ವಿಧ: ಪುಸ್ತಕ ವಿಮರ್ಶೆ
January 10, 2023
ಭರವಸೆಯ ಕಥೆಗಾರ ಕೆ.ನಲ್ಲತಂಬಿ ಬರೆದ ಕಥೆಗಳ ಸಂಕಲನ -’ಅತ್ತರ್’. ನಾವು ಕಂಡ ಜಗತ್ತೇ ನಲ್ಲತಂಬಿ ಅವರ ಕಕ್ಷೆಯಲ್ಲಿ ಕೌತುಕ ಹುಟ್ಟಿಸಿ ಹೊಸ ವೇಷ ತೊಟ್ಟು ನಮಗೆ ಗೋಚರವಾಗುತ್ತದೆ. ಅವರ ಕ್ಯಾಮೆರಾ ಕಣ್ಣುಗಳು ಅಷ್ಟು ಸೃಜನಶೀಲ ಮತ್ತು ಸುಂದರ! ಪ್ರಸ್ತುತ ಲೋಕರೂಢಿ ವ್ಯಾಪಾರ ಸಂಬಂಧಗಳಲ್ಲಿನ ಅನೇಕ ಸೂಕ್ಷ್ಮ ವಿಚಾರಗಳು ಈ ಸಂಕಲನದ ಕಥಾವಸ್ತುಗಳಾಗಿವೆ. ಅದನ್ನು ಸಮಕಾಲೀನತೆಯ ಏಕಾವಳಿ ಎಂದು ಬಣ್ಣಿಸಬಹುದು ಎನ್ನುತ್ತಾರೆ ಲೇಖಕ ಶ್ರೀಧರ ಬನವಾಸಿ. ಅವರು ಕೆ.ನಲ್ಲತಂಬಿಯವರ “ಅತ್ತರ್” ಕೃತಿಗೆ ಬರೆದ…
ವಿಧ: ರುಚಿ
January 08, 2023
ವೃತ್ತಾಕಾರವಾಗಿ ಕತ್ತರಿಸಿದ ಬಾಳೆದಿಂಡಿನ ತುಂಡುಗಳೊಂದಿಗೆ, ಸಾಸಿವೆ, ತೆಂಗಿನ ತುರಿ, ಒಣಮೆಣಸು, ಉಪ್ಪು, ಕಾಯಿ ಮೆಣಸು ರುಬ್ಬಬೇಕು. ಸಿಹಿ ಮಜ್ಜಿಗೆ(ಆ ದಿನ ಮಾಡಿದ ಮಜ್ಜಿಗೆ) ಸೇರಿಸಿ ಮಿಶ್ರ ಮಾಡಿ. ಒಗ್ಗರಣೆ ನೀಡಿ. (ಗಾಂಧಾರಿ ಮೆಣಸು ಸಹ ಬಳಸಬಹುದು).
ಬಾಳೆದಿಂಡಿನ ಹಸಿ ಸಲಾಡ್, ಜ್ಯೂಸ್, ಪಲ್ಯ, ಸಾಂಬಾರು, ರೊಟ್ಟಿ, ದೋಸೆ ಸಹ ಮಾಡಬಹುದು. ಆರೋಗ್ಯಕ್ಕೆ ತುಂಬಾ ಒಳ್ಳೆಯದು.
-ರತ್ನಾ ಕೆ ಭಟ್,ತಲಂಜೇರಿ
ವಿಧ: ಪುಸ್ತಕ ವಿಮರ್ಶೆ
January 07, 2023
ಹೇರಳವಾಗಿ ಗ್ರಾಮೀಣ ಪದಗಳು, ಗಾದೆಗಳು, ನುಡಿಗಟ್ಟುಗಳಿಂದ ಕೂಡಿರುವ, ಅನುವಾದಿಸಲು ಕ್ಲಿಷ್ಟವೆನಿಸುವ ಈ ಕಾದಂಬರಿಯನ್ನು ಕೆ.ನಲ್ಲತಂಬಿಯವರು ಸೊಗಸಾಗಿಯೂ, ಸಮರ್ಥವಾಗಿಯೂ ಅನುವಾದಿಸಿದ್ದಾರೆ ಎನ್ನುತ್ತಾರೆ ಲೇಖಕಿ, ಕಾದಂಬರಿಕಾರ್ತಿ ಆಶಾ ರಘು. ಲೇಖಕ ಕೆ. ನಲ್ಲತಂಬಿಯವರ ಅರ್ಧನಾರೀಶ್ವರ ಕೃತಿಯ ಕುರಿತು ಅವರು ಬರೆದ ಲೇಖನ ನಿಮ್ಮ ಓದಿಗಾಗಿ..
ಪೆರುಮಾಳ್ ಮುರುಗನ್ ಅವರ 'ಮದೋರುಬಾಗನ್' ಎಂಬ ತಮಿಳು ಕಾದಂಬರಿಯ ಕನ್ನಡ ಅನುವಾದ ಕೆ.ನಲ್ಲತಂಬಿಯವರ 'ಅರ್ಧನಾರೀಶ್ವರ' ಈಚೆಗೆ ನಾನು ನನ್ನ ಕಾದಂಬರಿಯ…
ವಿಧ: ಪುಸ್ತಕ ವಿಮರ್ಶೆ
January 05, 2023
ಒಬ್ಬ ಲೇಖಕಿಯ ಹಲವು ಬರಹಗಳ ಹಾಸುಹೊಕ್ಕಿನಲ್ಲಿಯೇ ಆಕೆಯ ಜೀವನದರ್ಶನ ಮಾಗುತ್ತದೆ, ಸಂಕೀರ್ಣವಾಗುತ್ತದೆ. ಇವರ ‘ಅ ಟೆರಿಬಲ್ ಮೇಟ್ರಿಯಾರ್ಕಿ’, ‘ಬಿಟರ್ ವುಮನಹುಡ್’ ಮುಂತಾದ ಕಾದಂಬರಿಗಳೂ ಕನ್ನಡಕ್ಕೆ ಬಂದರೆ ಹಲಬಗೆಯ, ಭಿನ್ನ, ಸಂಕೀರ್ಣ ಕಥನವಿನ್ಯಾಸವೊಂದು ಕನ್ನಡಕ್ಕೆ ದಕ್ಕುತ್ತದೆ ಎಂಬ ನಂಬಿಕೆ ನನ್ನದು ಎನ್ನುತ್ತಾರೆ ಲೇಖಕಿ ಜ.ನಾ. ತೇಜಶ್ರೀ. ಅವರು ರವಿ ಹಂಪಿ ಅವರ ನದಿಯೊಂದು ನಿದ್ರಿಸಿದಾಗ ಕೃತಿಗೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ...
“ಕನ್ನಡ ನೆಲದಲ್ಲಿ ಕಣ್ಣುಬಿಡುತ್ತಿರುವ ನಾಗಾಲ್ಯಾಂಡಿನ…
ವಿಧ: ಪುಸ್ತಕ ವಿಮರ್ಶೆ
January 05, 2023
ಆಫ್ರಿಕಾದ ಮೂಲನಿವಾಸಿಗಳಿಂದ ಸಂಗ್ರಹಿಸಿದ 30 ಕತೆಗಳನ್ನು ಈ ಪುಸ್ತಕದಲ್ಲಿ ನಿರೂಪಿಸಿದ್ದಾರೆ ನಿಕ್ ಗ್ರೀವ್ಸ್. ಇಂಗ್ಲೆಂಡಿನಲ್ಲಿ ಜನಿಸಿದ ಅವರು ಕಾಲೇಜು ಶಿಕ್ಷಣ ಪಡೆದದ್ದು ಭೂಗರ್ಭಶಾಸ್ತ್ರ ಮತ್ತು ಪರಿಸರ ವಿಜ್ನಾನದಲ್ಲಿ. ಅನಂತರ ದಕ್ಷಿಣ ಆಫ್ರಿಕಾದ ದೊಡ್ಡ ಗಣಿಪ್ರದೇಶದಲ್ಲಿ ದುಡಿಯಲು ಹೋದರು. ತಮ್ಮ ಉದ್ಯೋಗದ ಸಲುವಾಗಿ ಅವರು ದಕ್ಷಿಣ ಆಫ್ರಿಕಾ, ಜಿಂಬಾಬ್ವೆ, ಬೊಟ್ಸ್-ವಾನಾ ಹಾಗೂ ನೈಋತ್ಯ ಆಫ್ರಿಕಾದ ಕುಗ್ರಾಮಗಳಿಗೆ ಹೋಗಬೇಕಾಯಿತು.
ಈ ಅವಧಿಯಲ್ಲಿ ಅವರು ವನ್ಯಜೀವಿಗಳ ವೈವಿಧ್ಯತೆ ಮತ್ತು…
ವಿಧ: ಬ್ಲಾಗ್ ಬರಹ
January 05, 2023
ಇದನ್ನು ಬರೆದವರು ಮೂಗೂರು ಹನುಮಂತಾಚಾರ್ಯ. ಪ್ರಕಟಣೆಯ ವರ್ಷ - 1930 . ಪುಟಗಳ ಸಂಖ್ಯೆ 120.
ಇದು ಕನ್ನಡದಲ್ಲಿ ಕಾದಂಬರಿಗಳು ಆರಂಭವಾಗುವ ಕಾಲದ ಪುಸ್ತಕ. ಮುನ್ನುಡಿಯಲ್ಲಿ ಕಾದಂಬರಿ ಎಂದರೇನು? ಅದರ ಇತಿಹಾಸವೇನು? ಎಂದು ಕಾದಂಬರಿ ಪ್ರಕಾರದ ಪರಿಚಯ ಮಾಡಿಕೊಡಲಾಗಿದೆ. ಮತ್ತು 'ಈ ಪುಸ್ತಕದಲ್ಲಿ ಮಹಮ್ಮದೀಯ ದೊರೆಯಾದ ಬಾಬರ್ ನನ್ನು ಒಂದು ಪಾತ್ರವನ್ನಾಗಿ ಮಾಡಿ ಆತನು ತನ್ನ ಹಿಂದೂ ಪ್ರಜೆಗಳಲ್ಲಿ ತೋರಿಸುತ್ತಿದ್ದ ಅಸ ದೃಶವಾದ ಪ್ರೀತಿಯನ್ನು ಅಷ್ಟು ಚೆನ್ನಾಗಿ ವರ್ಣಿಸಿರುವುದು ನಮ್ಮ ದೇಶ…
ವಿಧ: ಪುಸ್ತಕ ವಿಮರ್ಶೆ
January 03, 2023
ಉದಯೋನ್ಮುಖ ಲೇಖಕಿ ರಜನಿ ಭಟ್ ಕಲ್ಮಡ್ಕ ಇವರ ಮೊದಲ ಪ್ರಕಟಿತ ಕಾದಂಬರಿಯೇ ಸಂಧ್ಯಾದೀಪ. ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸಿ ಓದಿಸಿಕೊಂಡು ಹೋಗುವ ಈ ಕಾದಂಬರಿ ಮುಗಿದದ್ದೇ ಗೊತ್ತಾಗುವುದಿಲ್ಲ. ಲೇಖಕರೇ ತಮ್ಮ ಮುನ್ನುಡಿಯಲ್ಲಿ ಹೇಳಿದಂತೆ “ ನನಗೆ ಬಹಳಷ್ಟು ಕಾಡಿದ ಮನೆಯೆಂದರೆ ಉಪ್ಪರಿಗೆ ಮನೆ. ಚಿಕ್ಕಂದಿನಲ್ಲಿ ನನ್ನ ಅಜ್ಜನ ಮನೆಯಲ್ಲಿ ಕಣ್ಣಾಮುಚ್ಚಾಲೆ ಆಡುವಾಗ ನಾವು ಅಡಗುತ್ತಿದ್ದುದು ಇದೇ ಉಪ್ಪರಿಗೆಯಲ್ಲಿ. ಅಲ್ಲಿ ಅಡಿಕೆ ಮಿಶ್ರಿತ ವಾತಾವರಣದ ಪರಿಮಳ, ತುಂಬಿದ ಭತ್ತದ ಚೀಲಗಳ ಪರಿಮಳ. ಮಳೆ ಬಂದರೆ…
ವಿಧ: ಪುಸ್ತಕ ವಿಮರ್ಶೆ
December 31, 2022
ಮುಂಬಯಿ ಬದುಕಿನ ಒಳಜಗತ್ತನ್ನು ಮಾರ್ಮಿಕವಾಗಿ ಚಿತ್ರಿಸುವ "ವಡಪಾವ್ ಕಟಿಂಗ್ ಚಾಯ್", "ಅನಾಥನಾಥ" ಹಾಗೂ "ಮುಂಬಯಿ ನಮ್ದೇ" ಕಥೆಗಳಿಗೆ ಮುಖಾಮುಖಿಯಾಗುವ ಊರಿನ "ಸೌದಾಮಿನಿ ಪ್ರಸಂಗ", "ಬದುಕು ಜಟಕಾ ಬಂಡಿ", "ಅವಲಂಬ", "ಭ್ರಾಂತ", "ಅಪರಾಧಿ" ಮೊದಲಾದ ಕಥೆಗಳು ಒಟ್ಟೂ ಬದುಕಿನ ಕಠೋರ ಸತ್ಯಗಳನ್ನು ಅನಾವರಣಗೊಳಿಸುವ ರೀತಿ ಅನನ್ಯವಾಗಿದೆ ಎನ್ನುತ್ತಾರೆ ಕವಿ ಸುಬ್ರಾಯ ಚೊಕ್ಕಾಡಿ. ಲೇಖಕ ಕುಮಾರಸ್ವಾಮಿ ತೆಕ್ಕುಂಜಯವರ ‘ವಡಾಪಾವ್ ಕಟಿಂಗ್ ಚಾಯ್’ ಕೃತಿಯಲ್ಲಿ ಅವರು ಬರೆದ ಬೆನ್ನುಡಿ ನಿಮ್ಮ ಓದಿಗಾಗಿ..
“…
ವಿಧ: ರುಚಿ
December 30, 2022
ಬೇಸಿಗೆ ಕಾಲದಲ್ಲಿ ಧಾರಾಳವಾಗಿ ಮಾವಿನಹಣ್ಣುಗಳು ಸಿಗುತ್ತದೆ. ಮಾವಿನ ಹಣ್ಣುಗಳನ್ನು ಸ್ವಚ್ಛಗೊಳಿಸಿ ಸಿಪ್ಪೆ ತೆಗೆದು ತಿರುಳನ್ನು ಒಂದು ಕುಕ್ಕರಿಗೆ ಹಾಕಬೇಕು. ವಿಸಲ್ ಹಾಕದೆ ಸಣ್ಣ ಉರಿಯಲ್ಲಿ ಅರ್ಧಗಂಟೆ ಬೇಯಿಸಬೇಕು. ಅನಂತರ ಒಂದು ಬಾಣಲೆಗೆ ಹಾಕಿ ಪುನ: ಹತ್ತು ನಿಮಿಷ ಸಣ್ಣ ಉರಿಯಲ್ಲಿಡಬೇಕು. ಸ್ವಲ್ಪ ಉಪ್ಪು, ಬೆಲ್ಲದ ಹುಡಿ, ತುಪ್ಪ ಸೇರಿಸಿ ಸೌಟಿನಲ್ಲಿ ಮಗುಚುತ್ತಿರಬೇಕು. ಸಾಧಾರಣ ಗಟ್ಟಿಯಾದಾಗ ಕೆಳಗಿಳಿಸಿ, ತಣಿದಾಗ ಬಾಟಲಿಯಲ್ಲಿ ತುಂಬಿಸಿ ಫ್ರೀಜರಿನಲ್ಲಿಡಬೇಕು.
ಮನೆಯ ಸದಸ್ಯರ…
ವಿಧ: ಪುಸ್ತಕ ವಿಮರ್ಶೆ
December 30, 2022
ನಾಡಿನ ಖ್ಯಾತ ವಿಮರ್ಶಕರಾದ ನಟರಾಜ್ ಹುಳಿಯಾರ್ ಬರೆದ ಕಾಮನ ಹುಣ್ಣಿಮೆ ಎನ್ನುವ ಕಾದಂಬರಿ ಓದಿ ಮುಗಿಸಿದೆ. ಕಾದಂಬರಿ ಒಳ್ಳೆಯ ರೀತಿಯಿಂದ ಅದ್ಭುತವಾಗಿ ಹೊರಬಂದಿದೆ. ಓದುತ್ತಾ ಹೋದಂತೆ ಇನ್ನೂ ಮುಂದೆ ಏನಿದೆ ಎಂಬ ಕುತೂಹಲ ಹುಟ್ಟುತ್ತದೆ.
ಕಾದಂಬರಿ ಸೂತ್ರಧಾರಿಯಾದ ಚಂದ್ರಣ್ಣ ಮಿಂಟ್ರಿಯವನ ಮಗ. ಆದರೆ ಮಿಂಟ್ರಿಗೆ ಹೋದ ತಂದೆ ಮರಳಿ ಊರಿಗೆ ಬರದಿದ್ದದ್ದು ಒಂದು ಆಘಾತಕಾರಿಯ ಸುದ್ದಿ. ಆದರೂ ತಾಯಿ ಶಾಂತಮ್ಮ ತನ್ನ ಮಗ ಚಂದ್ರಣ್ಣನನ್ನು ಕಣ್ಣು ರೆಪ್ಪೆಯಂತೆ ನೋಡಿಕೊಂಡು ಮಗನಿಗೆ ಸರಿಯಾಗಿ ಓದಿಸುತ್ತಾಳೆ…