ವಿಧ: ಬ್ಲಾಗ್ ಬರಹ
May 25, 2006
ನಮ್ಮ ದೇಶದಲ್ಲಿ ಬಹಳವಾಗಿ ಉಕ್ತವಾಗುವ ಮಾತೆಂದರೆ 'ಮೇರಾ ಭಾರತ್ ಮಹಾನ್'. ನಾನು ಅದಕ್ಕೆ ಇನ್ನೊಂದನ್ನು ಸೇರಿಸಬಯಸುವೆ, ಮೇರಾ ಸೋಪ್ ಹಮಾಮ್. ಏಕೆಂದರೆ ಈ ಎರಡೂ ಚಿರಂಜೀವಿಗಳು (ನನ್ನ ಮಟ್ಟಿಗೆ). ಸ್ವತಂತ್ರ ಬಂದು ೬೦ ವರುಷಗಳಾಗುತ್ತಿದ್ದರೂ ನಮ್ಮ ದೇಶದ ಜನಸಂಖ್ಯೆ ಒಂದೇ ಮೇಲೇರುತ್ತಿರುವುದು. ಇದೊಂದು ದೃಷ್ಟಿಯಿಂದ ನಮ್ಮ ದೇಶ ಎಂದಿಗೂ ಮಹಾನ್. ಹಾಗೆಯೇ ಹಮಾಮ್ ಸೋಪನ್ನು ಉಪಯೋಗಿಸುವವರು ಅದನ್ನೇ ಉಪಯೋಗಿಸುತ್ತಿದ್ದಾರೆ (ನನ್ನಂತಹವರು - ಅಪ್ಪ ಹಾಕಿದ ಹಳೆಯ ಆಲದ ಮರಕ್ಕೇ ಜೋತು ಬೀಳುವಂತಹವರು…
ವಿಧ: Basic page
May 25, 2006
ಸಂಪದದ ಗೆಳೆಯರಿಗಾಗಿ ಈ ಬಾರಿ ಕನ್ನಡದ ಜನಪ್ರಿಯ, ಸೃಜನಶೀಲ ನಿರ್ದೇಶಕ ಟಿ ಎನ್ ಸೀತಾರಾಂರವರ ಸಂದರ್ಶನ. ರಂಗಭೂಮಿ ಹಿನ್ನೆಲೆಯಿಂದ ಬಂದ ಸ್ಪಷ್ಟ ರಾಜಕೀಯ ನಿಲುವುಗಳನ್ನು ಹೊಂದಿರುವ ಸೀತಾರಾಂ ಒಂದು ಸುಖೀ ಸಮಾಜದ ಕನಸನ್ನು ಹೊತ್ತವರು. ಅವರ ಈ ಆದರ್ಶವೇ ಅವರ ಕೃತಿಗಳ ಸಾಮಾಜಿಕ ಕಾಳಜಿಗಳ ಪ್ರೇರಣೆ. ರಂಗಭೂಮಿಯಲ್ಲಿ ತಮ್ಮ ಪ್ರತಿಭೆಯನ್ನು ಮೆರೆದ ಅವರು ಮಾಯಾಮೃಗ, ಮನ್ವಂತರಗಳಂಥ ಯಶಸ್ವೀ ಧಾರಾವಾಹಿಗಳಲ್ಲಿ ಕಿರುತೆರೆಗೂ ಸೀತಾರಾಂ ಶೈಲಿಯನ್ನು ಪರಿಚಿಯಿಸಿದರು. ಗಂಭೀರ ರಂಗಪ್ರಯೋಗಗಳಲ್ಲಿ…
ವಿಧ: Basic page
May 25, 2006
೧. ಊರಿಗೆ ಬಂದವಳು ನೀರಿಗೆ ಬರದೆ ಇರುತ್ತಾಳೆಯೆ?
೨. ಮನೆಗೆ ಮಾರಿ ಊರಿಗೆ ಉಪಕಾರಿ.
೩. ಯಾರದೊ ದುಡ್ಡು ಎಲ್ಲಮ್ಮನ ಜಾತ್ರೆ.
೪. ಓಡ್ಹೋಗುವನ ಚಡ್ಡಿ ಹರಕಂಡಷ್ಟೆ ಲಾಭ.
೫. ಬರಗಾಲದಲ್ಲಿ ಅಧಿಕಮಾಸ ಬಂದ ಹಾಗೆ.
೬. ತಾನೂ ತಿನ್ನ, ಪರರಿಗೂ ಕೊಡ.
೭. ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು.
೮. ಅಂಗೈ ಹುಣ್ಣಿಗೆ ಕನ್ನಡಿ ಬೇಕೆ?
೯. ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದ.
೧೦. ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ.
ವಿಧ: Basic page
May 25, 2006
ಚಲನೆ. ಚಲನೆ ಚಲನೆ ಚಲನೆ ಚಲನೆ, ನಿರಂತರದ ಜಗದ ಚಲನೆ, ಅಚಲನಾದ ಹರಿಯಲ್ಲಿಗೆ ಚರಾಚರದ ಚಲನೆ.//ಪ//.
ಆಕಾಶದಿ ಹುಟ್ಟಿ ಬಂದ ಶಬ್ದ ತರಂಗಗಳ ಹೊತ್ತ ಗಾಳಿಯಿಂದ ಜ್ವಲಿಸುತಿರುವ ಅಗ್ನಿ ನಡೆಸೊ ನೀರಚಕ್ರ ಮಣ್ಣ…
ವಿಧ: Basic page
May 25, 2006
೧. ನಾಯಿಗೆ ಹೇಳಿದರೆ ನಾಯಿ ತನ್ನ ಬಾಲಕ್ಕೆ ಹೇಳಿತು.
೨. ದಾನಕ್ಕೆ ಕೊಟ್ಟ ಎಮ್ಮೆಯ ಹಲ್ಲು ಎಣಿಸಿದರು.
೩. ಬಂದಷ್ಟು ಬಂತು ಬರಡೆಮ್ಮೆ ಹಾಲು.
೪. ಮೂರು ಕೋಟಿ ಜನ ಸೇರಲ್ಲಿಲ್ಲ ಮೈಲಾರಲಿಂಗನ ಜಾತ್ರೆ ನಡೀಲ್ಲಿಲ್ಲ.
೫. ಮೂರೂ ಬಿಟ್ಟವರು ಊರಿಗೆ ದೊಡ್ಡವರು.
೬. ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೀತು.
೭. ಎಮ್ಮೆ ತಪ್ಪಿದರೆ ಕಪ್ಪೆ ಹೊಂಡ.
೮. ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣಸಂಕಟ.
೯. ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ.
೧೦. ಕೋತಿ ತಾನು ಕೆಡೋದಲ್ಲದೆ ವನನೆಲ್ಲ ಕೆಡಿಸಿತ್ತು.…
ವಿಧ: ಬ್ಲಾಗ್ ಬರಹ
May 25, 2006
ನನ್ನ ಭಾಗ್ಯ.
ದೇವ್ರಾಣೆ ನಿನ್ನಂಥ ಮಡದಿ ಸಿಗೋಲ್ಲಸಿಕ್ಕಾಗ ನಿನ್ಬೆಲೆ ಗೊತ್ತೇ ಇರಲಿಲ್ಲ/ನನ್ನಾಣೆ ನನ್ಬೆಲೆ ನಾಲ್ಕಾಣೆ ಇಲ್ಲನಿನ್ನಾಣೆ ನನ್ಮಾತು ನಂಬು ಸುಳ್ಳಲ್ಲ//
ಕಲಿಕೆಯ ವಯಸಲಿ ಕುಲಗಳ ತೊರೆದುಹಿರಿಯರನೆದುರಿಸಿ ನನ್ನಲಿ ಬೆರೆತು/ಬಂಗಾರವಿಲ್ಲದ ಬಡತನದಲ್ಲಿಬಂಗಾರವಾಗಿ ನನ್ನನೀ ಸೇರಿದೆ//
ಹುಟ್ಟೂರು ಬೆಳೆದೂರು ಕಲೆತೂರು ತೊರೆದುಹೊರನಾಡ ಬಂದು ನನ್ನೊಡನೆ ನಿಂತೆ/ಆಶಾಶೂನ್ಯದ ನಿನ್ನೊಡಗೂಡಿ ಭವಭಾರದಲೂ ನಾ ನಾಕವ ಕಂಡೆ//
ಸಿಂಧೂರ ಶಿವಗಂಗ ರೋಹಿಣಿ ಪ್ರಣತಿಶಿವ ನಮಗೆ ಕೊಡುತಿರುವ ಸಂಹಿತೆ ಸೇರಿ/…
ವಿಧ: Basic page
May 25, 2006
ಪಾಪದ ಬೀಪಿ.
ಬೀಪಿ ಬಂತು ಪಾಪಿಗೆದೀಪು ಹೊದ ತೋಪಿಗೆಪಾಪ ಬೇಡ ಬೀಪಿ ಬೇಡಗೋಪಿ ಬೇಕು ದೀಪುಗೆ.
ತಾಪದಿಂದ ಬೀಪಿಯುತಪಗಳಿಂದ ರೂಪವುಆಶೆಬೇಡ ಕೋಪಬೇಡತಪವು ಬೇಕು ದೀಪುಗೆ.
ಆರರಿಂದ ಧುಃಖವುಮೂರರಿಂದ ಕಷ್ಠವುಆರು ಬೇಡ ಮೂರು ಬೇಡಮುರಾರಿ ಬೇಕು ದೀಪುಗೆ.
ಬಯವು ಬೇಕು ನಾಶಕೆಬಯದ ನಾಶ ಜ್ಜ್ನಾನಕೆಬಯದ ಅಂದಕಾರ ಬೇಡಭೆಳಕು ಬೇಕು ದೀಪುಗೆ.
ಬೀಪಿ ಹೋಯ್ತು ದೀಪುಗೆಕೋಪ ಹೋಯ್ತು ತೋಪಿಗೆಯಮ ನಿಯಮ ತಪಗಳಿಂದಪ್ರದೀಪನಾದ ಪಾಪುಗೆ.
ಆಹೋರಾತ್ರ.
೧೬:೨೮೨೮/೦೩/೦೬.
ವಿಧ: Basic page
May 24, 2006
೧. ನಾಯಿಗೆ ಹೇಳಿದರೆ ನಾಯಿ ತನ್ನ ಬಾಲಕ್ಕೆ ಹೇಳಿತು.
೨. ದಾನಕ್ಕೆ ಕೊಟ್ಟ ಎಮ್ಮೆಯ ಹಲ್ಲು ಎಣಿಸಿದರು.
೩. ಬಂದಷ್ಟು ಬಂತು ಬರಡೆಮ್ಮೆ ಹಾಲು.
೪. ಮೂರು ಕೋಟಿ ಜನ ಸೇರಲ್ಲಿಲ್ಲ ಮೈಲಾರಲಿಂಗನ ಜಾತ್ರೆ ನಡೀಲ್ಲಿಲ್ಲ.
೫. ಮೂರೂ ಬಿಟ್ಟವರು ಊರಿಗೆ ದೊಡ್ಡವರು.
೬. ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೀತು.
೭. ಎಮ್ಮೆ ತಪ್ಪಿದರೆ ಕಪ್ಪೆ ಹೊಂಡ.
೮. ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣಸಂಕಟ.
೯. ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ.
೧೦. ಕೋತಿ ತಾನು ಕೆಡೋದಲ್ಲದೆ…
ವಿಧ: ಬ್ಲಾಗ್ ಬರಹ
May 24, 2006
ಸದ್ಯದಲ್ಲಿ ಕನ್ನಡ ಸಾಹಿತ್ಯ ಡಾಟ್ ಕಾಮ್ನಲ್ಲಿನ ಲೇಖನಗಳಲ್ಲಿನ ತಪ್ಪುಗಳನ್ನು ತಿದ್ದುತ್ತಿದ್ದೇನೆ. ಹೀಗಾಗಿ ಬ್ಲಾಗ್ ಬರೆದಿಲ್ಲ . ಜತೆ ಜತೆಗೇ ಪದಪರೀಕ್ಷಕ ( ಸ್ಪೆಲ್ಲ್ ಚೆಕ್ಕರ್) ಗೆ ಶಬ್ದಗಳನ್ನು ಸೇರಿಸುತ್ತಿದ್ದೇನೆ. . ಈಗಾಗಲೇ ಐವತ್ತು ಸಾವಿರಕ್ಕೂ ಹೆಚ್ಚು ಪದಗಳು ಸೇರ್ಪಡೆಯಾಗಿವೆ . ನಾನು ಸೋಲುವೆನೋ ; ಬೇಸತ್ತು ಕೈ ಬಿಡುವೆನೋ ; ಅಥವಾ ಕಂಪ್ಯೂಟರ್ ಸೋಲುವದೋ ನೋಡೋಣ ; ಏನೇ ಆಗಲಿ ನಿಮಗೆಲ್ಲ ತಿಳಿಸುವೆ ;
ವಿಧ: Basic page
May 23, 2006
ಭೂಮಿ ತಾಯಿ
ಗಂಗ:- ಅಮ್ಮ ಅಮ್ಮ ಹೇಳಮ್ಮ, ಭೂಮಿ ಹೇಗೆ ನಮ್ಮಮ್ಮ?
ಅಮ್ಮ:- ಕಣ್ಣ ತೆರೆದು ನೋಡಮ್ಮ, ಪುಟ್ಟ ಕಂದ ಗಂಗಮ್ಮ, ನಮ್ಮೆಲ್ಲರ ಅಮ್ಮ ಇಳೆಯಮ್ಮ, ಸೀತಮ್ಮಮ್ಮನ ಹೆತ್ತಮ್ಮ.//೧//.
ಗಂಗ:- ಕೈಯಿಲ್ಲಾ, ಕಾಲಿಲ್ಲ, ಇವಳ್ಯ್ಹಾಗಾದಳು ನಮ್ಮಮ್ಮ?
ಅಮ್ಮ:- ಸೂರ್ಯನ ಸುತ್ತ ಸುತ್ತಿಸುತ್ತಿ, ಕಾಲು ಕಳೆದುಕೊಂಡಳಮ್ಮ. ತಿಂಗಳನೊಡನೆ ಆಡಿ ಆಡಿ ಕೈಗಳ ಕಳೆದುಕೊಂಡಳಮ್ಮ.//೨…