ವಿಧ: ಪುಸ್ತಕ ವಿಮರ್ಶೆ
October 11, 2022
ಡಾ. ಅಜಿತ್ ಹರೀಶಿ ಹಾಗೂ ವಿಠಲ್ ಶೆಣೈ ಅವರು ತಮ್ಮಂತೆ ಕತೆಗಳನ್ನು ಬರೆಯುವ ಇಪ್ಪತ್ತೆಂಟು ಮಂದಿ ಕಥೆಗಾರರ ಕಥೆಗಳನ್ನು ಸಂಗ್ರಹಿಸಿ 'ಕಥಾಭರಣ' ಮಾಡಿದ್ದಾರೆ. ಪುಸ್ತಕಕ್ಕೆ ಖ್ಯಾತ ಕಾದಂಬರಿಕಾರ ವಸುಧೇಂದ್ರ ಇವರು ಮುನ್ನುಡಿ ಬರೆದಿದ್ದಾರೆ. ಇವರು ತಮ್ಮ ಮಾತುಗಳಲ್ಲಿ “ ಬಹುತೇಕ ಹಳ್ಳಿಗಳಲ್ಲಿ ಸುಗ್ಗಿ ಹಬ್ಬ ಮಾಡುತ್ತಾರೆ. ಹೊಸ ಬೆಳೆ ಮನೆಗೆ ಬಂದ ತಕ್ಷಣ, ಅದರಲ್ಲಿ ಮೊದಲ ಭಾಗವಾಗಿ ತಮ್ಮ ಯೋಗ್ಯತೆಗೆ ತಕ್ಕಂತೆ ಒಂದಿಷ್ಟು ಅನ್ನವನ್ನು ಊರ ದೇವರಿಗೆ ಅರ್ಪಿಸುತ್ತಾರೆ. ಬಡವ, ಬಲ್ಲಿದ, ಮೇಲು, ಕೀಳು…
ವಿಧ: ಪುಸ್ತಕ ವಿಮರ್ಶೆ
October 07, 2022
ಜೈವಿಕ ಮಹಾಯುದ್ಧ ಮುಂದೇನು...? ಇದು ಕೆ. ನಟರಾಜ್ ಅವರ ಹದಿಮೂರನೆಯ ಪುಸ್ತಕ. ಈ ಪುಸ್ತಕ ಇಂದಿನ ರಾಷ್ಟ್ರ-ರಾಷ್ಟ್ರಗಳ ವಿನಾಶದ ತೊಳಲಾಟವನ್ನು ಪ್ರತಿಬಿಂಬಿಸುತ್ತದೆ. ಮನುಷ್ಯ ನಾಗರೀಕತೆಯ ಹೊಸ್ತಿಲಲ್ಲಿ ಹೆಜ್ಜೆ ಇಟ್ಟಾಗಿನಿಂದ ಆತನ ವಿಲಕ್ಷಣ ಮನಸ್ಸು ವಿನಾಶದ ಕಡೆಗೇ ತುಡಿಯುತ್ತಿರುವುದು ಇತಿಹಾಸ ಕಂಡುಕೊಂಡ ಸತ್ಯ. ಮಾನವನ ಅಭ್ಯುದಯಕ್ಕೆ ವಿಜ್ಞಾನ ಆವಿಷ್ಕಾರಗೊಳ್ಳುತ್ತಿರುವಂತೆಯೇ ಅದರ ಇನ್ನೊಂದು ವಿನಾಶದ, ವಿಧ್ವಂಸದ ಮಜಲು ತೆರೆದುಕೊಳ್ಳುತ್ತಿರುವುದನ್ನು ಇತಿಹಾಸದ ಪುಟ ಪುಟಗಳಲ್ಲಿ ಕಾಣಬಹುದು…
ವಿಧ: ಪುಸ್ತಕ ವಿಮರ್ಶೆ
October 06, 2022
ಪ್ರಾಚೀನ ಭಾರತದ ಸಾಧನೆಯನ್ನು ತಿಳಿಸುವ ಲೇಖನಗಳ ಸಂಗ್ರಹ ಈ ಕೃತಿ. ಇದರ ಪ್ರಕಟಣೆಗೆ ಸಹಕಾರ ನೀಡಿದವರು ಸುರತ್ಕಲ್ನ ಶ್ರೀ ಶಾರದಾ ಮಹೋತ್ಸವ ಸಮಿತಿ. 2016ರಲ್ಲಿ ಅದರ 42ನೇ ಶಾರದೋತ್ಸವ ಸಂದರ್ಭದಲ್ಲಿ ಇದನ್ನು ಪ್ರಕಟಿಸಲಾಯಿತು.
ಶಾರದೋತ್ಸವದಲ್ಲಿ ಭಕ್ತರು ಶಾರದೆಯನ್ನು ಪೂಜಿಸಿ, ಪ್ರಸಾದವನ್ನು ಕೊಂಡೊಯ್ಯುವುದರ ಜೊತೆಗೆ, ಸಂಸ್ಕಾರ ನೀಡುವ ಕೃತಿಯೊಂದನ್ನು ಪ್ರಸಾದರೂಪವಾಗಿ ಒಯ್ದು ಮನೆಮಂದಿಗೆ ಸಂಸ್ಕಾರದ ಸುಗಂಧವನ್ನೂ ನೀಡುವಂತಾಗಬೇಕೆಂಬುದು ಸಮಿತಿಯ ಆಶಯ. ಅದಕ್ಕಾಗಿ, ಸಂಸ್ಕಾರಪೂರ್ಣ…
ವಿಧ: ಪುಸ್ತಕ ವಿಮರ್ಶೆ
October 05, 2022
ಮಾನಸಗಂಗೋತ್ರಿ, ಮೈಸೂರು ಇದರ ಪ್ರಸಾರಾಂಗ ವಿಭಾಗದವರು ‘ಪ್ರಚಾರ ಪುಸ್ತಕ ಮಾಲೆ' ಎಂಬ ಹೆಸರಿನಲ್ಲಿ ಉತ್ತಮ, ಮಾಹಿತಿದಾಯಕ ಸರಣಿ ಪುಸ್ತಕಗಳನ್ನು ಹೊರತರುತ್ತಿದ್ದರು. ಈ ಮಾಲೆಯ ೧೧ ನೇ ಪ್ರಕಟಣೆಯೇ ಎ. ನಾರಾಯಣ ರಾವ್ ಅವರು ಬರೆದ ‘ಪ್ರಾಣಿ ಜೀವನ' ಎಂಬ ಪುಸ್ತಕ. ಪುಸ್ತಕ ಸುಮಾರು ೪ ದಶಕಗಳಷ್ಟು ಹಿಂದಿನದಾದರೂ ಬಹಳಷ್ಟು ಉತ್ತಮ ಮಾಹಿತಿಗಳನ್ನು ಒಳಗೊಂಡಿದೆ.
ಮೈಸೂರು ವಿಶ್ವವಿದ್ಯಾನಿಲಯದ ಅಂದಿನ ಉಪಕುಲಪತಿಗಳಾದ ಇ ಜಿ ಮೆಕಾಲ್ಪೈನ್ ಅವರು ತಮ್ಮ ಮುನ್ನುಡಿಯಲ್ಲಿ ಈ ರೀತಿಯಾಗಿ ಅಭಿಪ್ರಾಯಗಳನ್ನು…
ವಿಧ: ಪುಸ್ತಕ ವಿಮರ್ಶೆ
October 01, 2022
ಅಮರ ಸುಳ್ಯ ೧೮೩೪-೩೭ರ ಜನತಾ ಬಂಡಾಯದ ಖ್ಯಾತಿಯ ‘ಸಂಘಟನಾ ಚತುರ ಕೆದಂಬಾಡಿ ರಾಮಗೌಡ' ಬಗ್ಗೆ ಡಾ.ಪೂವಪ್ಪ ಕಣಿಯೂರು ಇವರು ಒಂದು ಪುಸ್ತಕವನ್ನು ಬರೆದಿದ್ದಾರೆ. ಈ ಕೃತಿಯನ್ನು ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ವಿಶ್ವವಿದ್ಯಾಲಯವು ಪ್ರಕಾಶಿಸಿದೆ. ಪುಸ್ತಕದ ಬೆನ್ನುಡಿಯಲ್ಲಿ ಕಂಡು ಬಂದ ಬರಹ ಹೀಗಿದೆ-
“ ಅಖಂಡ ಭಾರತದ ರಾಷ್ಟ್ರೀಯತೆಯ ಪರಿಕಲ್ಪನೆ ಹುಟ್ಟಿಕೊಳ್ಳುವ ೧೮೮೫ಕ್ಕಿಂತ ಪೂರ್ವದಲ್ಲಿ ವಸಾಹತುಶಾಹಿ ಬ್ರಿಟೀಷರ ವಿರುದ್ಧ ನಡೆದ ಪ್ರತಿರೋಧಗಳು ಪ್ರಾದೇಶಿಕ ಮಿತಿಯಲ್ಲಿ ಮತ್ತು ರಾಜಪ್ರಭುತ್ವದ…
ವಿಧ: ಬ್ಲಾಗ್ ಬರಹ
September 30, 2022
ಹಿಂದೊಮ್ಮೆ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಿಂದ ಇಳಿಸಿಕೊಂಡು ಇಟ್ಟಿದ್ದ ಪುಸ್ತಕಗಳಲ್ಲಿ (ಅವುಗಳು ಈಗ archive.org ತಾಣದಲ್ಲಿ ಸಿಗುತ್ತವೆ) ಒಂದು ಐತಿಹಾಸಿಕ ಕಾದಂಬರಿಯನ್ನು ಓದುತ್ತಿದ್ದಾಗ ಮುನ್ನುಡಿಯಲ್ಲಿ "ಆನಂದ ರಾಮಾಯಣ"ದ ಉಲ್ಲೇಖ ಇತ್ತು.
ಏನಿದು ಆನಂದ ರಾಮಾಯಣ ? ಗೂಗಲ್ ಮಾಡಿದಾಗ ಕೆಲವು ಮಾಹಿತಿ ಸಿಕ್ಕಿತು. ನಮಗೆ ಗೊತ್ತಿರುವ ವಾಲ್ಮೀಕಿ ರಾಮಾಯಣವು ಶೋಕರಾಮಾಯಣವಂತೆ. ಏಕೆಂದರೆ ಅದರಲ್ಲಿ ವಿರಹ ಮತ್ತು ಶೋಕ ಹೆಚ್ಚಾಗಿದೆ ಅಂತೆ . ಆನಂದ ರಾಮಾಯಣ ಹಾಗಲ್ಲವಂತೆ. ಇದು 15ನೇ…
ವಿಧ: ಪುಸ್ತಕ ವಿಮರ್ಶೆ
September 29, 2022
ಡಾ॥ ಬಿ.ಎಸ್.ಶೈಲಜಾ ಇವರ ಸಂಪಾದಕತ್ವದಲ್ಲಿ ನವಕರ್ನಾಟಕ ಪ್ರಕಾಶನ ಇವರು ಹೊರತಂದಿರುವ ಆಕಾಶ ವೀಕ್ಷಣೆಗೆ ಮಾರ್ಗದರ್ಶಿ ಪುಸ್ತಕವೇ ‘ಬಾನಿಗೊಂದು ಕೈಪಿಡಿ'. ಈ ಪುಸ್ತಕದ ಬೆನ್ನುಡಿಯಲ್ಲಿ "ಹೊಸತು ಪತ್ರಿಕೆಯ ವಿವಿಧ ಸಂಚಿಕೆಗಳಲ್ಲಿ ಪ್ರಕಟವಾಗಿರುವ ಹಲವಾರು ವಿಷಯಗಳಿಗೆ ಸಂಬಂಧಿಸಿದ ಲೇಖನಗಳನ್ನು ವಿಷಯವಾರಾಗಿ ವಿಂಗಡಿಸಿ 'ಹೊಸತು ವಾಚಿಕೆ' ರೂಪದಲ್ಲಿ ಓದುಗರಿಗೆ ನೀಡುತ್ತಿದ್ದೇವೆ. ಯಾವುದೇ ವಿಷಯಕ್ಕೆ ಸಂಬಂಧಿಸಿದ ಲೇಖನಗಳು ಒಂದೆಡೆ ದೊರೆತರೆ ಬೌದ್ಧಿಕ ಮತ್ತು ಕ್ರಿಯಾತ್ಮಕ ಚರ್ಚೆಗೆ ಅನುವು…
ವಿಧ: ಪುಸ್ತಕ ವಿಮರ್ಶೆ
September 28, 2022
ಹಿಂದು ಧರ್ಮದ ಬಗ್ಗೆ ಎಲ್ಲ ಅವಶ್ಯ ಮಾಹಿತಿಯನ್ನು ಎಲ್ಲರಿಗೂ ಅರ್ಥವಾಗುವಂತೆ ವಿವರಿಸುವ ಪುಸ್ತಕ ಇದು. ಲೇಖಕರು 1939ರಲ್ಲಿ ಆಗಿನ ಮದ್ರಾಸಿನ ಪಚ್ಚೆಯಪ್ಪಾ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿದ್ದಾಗ, ಆ ಸಂಸ್ಥೆಯಲ್ಲಿ ಧಾರ್ಮಿಕ ಶಿಕ್ಷಣವನ್ನು ಪ್ರಸ್ತುತಗೊಳಿಸಲಿಕ್ಕಾಗಿ ಬರೆದ ಪುಸ್ತಕ. ಇದನ್ನು ಎನ್. ಪಿ. ಶಂಕರನಾರಾಯಣ ರಾವ್ ಕನ್ನಡಕ್ಕೆ ಅನುವಾದಿಸಿದ್ದಾರೆ.
ಇಂಗ್ಲಿಷಿನಲ್ಲಿ “ವಾಟ್ ಈಸ್ ಹಿಂದುಯಿಸಂ" ಎಂಬ ಶೀರ್ಷಿಕೆಯ ಈ ಪುಸ್ತಕ ಹಲವಾರು ಬಾರಿ ಮರುಮುದ್ರಣಗೊಂಡಿದೆ. ಇದು ಅದರ ತಿದ್ದಿದ ಆವೃತ್ತಿ…
ವಿಧ: ಪುಸ್ತಕ ವಿಮರ್ಶೆ
September 27, 2022
ಈಗಾಗಲೇ ‘ಕೂರ್ಗ್ ರೆಜಿಮೆಂಟ್' ಎಂಬ ಕಥಾ ಸಂಕಲನದ ಮೂಲಕ ಪರಿಚಯವಾಗಿರುವ ಮೇಜರ್ ಕುಶ್ವಂತ್ ಕೋಳಿಬೈಲು ಅವರ ಮತ್ತೊಂದು ಕಥಾ ಸಂಕಲನ ಬಿಡುಗಡೆಯಾಗಿದೆ. ಈ ಪುಸ್ತಕದ ಕಥೆಗಳೂ ಮಡಿಕೇರಿಯ ಪರಿಸರದಲ್ಲೇ ನಡೆದಿರುವುದರಿಂದ ಇದಕ್ಕೆ ‘ಕಾವೇರಿ ತೀರದ ಕಥೆಗಳು' ಎಂದು ಹೆಸರಿಸಿದ್ದಾರೆ. ಕುಶ್ವಂತ್ ಕೋಳಿಬೈಲು ಅವರ ಬರವಣಿಗೆಯ ಶೈಲಿ ಬಹಳ ಆಪ್ತವಾಗುತ್ತದೆ ಮತ್ತು ಸೊಗಸಾಗಿ ಓದಿಸಿಕೊಂಡು ಹೋಗುತ್ತದೆ. ಕಥೆಗಳು ನಮ್ಮ ಸುತ್ತಮುತ್ತಲಿನಲ್ಲೆಲ್ಲೋ ನಡೆದಿದೆ ಎಂದು ಭಾಸವಾಗುತ್ತದೆ. ಲೇಖಕರು ಭಾರತೀಯ ಸೈನ್ಯದಲ್ಲಿ…
ವಿಧ: ಪುಸ್ತಕ ವಿಮರ್ಶೆ
September 24, 2022
ಹಿರಿಯ ಪತ್ರಕರ್ತ ಹಾಗೂ ‘ವಿಶ್ವವಾಣಿ’ ಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್ ಅವರ ಬಗ್ಗೆ ಅವರ ಅಭಿಮಾನಿಯೂ, ಆ ಪತ್ರಿಕೆಯ ಅಂಕಣಕಾರರೂ, ಬಹ್ರೈನ್ ನಿವಾಸಿಯೂ ಆಗಿರುವ ಕಿರಣ್ ಉಪಾಧ್ಯಾಯ ಇವರು ಬರೆದ ಪುಸ್ತಕವೇ ‘ವಿಶ್ವತೋಮುಖ'. ಪುಸ್ತಕ ಎಷ್ಟು ಸೊಗಸಾಗಿ ಮುದ್ರಿತವಾಗಿದೆ ಎಂದರೆ ನೋಡಿದ ಕೂಡಲೇ ಕೈಯಲ್ಲಿ ಹಿಡಿದು ಮುಟ್ಟಿ ಮುಟ್ಟಿ ನೋಡುವ ಆಸೆಯಾಗುತ್ತದೆ. ಬಹಳ ಸುಂದರ ಮುದ್ರಣ ಹಾಗೂ ಮುದ್ರಣಕ್ಕೆ ಬಳಸಿದ ಪೇಪರ್. ಈ ವಿಷಯವನ್ನು ಪುಸ್ತಕಕ್ಕೆ ‘ಶ್ರೀ ನುಡಿ' ಗಳನ್ನು ಬರೆದ ಸುತ್ತೂರು ಮಠಾಧೀಶರಾದ…