ವಿಧ: ರುಚಿ
June 16, 2024
ಕಾದ ಎಣ್ಣೆಗೆ ಸಾಸಿವೆ- ಇಂಗಿನ ಒಗ್ಗರಣೆ ಮಾಡಿ. ಹಸಿ ಮೆಣಸಿನ ಕಾಯಿ, ಈರುಳ್ಳಿ ಹಾಕಿ ಬಾಡಿಸಿ, ಬೀನ್ಸ್, ಕ್ಯಾರೆಟ್ ತುರಿ, ಆಲೂಗಡ್ಡೆ ತುರಿಗಳನ್ನು ಹಾಕಿ ಸ್ವಲ್ಪ ನೀರಿನೊಂದಿಗೆ ಬೇಯಿಸಿ. ಈ ಮಿಶ್ರಣಕ್ಕೆ ಉಪ್ಪು, ಗರಮ್ ಮಸಾಲೆ ಹುಡಿ, ಕೊತ್ತಂಬರಿ ಸೊಪ್ಪು ಹಾಕಿ ಕೈಯಾಡಿ ಒಲೆಯಿಂದ ಕೆಳಗಿಡಿಸಿ. ತರಕಾರಿ ಮಿಶ್ರಣ ತಣಿದ ಮೇಲೆ, ಬ್ರೆಡ್ ಚೂರು ಹಾಗೂ ಕಡಲೇ ಬೀಜದ ತರರಿ ಸೇರಿಸಿ, ವಡೆಯಾಕಾರದಲ್ಲಿ ತಟ್ಟಿ, ಚಿರೋಟಿ ರವೆಯಲ್ಲಿ ಹೊರಳಿಸಿ, ಕಾಯಿಸಿ ಎಣ್ಣೆ ಸವರಿದ ತವಾದ ಮೇಲೆ ಎರಡೂ ಬದಿಯನ್ನು ಹೊಂಬಣ್ಣ…
ವಿಧ: ಪುಸ್ತಕ ವಿಮರ್ಶೆ
June 14, 2024
‘ಹ್ಯೂಮರೇ ಅಸೆಟ್ಟು ನಗುವೇ ಪ್ರಾಫಿಟ್ಟು' ಎನ್ನುವ ದಶರಥ ಅವರು ಬಿಸ್ ನೆಸ್ ಸೀಕ್ರೆಟ್ಸ್ ಅನ್ನು ತಿಳಿಸಿಕೊಡುವ ‘ನಗುತಾ ಮಾರಿದೆ ಲಾಭ ಮಾಡಿದೆ' ಎನ್ನುವ ಹೊಸ ಪುಸ್ತಕವೊಂದನ್ನು ಬರೆದು ಪ್ರಕಟಿಸಿದ್ದಾರೆ. ನಿಮಗೆ ವ್ಯವಹಾರ ಮಾಡುವುದರಲ್ಲಿ ಆಸಕ್ತಿ ಇದ್ದರೆ, ಈ ಕೃತಿಯಲ್ಲಿರುವ ಕೆಲವು ಟಿಪ್ಸ್ ಗಳನ್ನು ಬಳಸಿಕೊಳ್ಳಬಹುದು. ತಮ್ಮ ಪುಸ್ತಕದ ಬಗ್ಗೆ ದಶರಥ ಅವರು ಹೇಳುವುದು ಹೀಗೆ…
“ನಮ್ಮ ಊರಲ್ಲಿ ಒಬ್ಬ ಡಾಕ್ಟ್ರು ಮತ್ತು ಒಬ್ಬ ಬಿಸಿನೆಸ್ಮನ್ ಇದ್ದರು. ಅವರಿಬ್ಬರೂ ಭಾರಿ ಗೆಳೆಯರು. ಬಿಸಿನೆಸ್ಮನ್…
ವಿಧ: ಪುಸ್ತಕ ವಿಮರ್ಶೆ
June 12, 2024
‘ಮಲೆನಾಡಿನ ರೋಚಕ ಕಥೆಗಳು' ಖ್ಯಾತಿಯ ಲೇಖಕ ಗಿರಿಮನೆ ಶ್ಯಾಮರಾವ್ ಅವರು ಬರೆದ ಸಣ್ಣ ಕತೆಗಳ ಸಂಗ್ರಹವೇ ‘ಅರ್ಧರಾತ್ರಿಯ ಸಂಭಾಷಣೆ'. ಗಿರಿಮನೆಯವರು ತಮ್ಮ ಮುನ್ನುಡಿ ‘ನಮಸ್ಕಾರ' ದಲ್ಲಿ ಬರೆದಂತೆ “ಮನುಷ್ಯರಲ್ಲಿ ಮುಖ್ಯವಾಗಿ ಮೂರು ವಿಷಯಗಳ ಬಗ್ಗೆ ಅಜ್ಞಾನ ಆವರಿಸಿರುತ್ತದೆ. ದೇವರು, ವಿದ್ಯೆ ಮತ್ತು ಆರೋಗ್ಯ. ಅದನ್ನೇ ಕ್ಯಾಷ್ ಮಾಡಿಕೊಳ್ಳುವ ವರ್ಗ ಕೆಲವರನ್ನು ಮತ್ತೂ ಅಜ್ಞಾನಕ್ಕೆ ತಳ್ಳಿ ತಮ್ಮ ಸ್ವಾರ್ಥ ಸಾಧಿಸಿಕೊಳ್ಳುತ್ತದೆ. ವಿಶೇಷವೆಂದರೆ ಹಾಗೆ ಜನರನ್ನು ಅಜ್ಞಾನಕ್ಕೆ ತಳ್ಳುವವರಿಗೂ ಸತ್ಯ…
ವಿಧ: ಪುಸ್ತಕ ವಿಮರ್ಶೆ
June 10, 2024
ಕನ್ನಡದ ಖ್ಯಾತ ಚಿಂತಕ, ಬರಹಗಾರ ಕೆ ವಿ ತಿರುಮಲೇಶ್ ‘ವಾಚನಶಾಲೆ' ಎನ್ನುವ ಹೊಸ ಕೃತಿಯನ್ನು ಹೊರತಂದಿದ್ದಾರೆ. ಸಾಹಿತ್ಯ, ಸಂಸ್ಕೃತಿ ಮತ್ತು ವಿಚಾರ ಎನ್ನುವ ವಿಷಯವನ್ನು ಒಳಗೊಂಡ ಪುಸ್ತಕ ಸುಂದರ ಮುಖಪುಟದಿಂದ ಗಮನ ಸೆಳೆಯುತ್ತಿದೆ. ಯಾವುದು ಒಳ್ಳೆಯ ಸಾಹಿತ್ಯ, ಯಾವುದು ಸಾಮಾನ್ಯದ್ದು ಎನ್ನುವ ಅಳತೆಗೋಲು ಇಲ್ಲ, ನಿಜ. ಹೆಚ್ಚಿನಮಟ್ಟಿಗೆ ಅದು ನಮ್ಮ ನಮ್ಮ ಅನುಭವಕ್ಕೆ ಬರಬೇಕಾದ ಸಂಗತಿ. ಕೆಲವು ಓದುಗರು ಓದುತ್ತ ಬೆಳೆಯುತ್ತಾರೆ. ಆದರೆ ದಿನವೂ ಪತ್ರಿಕೆಗಳನ್ನಷ್ಟೇ ಓದುವ ವ್ಯಕ್ತಿಗಳ ಕುರಿತು ಯೋಚಿಸಿ…
ವಿಧ: ರುಚಿ
June 10, 2024
ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ, ಸಾಸಿವೆ, ಇಂಗಿನ ಒಗ್ಗರಣೆ ಮಾಡಿ. ಒಗ್ಗರಣೆಗೆ: ಕತ್ತರಿಸಿದ ಈರುಳ್ಳಿ, ಕರಿಬೇವಿನ ಸೊಪ್ಪು, ಹಸಿ ಮೆಣಸಿನಕಾಯಿ, ಟೊಮೆಟೋ, ಕ್ಯಾರೆಟ್, ಶುಂಠಿ ತುರಿ, ಉಪ್ಪು ಹಾಕಿ ಚೆನ್ನಾಗಿ ಬಾಡಿಸಿ. ನಂತರ ಮಂಡಕ್ಕಿ ಹಾಕಿ ಚೆನ್ನಾಗಿ ಕೈಯಾಡಿಸಿ ಒಲೆಯಿಂದ ಕೆಳಗಿಳಿಸಿ ತೆಂಗಿನತುರಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಯಾದ ಮಸಾಲಾ ಮಂಡಕ್ಕಿ ಸವಿಯಲು ಸಿದ್ಧ.
ವಿಧ: ಪುಸ್ತಕ ವಿಮರ್ಶೆ
June 07, 2024
ಕನ್ನಡದ ಖ್ಯಾತ ಅಂಕಣಕಾರ, ಲೇಖಕ ಪ್ರೇಮಶೇಖರ ಇವರು ಬರೆದ ಪುಟ್ಟ ಕಾದಂಬರಿ ‘ಮಳೆ'. ಈ ಕಾದಂಬರಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಅನುರಾಧಾ ಪಿ ಎಸ್ ಇವರು. ಬೆನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಸಾಲುಗಳು ನಿಮ್ಮ ಓದಿಗಾಗಿ...
“ಕಥೆಗಾರ, ಅವನೊಳಗೊಬ್ಬ ಚಿತ್ರಗಾರ. ಅವನ ಕಥೆಗಳ ಅಪೂರ್ವ ಅಭಿಮಾನಿ ಚಾರುಲತಾಳಿಂದ ತನ್ನ ಪೋರ್ಟ್ ರೇಟ್ ಮಾಡಿಕೊಡುವಂತೆ ಬರುವ ಕೋರಿಕೆ. ಅವಳ ವಿಶಿಷ್ಟ ವ್ಯಕ್ತಿತ್ವ ಹಾಗೂ ತನ್ನ ಕಥನಕ್ರಮದ ಮೇಲೆ ಅವಳ ಅಭಿಪ್ರಾಯ, ಸಲಹೆಗಳಿಂದಾದ ಸತ್ಪರಿಣಾಮಗಳ ದೆಸೆಯಿಂದ…
ವಿಧ: ಪುಸ್ತಕ ವಿಮರ್ಶೆ
June 05, 2024
‘ನೀರ ಸುಟ್ಟ ಸೂರ್ಯ’ ದೇವೂ ಮಾಕೊಂಡ ಕವಿತೆಗಳು. ಕೃತಿಯ ಕುರಿತು ಬರೆಯುತ್ತಾ ದೇವು ಮಾಕೊಂಡ ಅವರ ಕವಿತೆಗಳು ತಮ್ಮಷ್ಟಕ್ಕೆ ತಾವು ಬಿಚ್ಚಿಕೊಳ್ಳುತ್ತಾ ಹೋಗುವ ಗುಣವುಳ್ಳವು. ಕವಿತೆಗಳೆಂದರೆ ಗಟ್ಟಿದನಿಯಲ್ಲಿ ಮಾತನಾಡಬೇಕಾದುದಿಲ್ಲ. ಅವುಗಳಿಗೆ ಒಂದು ಒಳದನಿ ಇರುತ್ತದೆ. ಅವು ಒಳಗಿವಿಗಳಿಗೆ ಕೇಳಿದರೆ ಸಾಕು ಎನ್ನುವಂತೆ ದೇವು ಪದ್ಯ ಬರೆಯುತ್ತಾರೆ. ಹಾಗಂತ ಇವು ಸ್ವಗತ ಪದ್ಯಗಳಲ್ಲ. ಇವುಗಳಲ್ಲಿ ಇರುವ ಸೃಜನಶೀಲ ಪಸೆ ಕವಿತೆಗಳಿಗೆ ಮೃದುಲವಾದ ಸ್ಪರ್ಶ ನೀಡುತ್ತವೆ ಎಂದಿದ್ದಾರೆ.
ಜೊತೆಗೆ ದೇವು ಅವರ…
ವಿಧ: ಪುಸ್ತಕ ವಿಮರ್ಶೆ
June 03, 2024
ಪ್ರಚಂಡ ಚೋರ ಪುಸ್ತಕವನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ್ನಂಟಿಸಿದ ಮತ್ತು ಅವರಲ್ಲಿ ಅನೇಕರನ್ನು ಬರಹಗಾರರನ್ನಾಗಿ ರೂಪಿಸಿದ ಖ್ಯಾತಿ ಇವರದ್ದು. ಅಕ್ಷರ ಸೌಲಭ್ಯವಂಚಿತ ಕುಟುಂಬದಿಂದ ಬಂದ ಇವರ ಬರಹಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರತಿಷ್ಟಿತ ಗೌರವ ಪ್ರಶಸ್ತಿ ದೊರೆತಿದೆ. ಇಷ್ಟೊಂದು ಪುಸ್ತಕಗಳನ್ನು ಬರೆದರೂ ಬಡತನದಿಂದಲೇ ಬದುಕಿ…
ವಿಧ: ರುಚಿ
June 02, 2024
ಬ್ರೆಡ್ ಸ್ಲೈಸ್ ಗಳನ್ನು ನೀರಿನಲ್ಲಿ ಅದ್ದಿ ತೆಗೆದು ಒತ್ತಿ ನೀರು ತೆಗೆದು ಹುಡಿ ಮಾಡಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಇಂಗು, ಅರಸಿನ ಹಾಕಿ ಒಗ್ಗರಣೆ ಮಾಡಿ. ಒಗ್ಗರಣೆಗೆ: ಈರುಳ್ಳಿ, ಹಸಿಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ಗರಮ್ ಮಸಾಲಾ ಹಾಕಿ ಚೆನ್ನಾಗಿ ಬಾಡಿಸಿ. ಹುಡಿ ಮಾಡಿದ ಬ್ರೆಡ್ ಸ್ಲೈಸ್ ಗಳಿಗೆ ಬಾಡಿಸಿಟ್ಟ ತರಕಾರಿ, ಜೋಳದ ಹಿಟ್ಟು, ಅಕ್ಕಿ ಹಿಟ್ಟು, ಉಪ್ಪು, ಶುಂಠಿ ಬೆರೆಸಿ ಗಟ್ಟಿಯಾಗಿ ಕಲಸಿಡಿ. ನಿಂಬೆ ಹಣ್ಣಿನ ಗಾತ್ರದ ಮಿಶ್ರಣವನ್ನು ತೆಗೆದುಕೊಂಡು ವಡೆಯ ಆಕಾರದಲ್ಲಿ…
ವಿಧ: ಪುಸ್ತಕ ವಿಮರ್ಶೆ
May 31, 2024
ಕಳೆದ ಹಲವಾರು ವರ್ಷಗಳಿಂದ ಅಮೇರಿಕದಲ್ಲಿರುವ ಬರಹಗಾರ ಮೈ ಶ್ರೀ ನಟರಾಜ ಅವರು ಬರೆದ ವಿಡಂಬನಾತ್ಮಕ ಕವಿತೆಗಳ ಸಂಗ್ರಹವೇ ‘ಸ್ವಾತಂತ್ರ್ಯ ದೇವಿಯ ಕರುಣೆಯ ಕಗ್ಗ’ ಎಂಬ ಕೃತಿ. ಈ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಅಂಕಣಕಾರ, ಲೇಖಕ ಜೋಗಿಯವರು. “ಸರಸಮಯ ಶೈಲಿ, ಲಯಬದ್ಧತೆ, ತುಸು ವ್ಯಂಗ್ಯ ಮತ್ತು ನಿರಾಳ ಕನ್ನಡದ ಈ ಕವಿತೆಗಳು ಕಷ್ಟ ಕೊಡುವುದಿಲ್ಲ. ಕವಿಯ ಸಕಾರಣ ಸಿಟ್ಟನ್ನು ತೋರುವಾಗಲೂ ಈ ಕವಿತೆಗಳು ಗದ್ದಲ ಮಾಡುವುದಿಲ್ಲ. ಅಣಕವಾಡು, ಸಾಂದರ್ಭಿಕ ರಚನೆ, ಪ್ರತಿಕ್ರಿಯೆ - ಹೀಗೆ ಮೂರು…