ವಿಧ: ಬ್ಲಾಗ್ ಬರಹ
September 29, 2007
ದಂಡಿ ಸುಮಾರು ೬-೭ ಶತಮಾನದಲ್ಲಿದ್ದ ಸಂಸ್ಕೃತ ಕವಿ. ಅವನದಾಗಿ ಸಿಕ್ಕಿರುವುದು ಎರಡು ರಚನೆಗಳು. ಒಂದು ದಶಕುಮಾರ ಚರಿತೆ ಅನ್ನುವ ಕಾಲ್ಪನಿಕ ಕಥೆ, ಮತ್ತೆ ಕಾವ್ಯಾದರ್ಶ ಎಂಬ ಕಾವ್ಯ ಲಕ್ಷಣ ಗ್ರಂಥ.
ಕಾವ್ಯಾದರ್ಶದ ಮೊದಲ ಶ್ಲೋಕ ಹೀಗಿದೆ:
ಚತುರ್ಮುಖ ಮುಖಾಂಬೋಜ ವನಹಂಸ ವಧೂರ್ಮಮ |
ಮಾನಸೇ ರಮತಾಂ ದೀರ್ಘಮ್ ಸರ್ವಶುಕ್ಲಾ ಸರಸ್ವತೀ ||
ಇದರ ಸಾರಾಂಶ ಸುಮಾರಾಗಿ ಹೀಗೆ:
ನಾಲ್ಮೊಗದವನ ಮಡದಿ ನೀನೆನ್ನ ಮನದಲಿ
ಹಂಸದೊಲು ಸದಾ ನಲಿ! ಬಿಳಿಮೈಯ ಸರಸ್ವತೀ!
ಸರಸ್ವತಿಯನ್ನು ಸರ್ವಶುಕ್ಲಾ ಎಂದು ಕರೆದಿರುವುದನ್ನು…
ವಿಧ: ಬ್ಲಾಗ್ ಬರಹ
September 28, 2007
ಸೂರ್ಯ ಎಂಬ ಪದವನ್ನೇ ತಗೆದುಕೊಳ್ಳಿ. ರ್ಯ ಕ್ಕೆ ಬದಲಾಗಿ ರ ಕ್ಕೆ ಯ ಒತ್ತು ಕೊಡುವುದು ಸರಿಯಲ್ಲ. ಏಕೆನ್ನುತ್ತೀರಾ- ಸೂರ್ಯ – ಈ ಪದದಲ್ಲಿ ಗಮನಿಸಿದರೆ ನಾವು ಯ ಅಕ್ಷರವನ್ನು ಸಂಪೂರ್ಣವಾಗಿ ಉಚ್ಛರಿಸುತ್ತೇವೆ. ಜೊತೆಗೆ ರ ಅಕ್ಷರವನ್ನು ಅರೆ ಉಚ್ಛರಿಸುತ್ತೇವೆ ಅದಕ್ಕಾಗಿಯೆ ಅರ್ಕಾವೊತ್ತಲ್ಲವೇ...ಶುಭಾಷಯಗಳು ತಪ್ಪು. “ಶುಭಾಶಯಗಳು” ಸರಿ. ನಾವು ಆಶಯ ಎಂದು ಉಚ್ಛರಿಸುವಾಗ ಸ್ವರಲಾಲಿತ್ಯ ಅದೆಷ್ಟು ಮಧುರ! ಆಷಯ ಎನ್ನಲಾರೆವಲ್ಲ ಕರ್ಕಷವಾಗಿ. ಆದ್ದರಿಂದಲೇ ‘ಶುಭಾಶಯ’ ಸರಿ. ಹಾರ್ಧಿಕ…
ವಿಧ: ಬ್ಲಾಗ್ ಬರಹ
September 28, 2007
ಕನ್ನಡ ಸಾಹಿತ್ಯ ಪರಿಷತ್ತು ೧೯೭೭ರಲ್ಲಿ ಪ್ರಕಟಿಸಿದ ಪುಸ್ತಕ. ಇತ್ತೀಚೆಗೆ ಇದು ಮುದ್ರಣದಲ್ಲಿ ಇದೆಯೊ ಇಲ್ಲವೊ ಗೊತ್ತಿಲ್ಲ.
ಇದರಲ್ಲಿರುವ ಸುಭಾಷಿತಗಳನ್ನು ಎಲ್ಲಿಂದ ಹೆಕ್ಕಿ ತೆಗೆದಿದ್ದಾರೆ ಎಂಬುದನ್ನ ಮಾತ್ರ ತಿಳಿಸಿಲ್ಲ. ಕೆಲ ದಿನಗಳಿಂದ ಈ ಪುಸ್ತಕದ ಲಿಂಕ ಕೆಲಸ ಮಾಡ್ತಿಲ್ಲ. ಕೆಲಸ ಮಾಡಲು ಪ್ರಾರಂಭಿಸಿದರೆ ಯಾರದರೂ ಇದರ ಪಿ ಡಿ ಎಫ಼ ಮಾಡಿ.
http://dli.iiit.ac.in/cgi-bin/Browse/scripts/use_scripts/advnew/metainfo.cgi?&barcode=5010010048507
ಇನ್ನು ಕೆಲವು…
ವಿಧ: Basic page
September 28, 2007
ಆಂತರ್ಯದಲ್ಲಿ ಮನಸಿಗೆ ಕಾಡಿತು ನೀರವತೆ…
ಅತಂತ್ರದ ಸಂದಿಗ್ಧತೆಯಲ್ಲಿ ಮುಳುಗಿತು ಜಿಜ್ಞಾಸೆಯ ವಿಮುಖತೆ…
ನಾನು ಯಾರು ಎಂಬುದು ಈಗಲು ತತ್ವ ಪ್ರಶ್ನೆಯ ಸೂಕ್ಷ್ಮತೆ…
ಅರಸುತ ಹೋದರು ಸಿಗದು ಈ ಸತ್ಯದ ಪಾರಮಾರ್ಥಿಕತೆ…..
-- ಸಂದೀಪ ಶರ್ಮ
ವಿಧ: ಬ್ಲಾಗ್ ಬರಹ
September 28, 2007
ರಂಜಾನ್ ಹಬ್ಬದ ಅರ್ಥ ಹುಡುಕುತ್ತಿದ್ದೆ.
ರಂಜಾನಿಗೆ ಅರಾಬಿಕ್ಕಿನ ಮೂಲ ಪದ `ರಮಿದ` ಅಥವಾ `ಅರ್-ರಮದ್`. ಅವುಗಳು ಸೂಚಿಸುವುದು ತೀವ್ರವಾಗಿ ಸುಡುವ ಒಣ ಉರಿಯನ್ನು- ಅದೂ ನೆಲಕ್ಕೆ ಸಂಬಂಧಿಸಿದ್ದು. ಅದೇ ಮೂಲಪದದಿಂದ ಹುಟ್ಟಿದ ರಮ್ದಾ ಪದದ ಅರ್ಥ-ಬಿಸಿಲಿಗೆ ಸುಟ್ಟ ಮರಳು ಎಂದು. ಕೆಲವರು ಹಸಿವಿನಿಂದ ಹೊಟ್ಟೆಯಲ್ಲಿ ಸುಡುವ ಅನುಭವವನ್ನು ಅದು ಸೂಚಿಸುತ್ತದೆ ಎಂದು ಹೇಳಿದರೆ, ಇನ್ನು ಕೆಲವರು ಅದು ಬಿಸಿಲು ನೆಲವನ್ನು ಸುಡುವಂತೆ ಸದ್ಭಾವ ದುಷ್ಟತನವನ್ನು ಸುಟ್ಟುಹಾಕುವುದರ ಸಂಕೇತ ಎನ್ನುತ್ತಾರೆ. ಇನ್ನೂ…
ವಿಧ: ಬ್ಲಾಗ್ ಬರಹ
September 27, 2007
ಕನ್ನಡ ಸಾಹಿತ್ಯದ ಚಿನ್ನದ ಪುಟಗಳು
ಇದೊಂದು ವಿನೂತನ ಪ್ರಯೋಗ. 'ವಿಕ್ರಾಂತ ಕರ್ನಾಟಕ'ದ ಈ ಸಂಚಿಕೆಯಿಂದ ಆರಂಭವಾಗಿರುವ ಆಧುನಿಕ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳ ಹತ್ತು ಅತ್ಯುತ್ತಮಗಳನ್ನು ಆಯುವ ಲೇಖನ ಮಾಲೆಗೆ ಸುವರ್ಣ ಕರ್ನಾಟಕಾಚರಣೆ ಒಂದು ನೆಪವಷ್ಟೆ. ವಿಫುಲವಾಗಿ ಬೆಳೆದಿರುವ ಹೊಸಗನ್ನಡ ಸಾಹಿತ್ಯದಿಂದ ಹೀಗೆ ಹತ್ತತ್ತನ್ನು ಆಯ್ಕೆ ಮಾಡುವುದು ಕಷ್ಟದ ಕೆಲಸವೇ ಸರಿ. ಇದು ಅನಗತ್ಯದ ಕೆಲಸ ಎನ್ನುವವರೂ ಇದ್ದಾರೆ. ಅಷ್ಟೇ ಏಕೆ, ಈ ಸಂಚಿಕೆಯಲ್ಲಿ ಪ್ರಕಟವಾಗಿರುವ ಈ ಲೇಖನ ಮಾಲೆಯ ಮೊದಲ…
ವಿಧ: ಬ್ಲಾಗ್ ಬರಹ
September 27, 2007
ಮುಂಜಾನೆ ಎಂಟಾಗಿರಬಹುದು. ರಾಮ ಹೋದನೆಂದು ಊರಿನಿಂದ ಫೋನ್ ಬಂತು.ಇದು ಒಂದು ಅನೀರೀಕ್ಷಿತ ಘಟನೆಯೆನು ಆಗಿರಲಿಲ್ಲ.9೦ರ ಆಸುಪಾಸಿನಲ್ಲಿ ಜೀವನದ ಕೊನೆಯ ಘಳಿಘೆಗಳನ್ನು ಕಳೆಯುತ್ತಿದ್ದ ರಾಮ, ಶಬರಿ ರಾಮನನ್ನು ಕಾಯ್ದ ಹಾಗೆ ತನ್ನ ಸಾವನ್ನು ಕಾಯುತ್ತಿದ್ದ.ಪ್ರತಿ ಬಾರಿಯು ಊರಿಗೆ ಹೊದಾಗ ನನ್ನೊಡನೆ ಮಾತಾಡುವಾಗ
" ಆಯ್ತು ಗಿರೆಪ್ಪ ಡಣಿ ,ನನ್ನ ಸಂತಿ ಮುಗಿತು , ನಾ ಇನ್ನ ಹೊತಿನಿ " ಎನ್ನುತ್ತಿದ್ದ ರಾಮನನ್ನು ಕೊನೆಯಬಾರಿಗೆ ನೊಡಲು ಊರಿಗೆ ಹೊರಟೆ.
6 ಅಡಿ ಉದ್ದನೆಯ ಆಸಾಮಿಯನ್ನು ಆತನ ಮನೆಯ…
ವಿಧ: Basic page
September 26, 2007
ಮಳೆ ಎಂದರೆ ಕೆಲವರಿಗೆ -
ಹರಳುಗಟ್ಟಿದ ಹಿನ್ನೋಟ,
ಭರವಸೆಯ ಮಿಂಚೋಟ,
ಮಣ್ಣ ಘಮದೊಳ ಹೂದೋಟ.
ಮಳೆ ಎಂದರೆ ಕೆಲವರಿಗೆ -
ಕವಿತೆ ಬರೆಸುವ ಚಿತ್ರ,
ಕಥೆಗೊಂದು ಪಾತ್ರ,
ಪ್ರಣಯದಾಟಕೆ ತಂತ್ರ.
ಮಳೆ ಎಂದರೆ ಕೆಲವರಿಗೆ -
ತೆನೆಯು ತೂಗಿದ ನೆನಪು,
ಕಣಜ ತುಂಬಿದ ಕನಸು,
ಮಣ್ಣ ಮಡಿಲಿನ ಬದುಕು.
ಮಳೆ ಎಂದರೆ ಕೆಲವರಿಗೆ -
ಬಿಡದೇ ಸುರಿವ ಶನಿ.
ಶೀತಹವೆ ಥಂಡಿಗಾಳಿ,
ಹವಾಮಾನ ವರದಿ.
ಮಳೆ ಎಂದರೆ ಮಳೆಗೆ ?
ಇಡಿಯು ಬಿಡಿ ಬಿಡಿಯಾಗಿ
ಗಮ್ಯದೆಡೆಗಿನ ಯಾನ.
ಹನಿ ಹನಿಯ ಎದೆಯಲ್ಲೂ
ಅದ್ವೈತ ಧ್ಯಾನ.
ವಿಧ: ಬ್ಲಾಗ್ ಬರಹ
September 26, 2007
http://dli.iiit.ac.in ತಾಣದಲ್ಲಿ ಪುಸ್ತಕದ ಹೆಸರುಗಳು ಈಗ ಕನ್ನಡದಲ್ಲಿ ಇವೆ . ತಪ್ಪು ತಪ್ಪಾಗಿದ್ದರೂ ಮೊದಲಿಗಿಂತ ಅನುಕೂಲಕರ ;
ನೋಡಿದ್ದೀರಾ ?
ವಿಧ: ಬ್ಲಾಗ್ ಬರಹ
September 26, 2007
http://dli.iiit.ac.in ತಾಣದಲ್ಲಿ ಪುಸ್ತಕದ ಹೆಸರುಗಳು ಈಗ ಕನ್ನಡದಲ್ಲಿ ಇವೆ . ತಪ್ಪು ತಪ್ಪಾಗಿದ್ದರೂ ಮೊದಲಿಗಿಂತ ಅನುಕೂಲಕರ ;
ನೋಡಿದ್ದೀರಾ ?