ಎಲ್ಲ ಪುಟಗಳು

ಲೇಖಕರು: gvijaihemmaragala
ವಿಧ: ಬ್ಲಾಗ್ ಬರಹ
March 25, 2008
“ ಪ್ರೀತಿ ” ಪ್ರೀತಿಯ..."" “ ಪ್ರೀತಿ ” ಪ್ರೀತಿಯಿಂದ ಪ್ರೀತಿಗಾಗಿ... ಪ್ರೀತಿಗೋಸ್ಕರ... ಪ್ರೀತಿಯನ್ನು... ಪ್ರೀತಿಯಿಂದ , ಪ್ರೀತಿಸುತ್ತಾ ಹೊದಂತೆಲ್ಲಾ.... ಬಿರುಗಾಳಿಗೆ ಸಿಕ್ಕ ಎಲೆಯಂತಾಗಿದ್ದೇನೆ.. ಕಣ್ಣೀರು ಬತ್ತುವಷ್ಟು ಅತ್ತು ಈ ಭೂಮಿ ಬಾಯ್ತೇರೆದು ನುಂಗಬಾರದೆನಿಸಿದೆ. ನನ್ನ ಕನಸುಗಳಿಗೆ ನಿನ್ನೊಡನೆ ಕಳೆದ ಸಮಯಗಳನ್ನು ಕಥೆಗಳನ್ನಾಗಿ ಹೇಳಿ ತಟ್ಟಿ ಮಲಗಿಸುತ್ತೇನೆ...! ನನ್ನ ಜ್ವರದ ಬಾಧೆಗಳನ್ನು…
ವಿಧ: ಬ್ಲಾಗ್ ಬರಹ
March 25, 2008
ಉತ್ತರ: ಇಂಥಾ ರೈತ ಇಂಥಾ ಹಳ್ಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಎಂದು ಎಕ್ಸೆಲ್ ಫ಼ೈಲಿನಲ್ಲಿ ಬರೆದುಕೊಳ್ಳುತ್ತೇನೆ. ರೈತನಾದರೂ ವಾಸಿ. ಅವನ ಸಾವಾದರೂ ನನ್ನ ಕಂಪ್ಯೂಟರ್‌ನಲ್ಲಿ ದಾಖಲಾಗುತ್ತದೆ. ಕೂಲಿ ಕಾರ್ಮಿಕರೋ ರೈತನ ಮನೆಯ ಹೆಣ್ಣುಮಕ್ಕಳೋ ಆತ್ಮಹತ್ಯೆ ಮಾಡಿಕೊಂಡರೆ ಇದೂ ಇಲ್ಲ.
ಲೇಖಕರು: roopablrao
ವಿಧ: ಚರ್ಚೆಯ ವಿಷಯ
March 25, 2008
ಎಲ್ಲರೂ ಟಿ.ವಿಯಲ್ಲಿ ಬರುವ ವೊಡಾಫೋನ್‌ನ ಈ ಜಾಹೀರತನ್ನು ನೋಡಿದ್ದೇವೆ ಅವರು ಏನನ್ನು ಹೇಳಲು ಹೊರಟಿದ್ದಾರೆ ಎಂಬುದು ಅರಿವಾಗಲಿಲ್ಲ. ಅಫ್‌ಕೋರ್ಸ್ ಅದು ಆ ಜಾಹಿರ್ರಾತು ಚಿಕ್ಕ ಮಗುವೊಂದು ಕಭಿ ಕಬಿ ಹಾಡು ಕೇಳುತ್ತಿದ್ದಂತೆ ಅದರ ಮುಂದಿನ ಹಂತಗಳಲ್ಲು ಅದೇ ಹಾಡನ್ನು ಹಾಡುತ್ತಿರುತ್ತದೆ. ಅವನು ಕಾಲೇಜ್ ಹಾಗು ತನ್ನ ಪ್ರೇಮಿಯೊಡನೆ ಕೂಡಾ ಇದೇ ಹಾಡನ್ನು ಹೆಳುತ್ತಾನೆ. ನಂತರ ಅವನ ಮಗ ಕೂಡ ಅದೇ ಹಾಡನ್ನು ಉಲಿಯುತದೆ. ನಂತರ ವೊಡಾಫೋನೆ‌ನಿಂದ ಹೆಚ್ಚು ಹಾಡನ್ನು ಕೇಳಿ ಎಂಬ ವಾಕ್ಯ ನಾನು ಹೇಳಿದ್ದೇನೆಂದರೆ…
ಲೇಖಕರು: vinayaka
ವಿಧ: ಬ್ಲಾಗ್ ಬರಹ
March 25, 2008
ಹಾಯ್ ಪೆದ್ದು, ನೀನು ಬರೆದ ಪತ್ರ ಕುಂಠುತ್ತಾ, ತೆವಳುತ್ತಾ ಬಂದು ನನ್ನ ಕೈ ಸೇರಿತು ಮಾರಾಯ! ನಿನಗೆ ನಾನು ಪೆದ್ದು ಅನ್ನೋದು ಅದಕ್ಕೆ ನೋಡು ಮಾಡೋದೆಲ್ಲಾ ಅನಾಹುತಗಳೇ, ಅಲ್ವೋ ಜೋಯ್ಸರನ್ನ ರಾಜಾರೋಷವಾಗಿ ಬೈದಿದ್ದೀಯಲ್ಲಾ? ಆ ಪತ್ರ ಮೊದ್ಲು ಸೇರಿದ್ದು ಜೋಯ್ಸರ ಕೈಯನ್ನೇ ಗೊತ್ತಾ! ಯಾವಾಗ್ಲೂ ಮಂತ್ರ ಹೇಳೋ, ಜ್ಯೋತಿಷ್ಯ ನೋಡೋ ಜೋಯ್ಸ ಅಂತಾ ನಮ್ಮಪ್ಪನ್ನ ಅಣಗಿಸುತ್ತಾ ಇದ್ದೆಯಲ್ವಾ? ನೋಡು ನಮ್ಮಪ್ಪ ಓದೋಕೇ ಅಂತಾ ಇಸ್ಕೂಲಿಗೆ ಹೋಗದೇ ಮಂತ್ರ ಕಲಿತಿದ್ದು ಇವತ್ತು ಹೆಲ್ಪ್‌ ಆಯಿತು.…
ಲೇಖಕರು: roopablrao
ವಿಧ: ಬ್ಲಾಗ್ ಬರಹ
March 25, 2008
ಇದನ್ನು ನಾನು 8ನೇ ತರಗತಿಯಲ್ಲಿ ಇದ್ದಾಗ ಬರೆದದ್ದು. ಹಾಗೆ ಯಥಾವತ್ತಾಗಿ ಟೈಪಿಸಿದ್ದೇನೆ. ಬಾಲಿಶ ಮನಸು. ಏನು ತೋಚಿತ್ತೋ ಅದನ್ನೆ ಬರೆದಿದ್ದೆ. ಯಾವುದೇ ವ್ಯಾಕರಣವಾಗಲಿ ಅಥವ ರೂಢಿಯನ್ನಾಗಲಿ ಬಳಸಿಕೊಂಡಿರಲಿಲ್ಲ ಇದನ್ನು ಸಿದ್ದಲಿಂಗ ಪಟ್ಟಣಾ ಶೆಟ್ಟಿಯವರಿಗೆ ಒಮ್ಮೆ ತೋರಿಸಿದ್ದೆ. ಒಬ್ಬಳನ್ನ ನಿಭಾಯಿಸೋದೇ ಕಷ್ಟ . ಇನ್ನೂ ನೂರು ಜನ್ರನ್ನು ಗಂಡು ಹೇಗೆ ನಿಭಾಯಿಸುತ್ತಾನೆ ಎಂದು ನಕ್ಕಿದ್ದರು. ಆದರೆ ಆಗಿನ ಪರಿಸ್ಥಿತಿಗೂ ಈಗಿನ ಪರಿಸ್ಥಿತಿಗೂ ನಾವು (ಹೆಂಗಳೆಯರು) ಬಹು ಮುಂದುವರೆದಿದ್ದೇವೆ . ಆದರೂ…
ಲೇಖಕರು: bachi
ವಿಧ: ಬ್ಲಾಗ್ ಬರಹ
March 25, 2008
ಮದುವೆಯಾಗದೆ ಜೊತೆಗೆ ಇರೊದು ಇವಾಗ ಹುಡುಗ-ಹುಡುಗಿಯರಿಗೆ ಕಾಮನ್. ಕಾಮನ ಆಟ ಆಡೊರಿಗೆ ಎಲ್ಲಾ "ಕಾಮನ್"ನೆ! ಅಂದಹಾಗೆ, ನಿನ್ನೆ ಬೆಂಗಳೂರಿನಲ್ಲಿ ಒಬ್ಬ ಸಾಫ್ಟ್ ವೇರ್ ಇಂಜಿನಿಯರ್ ತನ್ನ ಹೆಂಡತಿಯನ್ನ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಇವರು ಸುಮಾರು 3 ವರ್ಷಗಳಿಂದ ಜೊತೇಗೇ ಇದ್ದರಂತೆ, ಮದುವೆಯಾಗದೆ! ಕೆಲದಿನಗಳ ಹಿಂದಷ್ಟೆ ಮದುವೆಯಾದದ್ದು (ಯಾಕೋ?). ಮದುವೆಯಾದ ಸ್ವಲ್ಪ ದಿನಗಳಲ್ಲೆ ಆ ಹುಡುಗಿ ಇನ್ನೊಬ್ಬನ ಜೊತೆ ಸರಸ ಆಡ್ತಾ ಇದ್ದದ್ದು ಗೊತ್ತಾಯಿತು. ಏಕಿರಬಹುದು? ಇವಳಿಗೆ…
ಲೇಖಕರು: cmariejoseph
ವಿಧ: ಚರ್ಚೆಯ ವಿಷಯ
March 25, 2008
ಕವಿ ಗೋಪಾಲಕೃಷ್ಣ ಅಡಿಗರನ್ನು ಕುರಿತು ಯು ಆರ್ ಅನಂತಮೂರ್ತಿಯವರು ಬರೆದಿರುವ ಸಾಹಿತ್ಯಕೃತಿಯ ಹೆಸರೇನು?
ಲೇಖಕರು: ಗಣೇಶ
ವಿಧ: ಬ್ಲಾಗ್ ಬರಹ
March 24, 2008
‘ಪರೀಕ್ಷೆ ಸಮಯ. ಉಳಿದೆಲ್ಲಾ ವಿಷಯ ಬಿಟ್ಟು ಓದಿನ ಕಡೆ ಗಮನವಿರಬೇಕು. ...’ ಕಳೆದ ವರ್ಷ ಇದೇ ತಿಂಗಳ ಶುರುವಿಗೆ ಮಕ್ಕಳಿಗೆ ಬುದ್ಧಿ ಹೇಳಿ ಕೆಲಸಕ್ಕೆ ಹೋದೆ. ಸಂಜೆ ಬರುವಾಗ ಮಕ್ಕಳು ಪುಸ್ತಕ ಬಿಡಿಸಿಟ್ಟು ಕೂತಿದ್ದರು. ಆದರೆ.. ನೋಟ ಮಾತ್ರ ಟಿ.ವಿ.ಯೊಳಗೆ. ಬೇರೆ ದಾರಿಯಿಲ್ಲದೇ ಮನೆಯಾಕೆಯನ್ನು ಒಪ್ಪಿಸಿ ಕೇಬಲ್ ಕನೆಕ್ಷನ್ ತೆಗೆಸಿದೆ. ಮಾರನೇದಿನ ಸಂಜೆ ಬರುವಾಗ ಮಕ್ಕಳು ಕೋಣೆಯಲ್ಲಿ ಓದುತ್ತಾ ಇದ್ದರು.. ವೀಕ್, ಫಿಲ್ಮ್ ಫೇರ್! ನನಗೆ ಟೈಮ್ ಪಾಸ್‌ಗೆ ಓದಲೆಂದು ತಂದಿಟ್ಟಿದ್ದರೆ, ಅವರು ಓದಿ ಟೈಮ್…
ಲೇಖಕರು: ವೈಭವ
ವಿಧ: ಚರ್ಚೆಯ ವಿಷಯ
March 24, 2008
ಈ ಅಜ್ಜಿ ನೋಡಿ ೧೨೫ ಏಡು ಆಗಿದ್ರೂ ಇನ್ನು ಅಕ್ಕಿಯಲ್ಲಿ ಕಲ್ಲು ಹುಡುಕ್ತಾರೆ, ಕೋಳಿಗೆ ಕಾಳು ಹಾಕ್ತಾರಂತೆ. ಹೆಂಗವ್ರೆ ನಮ್ಮ ಹಿರೀಕ್ರು ವಸಿ ನೋಡಿ, ಈಗಿನ ಹೊತ್ತಿನವ್ರಿಗೆ ಹನ್ನೆರಡು ಬೇನೆಗಳು ಇರುತ್ವೆ.:( http://prajavani.net/Content/Mar242008/state2008032372804.asp ರಾಗಿ ಮುದ್ದೇನ ನಾವು(ಕನ್ನಡಿಗರು) ಪೇಟೆಂಟ್ ಮಾಡ್ಕೊಬೇಕು. :)
ಲೇಖಕರು: cmariejoseph
ವಿಧ: ಚರ್ಚೆಯ ವಿಷಯ
March 24, 2008
ಡಿ.ವಿ. ಗುಂಡಪ್ಪನವರ ಮಗ ಪ್ರಸಿದ್ದ ಸಸ್ಯಶಾಸ್ತ್ರಜ್ಞ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ. ಹಸಿರು ಹೊನ್ನು ಎಂಬ ಪ್ರಸಿದ್ಧ ಜೀವವಿಜ್ಞಾನ ಪುಸ್ತಕದ ರಚನಕಾರರಾದ ಅವರ ಹೆಸರು ಬಿ ಜಿ ಎಲ್ ಸ್ವಾಮಿ. ಈ ಬಿ ಜಿ ಎಲ್ ಸ್ವಾಮಿಯವರ ಹೆಸರನ್ನು ವಿಸ್ತರಿಸಿರಿ.