ವಿಧ: ಬ್ಲಾಗ್ ಬರಹ
September 14, 2022
ಈ ತನಕ ನಾನು ಕೇಳಿ ಇಷ್ಟ ಪಟ್ಟ ಪರಭಾಷೆಗಳ ಅನೇಕ ಗೀತೆಗಳನ್ನು ನನ್ನ ಸಂತೋಷಕ್ಕಾಗಿ ಆದಷ್ಟು ಅನುವಾದ / ಭಾವಾನುವಾದ ಮಾಡಿಕೊಂಡು ನಾನೇ ಹಾಡಿಕೊಂಡು ರೆಕಾರ್ಡ್ ಮಾಡಿಕೊಂಡು ಕೇಳುತ್ತ ಖುಷಿ ಪಡುತ್ತಿದ್ದೇನೆ.
ಅವನ್ನು ನೀವೂ ನೋಡಿ. ಇಷ್ಟವಾದರೆ ಬೇಕಾದರೆ ಹಾಡಿಕೊಂಡು ಸಂತೋಷ ಪಡಿ. ರೆಕಾರ್ಡ್ ಮಾಡಿಕೊಂಡ ನನ್ನ ಹಾಡುಗಳ ಅಂತರ್ಜಾಲ ಕೊಂಡಿಯನ್ನು ಕೂಡ ಕೊಟ್ಟಿದ್ದೇನೆ . ಅದನ್ನು ಕೇಳಿ . ಬೇಕಾದರೆ ಅದನ್ನು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಗೆ ಉಳಿಸಿಕೊಂಡು ಬೇಕಾದಾಗ ಕೇಳಿ ಸಂತೋಷಪಡಿ.
ಇತ್ತೀಚೆಗೆ…
ವಿಧ: ಪುಸ್ತಕ ವಿಮರ್ಶೆ
September 13, 2022
ಕರ್ನಾಟಕದಲ್ಲಿ 'ಸಂವಿಧಾನದ ಓದು' ಎಂಬ ಆಂದೋಲನವನ್ನೇ ಪ್ರಾರಂಭಿಸಿ, ವಿವಿಧ ನಗರಗಳಲ್ಲಿ ಸಂಚರಿಸಿ ಭಾರತದ ಸಂವಿಧಾನದ ಆಶಯಗಳನ್ನು ಮನೆ-ಮನಗಳಿಗೆ, ಶಾಲಾ-ಕಾಲೇಜುಗಳಿಗೆ ತಲುಪಿಸುವ ಮಹತ್ವದ ಕೆಲಸವನ್ನು ಮಾಡಿದ ನ್ಯಾಯಮೂರ್ತಿ ಹೆಚ್ ಎನ್ ನಾಗಮೋಹನದಾಸ್ ಇವರು ಬರೆದ ಕೃತಿಯೇ'ಸಂವಿಧಾನ ಮತ್ತು ವಚನಗಳು'.
ಪುಸ್ತಕದ ಬೆನ್ನುಡಿಯಲ್ಲಿ ಸಾಹಿತಿ ಡಾ. ಸಿದ್ಧನಗೌಡ ಪಾಟೀಲ ಇವರು ಅಭಿಪ್ರಾಯ ಪಡುವಂತೆ "ಸಂವಿಧಾನದ ಮೂಲ ಆಶಯಗಳು ಜನಪರವಾದ ತತ್ವಶಾಸ್ತ್ರೀಯ ಚಿಂತನೆಗಳಲ್ಲೂ ಹೇಗೆ ಪ್ರತಿಪಾದನೆಗೊಂಡಿದೆ ಎಂಬ…
ವಿಧ: ಪುಸ್ತಕ ವಿಮರ್ಶೆ
September 11, 2022
ಅರವಿಂದ ಚೊಕ್ಕಾಡಿಯವರು ಬರೆದ ಸುಂದರ ಕೃತಿ 'ಮೂರನೆಯ ಇರುವು'. ಪುಸ್ತಕದ ಬೆನ್ನುಡಿಯಲ್ಲಿ ಯು ಆರ್ ಅನಂತಮೂರ್ತಿ ಇವರು ಹೀಗೆ ಬರೆದಿದ್ದಾರೆ " ಕನ್ನಡ ಭಾಷೆಯಲ್ಲಿ ಯಾವುದಾದರೂ ಒಂದು ವಿಷಯವನ್ನು ಕುರಿತು ದೀರ್ಘವಾಗಿ ಸಮಗ್ರವಾಗಿ ಯೋಚಿಸಿ ಬರೆದಿರುವವರ ಸಂಖ್ಯೆ ತೀರಾ ವಿರಳ. ಅರವಿಂದ ಚೊಕ್ಕಾಡಿ ಅವರ ಈ ಪುಸ್ತಕ ವಿನಾಯಿತಿ. ಬ್ರಿಟಿಷ್ ವಿಮರ್ಶಕನೊಬ್ಬ ಶೋಧನಾತ್ಮಕವಾದ ಬರಹಗಾರರಿಗೆ ಒಂದು ಸೂಚನೆ ಕೊಡುತ್ತಾನೆ "Only Connect” ಅಂದರೆ ಸಂಬಂಧವಿರದಂತೆ ಕಾಣುವ ವಿಷಯಗಳಲ್ಲಿ ಸಂಬಂಧಗಳನ್ನು ಕಂಡಾಗ…
ವಿಧ: ಪುಸ್ತಕ ವಿಮರ್ಶೆ
September 08, 2022
ಸಾಹಿತಿ ಶೋಭಾ ರಾವ್ ಅವರು 'ಹನಿ ಕಡಿಯದ ಮಳೆ' ಎಂಬ ಪ್ರಬಂಧ ಮಾಲೆಯನ್ನು ರಚಿಸಿದ್ದಾರೆ. ಈ ಕೃತಿಗೆ ಮಾಲಿನಿ ಗುರುಪ್ರಸನ್ನ ಅವರು ಬೆನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಬೆನ್ನುಡಿಯಲ್ಲಿ "ಸಿಕ್ಕಿದ್ದನ್ನು ಸಿಕ್ಕ ಹಾಗೆಯೇ ಬಳಸಲಾಗದ ಕೆಸ, ಕಳಲೆ ಬದುಕಿನಲ್ಲಿ ಸಂಸ್ಕರಣದ ಅಗತ್ಯವನ್ನು ಎತ್ತಿಹಿಡಿಯುತ್ತಲೇ ಬಾಯಲ್ಲಿ ನೀರೂರಿಸುತ್ತದೆ. ಯಾರು ಪಳಗಿಸಿದರು ಮೊದಲು ಇವನ್ನು? ಮುಟ್ಟಿದರೆ ತುರಿಸುವ ಕೆಸು, ಬಾಯಿಗಿಡಲಾಗದಷ್ಟು ಕಪ್ಪಟೆ ಕಹಿ ಕಳಲೆಯನ್ನು ಇಷ್ಟು ರುಚಿಕಟ್ಟಾಗಿ ಉಣ್ಣಬಹುದು ಎಂದು…
ವಿಧ: ಪುಸ್ತಕ ವಿಮರ್ಶೆ
September 06, 2022
ಬಿ ಎಸ್ ಜಯಪ್ರಕಾಶ್ ನಾರಾಯಣ ಇವರು ತಮ್ಮ ಅಂತರಂಗದ ಅನನ್ಯರ ಬಗ್ಗೆ ಬರೆದ 'ಜೀವ ಜೀವದ ನಂಟು' ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಜಿ.ಬಿ.ಹರೀಶ್ ಇವರು. ತಮ್ಮ ಮುನ್ನುಡಿಯಲ್ಲಿ "ಸಮಾಜ ಎಂದರೆ ಮನುಷ್ಯರ ವಿಚಿತ್ರಗತಿಯ ಒಕ್ಕೂಟ. ಕಾಲ ಪ್ರವಾಹದಲ್ಲಿ ಅದು ಉಬ್ಬಿ, ಸಂಕೋಚಗೊಂಡು ಒಂದು ನದಿ ಹೇಗೆ ಯುಗಯುಗಗಳಿಗೆ ತನ್ನ ಪಾತ್ರ ಬದಲಿಸುತ್ತದೆಯೋ ಹಾಗೆ ಬದಲಾಗುತ್ತದೆ. ನಾನು ಮತ್ತು ಜೆ ಪಿ ಒಂದೇ ಜಿಲ್ಲೆಯವರು. ಅವರು ಬೆಳೆದದ್ದು ತೆಂಗಿನ ಸೀಮೆಯಲ್ಲಿ. ನಾನು ಬೆಳೆದದ್ದು ಅರೆಮಲೆನಾಡಿನ ಹಾಸನ…
ವಿಧ: ಪುಸ್ತಕ ವಿಮರ್ಶೆ
September 03, 2022
ವಿಜಯ ನಗರ ಸಾಮ್ರಾಜ್ಯದ ಬಗ್ಗೆ ಹಲವಾರು ಉತ್ತಮ ಪುಸ್ತಕಗಳು ಹೊರಬಂದಿವೆ. ಅದೇ ಸಾಲಿಗೆ ಸೇರುವ ಮತ್ತೊಂದು ಪುಸ್ತಕ ಖ್ಯಾತ ಸಾಹಿತಿ ಕೌಂಡಿನ್ಯ ಇವರು ಬರೆದ 'ಆ ವಿಜಯನಗರ'. ಇದೊಂದು ಐತಿಹಾಸಿಕ ಕಾದಂಬರಿ. ವಿಜಯನಗರದ ವೀರಪುತ್ರನ ಯಶೋಗಾಥೆಯನ್ನು ಹೇಳುವ ಕಾದಂಬರಿ ಎನ್ನುತ್ತಾರೆ ಲೇಖಕರು. ಯಾರು ವಿಜಯನಗರದ ವೀರಪುತ್ರ? ಎಂಬ ಕುತೂಹಲವೇ? ತಿಳಿಯಲು ಈ ಐತಿಹಾಸಿಕ ಕಾದಂಬರಿಯನ್ನು ಓದಿ.
ಪುಸ್ತಕದ ಬೆನ್ನುಡಿಯಲ್ಲಿ ಕಂಡ ಬರಹ "ಹಿಂದೂಗಳ, ಹಿಂದೂ ಧರ್ಮದ ರಕ್ಷಾ ಕವಚವಾಗಿ, ಸಾಮ್ರಾಜ್ಯ ವಿಸ್ತರಣೆ ಮತ್ತು…
ವಿಧ: ಪುಸ್ತಕ ವಿಮರ್ಶೆ
September 02, 2022
ಜಗದ್ವಿಖ್ಯಾತ ಸ್ತ್ರೀವಾದಿ ಚಿಂತಕಿ ಕೇಟ್ ಮಿಲೆಟ್ ಅವರ 'Sexual Politics’ ಕೃತಿಯ ಕನ್ನಡ ನಿರೂಪಣೆ ಶ್ರೀಮತಿ ಎಚ್ ಎಸ್ ಅವರಿಂದ ಮೊದಲ ಬಾರಿ ಕನ್ನಡಕ್ಕೆ ಅನುವಾದಗೊಂಡಿದೆ. ಇದು ಸ್ತ್ರೀವಾದ ಕ್ಷೇತ್ರದಲ್ಲಿ ಒಂದು ಕ್ರಾಂತಿಕಾರಿ ಕೃತಿ ಎಂದೇ ಹೇಳಬಹುದು. ಪುರುಷ ಪ್ರಧಾನತೆಯ ಹೆಣ್ಣನ್ನು ಲೈಂಗಿಕತೆಯ ಮೂಲಕ ಅಧೀನಗೊಳಿಸಿರುವುದನ್ನು ಕೂಲಂಕುಷವಾಗಿ ತೆರೆದಿಡುತ್ತದೆ. ಲೈಂಗಿಕತಾ ರಾಜಕಾರಣದ ಅನೇಕ ಆಯಾಮಗಳನ್ನು ಸಮರ್ಪಕವಾದ, ಖಚಿತವಾದ ನೆಲೆಯಲ್ಲಿ ಶೋಧಿಸಿದೆ. ಅಧಿಕಾರವು ಪುರುಷ ಪ್ರಧಾನತೆಯನ್ನು…
ವಿಧ: ಪುಸ್ತಕ ವಿಮರ್ಶೆ
August 30, 2022
"ಮಂಜೇಶ್ವರದ ಸಾರಸ್ವತ ಕೊಂಕಣಿ ಮನೆತನದ ಪುಟ್ಟ ಬಾಲೆ ಅಮ್ಮಣು ಆರೇಳರ ಹರೆಯದ ಬಾಲ್ಯದ ತನ್ನ ಅರಸುವ ಕಣ್ಗಳಿಂದ ಕಂಡ ಕಥನವಿದು ! ಒಂದೊಂದು ಅಧ್ಯಾಯವನ್ನು ಓದುತ್ತಿದ್ದಂತೆ ನಾನು ಆ ಬರಹದಲ್ಲಿ ಜಿನುಗುತ್ತಿದ್ದ ವಾತ್ಸಲ್ಯದ ಧಾರೆಯಲ್ಲಿ ತೊಯ್ದು ಹೋದೆ. ಎಂಬತ್ತು ವರ್ಷಗಳ ಹಿಂದೆ ನಿಧಾನವಾಗಿ ಸರಿದು ಹೋದ ಎಂಥ ಸುಂದರ ದಿನಗಳವು ! ಬಾಲ್ಯಕಾಲ ಬೀಸಿದ ಆ ತಂಬೆಲರ ಮಾಯಾಜಾಲದೊಳಗೆ ನಾನು ಕಳೆದೇ ಹೋದೆ.
ಸಾರಸ್ವತ ಕೊಂಕಣಿ ಸಮಾಜದ ಆಗಿನ ಕಾಲದ ಜನರ ಜೀವನದ ರೀತಿ, ನೀತಿಗಳು ಉತ್ತಮ ದಾಖಲಾತಿ ಕೃತಿಯುದ್ದಕ್ಕೂ…
ವಿಧ: ರುಚಿ
August 29, 2022
ಸಿಪ್ಪೆ ಸುಲಿದ ಹಸಿ ಗೇರುಬೀಜ ಮತ್ತು ಆಲೂಗಡ್ಡೆಯನ್ನು ಬೇಯಿಸಿರಿ. ಒಂದು ಮಿಕ್ಸಿ ಜಾರಿನಲ್ಲಿ ತೆಂಗಿನ ಕಾಯಿತುರಿ, ಸ್ವಲ್ಪ ಹುಳಿ, ಹುರಿದ ಕೆಂಪು ಮೆಣಸು ಹಾಕಿ ನುಣ್ಣಗೆ ರುಬ್ಬಿರಿ. ಬೇಯಿಸಿ ಇಟ್ಟ ಗೇರುಬೀಜ ಮತ್ತು ಆಲೂಗಡ್ಡೆಗೆ ಈ ಮಸಾಲೆ ಬೆರೆಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಸಿರಿ. ಆನಂತರ ಒಗ್ಗರಣೆ ಹಾಕಿ. ಒಗ್ಗರಣೆಗೆ ೫ ಚಮಚ ತೆಂಗಿನೆಣ್ಣೆ, ೧ ಚಮಚ ಸಾಸಿವೆ, ಇಂಗು, ಕರಿಬೇವು ಉಪಯೋಗಿಸಿ. ಈಗ ಹಸಿ ಗೇರುಬೀಜ, ಆಲೂಗಡ್ಡೆ ಹುಮ್ಮಣ ಊಟಕ್ಕೆ ರೆಡಿ.
-- ಗಾಯತ್ರಿ ಕಾಮತ್
ವಿಧ: ರುಚಿ
August 28, 2022
೨ ಚಿಕ್ಕ ಹಾಗಲಕಾಯಿಗಳನ್ನು ಹಿಂದಿನ ದಿನವೇ ಸಣ್ಣ ಸಣ್ಣ ತುಂಡುಗಳಾಗಿ ಮಾಡಿ ಉಪ್ಪಿನೊಡನೆ ಬೆರೆಸಿ ಇಡಿ. ಬೆಳಿಗ್ಗೆ ಹಾಗಲಕಾಯಿಗಳಲ್ಲಿದ್ದ ಉಪ್ಪನ್ನೆಲ್ಲ ಹಿಂಡಿ ತೆಗೆಯಿರಿ. ನಂತರ ಕಾವಲಿಯಲ್ಲಿ ಎಣ್ಣೆಯಿಟ್ಟು ಹಾಗಲಕಾಯಿ ತುಂಡುಗಳನ್ನು ಕೆಂಪು ಬಣ್ಣ ಬರುವವರೆಗೆ ಹುರಿದು ತೆಗೆದಿಟ್ಟುಕೊಳ್ಳಿ.
ಊಟ ಮಾಡುವ ಹೊತ್ತಿಗೆ ೨ ಈರುಳ್ಳಿಯನ್ನು ಸಣ್ಣಗೆ ಹಚ್ಚಿ. ೫ ಹಸಿ ಮೆಣಸಿನಕಾಯನ್ನು ಚಿಕ್ಕದಾಗಿ ಹಚ್ಚಿರಿ. ಸ್ವಲ್ಪ ತೆಂಗಿನಕಾಯಿ ತುರಿಯೊಂದಿಗೆ, ಹಚ್ಚಿದ ಈರುಳ್ಳಿ, ಹಸಿಮೆಣಸಿನಕಾಯನ್ನು ಮತ್ತು…