ಎಲ್ಲ ಪುಟಗಳು

ಲೇಖಕರು: nandakishore_bhat
ವಿಧ: ಚರ್ಚೆಯ ವಿಷಯ
April 24, 2008
’ಅಸಾಮಾನ್ಯ’ , ’ಅಸುರ’, ’ಅನಾದಿ’ , ’ಅನಂತ’, ’ಅವ್ಯಯ’, ’ಅಚ್ಯುತ’ - ಇವೆಲ್ಲ ನ+ಸಾಮಾನ್ಯ, ನ+ಅಂತ, ನ+ಸುರ - ಎಂಬ ನಿಷೇಧಾರ್ಥಕ ಅವ್ಯಯ ಸೇರಿ ಉಂಟಾದ ಸಂಸ್ಕ್ರೃತ ಪದಗಳು. ಕನ್ನಡದಲ್ಲಿ ಈ ರೀತಿಯ ಪ್ರಯೋಗ ಇರುವ ಬಗ್ಗೆ ಯಾರಿಗಾದರೂ ಗೊತ್ತೆ? ಇಂಥ ಪ್ರತ್ಯಯ ಇದ್ದಿದ್ದರೆ ಹೊಸ ಶಬ್ದಗಳನ್ನು ರೂಪಿಸಲು ಸುಲಭವಾಗುತ್ತಿತ್ತಲ್ಲವೆ? ಬಿಝಿ ಶಬ್ದಕ್ಕೆ ಕನ್ನಡ ಸಮಾನಾರ್ಥಕವಾಗಿ ’ಬಿಡುವಿಲ್ಲ’ ಎಂಬ ಪದವನ್ನು ನೋಡಿದಾಗ ಈ ಯೋಚನೆ ಬಂದಿತು ನನಗೆ.
ಲೇಖಕರು: nandakishore_bhat
ವಿಧ: ಚರ್ಚೆಯ ವಿಷಯ
April 24, 2008
ದಾಸರ ಹಾಡುಗಳಲ್ಲಿ "ಮನ್ಮಥನ ತಂದೆಯಾದ ವಿಷ್ಣು" ಎನ್ನುವ ಅರ್ಥದಲ್ಲಿ ಕಂತುಪಿತ ಎಂಬ ಬಳಕೆ ಬಹುವಾಗಿ ಬರುತ್ತದೆ. ಜೀವಿಯವರ ನಿಘಂಟಿನಲ್ಲಿ (http://baraha.com/kannada/index.php ) ಕಂತು ಪದಕ್ಕೆ ಉಳಿದ ಅರ್ಥಗಳ ಜೊತೆಗೆ ಮನ್ಮಥ ಎಂಬ ಅರ್ಥವನ್ನೂ ಕೊಟ್ಟಿದ್ದಾರೆ. ಮನ್ಮಥನಿಗೆ "ಕಂತು" ಎಂಬ ಪದವು ಬಂದಿತು ಎಂದು ಯಾರಾದರೂ ತಿಳಿಸುತ್ತೀರಾ? ಈ ಒರೆಯು ಸಂಸ್ಕೃತ ಮೂಲದ್ದಾಗಿ ಕಾಣುತ್ತಿಲ್ಲ.
ಲೇಖಕರು: rameshbalaganchi
ವಿಧ: Basic page
April 24, 2008
ಇದೊಂದು ಸೀಕ್ರೆಟ್ ಭಾಷೆ :) ನಮ್ಮ ಮತ್ತು ನಮ್ಮ ಸಂಬಂಧಿಕ್ರ ಮನೆಗ್ಳಲ್ಲಿ ಸಮಯ-ಸಂದರ್ಭಾನುಸಾರ ಭಾಳ ಬಳ್ಕೆ ಆಗತ್ತೆ. ಇದಕ್ಕೆ ಮಿತಾಕ್ಷರ ಅಂತ ಯಾರು ಹೆಸರು ಕೊಟ್ರೋ ತಿಳೀದು. ಇದು ಅಕ್ಷರಗ್ಳನ್ನ ಕಡ್ಮೆ ಮಾಡಲ್ಲ. ವಿಜ್ಞಾನೇಶ್ವರನ 'ಮಿತಾಕ್ಷರ ಸಂಹಿತೆಗೂ' ಇದಕ್ಕೂ 'ಇಮಾಂ ಸಾಬಿ-ಗೋಕುಲಾಷ್ಟಮಿ' ಸಂಬಂಧ. ಕೆಲವು ಸಂದರ್ಭಗ್ಳಲ್ಲಿ ತುಂಬಾ ಜನದ್ನಡುವೆ ಇದ್ಗೊಂಡೇ ರಹಸ್ಯ ಮಾತಾಡೋ ಸಂದರ್ಭ ಬರತ್ತೆ. ಆಗ ಬಳಕೆಯಾಗೋ ನಮ್ಮ ಆಪ್ತ ಭಾಷೆ ಇದು. ಟೆಲಿಫೋನಲ್ಲಿ ಮಾತಾಡುವಾಗ ಬೇರೆಯೋರು ಕೇಳಿಸ್ಕೋತಾರೇನೋ…
ಲೇಖಕರು: subin
ವಿಧ: Basic page
April 24, 2008
ಕುಪ್ಪಲಿಸಲಾಗದು ಕವನ ಹೃದಯದ ಜೊತೆ ಉಪ್ಪಿಸಿಬಿಟ್ಟು ಮಗುವಂತೆ ಲಾಲಿಸಿ ಬಿಟ್ಟೆ ನಾಲ್ಕು ಪದ ಗೀಚಲು ಹೋಗಿ ನನ್ನನೆ ಮುಡಿಪಿಟ್ಟೆ ಸ್ವಪ್ನದ ಒರೆಡೆಗೆ ಕರೆಯುವ ಈ ಕವನ ಕೊಂದವರುರೆಡೆಗೆ ಅರೆಯದೆ ಬಂದ ಪಯಣ ಬೆಟ್ಟದ ತುದಿಯಲ್ಲಿ ಪುಟ್ಟಿಸಿದ ಮಡಿಲಲ್ಲಿ ಅರಿಯದೆ ಕನ್ನ್ನೊಳಗೆ ನೆನಪಿನ ಸವಿಗಾನ
ಲೇಖಕರು: sushil
ವಿಧ: Basic page
April 24, 2008
In Memoriam ~ Dr. Raj Kumar ~ 1929-2006 ಕನ್ನಡ ಕಣ್ಮಣಿ ಡಾ||ರಾಜ್ ರವರಿಗೆ ಇಂದು ಎಪ್ಪತ್ತೊಂಬತ್ತು ವರ್ಷಗಳು ತುಂಬುತ್ತವೆ.ಅಣ್ಣಾವ್ರಿಗೆ ನಮ್ಮೆಲ್ಲರ ಪರವಾಗಿ ಹುಟ್ಟು ಹಬ್ಬದ ಶುಭಾಶಯಗಳು!! ಇಂದಿನ ದಿನ ಕನ್ನಡಿಗರಿಗೆ ಶುಭ ದಿನ ನಮ್ಮ ಪ್ರೀತಿಯ ರಾಜ್ ಹುಟ್ಟಿದ ದಿನ.ಅವರ ಕೊಡುಗೆ ಅಪಾರ ಆದ್ದರಿಂದಲೇ ಅವರು ನಮಗೆಲ್ಲರಿಗೂ ಹೃದಯದಷ್ಟು ಹತ್ತಿರ. ಅವರ ಸರಳತೆ,ಹೃದಯ ವೈಶಾಲ್ಯತೆ,ಜನರೆಡೆಗೆ ಅವರಿಗಿದ್ದ ಅಪಾರವಾದ ಪ್ರೀತಿ ನಮಗೆಲ್ಲ ಮಾದರಿಯಾಗಿ ಉಳಿದಿವೆ.ಬೇರಾವ ನಟನೂ…
ಲೇಖಕರು: ravim
ವಿಧ: Basic page
April 24, 2008
ಇಲ್ಲಿತನಕ ಇತ್ತು "ಮಾಸ್ತಿ ಕನ್ನಡದ ಆಸ್ತಿ", ಡುಂಡಿರಾಜ್ ಸೇರಿಸಿದರು "ಗೋಕಾಕ್ ಕನ್ನಡದ ಪೀಕಾಕ್", ನಾನು ಜೋಡಿಸ್ತಿದ್ದೇನೆ "ಡಾ||ರಾಜ್ ಕನ್ನಡದ ತಾಜ್" !!
ಲೇಖಕರು: ravim
ವಿಧ: Basic page
April 24, 2008
ಕನ್ನಡಕೊಬ್ಬನೇ " ರಾಜ್ ಕುಮಾರ್ " ಎನ್ನುತ ನಲಿವನೇ ’ರವಿ ಕುಮಾರ್’!!
ಲೇಖಕರು: chiramshi
ವಿಧ: ಚರ್ಚೆಯ ವಿಷಯ
April 24, 2008
ಗೆಳೆಯರೆ.. ನಾನು ದೇಶದ ಹೊರಗಿರುವವನು...ಅಂತರ್ಜಾಲದಲ್ಲಿ ಕನ್ನಡ ರೇಡಿಯೋ ಕೇಳ್ತಾ ಇದ್ದೆ... tv9 ಕನ್ನಡ ವಾಹಿನಿ ಬರ್ತಾಇತ್ತು.. ಆದರೆ ಈಗ ಅದೂ ನಿಂತುಹೋಗಿದೆ.... ನಿಮಗ್ಯಾರಿಗಾದ್ರು.. ಕನ್ನಡ ರೇಡಿಯೋ../FM/ ಬೇರೆ ಯಾವುದಾದ್ರೂ ಮೂಲಗಳ ಮಾಹಿತಿ ಇದ್ರೆ.. ದಯವಿಟ್ಟು ತಿಳಿಸಿ ಧನ್ಯವಾದಗಳು... ಚಿ.ರಂ.ಶಿ
ಲೇಖಕರು: gururajkodkani
ವಿಧ: ಬ್ಲಾಗ್ ಬರಹ
April 24, 2008
ಕುರುಬ ದೇವಸ್ಥಾನದ ಗರ್ಭಗುಡಿಯ ಬಾಗಿಲು ಹಾಕಿಕೊ೦ಡು ಒಳಗೆ ಕುಳಿತಿರುತ್ತಾನೆ.ಅಷ್ಟರಲ್ಲಿ ವಿಹಾರಕ್ಕೆ೦ದು ಹೋದ ದೇವಿ ವಾಪಸು ಬರುತ್ತಾಳೆ.ಗರ್ಭಗುಡಿಯ ಬಾಗಿಲು ಹಾಕಿದ್ದನ್ನು ನೋಡಿ ಕೋಪಗೊ೦ಡ ದೇವಿ,ಬಾಗಿಲು ತೆಗೆಯುವ೦ತೆ ಆದೇಶಿಸುತ್ತಾಳೆ.ತಾನು ಕೇಳಿದ್ದನ್ನು ಕೊಟ್ಟರೇ ಮಾತ್ರ ಬಾಗಿಲು ತೆರೆಯುವುದಾಗಿ ಒಳಗಿನಿ೦ದಲೇ ಕುರುಬ ಹೇಳುತ್ತಾನೆ.ದೇವಿ ಕೊಡುವುದಾಗಿ ವಾಗ್ದಾನ ನೀಡಿದ ನ೦ತರವಷ್ಟೇ ಬಾಗಿಲು ತೆರೆಯುತ್ತಾನೆ ಕುರುಬ. ಪೆದ್ದುಪೆದ್ದಾಗಿ ಹೊರಗೆ ಬರುವ ಕುರುಬ ,ಹೊರಗೆ ನಿ೦ತ ದೇವಿಯನ್ನು ನೋಡಿ…
ಲೇಖಕರು: msprasad
ವಿಧ: Basic page
April 24, 2008
ಹಂಗೇ ಆಫೀಸ್ ಈ-ಮೇಲ್ ಗೆ ಫಾರ್ವರ್ಡ್ ಬಂದಿದ್ದನ್ನ ಇಲ್ಲಿಗೆ ಹಾಕ್ತಾ ಇದೀನಿ. ವಿ.ಸೂ : ೧. ಸಂಭಾಷಣೆಯ ಮಧ್ಯೆ BRACKET ನಲ್ಲಿ ಬರೆದಿರೋದು ಮನಸ್ಸಿನ ಮಾತುಗಳು ೨. ಲವ್ ಮಾಡ್ತಾ ಇರೋರು ಇದನ್ನ ಓದಿ ಬಯ್ಕೊಂಡ್ರೆ ನಾನ್ ಏನೂ ಮಾಡಕ್ಕೆ ಆಗಲ್ಲಾ, ದಯವಿಟ್ಟು ಕ್ಷಮಿಸಿ.... ಶುರು : ಆವಳು ಅವನಿಗೊಂದು ಮಿಸ್ಡ್ ಕಾಲ್ ಕೊಡ್ತಾಳೆ..... ಅವನು ಅವಳಿಗೆ ವಾಪಸ್ ಕಾಲ್ ಮಾಡ್ತಾನೆ ಅವಳು : ಹಲೋ (ಹಲೋ ನಲ್ಲಿ "ಲೋ" ಅನ್ನೋ ಪದವನ್ನ ಸ್ವಲ್ಪ ಉದ್ದಕ್ಕೆ ಎಳೆಯುತ್ತಾ..) ಅವನು : (ಅಯ್ಯೋ... ಇವತ್ತೇನ್…