ಎಲ್ಲ ಪುಟಗಳು

ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
May 29, 2024
‘ನಾವು ನಮ್ಮ ಸಾಧಕರು' ಮಾಲಿಕೆಯ ೧೭ನೇ ಕೃತಿಯಾಗಿ ಹೊರಬಂದಿದೆ ಅನುಸೂಯ ಯತೀಶ್ ಅವರ ‘ರಾಗಂ-ಬರಹ ಬೆರಗು'. ಈ ಕೃತಿಯಲ್ಲಿ ಅನುಸೂಯ ಯತೀಶ್ ಅವರು ‘ರಾಗಂ’ ಅಂದರೆ ಡಾ. ರಾಜಶೇಖರ ಮಠಪತಿ ಎನ್ನುವ ಪ್ರಬುದ್ಧ ಸಂವೇದನಾಶೀಲ ಲೇಖಕರ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಇವರ ಕಥೆ, ಕಾವ್ಯ, ಕಾದಂಬರಿ, ಅಂಕಣ, ಅನುವಾದ, ನಾಟಕ, ಸಂಶೋಧನೆ ಮತ್ತು ವಿಮರ್ಶೆಗಳೆಂದರೆ ಒಂದು ರೀತಿಯ ಬೆರಗು ಎಂದು ಬೆನ್ನುಡಿಯಲ್ಲಿ ಅಭಿಪ್ರಾಯ ಪಟ್ಟಿದ್ದಾರೆ ಲೇಖಕಿಯಾದ ಅನುಸೂಯ ಯತೀಶ್. ಈ ಕೃತಿಗೆ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
May 27, 2024
‘ಮಲೆನಾಡಿನ ರೋಚಕ ಕಥೆಗಳು' ಎಂಬ ಸರಣಿಗಳ ಮೂಲಕ ಪ್ರಸಿದ್ಧಿಯನ್ನು ಪಡೆದಿರುವ ಕಾದಂಬರಿಕಾರರಾದ ಗಿರಿಮನೆ ಶ್ಯಾಮರಾವ್ ಅವರು ಬರೆದ ಮನೋವೈಜ್ಞಾನಿಕ ಕಾದಂಬರಿ ‘ಅನಾಥ ಹಕ್ಕಿಯ ಕೂಗು'. ಮಲೆನಾಡಿನ ರೋಚಕ ಕಥೆಗಳು ಬಹುತೇಕ ಪರಿಸರಕ್ಕೆ ಸಂಬಂಧಿಸಿದ ಕಥನಗಳಾದರೆ ‘ಅನಾಥ ಹಕ್ಕಿಯ ಕೂಗು’ ಎಂಬ ಕೃತಿ ಪತಿ, ಪತ್ನಿ ಮತ್ತು ಮಕ್ಕಳ ಮನಸ್ಸಿನ ತೊಳಲಾಟದ ಬಗ್ಗೆ ಬರೆದಿರುವ ಮನೋವೈಜ್ಞಾನಿಕ ಕಾದಂಬರಿ.  ಗಿರಿಮನೆಯವರೇ ತಮ್ಮ ಬೆನ್ನುಡಿಯಲ್ಲಿ ಬರೆದಿರುವಂತೆ “ ‘ಅನಾಥ ಹಕ್ಕಿಯ ಕೂಗು' ಒಂದು ಮನೋವೈಜ್ಞಾನಿಕ ಕಾದಂಬರಿ…
ಲೇಖಕರು: Kavitha Mahesh
ವಿಧ: ರುಚಿ
May 26, 2024
ತೆಂಗಿನ ಕಾಯಿ, ಮೆಣಸಿನ ಹುಡಿ, ಇಂಗು, ಹುರಿಗಡಲೆ, ಅರಶಿನ ಹಾಗೂ ಜೀರಿಗೆ ಸೇರಿಸಿ ತರಿತರಿಯಾಗಿ ರುಬ್ಬಿ ಬಾಣಲೆಯಲ್ಲಿ ಕಾದ ಎಣ್ಣೆಗೆ ಸಾಸಿವೆ ಒಗ್ಗರಣೆ ಮಾಡಿ. ಒಗ್ಗರಣೆಗೆ ಕತ್ತರಿಸಿದ ಈರುಳ್ಳಿ, ಟೊಮೆಟೋಗಳನ್ನು ಹಾಕಿ ಬಾಡಿಸಿ, ಸ್ವಲ್ಪ ನೀರು , ರುಬ್ಬಿದ ಮಸಾಲೆ, ಬೆಲ್ಲ, ಉಪ್ಪು ಹಾಕಿ ಕುದಿಸಿ. ಒಲೆಯಿಂದ ಕೆಳಗಿರಿಸಿ, ಕೊತ್ತಂಬರಿ ಸೊಪ್ಪು ಸೇರಿಸಿದರೆ, ರುಚಿಯಾದ ಟೊಮೆಟೋ ಗೊಜ್ಜು ಸವಿಯಲು ಸಿದ್ಧ.
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
May 24, 2024
ನಿವೃತ್ತ ಮುಖ್ಯ ಶಿಕ್ಷಕಿ, ಸಾಹಿತಿ ರತ್ನಾ ಕೆ ಭಟ್ ಅವರು ಬರೆದ ಕವನಗಳ ಸಂಕಲನವೇ ‘ಹೊನ್ನರಶ್ಮಿ'. ಕವಯತ್ರಿ ವಿವಿಧ ಸಂದರ್ಭಗಳಲ್ಲಿ ಬರೆದ ಕವನಗಳನ್ನು ಒಟ್ಟು ಸೇರಿಸಿ ‘ಹೊನ್ನರಶ್ಮಿ' ಎನ್ನುವ ಸಂಕಲನ ಹೊರತಂದಿದ್ದಾರೆ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಗಝಲ್ ಕವಿ, ವೈದ್ಯರೂ ಆಗಿರುವ ಡಾ. ಸುರೇಶ ನೆಗಳಗುಳಿ. ಇವರು ತಮ್ಮ ‘ನೆಗಳಗುಳಿ ಮುಮ್ಮಾತುಗಳು' ಇದರಲ್ಲಿ ಬರೆದಂತೆ “ ಹೊನ್ನರಶ್ಮಿ ಕವನ ಸಂಕಲನವು ಹಲವು ವಿಧದ ಕಾವ್ಯ ಪ್ರಕಾರ ಸಹಿತವಾದ ಒಂದು ಕಾವ್ಯ ಗುಚ್ಛ. ಇದರಲ್ಲಿ…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
May 23, 2024
ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಹಲವು ಹಾಡುಗಳು ಹೋರಾಟದ ಕಿಚ್ಚು ಹಚ್ಚಿಸುತ್ತಿದ್ದವು. ಸಭೆಗಳಲ್ಲಿ, ಪ್ರತಿಭಟನೆಗಳಲ್ಲಿ, ಮೆರವಣಿಗೆಗಳಲ್ಲಿ ಜನಸಾಮಾನ್ಯರೂ ಮುಕ್ತಕಂಠದಿಂದ ಹಾಡುತ್ತಿದ್ದ ಗೀತೆಗಳು ನೂರಾರು. ದೀರ್ಘ ಹೋರಾಟದ ಅವಧಿಯಲ್ಲಿ ಜನರ ಉತ್ಸಾಹ ಹೆಚ್ಚುವಂತೆ ಮಾಡುವಲ್ಲಿ ಇಂತಹ ಗೇಯಪದಗಳ ಕೊಡುಗೆಗೆ ಬೆಲೆ ಕಟ್ಟಲಾಗದು. ಕೆಲವು ಗೇಯಪದಗಳಂತೂ ಕೆಲವೇ ನಿಮಿಷಗಳಲ್ಲಿ ಹಾಡುತ್ತಿದ್ದವರ ಮೈಮನಗಳಲ್ಲಿ ರೋಮಾಂಚನ ಹುಟ್ಟಿಸುತ್ತಿದ್ದವು. ಗುಂಪಿನಲ್ಲಿ ಹಾಡುವಾಗಲಂತೂ ಪ್ರತಿಯೊಬ್ಬರಿಗೂ ಹಾಡು…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
May 22, 2024
ಸಾರಿಕ ಶೋಭಾ ವಿನಾಯಕ ಎನ್ನುವ ಕವಯತ್ರಿ ‘ಬೆಳಕ ಬೆನ್ನ ಹಿಂದೆ' ಎನ್ನುವ ಚುಟುಕು ಮತ್ತು ಕವನಗಳ ಸಂಕಲನವನ್ನು ಹೊರತಂದಿದ್ದಾರೆ. ಈ ಕೃತಿಗೆ ಮೈಸೂರು ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಆದ ಡಾ. ಎಸ್ ಎನ್ ಮಂಜುನಾಥ ಇವರು ಬೆನ್ನುಡಿಯನ್ನು ಬರೆದು ಪ್ರೋತ್ಸಾಹ ತುಂಬಿದ್ದಾರೆ. ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪ. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಭಾಗ ನಿಮ್ಮ ಓದಿಗಾಗಿ... “ಸಾರಿಕ ಅವರು ಮೂಲತಃ ದಾವಣಗೆರೆ ಹತ್ತಿರದ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
May 20, 2024
ಸಂತೋಷಕುಮಾರ ಮೆಹೆಂದಳೆ ಅವರ ಕೃತಿಗಳಲ್ಲಿ ಒಂದು ವಿಶೇಷತೆ ಸದಾ ಇರುತ್ತದೆ. ಅವರು ಆಯ್ದುಕೊಳ್ಳುವ ವಿಷಯ ಮತ್ತು ಅದನ್ನು ಪ್ರಸ್ತುತ ಪಡಿಸುವ ರೀತಿ ಎರಡೂ ಅದ್ಭುತ. ಅವರು ಯಾವ ವಿಷಯ ಆಯ್ದುಕೊಂಡರೂ ಅದರ ಬಗ್ಗೆ ಆಳವಾದ ಅಧ್ಯಯನ ಮಾಡುತ್ತಾರೆ. ಅದು ಕಾಶ್ಮೀರದ ಉಗ್ರವಾದವಾಗಲೀ, ಅಘೋರಿಗಳ ವಿಸ್ಮಯ ಲೋಕವಾಗಲೀ, ವೈಜಯಂತಿಪುರದ ರಾಜಮನೆತನವಾಗಲಿ ಅದರ ವಿಷಯ ಸಂಗ್ರಹಣೆಯ ಹಿಂದಿನ ಶ್ರಮ ಮೆಹೆಂದಳೆ ಅವರಿಗೇ ಗೊತ್ತು. ಈ ಕಾರಣದಿಂದಲೇ ಅವರ ಕೃತಿಗಳನ್ನು ಓದುವಾಗ ನಮಗೆ ಖುದ್ದು ಆ ಜಾಗಗಳಲ್ಲಿ ಓಡಾಡಿದ…
ಲೇಖಕರು: Kavitha Mahesh
ವಿಧ: ರುಚಿ
May 19, 2024
ಮಸಾಲೆ ಸಾಮಾಗ್ರಿಗಳನ್ನು ಬೇರೆಬೇರೆಯಾಗಿ ಹುರಿದು ಸೇರಿಸಿ ಹುಡಿ ಮಾಡಿಟ್ಟುಕೊಳ್ಳಿ. ಮೈದಾ, ಕಡಲೆ ಹಾಗೂ ಅಕ್ಕಿ ಹಿಟ್ಟುಗಳಿಗೆ ಅರಶಿನ, ಖಾರದ ಹುಡಿ, ಉಪ್ಪು, ಎರಡು ಚಮಚ ಬಿಸಿ ಎಣ್ಣೆ ಹಾಕಿ ಪೂರಿ ಹದಕ್ಕೆ ಗಟ್ಟಿಯಾಗಿ ಕಲಸಿ. ನಂತರ ಚಪಾತಿಯಂತೆ ಲಟ್ಟಿಸಿ, ಎಣ್ಣೆ ಸವರಿ, ಮಸಾಲೆ ಪುಡಿಯನ್ನು ಸಮನಾಗಿ ಹರಡಿ. ಮಸಾಲೆ ತುಂಬಿದ ಚಪಾತಿಯನ್ನು ಗಟ್ಟಿಯಾಗಿ ಸುರುಳಿಯಂತೆ ಸುತ್ತಿ, ಎರಡು ಇಂಚಿನಷ್ಟು ತುಂಡುಗಳನ್ನಾಗಿ ಕತ್ತರಿಸಿ, ಕಾಯಿಸಿದ ಎಣ್ಣೆಯಲ್ಲಿ ಕರಿದರೆ, ಸ್ವಾದಿಷ್ಟವಾದ ಭಾಕರ್ ವಾಡಿ ರೆಡಿ.
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
May 17, 2024
ಭಾವರೇಖೆ ( ಒಂದು ಅನಂತ ಭಾವ) ನಂಕು ( ನಂದನ ಕುಪ್ಪಳ್ಳಿ) ಅವರ ಕವನಸಂಕಲನವಾಗಿದೆ. ಇದಕ್ಕೆ ಡಾ. ಶಿವಲಿಂಗೇಗೌಡ ಡಿ. ಅವರ ಬೆನ್ನುಡಿ ಬರಹವಿದೆ; ಈ ಕವನಸಂಕಲನದ ಕವಿತೆಗಳು ಪ್ರೀತಿಯ ಧ್ಯಾನದಲ್ಲಿ ಹುಟ್ಟಿದಂತವು. ಪ್ರೀತಿ, ಪ್ರೇಮ, ವಿರಹಗಳ ಸುತ್ತ ಹೆಣೆದಿರುವ ಈ ಕವಿತೆಗಳು ಪ್ರೀತಿಯ ಹುಡುಕಾಟದಲ್ಲಿ ತೊಡಗಿವೆ. ಪ್ರೀತಿಗಾಗಿ ಹಂಬಲಿಸುವ ಕನವರಿಸುವ, ಕಾತರಿಸುವ ಕವಿ ಎಲ್ಲದರಲ್ಲಿಯೂ ಪ್ರೀತಿಯನ್ನಲ್ಲದೆ ಬೇರೇನನ್ನೂ ಕಾಣಲಾರ. ಕೊನೆಗೆ ಪ್ರೀತಿಯನ್ನಲ್ಲದೆ ಬೇರೇನನ್ನೂ ನೀಡಲಾರ. ಮೇಲ್ನೋಟಕ್ಕೆ ಹೆಣ್ಣಿನ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
May 15, 2024
ವೃತ್ತಿಯಲ್ಲಿ ಪತ್ರಕರ್ತರಾಗಿರುವ ಗಿರೀಶ್ ತಾಳಿಕಟ್ಟೆ ಇವರು ಜಗತ್ತಿನ ಪೋಲೀಸ್ ಚರಿತ್ರೆಯಲ್ಲಿ ಇದುವರೆಗೆ ಪತ್ತೆಯಾಗದ ರೋಚಕ, ನಿಗೂಢ ಪ್ರಕರಣಗಳನ್ನು ಪತ್ತೇದಾರಿ ಕಥೆಗಳಂತೆ ಈ ಕೃತಿಯಲ್ಲಿ ಅನಾವರಣ ಮಾಡಿದ್ದಾರೆ. ಇವರ ಬಗ್ಗೆ ಆರಕ್ಷಕ ಲಹರಿ ಮಾಸ ಪತ್ರಿಕೆಯ ಸಂಪಾದಕರೂ, ಗಿರೀಶ್ ತಾಳಿಕಟ್ಟೆ ಅವರ ‘ಬಾಸ್’ ಆಗಿರುವ ನಿವೃತ್ತ ಡಿಐಜಿಪಿ ಡಾ. ಡಿ.ಸಿ.ರಾಜಪ್ಪ ಅವರು ಸೊಗಸಾದ ಬೆನ್ನುಡಿ ಬರೆದಿದ್ದಾರೆ. ನಮ್ಮ ಸಹೋದ್ಯೋಗಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ “ ಪತ್ರಕರ್ತ ಗಿರೀಶ್ ತಾಳಿಕಟ್ಟೆಯವರು…