ವಿಧ: ಪುಸ್ತಕ ವಿಮರ್ಶೆ
January 26, 2023
ಎಚ್.ಎಸ್. ಸತ್ಯನಾರಾಯಣರವರು ತಮ್ಮ ವೈಯಕ್ತಿಕ ಬದುಕಿನ ಅನುಭವಗಳನ್ನು, ಅವರು ಅನುಭವಿಸಿದ ಕಷ್ಟಕೋಟಲೆಗಳನ್ನು ಯಾವುದೇ ಸಂಕೋಚಕ್ಕೆ ಒಳಗಾಗದೇ ನಿರ್ಭೀತಿಯಿಂದ, ಪ್ರಾಮಾಣಿಕವಾಗಿ ಓದುಗರ ಮುಂದೆ ಎಳೆ ಎಳೆಯಾಗಿ ಬಿಚ್ಚಿಡುವ ಮೂಲಕ ಅವರ ಬಗ್ಗೆ ಮತ್ತಷ್ಟು ಗೌರವ ಭಾವ ಹುಟ್ಟುವಂತೆ ಪ್ರಬಂಧ ರಚಿಸಿದ್ದಾರೆ.
ಹಾಸ್ಯ ಬರಹಗಳಲ್ಲಿ ಲಲಿತ ಪ್ರಬಂಧಗಳು ಬಹಳ ಮುಂಚೂಣಿಯಲ್ಲಿರುವ ಸಶಕ್ತವಾದ ಪ್ರಕಾರವೆನ್ನಬಹುದು. ಯಾರು ಸಹನೆ ಮತ್ತು ತಾಳ್ಮೆಯ ಗುಣವನ್ನು ಹೊಂದಿದ್ದು ಗಂಭೀರ ವಿಷಯವನ್ನೂ ಕೂಡ ಸಕಾರಾತ್ಮಕ…
ವಿಧ: ಪುಸ್ತಕ ವಿಮರ್ಶೆ
January 25, 2023
ಬುದ್ಧನ ಎರಡು ಜಾತಕ ಕತೆಗಳು ಈ ಮಕ್ಕಳ ಪುಸ್ತಕದಲ್ಲಿವೆ. ಇವುಗಳ ಮೂಲ ಲೇಖಕರಾದ ಕೃಷ್ಣ ಚೈತನ್ಯರು ಬರೆದ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದವರು ಹೆಚ್.ಕೆ. ರಾಮಕೃಷ್ಣ. ಸಿದ್ಧಾರ್ಥನು ಜ್ನಾನೋದಯ ಪಡೆದು ಬುದ್ಧನಾಗಿ, ಜೀವನದ ಅರ್ಥ ತಿಳಿದುಕೊಂಡ. ಸುಖಶಾಂತಿಗಳ ಗಳಿಕೆಗಾಗಿ ಮನುಷ್ಯರು ಹೇಗೆ ಬದುಕಬೇಕೆಂಬ ಸಂದೇಶ ನೀಡಿದ. ಅದಕ್ಕಾಗಿ ಮಾನವರು ನಿಸ್ವಾರ್ಥಿಗಳಾಗಿ, ಕರುಣಾಳುಗಳಾಗಿ ಬಾಳಬೇಕೆಂಬುದೇ ಅವನು ತೋರಿದ ಪಥ.
ತನ್ನ ಸಹಜೀವಿಗಳ ನೆರವಿಗಾಗಿ ಬುದ್ಧನು ಅನೇಕ ಪುನರ್ಜನ್ಮ ತಳೆದನೆಂದು ಪ್ರತೀತಿ.…
ವಿಧ: ಪುಸ್ತಕ ವಿಮರ್ಶೆ
January 24, 2023
‘ಬಾ ಇಲ್ಲಿ ಸಂಭವಿಸು..' ಎನ್ನುವುದು ರಾಷ್ಟ್ರಕವಿ ಕುವೆಂಪು ಅವರ ಜನಪ್ರಿಯ ಕವಿತೆಯ ಸಾಲು. ಲೇಖಕರಾದ ಕೆ. ನಟರಾಜ್ ಅವರು ತಮ್ಮ ದ್ವಿತೀಯ ಕವನ ಸಂಕಲನಕ್ಕೆ ಇದೇ ಹೆಸರನ್ನು ಇರಿಸಿದ್ದಾರೆ. ಈ ಕವನ ಸಂಕಲನದಲ್ಲಿ ೧೦೪ ಪುಟ್ಟ ಕವನಗಳಿವೆ. ಕೆ ನಟರಾಜ್ ಅವರು ತಮ್ಮ ಮಾತಿನಲ್ಲಿ ಅಭಿಪ್ರಾಯ ವ್ಯಕ್ತ ಪಡಿಸುವುದು ಹೀಗೆ-
“ ‘ಬಾ ಇಲ್ಲಿ ಸಂಭವಿಸು...' ಎಂದರೆ ನಮ್ಮ ಸತ್ಯಾತ್ಮವನ್ನು ನಾವು ಕರೆಯುವ ಪರಿ. ಜೀವನದ ಈ ತೊಳಲಾಟದಲ್ಲಿ, ಹೋರಾಟದಲ್ಲಿ ಕೊನೆಗೂ ಸತ್ಯಕ್ಕೆ ಶರಣಾಗುವ ಸಾಲುಗಳು. ಬಹುಷಃ ಈ ಮನದಾಳದ…
ವಿಧ: ಪುಸ್ತಕ ವಿಮರ್ಶೆ
January 23, 2023
ಎಂ ಸುಬ್ರಮಣ್ಯರಾಜೇ ಅರಸ್ ಅಥವಾ ಚದುರಂಗ ಅವರ ಖ್ಯಾತ ಕಾದಂಬರಿ ‘ಸರ್ವಮಂಗಳ'. ಚದುರಂಗ ಅವರು ತಮ್ಮ ಹಿಂದಿನ ಎರಡು ಕಾದಂಬರಿಗಳಲ್ಲಿ ಹೆಣ್ಣಿನ ಭಾವನೆಗಳನ್ನು ಬಹಳ ಚೆನ್ನಾಗಿ ಬರೆದಿದ್ದರು. ಇದರಲ್ಲಿಯೂ ಅವರ ಬರವಣಿಗೆ ಅಷ್ಟೇ ಚೆನ್ನಾಗಿದೆ, ಜೊತೆಗೆ ಗ್ರಾಮೀಣ ಭಾಷೆಯ ಊಪಯೋಗವೂ ಸುಂದರವಾಗಿದೆ. ಲೇಖಕ ಚದುರಂಗ ಅವರ ʻಸರ್ವಮಂಗಳʼ ಕೃತಿಯನ್ನು ಓದಿದ ಬಳಿಕ ನನಗೆ ಅನಿಸಿದ್ದು....
“ಸರ್ವಮಂಗಳ- ಚದುರಂಗ ಅವರ ಮತ್ತೊಂದು ಒಳ್ಳೆಯ ಕಾದಂಬರಿ. 1930ರ ಆಸುಪಾಸಿನಲ್ಲಿ ನಡೆಯುವ ಈ ಪುಸ್ತಕದ ಘಟನಾವಳಿಗಳು ಬಹಳ…
ವಿಧ: ಪುಸ್ತಕ ವಿಮರ್ಶೆ
January 21, 2023
‘ಬಣ್ಣದ ಕಾರು' ಪುಟಾಣಿ ಮಕ್ಕಳಿಗೆ ಇಷ್ಟವಾಗುವಂತಹ ಕೃತಿ. ಬಹಳ ಸರಳ ಪದಗಳ ಸಣ್ಣ ಸಣ್ಣ ಸಾಲುಗಳ ಗೀತೆಗಳ ಗುಚ್ಚ. ಮಕ್ಕಳಲ್ಲಿ ಪರಿಸರದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ರಚಿಸಿದ ಗೀತೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಆರಂಭದ ಗೀತೆ 'ಮಕ್ಕಳ ಲೋಕ'ದಲ್ಲಿ ಜೇನು, ಬಾನು, ಗಾಳಿ, ಬೇವಿನ ಮರ ಬರುತ್ತವೆ. ಎರಡನೇ ಗೀತೆ 'ಹಸಿರು', ಸಂಪೂರ್ಣವಾಗಿ ಪರಿಸರದ ಕುರಿತದ್ದಾಗಿದೆ. ನಂತರದ ಗೀತೆ 'ಬಣ್ಣದ ಕಾರು', ಇದರಲ್ಲಿಯೂ ಸಹ ಪರಿಸರದ ಅಂಶಗಳು ತುಂಬಿಕೊಂಡಿವೆ ಎನ್ನುತ್ತಾರೆ ಈ ಕೃತಿಗೆ ಮುನ್ನುಡಿಯನ್ನು…
ವಿಧ: ಪುಸ್ತಕ ವಿಮರ್ಶೆ
January 20, 2023
“ಸರಳವೂ ಅಲ್ಲದ, ಜೊತೆಗೆ ಕ್ಲಿಷ್ಟತೆಯು ಇಲ್ಲದೆ ನೇರವಾಗಿ ಕವಿತೆಯ ಜೊತೆ ಮತ್ತೆ ಮತ್ತೆ ಕೇಳಿ ಮಾತಾಡುವಂತೆ ಇಲ್ಲಿನ ಬರಹಗಳು ಭಾಸವಾಗುತ್ತವೆ. ಲೋಕದ ಅಸಂಖ್ಯ ಸಂಗತಿಗಳು ಮೂವತ್ತೊಂದು ಕವಿತೆಗಳಲ್ಲಿ ವೈವಿಧ್ಯಮಯವಾಗಿ ತೆರೆದುಕೊಂಡಿದೆ” ಎನ್ನುವುದು ನನ್ನ ಅಭಿಪ್ರಾಯ. ದೇವು ಮಾಕೊಂಡ ಅವರ ʻಗಾಳಿಗೆ ತೊಟ್ಟಿಲ ಕಟ್ಟಿʼ ಪುಸ್ತಕದ ಬಗ್ಗೆ ಬರೆದ ನಾ ಬರೆದ ವಿಮರ್ಶೆ ನಿಮ್ಮ ಓದಿಗಾಗಿ ಇಲ್ಲಿದೆ...
“ಗಾಳಿಗೆ ತೊಟ್ಟಿಲು ಕಟ್ಟಲು ಸಾಧ್ಯವೇ? ಅಸಾಧ್ಯವೇ? ಕಾವ್ಯ ನೇಯುವ ಸೃಜನಶೀಲತೆಯಿಂದ ಇವೆರಡನ್ನೂ…
ವಿಧ: ಪುಸ್ತಕ ವಿಮರ್ಶೆ
January 19, 2023
ಭಾರತದ 13 ಭಾಷೆಗಳ ಶ್ರೇಷ್ಠ ಮಕ್ಕಳ ಕತೆಗಳ ಸಂಕಲನ ಇದು. ಅಸ್ಸಾಮಿ, ಬಂಗಾಳಿ, ಇಂಗ್ಲಿಷ್, ಗುಜರಾತಿ, ಹಿಂದೀ, ಕನ್ನಡ, ಮಲಯಾಳಂ, ಮರಾಠಿ, ಒರಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳ ಕತೆಗಳು ಇದರಲ್ಲಿವೆ.
ಇವನ್ನು ಎಲ್. ಎಸ್. ಶೇಷಗಿರಿರಾಯರು ಕನ್ನಡಕ್ಕೆ ಅನುವಾದಿಸಿದ್ದಾರೆ.
ವಿಶೇಷ ಬಹುಮಾನ (ಅಸ್ಸಾಮಿ) ಕತೆ ವಿದ್ಯಾರ್ಥಿಯೊಬ್ಬ ತುಂಟನಂತೆ ಕಂಡರೂ ಅಂತಃಕರಣದ ಹುಡುಗ ಎಂಬುದನ್ನು ಪ್ರಸ್ತುತಪಡಿಸುತ್ತದೆ. ಆತನನ್ನು ಶಿಕ್ಷಿಸಿದ ಮುಖ್ಯೋಪಾಧ್ಯಾಯರೇ ಅವನ ಸನ್ನಡತೆ ಕಂಡಾಗ ಬೆನ್ನು…
ವಿಧ: ಪುಸ್ತಕ ವಿಮರ್ಶೆ
January 19, 2023
ಪದ್ಮಾಲಯ ನಾಗರಾಜ್ ಅವರ ಸಣ್ಣ ಕಥೆಗಳ ಸಂಕಲನವೇ “ಅಚಲ ಕಥಾಲೋಕ". ಈ ಕೃತಿಯಲ್ಲಿ ಸೊಗಸಾದ ಸಣ್ಣಸಣ್ಣ ಕತೆಗಳಿವೆ. ಸುಭಾಷಿತಗಳಂತಹ ಹೇಳಿಕೆಗಳಿವೆ. ಕವಿತೆಯಂತಹ ವಚನಗಳಿವೆ. ಘಟನೆಯ ನಿರೂಪಣೆಗಳಿವೆ. ಮಾತುಕತೆಯ ಭಾಗಗಳಿವೆ. ಇದೊಂದು ಬಹುನಿರೂಪಣ ವಿನ್ಯಾಸವುಳ್ಳ ದಾರ್ಶನಿಕ ಕೃತಿ ಎಂದಿದ್ದಾರೆ ಮುನ್ನುಡಿ ಬರೆದ ಸಾಹಿತಿ ರಹಮತ್ ತರೀಕೆರೆ. ಆ ಮುನ್ನುಡಿಯಲ್ಲಿ...
“ನಮಗೆ ನಮ್ಮೂರ ಬದಿಯಲ್ಲಿ ಹರಿವ ಹೊಳೆಗಳ ಪರಿಚಯ ವಿರುತ್ತದೆ. ಆದರೆ ಆ ಹೊಳೆಗಳ ಜಲಮೂಲವಾಗಿರುವ ಆಗಸದ ಮೋಡ, ಪರ್ವತದಗರ್ಭ, ದಟ್ಟಕಾಡು…
ವಿಧ: ಪುಸ್ತಕ ವಿಮರ್ಶೆ
January 18, 2023
ಅಸಮಾನತೆ, ಅನ್ಯಾಯ, ಅಪಮಾನ, ಶೋಷಣೆಯ ಪರಿಣಾಮಗಳನ್ನು ಹೇಳುತ್ತಲೇ; ಸಮಾನತೆಯ ಸಮಾಜ ನಿರ್ಮಾಣಕ್ಕೆ ಹೋರಾಡಬೇಕಾದ ಛಲವನ್ನು ಇವು ಕಲಾತ್ಮಕವಾಗಿ ಅಭಿವ್ಯಕ್ತಿ ಮಾಡಿವೆ. ಹಾಡುಗಾರರಿಗೆ ಹಾಡುಗಳಾಗಿ, ಭಾಷಣಕಾರರಿಗೆ ವಿಚಾರಗಳಾಗಿ, ಹೋರಾಟ ನಿರತ ಜನರಿಗೆ ಹೋರಾಟದಲ್ಲಿ ತೊಡಗಲು ಮಾನಸಿಕ, ಭಾವನಾತ್ಮಕ ಪ್ರೇರಕ ಶಕ್ತಿಗಳಾಗಿ ಕ್ರಿಯಾಶೀಲವಾಗಿವೆ ಎನ್ನುತ್ತಾರೆ ಬಿ.ಎಂ. ಪುಟ್ಟಯ್ಯ . ಅವರು ಎಚ್. ವೆಂಕಟೇಶ್ ಹಾಗೂ ಜ್ಯೋತಿ .ಎಸ್ ಅವರ ಸಂಪಾದಿತ “ಹೋರಾಟದ ಹಾಡುಗಳು” ಕೃತಿಗೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ…
ವಿಧ: ಪುಸ್ತಕ ವಿಮರ್ಶೆ
January 17, 2023
ಗಾಯತ್ರಿ ರಾಜ್ ಅವರ ನೀಳ್ಗತೆ ‘ಟ್ರಾಯ್' ಎಂಬ ಕೃತಿ. ‘ಟ್ರಾಯ್ʼಯ ಎಲ್ಲ ಪಾತ್ರಗಳಲ್ಲೂ ನಮ್ಮ ಭಾರತೀಯ 'ಸೆಂಟಿಮೆಂಟ್' ಶೈಲಿಯನ್ನು ತಂದು ಕೊಟ್ಟು ಗಾಯತ್ರಿ ರಾಜ್ ಯಶಸ್ವಿಯಾಗಿದ್ದಾರೆ. ಅಲ್ಲಿಯ ಎಲ್ಲ ಪಾತ್ರಗಳು ದೂರದ ಯಾವುದೋ ದೇಶದ ಕಾಣದ ವ್ಯಕ್ತಿತ್ವಗಳೇ ಆಗಿದ್ದರೂ ಅವರು ಮಾತನಾಡುವಾಗ ನಮ್ಮವರೇ ಅನಿಸಿಬಿಡುತ್ತದೆ. ಇಷ್ಟವಾಗಿಬಿಡುತ್ತದೆ” ಎನ್ನುತ್ತಾರೆ ಮುನ್ನುಡಿಯನ್ನು ಬರೆದ ಎಂ.ಎಲ್. ಪ್ರಸನ್ನ. ಅವರು ಗಾಯತ್ರಿ ರಾಜ್ ಅವರ ʻಟ್ರಾಯ್ʼ ಪುಸ್ತಕದಲ್ಲಿ ಬರೆದ ಮುನ್ನುಡಿಯ ಸಾಲುಗಳು ನಿಮ್ಮ…