ಎಲ್ಲ ಪುಟಗಳು

ವಿಧ: ಬ್ಲಾಗ್ ಬರಹ
February 16, 2006
ಸ್ನೇಹಿತರೇ, ಈ ತಿಂಗಳ ಮೂರನೇ ಭಾನುವಾರ ವಿಚಾರಗೋಷ್ಠಿ ಹಾಗು ಚರ್ಚೆಯನ್ನು ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯು ಆಯುಜಿಸುತ್ತಿದ್ದು, ಎಲ್ಲರಿಗೂ ಆದರದ ಸ್ವಾಗತ. ಕಾರ್ಯಕ್ರಮದ  ವಿವರಗಳು:  ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ ನಂ.36 ಬಿ.ವಿ. ಕಾರಂತ್ ರಸ್ತೆ, 9ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು - 560 070 ಸಹಯೋಗ: ಮಲ್ಲಿಗೆ ಮಾಸಪತ್ರಿಕೆ ಹಾಗು ಸಂಚಯ-ಅಭಿನವ ಸಾಹಿತ್ಯ ಪತ್ರಿಕಾ ಬಳಗ ದಿವಂಗತ ಕೆ.ವಿ. ಸುಬ್ಬಣ್ಣನವರ ನೆನಪಿನಲ್ಲಿ ‘ಇಂದಿನ ನಮ್ಮ ತವಕ…
ಲೇಖಕರು: gkaginele
ವಿಧ: ಬ್ಲಾಗ್ ಬರಹ
February 16, 2006
ನನ್ನ ಅಧಿಕೃತ, ಅಂದರೆ ಅಿಶಿಯಲ್ ಹುಟ್ಟುಹಬ್ಬ ಜನವರಿ ೨೨. ನನ್ನ ಎಲಿಮೆಂಟರಿ ಸ್ಕೂಲಿನ ಟೀಸಿ, ಎಸ್ಸೆಸೆಲ್ಸಿ ಮಾರ್ಕ್ಸ್‌ಕಾರ್ಡು, ಕಾಲೇಜಿನ ಡಿಗ್ರೀ ಸರ್ಟಿಫ಼ಿಕೇಟು, ಸೈಟಿನ ರಿಜಿಸ್ಟ್ರಿ, ಪಾಸ್‌ಪೋರ್ಟ್, ವೀಸಾ, ಕೆಲಸಕ್ಕೆ ಸೇರುವ ದಿನ ಮತ್ತು ಜತೆಗೆ ಕೆಲಸ ಮಾಡುವ ಎಲ್ಲರಲ್ಲೂ ಅಂದು ನಾನು ಘಟಿಸಿದ ದಿನ. ಅಧಿಕೃತೋದ್ಭವ. ಆದರೆ ಅಮ್ಮ ಎಣ್ಣೆ ನೀರೆರೆರೆದು, ಕೊಬ್ಬರಿಮಿಠಾಯಿ ಮಾಡಿ ಹೊಸ ಅಂಗಿ ಹೊಲೆಸಿ, ಉಪನಯನ ಮಾಡಿ, ನಂತರ ಪೂರ್ವಿಯ ಜತೆಗೆ ಮದುವೆ ನಿಶ್ಚಯವಾದಾಗ ಆಮಂತ್ರಣ ಪತ್ರಿಕೆಯಲ್ಲಿ…
ಲೇಖಕರು: tvsrinivas41
ವಿಧ: ಬ್ಲಾಗ್ ಬರಹ
February 15, 2006
ಈ ಭಾಗದಲ್ಲಿ ನನ್ನಲ್ಲಿ ಮಾನವೀಯತೆಯನ್ನು ರೂಪಿಸಿದ ಪುತ್ತೂರಾಯರು, ಬಾಬುರವಿಶಂಕರರ ಬಗ್ಗೆ ಒಂದೆರಡು ಮಾತುಗಳನ್ನು ಹೇಳುವೆ. ಸೀತಾರಾಮ ಪುತ್ತೂರಾಯರು ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಆರ್ಥಿಕ ಸಹಾಯಕರಾಗಿ ಕೆಲಸ ಮಾದುತ್ತಿದ್ದರು. ೧೯೬೪-೬೫ ರ ಸುಮಾರಿನಲ್ಲಿ ಪದವೀಧರರಾಗಿ ಬ್ಯಾಂಕಿಗೆ ಸೇರಿದ್ದರು. ಆಗಿನ ಕಾಲದಲ್ಲಿ ಸಾಮಾನ್ಯವಾಗಿ ಪದವೀಧರರಾಗಿದ್ದವರೆಲ್ಲರೂ ಅಧಿಕಾರಿಗಳಾಗಿ ಸೇರುತ್ತಿದ್ದರು. ಇವರು ಆಗಲೇ ಭಾರತೀಯ ಮಝ್ದೂರ್ ಸಂಘದ ಸಕ್ರಿಯ ಕಾರ್ಯಕರ್ತರಾಗಿದ್ದರು. ಭಾರತೀಯ ಮಝ್ದೂರ್…
ಲೇಖಕರು: sinchanabhat
ವಿಧ: Basic page
February 15, 2006
ಮರೆಗೆ ನಿಂತು ಕಾಯುತಿರುವ ಕರಿಯ ನೆರಳು ಯಾವುದು? ಸೋಜಿಗವಾ ಸರಿಸಿ ನಿಂತ ವೈಚಿತ್ರ್ಯ ಇದಾವುದು? ಸುತ್ತ ಚಿಗುರಿದಸುರಲಿ ಚಿಟ್ಟೆ ಪಕ್ಷಿ ಧನಿಯಲಿ ಅಲೆ ಅಲೆ ಯಾಗಿ ಸಾಗುತಿರುವ ಜಲಧಾರೆಯ ಪರಿಯಲಿ.. ಹುಟ್ಟು ಸಾವ ನಡುವಲಿ ಅಡಗಿಕುಳಿತ ಬಾಳಲಿ ಪ್ರತಿ ಹೆಜ್ಜೆಗು ಕಾವಲಾಗಿ ಕಾದ ನೆರಳು ಯಾವುದು? ಒಮ್ಮೆನೋಡುವಾತುರಾ ಧೈನ್ಯತೆಯಾ ಮಂದಿರಾ ಭಕ್ತಿ ಬಾವ ಭರಿಸು ನೀ ಚಿತ್ತ ಸುಧೆಯ ಹರಸು ನೀ..
ಲೇಖಕರು: shreekant.mishrikoti
ವಿಧ: Basic page
February 15, 2006
ತೆರೆಯೋ ಬ್ರೌಸರ್ರು, ಜಾಲ ಜಾಲಾಡುವೆ, ತೆರೆಯೋ ಬ್ರೌಸರನು | ಬ್ರಾಡ್‍ಬ್ಯಾಂಡು ಸಂಪರ್ಕ ಕಡಿಮೇ ಕಾಸು! ತೆರೆಯೋ ಬ್ರೌಸರನು || ಮಜಾವಾಣಿ ಓದಿ ಮಜವನ್ನು ಪಡೆವೆ , ತೆರೆಯೋ ಬ್ರೌಸರನು | ಸಂಪದಕೆ ಹೋಗಿ ಸಂತೋಷ ಪಟ್ಟೇನು , ತೆರೆಯೋ ಬ್ರೌಸರನು || ಉಧ್ಭವದಲ್ಲಿ ಸಿರಿಸ್ವರವ ಕೇಳೇನು , ತೆರೆಯೋ ಬ್ರೌಸರನು | 'ನೂರು ವರ್ಷದ ಏಕಾಂತ ' ಓದೇನು , ತೆರೆಯೋ ಬ್ರೌಸರನು || ಮುದ್ದಾದ ಬರಹ ಮುದದಿಂದ ಬರೆದೇನು , ತೆರೆಯೋ ಬ್ರೌಸರನು | ಅಳಿಲಿನ ಸೇವೆ ಕನ್ನಡಕೆ ಮಾಡೇನು , ತೆರೆಯೋ ಬ್ರೌಸರನು ||
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
February 14, 2006
'ಚಿಗುರಿದ ಕನಸು' ಚಿತ್ರದಲ್ಲ ಈ ಹಾಡು ಬಹಳ ಕುತೂಹಲಕರವಾಗಿದೆ . ನಾಯಕಿ ಹಿಂದಿ ಭಾಷಿಕಳು , ನಾಯಕ ಕನ್ನಡಿಗ . ಇವ್ರ ಈ ಯುಗಳ ಪ್ರೇಮ ಗೀತೆ ಎರಡು ಭಾಷೆಯ ಸಾಲುಗಳಿಂದ ಕೂಡಿದ್ದರೂ ತುಂಬ ಸಹಜವಾಗಿ ಹಾಲು ಜೇನಿನಂತೆ ಬೆರೆತುಕೊಂಡಿದೆ. ನೀಲೇ ಗಗನ್ ಕೇ ತಲೇ ಶುಭ ಕೋರಿದೆ ಕೋಗಿಲೆ! ಛಾಯೀ ಹೈ ಸಾವನ್ ಕೀ ಘಟಾ , ಮನಸಿಲ್ಲಿ ಗಾಳೀಪಟಾ! ಕನ್ನಡ ಜನರ ದ್ವಿಭಾಷಿಕತೆಯ ಕುರಿತಾದ ಒಂದು ಪುಸ್ತಕ ಬಂದಿದೆ ಎಂದು ಓದಿದ್ದೇನೆ. ಆದರೆ ಅದನ್ನು ಓದಿಲ್ಲ. ಏನೇ ಇರಲಿ , ಈ ಹಾಡು ನೀವು ಈ ಹಾಡನ್ನು…
ಲೇಖಕರು: shreekant.mishrikoti
ವಿಧ: Basic page
February 14, 2006
೧೦. ಪರದು:ಖಂ ಸಮಾಕರ್ಣ್ಯ ಸ್ವಭಾವೋ ಸರಲೋ ಜನಾ: ಉಪಕಾರಾಸಮರ್ಥಾತ್ವಾತ್ ಪ್ರಾಪ್ನೋತಿ ಹೃದಯವ್ಯಥಾಂ || ಸ್ವಭಾವದಿಂದ ಸರಳರಾದ ಸಜ್ಜನರು ಹೆರವರ ದು:ಖ ಕಂಡು ಉಪಕಾರಮಾಡಲು ಆಗದಿದ್ದ ಸಂದರ್ಭದಲ್ಲಿ ಮನಸ್ಸಿನಲ್ಲಿ ಕೊರಗುವರು. ೧೧. ಅಯಂ ನಿಜ: ಪರೋವೇತ್ತಿ ಗಣನಾ ಲಘುಚೇತಸಾಂ| ಉದಾರಚರಿತಾನಾಂ ತು ವಸುಧೈವ ಕುಟುಂಬಕಂ || ಇವನು ನಮ್ಮವನು , ಇವನು ಪರ್ಕೀಯನು ಎಂದು ಸಂಕುಚಿತ ಮನಸ್ಸಿನವರು ತಿಳಿಯುತ್ತಾರೆ . ಉದಾತ್ತ ನಡತೆಯುಳ್ಳವರಿಗೆ ಇಡೀ ಜಗತ್ತೇ ಒಂದು ಕುಟುಂಬ. ೧೨. ಸಂಸಾರಕಟು…
ಲೇಖಕರು: sinchanabhat
ವಿಧ: Basic page
February 14, 2006
ಇಂದುಪ್ರೇಮಿಗಳ ದಿನ.ಅದೆಷ್ಟೋ ಮೂಡದ ಮಾತುಗಳಾಚೆಯ ಸಂಕೇತ ಸಂಬಂಧ ಸಾಮಿಪ್ಯಗಳು ತಲೆ ಎತ್ತುತ್ತವೆ. ಪ್ರೇಮಿಗಳು ಮಾತ್ರ ತಲೆ ತಗ್ಗಿಸುತ್ತಾರೆ! ತಲ್ಲಣವನ್ನು ಹಿಡಿ ಹ್ರುದಯದಲ್ಲಿರಿಸಿ ಉಸುರುವವರೇನು ಪ್ರೀತಿಯ ಪಸರುವವರೇನು..! ಅದೇ college ಆವರಣ,ಹುಡುಗ ಹುಡುಗಿಯರಲ್ಲಿ ಪ್ರೀತಿ ಎಂಬ ಮಿಂಚಿನ ಸಂಚಲನ.ಆತ ಸ್ಪುರಧ್ರೂಪಿ,ಅವಳ ಕನಸಿನಂತವನು( ಅವಳ ವಯಸ್ಸೆ ಹಾಗೆ ಕನಸಿಗೆ ಬರುವವರು ಸಿನಿಮಾದ ಹೀರೊಗಳು ಮಾತ್ರ)ಕೈಯ್ಯಲ್ಲಿ ಕೆಂಗುಲಾಬಿಯ ಹಿಡಿದು ಇವಳೆದುರು ಮಂಡಿಯೂರಿ ನಿಂತರೆ, ಇವಳೋ ವಲ್ಲೆ ಎಂದು…
ಲೇಖಕರು: shreekant.mishrikoti
ವಿಧ: Basic page
February 14, 2006
ವಿಜ್ಜಾಚರಣ ಸಂಪನ್ನ ಅಂದರೆ ಜ್ಞಾನ ಮತ್ತು ಆಚರಣೆಗಳಿಂದ ಕೂಡಿದ ಎಂದರ್ಥ. ಈ ಪುಸ್ತಕ ಬುದ್ಧನ ಕುರಿತು ಪ್ರಚಲಿತ ವಿಷಯಗಳನ್ನಾಧರಿಸದೆ , ಪಾಲಿ ಭಾಷೆಯಲ್ಲಿರುವ ಬೌದ್ಧ ಸಾಹಿತ್ಯ ಮೂಲಗಳನ್ನು ಅಧ್ಯಯನ ಮಾಡಿ ಬರೆದಿರುವ ಪುಸ್ತಕ . ಉದಾಹರಣೆಗೆ ಎಲ್ಲರೂ ನಂಬಿಕೊಂಡಿರುವಂತೆ ರಾಜಕುಮಾರ ಸಿದ್ಧಾರ್ಥ ಒಬ್ಬ ರೋಗಿ , ಹಣ್ಣು ಹಣ್ಣು ಮುದುಕ, ಮತ್ತು ಒಂದು ಶವಯಾತ್ರೆಯನ್ನು ನೋಡಿ ಸಂಸಾರವನ್ನು ತ್ಯಜಿಸಿದ ಘಟನೆ ನಿಜಕ್ಕೂ ಅವನ ಜೀವನದಲ್ಲಿ ನಡೆದದ್ದೇ ಅಲ್ಲ ; ಅದು ಬೇರೆ ಯಾರೋ ಸನ್ಯಾಸಿಗೆ…
ಲೇಖಕರು: shreekant.mishrikoti
ವಿಧ: ಚರ್ಚೆಯ ವಿಷಯ
February 14, 2006
ನೀವು ಈ ಜನಪದ ಹಾಡನ್ನು ಕೇಳಿರಬಹುದು .( ಜೋಗಿ ಚಿತ್ರದಲ್ಲಿ ಇರುವದು ಅಲ್ಲ. ಜನಪದದಲ್ಲಿ ಇರುವ ಹಾಡು) . ಸಿ. ಅಶ್ವಥ್ ಮತ್ತಿತರರು ಇದನ್ನು ತುಂಬಾ ಚೆನ್ನಾಗಿ ಹಾಡಿದ್ದಾರೆ. ಇದರಲ್ಲಿ ಒಳ್ಳೇಯ ಗಂಡನ ಬಿಟ್ಟು , ಎಳ್ಳೀನ ಹೊಲವ ಬಿಟ್ಟು , ಜೋಗಿಗೆ ಮರುಳಾಗಿ 'ನಿನ್ನಲ್ಲಿ ನನಗೆ ಮನಸಾದೆ '( ಇಂದಿನ ಐ ಲವ್ ಯೂ!) ಎಂದು ಅವನ ಹಿಂದೆ ಹೊರಟ ಹೆಣ್ಣು ಮಗಳು ಯಾರು ? ಗಂಡನನ್ನು ಬಿಟ್ಟು ಇನ್ನೊಬ್ಬನ ಹಿಂದೆ ಹೋಗುವಂಥ ಸನ್ನಿವೇಶವನ್ನು ಗುರುತಿಸಿರುವ ( ಅಥವಾ ಸ್ವೀಕರಿಸಿರುವ) ಈ ಹಾಡಿನ ಹಿನ್ನೆಲೆ…