪುಸ್ತಕವೇ ‘ಧೀರ ಹುತಾತ್ಮ ಭಗತ್ ಸಿಂಗ್'. ಭಗತ್ ಸಿಂಗ್ ಬಗ್ಗೆ ಅಧಿಕ ಮಾಹಿತಿ ಬೇಕಾದವರು ಈ ಪುಸ್ತಕವನ್ನು ಓದಬಹುದು.
ಪುಸ್ತಕದ ಲೇಖಕರಾದ ಡಾ॥ ಬಿ. ಆರ್. ಮಂಜುನಾಥ್ ಅವರು ತಮ್ಮ ಮುನ್ನುಡಿ ‘ಅರಿಕೆ'ಯಲ್ಲಿ ಬರೆಯುತ್ತಾರೆ “ ಮಹಾನ್ ಹುತಾತ್ಮ ಭಗತ್ ಸಿಂಗ್ ಜನ್ಮ ತಳೆದು ೨೦೦೭ರ ಸೆಪ್ಟೆಂಬರ್ ೨೮ಕ್ಕೆ…
ವಿಧ: ಪುಸ್ತಕ ವಿಮರ್ಶೆ
April 27, 2021
ಕಾಸರಗೋಡು ಚಿನ್ನಾ ಎಂದೇ ಖ್ಯಾತಿ ಪಡೆದ ಸುಜೀರ್ ಶ್ರೀನಿವಾಸ್ ಅವರು ಖ್ಯಾತ ರಂಗ ಕರ್ಮಿ, ಚಿತ್ರ ನಟ ಹಾಗೂ ಬರಹಗಾರರು. ಬಂಗಾಳಿ ಸಾಹಿತಿ ಶಂಭುಮಿತ್ರ ಅಮಿತಮೈತ್ರ ಇವರು ಬರೆದ ‘ಕಾಂಚನಗಂಗಾ’ ಎಂಬ ನಾಟಕದ ಅನುವಾದವೇ ‘ಗಾಂಟಿ' (ಗಂಟು). ಪುಸ್ತಕ ಪುಟ್ಟದಾಗಿದ್ದು ಲೇಖಕರಾದ ಡಾ.ನಾ,.ದಾಮೋದರ ಶೆಟ್ಟಿ ಇವರು ಇವರು ಬೆನ್ನುಡಿ ಬರೆದಿದ್ದಾರೆ. ಅವರದ್ದೇ ಮಾತುಗಳಲ್ಲಿ ಹೇಳುವುದಾದರೆ “ಅರ್ಧ ಶತಮಾನದ ಹಿಂದೆ ಕಾಸರಗೋಡಿನ ಕನ್ನಡದ ನೆಲದಲ್ಲಿ ಹುಟ್ಟಿದ ಕೊಂಕಣಿಗ ಸುಜೀರ್ ಶ್ರೀನಿವಾಸ್ ರಾವ್, ಕಾಸರಗೋಡು…
ವಿಧ: ಪುಸ್ತಕ ವಿಮರ್ಶೆ
April 24, 2021
ಪತ್ರಕರ್ತ ಪ್ರತಾಪ್ ಸಿಂಹ ವಿಜಯ ಕರ್ನಾಟಕ ಹಾಗೂ ಕನ್ನಡ ಪ್ರಭ ಪತ್ರಿಕೆಗಳಲ್ಲಿ ಬರೆಯುತ್ತಿದ್ದ ಅಂಕಣ ಬರಹಗಳ ಸಂಗ್ರಹವೇ ಬೆತ್ತಲೆ ಜಗತ್ತು. ಈಗ ಇಲ್ಲಿರುವುದು ಅದರ ಎಂಟನೇ ಭಾಗ. ಪ್ರತಿ ಶನಿವಾರ ಪ್ರತಾಪ್ ಸಿಂಹ ಅವರ ಅಂಕಣವನ್ನು ಕಾಯುತ್ತಿದ್ದ ದೊಡ್ಡದಾದ ಓದುಗ ಸಮೂಹ ಇತ್ತೆಂದರೆ ಸುಳ್ಳಲ್ಲ. ತೀಕ್ಷ್ಣವಾಗಿ ಚಾಟಿ ಬೀಸುವಂತಹ ರಾಜಕೀಯ ಲೇಖನಗಳಿಂದ ಹಿಡಿದು. ಕ್ರೀಡೆ, ಸಾಹಿತ್ಯ, ಸಿನೆಮಾ ಮುಂತಾದ ಎಲ್ಲಾ ವಿಚಾರಗಳನ್ನು ಅಧ್ಯಯನ ಮಾಡಿ ಬರೆಯುತ್ತಿದ್ದರು. ಪ್ರತಿಯೊಂದು ಲೇಖನಗಳಿಗೆ ಸೂಕ್ತ ಆಧಾರ…
ವಿಧ: ಪುಸ್ತಕ ವಿಮರ್ಶೆ
April 22, 2021
*ಮುದ್ದು ಮೂಡುಬೆಳ್ಳೆ ಹಾಗೂ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಇವರ "ನಮ್ಮ ಬೆಳ್ಳೆ - ಕಟ್ಟಿಂಗೇರಿ: ಪರಂಪರೆ, ಇತಿಹಾಸ"*
ಬೆಳ್ಳೆಯ ಸಾಹಿತ್ಯ ಸಂಸ್ಕೃತಿ ವೇದಿಕೆಯು (ಮಾತಾ ಕುಟೀರ, ಮೂಡುಬೆಳ್ಳೆ - 576120, ಕಾಪು ತಾಲೂಕು, ಉಡುಪಿ ಜಿಲ್ಲೆ) 2019 ರಲ್ಲಿ ಪ್ರಕಾಶಿಸಿದ ಕೃತಿ " ನಮ್ಮ ಬೆಳ್ಳೆ - ಕಟ್ಟಿಂಗೇರಿ: ಪರಂಪರೆ, ಇತಿಹಾಸ". 52 + 4 ಪುಟಗಳ, 70 ರೂಪಾಯಿ ಬೆಲೆಯ ಈ ಕೃತಿಯಲ್ಲಿ, ಲೇಖಕರ 'ಮೊದಲ ಮಾತು' ಮತ್ತು ಪರಿಚಯಗಳಿವೆ. ಲೇಖನಕ್ಕೆ ಸಂಬಂಧಿಸಿದಂತೆ ಕೆಲವು ಸ್ಥಳಗಳ ಮತ್ತು ವ್ಯಕ್ತಿಗಳ…