ವಿಧ: ರುಚಿ
November 28, 2022
ಮೊದಲು ಕುಕ್ಕರಿನಲ್ಲಿ ತೊಗರಿಬೇಳೆಯನ್ನು ಚೆನ್ನಾಗಿ ಬೇಯಿಸಿ. ನಂತರ ಬಸಳೆಯನ್ನು ಸಣ್ಣದಾಗಿ ಕತ್ತರಿಸಿ ಬೇಯಿಸಿಡಿ. ಮಿಕ್ಸಿಗೆ ತೆಂಗಿನತುರಿ, ಹುಳಿ, ಮೆಣಸು, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿರಿ. ನಂತರ ಅದನ್ನು ಬೇಳೆಗೆ ಹಾಕಿ ಕುದಿಸಿರಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಇದಕ್ಕೆ ಎಣ್ಣೆ ಹಾಕಿದ ನೀರುಳ್ಳಿಯ ಒಗ್ಗರಣೆ ಕೊಡಿ. ಈಗ ಇಡ್ಲಿ, ದೋಸೆ ಜೊತೆ ಅಥವಾ ಊಟದ ಜೊತೆ ತಿನ್ನಲು ಬಸಳೆ ತೊಗರಿಬೇಳೆ ಗಸಿ ರೆಡಿ.
-ಕೆ. ಗಾಯತ್ರಿ ಕಾಮತ್
ವಿಧ: ಪುಸ್ತಕ ವಿಮರ್ಶೆ
November 27, 2022
ಮಾಕೋನಹಳ್ಳಿ ವಿನಯ್ ಮಾಧವ್ ಅವರು ಹುಟ್ಟಿದ್ದು ಕೊಡಗು ಜಿಲ್ಲೆಯ ಸುಂಟಿಕೊಪ್ಪದಲ್ಲಿ. ಮೂಲತಃ ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ ತಾಲ್ಲೂಕಿನ ಮಾಕೋನಹಳ್ಳಿಯವರು. ೧೯೯೬ರಲ್ಲಿ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯಲ್ಲಿ ಇಂಗ್ಲಿಷ್ ಪತ್ರಕರ್ತನಾಗಿ ಕೆಲಸ ಆರಂಭಿಸಿದರು. ೨೫ ವರ್ಷಗಳಿಂದ ಹುಟ್ಟೂರಿಗೆ ಹೋಗಿ ಕಾಫೀ ಪ್ಲಾಂಟರ್ ಆಗಿ ಕಾರ್ಯನಿರ್ವಹಿಸುವ ಕನಸು ಕಾಣುತ್ತಿದ್ದಾರೆ.
ಮಾಕೋನಹಳ್ಳಿ ವಿನಯ್ ಮಾಧವ್ ಅವರ ಕಾದಂಬರಿ ‘ಸಿಕೆಜಿ ಸ್ಪೋರ್ಟ್ಸ್ ಕ್ಲಬ್ ಮಾಕೋನಹಳ್ಳಿ’. ಒಕ್ಕಲೊಂದರ ಆತ್ಮಕಥೆಯೆಂಬ…
ವಿಧ: ಪುಸ್ತಕ ವಿಮರ್ಶೆ
November 26, 2022
ಮೊದಲೆಲ್ಲ ಹೆಚ್ಚೆಚ್ಚು ಪತ್ತೇದಾರಿ ಕಾದಂಬರಿ ಓದುತ್ತಿದ್ದೆ. ಅದೊಮ್ಮೆ ಅಪ್ಪ ಆತನ ಪರಿಚಯದವರಿಂದ ಎನ್.ನರಸಿಂಹಯ್ಯ ಅವರು ಬರೆದ 'ಕುಂಟ,ಕುರುಡ,ಕುರೂಪಿ' ಅಂಬುದೊಂದು ಪತ್ತೇದಾರಿ ಕಾದಂಬರಿ ಕಡ ತಂದಿದ್ದರು. ಒಮ್ಮೆ ಹಿಡಿದರೆ ಓದುವವರೆಗೆ ಬಿಡದಷ್ಟು ರೋಮಾಂಚನಕಾರಿ ಕಥಾವಸ್ತು ಅದು.ಆಮೇಲೆ ಅದೇ ಅಭ್ಯಾಸವಾಗಿ ಅಪ್ಪನಿಗೆ ದುಂಬಾಲು ಬಿದ್ದು, ಆತನ ಗೆಳೆಯರ ಮನೆಯವರೆಗೂ ಹೋಗಿ ಬೆಳೆಗೆರೆಯ 'ಒಮಾರ್ಟಾ' ಭೈರಪ್ಪರ 'ವಂಶವೃಕ್ಷ' ಐದಾರು ಕಾದಂಬರಿ ತಂದು ಬಿಡದೆ ಓದಿದೆ. ಆಗಿನ ಕಾಲಕ್ಕೆ ಮಯೂರದಲ್ಲಿ…
ವಿಧ: ಬ್ಲಾಗ್ ಬರಹ
November 25, 2022
ಬೆಂಗಳೂರಿನ ಸೆಂಟ್ರಲ್ ಕಾಲೇಜ್ ನಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾಗ, ಎಚ್. ಆರ್. ರಾಮಕೃಷ್ಣರಾವ್ ಅವರ ಹೆಮ್ಮೆಯ ಗುರುವರ್ಯರುಗಳಾದ, ಪ್ರೊ. ವಿ. ಸೀ, ಪ್ರೊ. ಜಿ. ಪಿ. ರಾಜರತ್ನಂ ಮತ್ತು ಸೆಂಟ್ರೆಲ್ ಕಾಲೇಜಿನ ಕರ್ನಾಟಕ ಸಂಘದ ಕಾರ್ಯ ವೈಖರಿಗಳನ್ನು ತಮ್ಮ ಸ್ವಂತ ಕೈಬರಹದಲ್ಲಿ ಹೊಳಲ್ಕೆರೆಯಲ್ಲಿದ್ದ ಅವರ ತಂದೆ ಶ್ರೀ. ಎಚ್. ವಿ. ರಂಗರಾಯರಿಗೆ ಪತ್ರಬರೆದಿದ್ದರು.
ರಾಮಕೃಷ್ಣರಾಯರ ತಮ್ಮ ಎಚ್ಚಾರೆಲ್, ಆ ಪತ್ರದಲ್ಲಿ ತಮ್ಮ ಅಣ್ಣನವರು ಬರೆದ ಮಾಹಿತಿಗಳನ್ನು ಓದುಗರ ಬಳಿ ಹಂಚಿಕೊಂಡಿದ್ದಾರೆ…
ವಿಧ: ಪುಸ್ತಕ ವಿಮರ್ಶೆ
November 25, 2022
ಕಸ್ತೂರ್ ಬಾ ರ ಅಂತಿಮ ಸಂಸ್ಕಾರದೊಂದಿಗೆ ಆರಂಭಗೊಳ್ಳುವ ಕಾದಂಬರಿ flashback ತಂತ್ರದ ಮೂಲಕ ಕಸ್ತೂರ್ ಬಾ ಹಾಗೂ ಗಾಂಧಿಯವರ ಬಾಲ್ಯದ ಸುಂದರ ಸನ್ನಿವೇಶಗಳನ್ನು ಚಿತ್ರಿಸುತ್ತಾ, ಮದುವೆ, ಮಕ್ಕಳು, ವೃತ್ತಿ, ಹೋರಾಟಗಳ ಹಾದಿ ತುಳಿಯುತ್ತಾ ಕ್ರಮೇಣ ಗಂಭೀರವಾಗುತ್ತಾ ಸಾಗುತ್ತದೆ. ಹೆಸರಿಗೆ ತಕ್ಕಂತೆ ಕಾದಂಬರಿಯುದ್ದಕ್ಕೂ ಪತಿ-ಪತ್ನಿಯರ ಸಂವಾದವೇ ಪ್ರಧಾನವಾಗಿ, ಅದರ ಮೂಲಕವೇ ಅವರಿಬ್ಬರ ನಡುವಿನ ಸಂಬಂಧದ ಆಳ ಅಗಲಗಳನ್ನೂ ಅನಾವರಣಗೊಳಿಸಲಾಗಿದೆ.
ಪೀಠಿಕೆಯ ಭಾಗದಲ್ಲಿ ಲೇಖಕರು ಕೆಲವು ಅಂಶಗಳನ್ನು…
ವಿಧ: ಪುಸ್ತಕ ವಿಮರ್ಶೆ
November 25, 2022
ಹೆಸರುವಾಸಿ ಕವಿ ಸು.ರಂ. ಎಕ್ಕುಂಡಿಯವರ “ಕಥನ ಕವನ” ವಿಶ್ವಕನ್ನಡ ಸಮ್ಮೇಳನ ಸಾಹಿತ್ಯಮಾಲೆಯಲ್ಲಿ ಮರುಮುದ್ರಣವಾದ ಸಂಪುಟ. ಆ ಮಾಲೆಗೆ ಆಯ್ಕೆಯಾದ 100 ಮೇರುಕೃತಿಗಳಲ್ಲೊಂದು.
ಇದರಲ್ಲಿವೆ 53 ಕಥನ ಕವನಗಳು. ಕೆಲವು ಸರಳ ಕವನಗಳು. ಉದಾಹರಣೆಗೆ “ಪಾರಿವಾಳಗಳು" ಕವನ ಇಲ್ಲಿದೆ:
ದಟ್ಟಕಾಡಿನಲೊಂದು ಹೆಮ್ಮರದ ಹೊದರಿನಲಿ ಇರುತ್ತಿತ್ತು ಪುಟ್ಟ ಸಂಸಾರ ಹೂಡಿ
ಮುದ್ದು ಬಿಳಿಪಾರಿವಾಳಗಳ ಜೋಡಿ (1)
ಹಗಲಿರುಳು ಜತೆಗೂಡಿ ಬಾಳಿದವು ಈ ಜೋಡಿ ಎಂದಿಗೂ ಅಗಲಿರವು ಒಂದನೊಂದು
ಹಿಗ್ಗು ತುಂಬಿತು ಹೊದರಿನಲ್ಲಿ ಬಂದು (2…
ವಿಧ: ಬ್ಲಾಗ್ ಬರಹ
November 25, 2022
ಈ ಲೇಖನವನ್ನು ಬರೆದ 'ಎಚ್ಚಾರೆಲ್ 'ಎಂದು ಮುಂಬಯಿಯ ಗೆಳೆಯರಿಗೆ ಪರಿಚಿತರಾದ ಹೊಳಲ್ಕೆರೆ ವೆಂಕಟೇಶ್ ಒಬ್ಬ ವಿಕಿಪೀಡಿಯ ಸಂಪಾದಕರು (ಕನ್ನಡ), ಫೇಸ್ ಬುಕ್, ಟ್ವಿಟರ್, ಇನ್ಸ್ಟಾ ಗ್ರಾಂ, ನಸುಕು.ಕಾಮ್ ಇಂಟರ್ನೆಟ್ ಜಾಲತಾಣದಲ್ಲಿ ಸಕ್ರಿಯರು. ಹಲವಾರು ಬ್ಲಾಗ್ ಗಳಲ್ಲಿ ಬರೆಯುತ್ತಾರೆ.
ಇಂದಿನಕಾಲದಲ್ಲಿ ಸಿನಿಮಾ ವೀಕ್ಷಕರು ಹೆಚ್ಚಾಗಿ 'ಮಲ್ಟಿ ಪ್ಲೆಕ್ಸ್ ಸಿನಿಮಾ ಕಲ್ಚರ್' ಗೆ ಒಗ್ಗಿಹೋಗಿದ್ದಾರೆ. ಹಿಂದೆ ಸಿಂಗಲ್ ಸ್ಕ್ರೀನ್ ಟಾಕೀಸ್ ಗಳಿದ್ದ ಕಾಲವಾಗಿತ್ತು. ಒಳ್ಳೆಯ ಹೊಸದಾಗಿ ರಿಲೀಸ್ ಆದ…
ವಿಧ: ಪುಸ್ತಕ ವಿಮರ್ಶೆ
November 24, 2022
ಜೋಗಿ, ಜಾನಕಿ, ಎಚ್. ಗಿರೀಶ್ ರಾವ್, ಸತ್ಯವ್ರತ...... ಹೀಗೆ ವಿವಿಧ ಅಂಕಿತನಾಮಗಳ ಮೂಲಕವೇ ಓದುಗರನ್ನು ತಲುಪಿದವರು ಗಿರೀಶ್ ರಾವ್ ಹತ್ವಾರ್ (ಜೋಗಿ). ವೃತ್ತಿಯಲ್ಲಿ ಪತ್ರಕರ್ತರಾಗಿರುವ ಜೋಗಿ ಅವರು ಹುಟ್ಟಿದ್ದು 1965 ನವೆಂಬರ್ 16ರಂದು. ಮೂಲತಃ ಸುರತ್ಕಲ್ ಸಮೀಪದ ಹೊಸಬೆಟ್ಟು ಊರಿನವರಾದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ‘ಹಾಯ್ ಬೆಂಗಳೂರು’ ವಾರಪತ್ರಿಕೆಯಲ್ಲಿ ‘ರವಿ ಕಾಣದ್ದು’, ‘ಜಾನಕಿ ಕಾಲಂ’ ಅಂಕಣ ಬರಹಗಳ ಮೂಲಕ ಓದುಗರಿಗೆ ಪರಿಚಯವಾದ ಜೋಗಿ ಅವರು ಪ್ರಸ್ತುತ…
ವಿಧ: ಪುಸ್ತಕ ವಿಮರ್ಶೆ
November 22, 2022
ಎಲ್ಲೋ ಬಿದ್ದಿದ್ದ ಕಲ್ಲು ದೇವರಾಗುವುದೂ ಕಥೆಯೇ! ಹಾಗೆಯೇ ಎಂಥ ಕಷ್ಟದಲ್ಲಿಯೂ ಕಲ್ಲಾಗಿಯೇ ಇದ್ದುಬಿಡುವ ದೇವರದೂ ಕಥೆಯೇ. ಹುಣ್ಣಿಮೆಯಂದು ಕಡಲು ಅಬ್ಬರಿಸುವುದೂ ಕಥೆಯೇ, ಚಂಡಮಾರುತದಲ್ಲಿಯೂ ಗುಂಡುಕಲ್ಲಾಗಿ ನಿಂತೇ ಇರುವ ಬೆಟ್ಟದ ಕೆಟ್ಟ ಹಠವೂ ಕಥೆಯೇ. ದಿನವೂ ಎದುರಾಗುವ ಪಕ್ಕದ ಬೀದಿಯ ವ್ಯಕ್ತಿ ಖುಷಿಯಿಂದ ನೋಡಿದರೂ ಕಥೆಯೇ, ಕಣ್ಣು ಕೂಡಿಸದೆ ನೆಲ ನೋಡಿಕೊಂಡು ಹೋಗಿಬಿಟ್ಟರೂ ಕಥೆಯೇ! ಎನ್ನುತ್ತಾರೆ ಕತೆಗಾರ್ತಿ ಪೂರ್ಣಿಮಾ ಮಾಳಗಿಮನಿ. ಅವರು ಲೇಖಕ ಮಾರುತಿ ಎನ್ ಎನ್ ಅವರ ‘ಕರುವ್ಗಲ್ಲು’ ಕಥಾ…
ವಿಧ: ಪುಸ್ತಕ ವಿಮರ್ಶೆ
November 21, 2022
ನಮ್ಮ ಮೊಬೈಲ್ ಒಳಗಿನ ಕೆಲವೊಂದು ಹಾಡುಗಳು, ಕೆಲವೊಂದು ಸಿನಿಮಾಗಳನ್ನು ನಾವು ಡಿಲಿಟ್ ಮಾಡುವುದೇ ಇಲ್ಲ. ಕಾರಣ ಅವುಗಳ ಜೊತೆ ನಮಗಿರುವ ತೀರಾ ಹತ್ತಿರದ ಭಾದ್ಯವೆ. ಪದೇ ಪದೇ ಅದೆ ಹಾಡನ್ನೋ ಅಥವಾ ಅದೆ ಸಿನಿಮಾನೋ ಕೇಳೋದು, ನೋಡೋದು ಮಾಡತ್ತೀವಿ. ಅದೆ ರೀತಿ ನಮ್ಮ ಸ್ವಂತದ ಗ್ರಂಥಾಲಯದಲ್ಲಿ ಸಾವಿರಾರು ಪುಸ್ತಕಗಳು ಇದ್ದರೂ ಸಹ ಕೆಲವೊಂದು ಪುಸ್ತಕಗಳು ನಮಗೆ ಮತ್ತೆ ಮತ್ತೆ ಓದುವಂತೆ ಪ್ರೇರೇಪಿಸಿತ್ತವೆ. ಅಂತಹ ಪ್ರೇರೇಪಿಸಿದ ಪುಸ್ತಕ ವೆಂದರೆ ವೀರಣ್ಣ ಮಡಿವಾಳರ ಖಂಡಕಾವ್ಯವಾದ 'ಎಲ್ಲೋ ಹಾಳಾಗಿ…