ಎಲ್ಲ ಪುಟಗಳು

ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
May 25, 2021
ಸೂತ್ರಧಾರ ಮತ್ತು ಇತರ ಕಥೆಗಳು ಶೈಲಜಾ ಸುರೇಶ್ ರಾವ್ ನಾಯಕ್ ಅವರ ಪ್ರಥಮ ಕಥಾ ಸಂಕಲನ. ಈ ಕಥಾ ಸಂಕಲನದಲ್ಲಿ ಒಟ್ಟು ಹದಿಮೂರು ಕಥೆಗಳಿವೆ. ಆ ಹದಿಮೂರು ಕಥೆಗಳಲ್ಲಿ ಎರಡು ಕಥೆಗಳನ್ನು ಶೈಲಜಾ ಅವರ ಮಗಳಾದ ಅಶ್ವಿನಿಯವರು ಬರೆದಿದ್ದಾರೆ. ಅಮ್ಮ-ಮಗಳು ಸೇರಿ ಜೊತೆಯಾಗಿ ಕಥಾ ಸಂಕಲನ ರಚನೆ ಮಾಡಿದ್ದಾರೆ. ಶೈಲಜಾ ಅವರು ಬರೆದ ಕಥೆಗಳು ಚಿಕ್ಕದಾಗಿದ್ದು, ನಮ್ಮ-ನಿಮ್ಮೆಲ್ಲರ ಮನೆಯ ಕಥೆಗಳಂತೆಯೇ ಇವೆ. ಈ ಕಥೆಗಳು ನಮ್ಮ ನೆರೆಹೊರೆಯಲ್ಲೇ ನಡೆದಷ್ಟು ಆಪ್ತವಾಗಿವೆ. ಪ್ರತಿಯೊಂದು ಕಥೆ ಭಾವನಾತ್ಮಕವಾಗಿದೆ.…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
May 22, 2021
ಕಥೆಗಾರ, ಸಾಹಿತಿ, ಕಾದಂಬರಿಗಾರ ಜೋಗಿ (ಗಿರೀಶ್ ಹತ್ವಾರ್) ಇವರು ಬರೆದ ಸಣ್ಣ ಕಥೆಗಳ ಸಂಗ್ರಹವಿದು. ಮುಖಪುಟದಲ್ಲೇ ‘ನಾನಿದನ್ನು ಬರೆಯಬಾರದಿತ್ತು ಅಂದುಕೊಳ್ಳುತ್ತಿರುವ ಹೊತ್ತಿಗೇ, ನೀವಿದನ್ನು ಓದುತ್ತಾ ಇದ್ದೀರಿ!' ಎಂದು ಪ್ರಕಟಿಸಿ ನಮ್ಮ ಓದುವ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ ಜೋಗಿ. ಈ ಕಥೆಗಳು ‘ಖಾಸಾ ಪತ್ರದ ಹಾಗೆ ನಿಮ್ಮನ್ನು ತಲುಪಲಿ' ಎಂದು ಮುನ್ನುಡಿ ಬರೆದಿದ್ದಾರೆ ಜೋಗಿಯವರು. 'ಇಲ್ಲಿರುವ ಇಪ್ಪತ್ತೂ ಮತ್ತೊಂದು ಕತೆಗಳ ಬಗ್ಗೆ ಹೇಳುವಂಥದ್ದೇನಿಲ್ಲ. ಕತೆ ಬರೆಯುವುದು ಮಹಾನ್…
ವಿಧ: ರುಚಿ
May 22, 2021
ಮರಗೆಣಸಿನ ಸಿಪ್ಪೆ ತೆಗೆದು, ಸ್ವಚ್ಛಗೊಳಿಸಿ, ಚಿಟಿಕೆ ಅರಶಿನ ಹುಡಿ ಸೇರಿಸಿ ಕುದಿಸಬೇಕು. ಒಮ್ಮೆಯ ನೀರನ್ನು ಬಸಿದು, ಒಗ್ಗರಣೆಗೆ ಒಣಮೆಣಸು, ಸಾಸಿವೆ, ಉದ್ದಿನಬೇಳೆ, ಎಣ್ಣೆ ಹಾಕಿ ಒಗ್ಗರಣೆ ಆಗುವಾಗ ಅರಶಿನ, ಕರಿಬೇವು, ಕಾಯಿಮೆಣಸು ಒಂದೆರಡು ಹಾಕಿ, ಬಸಿದ ಹೋಳುಗಳನ್ನು ಸೇರಿಸಿ ಸ್ವಲ್ಪ ಮಿಶ್ರ ಮಾಡಬೇಕು. ಉಪ್ಪು ಖಾರಪುಡಿ ಹಾಕಿ ಸ್ವಲ್ಪ ನೀರು ಚಿಮುಕಿಸಬೇಕು. ತುರಿದ ತೆಂಗಿನಕಾಯಿ ಸ್ವಲ್ಪ ಸೇರಿಸಿ ಮಿಶ್ರ ಮಾಡಿದರೆ ರುಚಿಯಾದ ಪಲ್ಯ ರೆಡಿ. ಸಾಂಬಾರ್, ಮಜ್ಜಿಗೆಹುಳಿ, ಮಸಾಲೆಪಲ್ಯ, ದೋಸೆ ಸಹ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
May 20, 2021
ಪತ್ರಕರ್ತ, ಬರಹಗಾರ, ಕವಿ, ವಿಮರ್ಶಕ ಎಂ.ನಾ.ಚಂಬಲ್ತಿಮಾರ್ ಇವರದ್ದು ಬಹುಮುಖ ಪ್ರತಿಭೆ. ಪ್ರಸ್ತುತ ‘ಕಣಿಪುರ' ಎಂಬ ಯಕ್ಷಗಾನ ಕಲೆಗೆ ಸಂಬಂಧಿಸಿದ ಪತ್ರಿಕೆಯ ಸಂಪಾದಕರಾಗಿರುವ ಇವರು ಈ ಹಿಂದೆ ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಬರೆದ ಲೇಖನ ಹಾಗೂ ಅಂಕಣ ಬರಹಗಳ ಸಂಗ್ರಹವೇ ‘ಗಡಿನಾಡ ದಡದಿಂದ...' ಎಂಬ ಪುಸ್ತಕ. ‘ಕನ್ನಡ ಕೈರಳಿ’ ಎಂಬ ಪತ್ರಿಕೆಯ ಪ್ರಕಾಶಕರೂ ಹಾಗೂ ಸಂಪಾದಕರೂ ಆಗಿರುವ ಅಬ್ದುಲ್ ರಹಿಮಾನ್ ಸುಬ್ಬಯ್ಯಕಟ್ಟೆ ಇವರು ತಮ್ಮ ಕೈರಳಿ ಪ್ರಕಾಶನದ ಮೂಲಕ ಈ ಪುಸ್ತಕವನ್ನು ಹೊರತಂದಿದ್ದಾರೆ. ಅವರು…
ವಿಧ: ಪುಸ್ತಕ ವಿಮರ್ಶೆ
May 19, 2021
ಯಕ್ಷಗಾನದ ಆವರಣದಲ್ಲಿ ಸಿದ್ದಗೊಂಡ ಬೆರಳೆಣಿಕೆಯ ಕಾದಂಬರಿಗಳಲ್ಲಿ ಸಾಗರದ ಜಿ.ಎಸ್ ಭಟ್ಟರು ರಚಿಸಿರುವ ಮಂಜೀ ಮಹದೇವನ ಗಂಜೀ ಪುರಾಣ ಕಾದಂಬರಿಯೂ ಒಂದು. ಈ ಕಾದಂಬರಿಯ ಹೆಸರನ್ನು ಕೇಳುವಾಗಲೇ, ನಮಗೆ ಯಾವುದೋ ಒಂದು ಅವ್ಯಕ್ತ ಭಾವ ಒಡಮೂಡಿ, ಕುತೂಹಲವನ್ನು ಹೆಚ್ಚಿಸುತ್ತದೆ. ಇಲ್ಲಿ ಗಂಜೀ ಎನ್ನುವಾಗ ಮಹದೇವ ಎಂಬ ಯಕ್ಷಗಾನ ರಂಗಕರ್ಮಿಯ ಬದುಕಿಗಾಗಿ ನಡೆಸುವ ಹೋರಾಟವನ್ನು ತೆರೆದಿಟ್ಟು, ಅವನ ಜೀವನದ ಅನಿವಾರ್ಯತೆ ಮತ್ತು ತೀರ್ವತೆಯನ್ನು ಸಾದರಪಡಿಸುತ್ತದೆ. ತನ್ನ ಜನ್ಮಕ್ಕೆ ಕಾರಣನಾದ ಜಮೀನುದ್ದಾರ ಹಾಗೂ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
May 18, 2021
ಬಹಳ ದಿನಗಳ ಮೇಲೆ ರಾಯ ಸಿಕ್ಕಿದ್ದ. ಅವನು ಲಾಕ್ಡೌನ್   ಕಾರಣದಿಂದಾಗಿ ಮನೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ - ನಮ್ಮ ನಿಮ್ಮ ತರಹ. ಏನಪ್ಪಾ ಮಾಡುತ್ತಿದ್ದೀಯಾ ಅಂತ ಕೇಳಿದೆ. ಭಾರತ ದರ್ಶನ ಅಂತ ನಕ್ಕುಬಿಟ್ಟ. "ಭಾರತ ದರ್ಶನವೆ? ಅದು ಹೇಗೆ ಸಾಧ್ಯ ? ಮನೆ ಬಿಟ್ಟು ಎಲ್ಲಿಯೂ ಹೋಗುವ ಹಾಗೆ ಇಲ್ವಲ್ಲ?" ಅಂತ ಕೇಳಿದ. 'ಅಯ್ಯೋ ಅದಕ್ಕೇನು ? ಮನಸ್ಸಿದ್ದಲ್ಲಿ ಮಾರ್ಗವಿದೆ " ಅಂದ .  ಅದು ಹೇಗೆ ಅಂತ  ವಿವರಿಸಿದ. ಮನೆಯಲ್ಲಿ ಹಾಕಿಕೊಂಡಿರುವ ಡಿಶ್ ಟೀವಿಯಲ್ಲಿ ಸರ್ಕಾರದ ನಿಯಮಗಳ ಪ್ರಕಾರ ಎಲ್ಲಾ ದೂರದರ್ಶನ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
May 18, 2021
ಬದುಕಿದ್ದ ಸಮಯದಲ್ಲೇ ದಂತಕತೆಯಾಗಿದ್ದ ಸರ್ ಎಂ.ವಿಶ್ವೇಶ್ವರಯ್ಯನವರ ಆತ್ಮಕಥೆ ‘Memoirs of my working life’ ಅನ್ನು ಡಾ. ಗಜಾನನ ಶರ್ಮ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಸರ್ ಎಂವಿ ಅವರ ದೂರದೃಷ್ಟಿತ್ವದ ವ್ಯಕ್ತಿತ್ವ ಮತ್ತು ಸೃಜನಶೀಲತೆಯ ಪರಿಚಯ ಎಲ್ಲರಿಗೂ ಇದೆ. ಅವರ ಜೀವನದ ಬಗ್ಗೆ ಅವರದ್ದೇ ಮಾತುಗಳಲ್ಲಿ ಓದುವ ಬಯಕೆ ಇದ್ದರೆ ಈ ಪುಸ್ತಕವನ್ನು ಓದಬಹುದಾಗಿದೆ. ಸರ್ ಎಂವಿ ಅವರು ಈ ಪುಸ್ತಕವನ್ನು ಬರೆದದ್ದು ೧೯೫೧ರಲ್ಲಿ. ಅವರು ಆ ಸಮಯದಲ್ಲಿ ಪುಸ್ತಕ ಪ್ರಕಟಣೆಯ ಮೊದಲ ಮುದ್ರಣದ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
May 15, 2021
ಪುರಾತನ ಕಾಲದಿಂದ ಚಾಲ್ತಿಯಲ್ಲಿರುವ ವೈದ್ಯಕೀಯ ಪದ್ಧತಿಯೆಂದರೆ ಆಯುರ್ವೇದ ವೈದ್ಯ ಪದ್ಧತಿ. ಋಷಿ ಮುನಿಗಳ ಕಾಲದಿಂದಲೂ ಆಯುರ್ವೇದ ನಮ್ಮ ಪರಂಪರೆಯ ಅಂಗವಾಗಿದೆ. ಡಾ. ರಾಜೀವ್ ಶರ್ಮ ಇವರು ಬರೆದ ಆಂಗ್ಲ ಭಾಷೆಯ ಪುಸ್ತಕವನ್ನು ಬಿ.ಕೆ.ಎಸ್. ಮೂರ್ತಿಯವರು ಕನ್ನಡಕ್ಕೆ ತಂದಿದ್ದಾರೆ. ಈ ಪುಸ್ತಕದ ಬೆನ್ನುಡಿಯಲ್ಲಿ ಬರೆದಂತೆ “ಪ್ರಕೃತಿ ತತ್ವದಲ್ಲಿನ ಪಂಚಭೂತಗಳ ಪ್ರಕ್ರಿಯೆಯಿಂದ ತ್ರಿದೋಷಗಳು ಉಂಟಾಗುತ್ತವೆ. ತ್ರಿದೋಷಗಳೆಂದರೆ ವಾತ, ಪಿತ್ತ, ಶ್ಲೇಷ ದೋಷವೆಂದರೆ ಇವುಗಳಲ್ಲಾಗುವ ಬದಲಾವಣೆ. ಈ ಮೂರು ದೋಷಗಳ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
May 13, 2021
‘ಆಜಾದಿ' ಸ್ವದೇಶ ಚಳುವಳಿಯ ವಿಚಾರ ಧಾರೆ ಎಂಬ ಪುಸ್ತಕವು 'ಆಜಾದಿ ಬಚಾವೋ’ ಆಂದೋಲನದ ನೇತಾರ ರಾಜೀವ್ ದೀಕ್ಷಿತ್ ಅವರ ಬರಹಗಳ ಸಂಗ್ರಹ. ಇವರ ವಿಚಾರಧಾರೆಯನ್ನು ರಾಘವೇಂದ್ರ ಜೋಷಿಯವರು ಕನ್ನಡಕ್ಕೆ ಅನುವಾದ ಮಾಡಿ ‘ಹಾಯ್ ಬೆಂಗಳೂರು' ವಾರ ಪತ್ರಿಕೆಯಲ್ಲಿ ಪ್ರತೀ ವಾರ ಪ್ರಕಟ ಮಾಡುತ್ತಿದ್ದರು. ಹಾಯ್ ಬೆಂಗಳೂರು ಸಂಪಾದಕರಾದ ರವಿ ಬೆಳಗೆರೆಯವರು ತಮ್ಮ ಬೆನ್ನುಡಿಯಲ್ಲಿ ಪುಸ್ತಕದ ಬಗ್ಗೆ ಬರೆದದ್ದು ಹೀಗೆ..."ಈ ದೇಶದ ರೈತ ಬೆಳೆದ ಎಳನೀರು- ಅವನ ಶೃದ್ಧೆ, ಶ್ರಮ, ಬೆವರು, ರಕ್ತ, ಕನಸು, ಆಸೆಗಳ…
ಲೇಖಕರು: Sharada N.
ವಿಧ: ರುಚಿ
May 12, 2021
ಅಕ್ಕಿಯನ್ನು ಬಾಣಲೆಯಲ್ಲಿ ಹಾಕಿ ಹುರಿದು ನಂತರ ತಣಿದ (ಬಿಸಿಯಾರಿದ) ಬಳಿಕ ಅದನ್ನು ಮಿಕ್ಸಿಗೆ ಹಾಕಿ ಹುಡಿ ಮಾಡಬೇಕು. ಬೆಲ್ಲವನ್ನು ಬಾಣಲೆಗೆ ಹಾಕಿ, ಅದಕ್ಕೆ ಅರ್ಧ ಕಪ್ ನೀರು ಸೇರಿಸಿ ಕುದಿಸಬೇಕು. ಆ ಮಿಶ್ರಣ ಪಾಕಕ್ಕೆ ಬಂದ ಬಳಿಕ ತೆಂಗಿನ ಕಾಯಿ ತುರಿಯನ್ನು ಹಾಕಿ ಸ್ವಲ್ಪ ಮಗುಚ ಬೇಕು. ನಂತರ ಮೊದಲು ಹುರಿದಿಟ್ಟ ಕೆಂಪಕ್ಕಿಯ ಹುಡಿಯನ್ನು ಬೆಲ್ಲದ ಪಾಕದ ಮಿಶ್ರಣಕ್ಕೆ ಸೇರಿಸಿ, ಅದಕ್ಕೆ ಏಲಕ್ಕಿ ಹುಡಿಯನ್ನು ಹಾಕಬೇಕು. ಮಿಶ್ರಣವನ್ನು ಸರಿಯಾಗಿ ಬೆರೆಸಿಕೊಂಡು ಸಣ್ಣ ಸಣ್ಣ ಉಂಡೆಯಾಕೃತಿಯಲ್ಲಿ…