ವಿಧ: ಪುಸ್ತಕ ವಿಮರ್ಶೆ
November 03, 2022
ಶಿಕಾರಿ ಕತೆಗಳು ಅಪರೂಪದ ಬರಹಗಳು. ಇದರಲ್ಲಿನ ನಾಲ್ಕು ಶಿಕಾರಿಗಳಲ್ಲಿ ಕೋವಿ ಗುರಿಯಿಟ್ಟವರು, ಅನಂತರ ಅದನ್ನೆಲ್ಲ ರೋಚಕವಾಗಿ ಇಂಗ್ಲಿಷಿನಲ್ಲಿ ಬರೆದವರು ನರಭಕ್ಷಕ ಹುಲಿಗಳ ಬೇಟೆಯ ದಂತಕತೆಯಾಗಿರುವ ಬೇಟೆಗಾರ ಕೆನ್ನೆತ್ ಆಂಡರ್ ಸನ್. ಅದನ್ನು ಸಮರ್ಥವಾಗಿ ಕನ್ನಡಕ್ಕೆ ಸಂಗ್ರಹಾನುವಾದ ಮಾಡಿದವರು ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು.
ಇದರ ಮೊದಲ ಶಿಕಾರಿ ಕತೆಯೇ ಪುಸ್ತಕದ ಶೀರ್ಷಿಕೆ ಕತೆ: ಮುನಿಶಾಮಿ ಮತ್ತು ಮಾಗಡಿ ಚಿರತೆ. ಮುನಿಶಾಮಿ ಎಂಬಾತ ಆಗಾಗ ಬೆಂಗಳೂರಿಗೆ ಬರುತ್ತಿದ್ದ. ಶಿಕಾರಿಯ ಹುಚ್ಚು…
ವಿಧ: ಪುಸ್ತಕ ವಿಮರ್ಶೆ
November 01, 2022
ವೀರ ಸಾವರ್ಕರ್ ಎಂಬ ಹೆಸರು ಈಗ ಬಹು ಚರ್ಚಿತವಾಗುತ್ತಿರುವ ಸಂಗತಿ ಎಲ್ಲರಿಗೂ ತಿಳಿದಿರುವಂತದ್ದೇ. ಸಾವರ್ಕರ್ ಅವರು ದೇಶಭಕ್ತರೇ, ಸ್ವಾತಂತ್ರ್ಯ ಯೋಧರೇ, ಗಾಂಧೀಜಿ ಹತ್ಯೆಯಲ್ಲಿ ಅವರ ಕೈವಾಡವಿದೆಯೇ, ಎರಡು ಜೀವಾವಧಿ ಶಿಕ್ಷೆಗಳನ್ನು ಅವರು ಅಂಡಮಾನಿನ ಸೆಲ್ಯುಲಾರ್ ಜೈಲಿನಲ್ಲಿ ಹೇಗೆ ಕಳೆದರು? ಅಲ್ಲಿನ ಯಾತನಾಮಯ ದಿನಗಳು ಹೇಗಿದ್ದವು? ಅವರು ಬ್ರಿಟೀಷ್ ಸರಕಾರಕ್ಕೆ ಕ್ಷಮಾಪಣಾ ಅರ್ಜಿ ಬರೆದದ್ದು ಹೌದೇ? ಈ ಎಲ್ಲಾ ಸಂಶಯಗಳನ್ನು ನಿವಾರಣೆ ಮಾಡಲು ಖ್ಯಾತ ವಾಗ್ಮಿ, ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಇವರು…
ವಿಧ: ಪುಸ್ತಕ ವಿಮರ್ಶೆ
October 29, 2022
ಮಂಗಳೂರಿನ ಸಾವಯವ ಕೃಷಿಕರ ಬಳಗವು ‘ವಿಷಮುಕ್ತ ಅನ್ನದ ಬಟ್ಟಲಿನತ್ತ ಪುಟ್ಟ ಹೆಜ್ಜೆ' ಎಂಬ ಪರಿಕಲ್ಪನೆಯ ಮಾಲಿಕೆಯ. ಮೊದಲ ಕೃತಿಯಾಗಿ ‘ಕೈತೋಟ ಕೈಪಿಡಿ' ಎಂಬ ಪುಟ್ಟ ಆದರೆ ಮಹತ್ವಪೂರ್ಣ ಪುಸ್ತಕವನ್ನು ಹೊರತಂದಿದ್ದಾರೆ. ಸ್ವತಃ ಪ್ರಗತಿಪರ, ಸಾವಯವ ಕೃಷಿಕರಾದ ಪುತ್ತೂರಿನ ಮಂಜುನಾಥ ಫಾರ್ಮ್ಸ್ ನ ಹರಿಕೃಷ್ಣ ಕಾಮತ್ ಅವರು ಉತ್ತಮ ಮಾಹಿತಿಗಳನ್ನು ವಿವಿಧ ಮೂಲಗಳಿಂದ ಹೆಕ್ಕಿ ತಂದು ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ.
ಪುಸ್ತಕಕ್ಕೆ ಮೊದಲ ಮಾತನ್ನು ಬರೆದಿದ್ದಾರೆ, ಸಾವಯವ ಕೃಷಿಕ ಗ್ರಾಹಕ ಬಳಗ ಇದರ…
ವಿಧ: ಪುಸ್ತಕ ವಿಮರ್ಶೆ
October 27, 2022
ಕೆ ಆರ್ ಉಮಾದೇವಿ ಉರಾಳ ಇವರ ನೂತನ ಪ್ರಬಂಧಗಳ ಸಂಕಲನವೇ ‘ಮುಳ್ಳುಬೇಲಿಯ ಹೂಬಳ್ಳಿ’. ಹಲವು ನೆನಪುಗಳು ಜೀವನ ತತ್ವವೊಂದನ್ನು ಅರಿವಿಗೆ ತರುವುದಕ್ಕೆ 'ಬೇವೆಂದೆಣಿಸಿದ್ದು ಬೆಲ್ಲವೆಂದೆನಿಸುವಾಗ' ಪ್ರಬಂಧ ಸಾಕ್ಷಿ. ಒಂದು ರಸ್ತೆ ಅಪಘಾತದ ನೋವು ಹಿಂಸೆಗಳಿಂದ ಕೊನೆಗೂ ಚೇತರಿಸಿಕೊಂಡು ವಾಕರಿನಲ್ಲಿ ನಡೆಯಲು ಪ್ರಾರಂಭಿಸಿದಾಗ ಲೇಖಕಿಗೆ ಸರಳ ತತ್ವ ಸಾಕ್ಷಾತ್ಕಾರವಾದ ಅನುಭವವಾಗುತ್ತದೆ. 'ಇದೆ' ಅಂದುಕೊಂಡರೆ ಎಲ್ಲವೂ ಇದೆ: 'ಇಲ್ಲ' ಅಂದುಕೊಂಡರೆ ಯಾವುದೂ ಇಲ್ಲ. ಹಾಗಾಗಿ 'ಇದೆ' ಎಂಬ ಭಾವ ತುಂಬಿದ ಬದುಕೇ…
ವಿಧ: ಪುಸ್ತಕ ವಿಮರ್ಶೆ
October 27, 2022
ಕನ್ನಡದಲ್ಲಿ ಮಕ್ಕಳ ಸಾಹಿತ್ಯಕ್ಕೆ ಶ್ರೀನುಡಿ ಬರೆದವರೇ ಪಂಜೆ ಮಂಗೇಶರಾಯರು. ಅವರ ಹಲವು ಪದ್ಯಗಳು ಮೂರು ತಲೆಮಾರುಗಳ ಮಕ್ಕಳ ಬಾಯಿಯಲ್ಲಿ ನಲಿದಾಡಿದವು. ಮಕ್ಕಳಿಗೆ ಕನ್ನಡ ನುಡಿಯ ಸೊಗಡನ್ನು ಪರಿಚಯಿಸಿದವು. ಮಕ್ಕಳ ಪದಸಂಪತ್ತನ್ನು ಹೆಚ್ಚಿಸಿದವು.
ಕನ್ನಡ ನಾಡಿನ ಹೆತ್ತವರ ಇಂಗ್ಲಿಷ್ ಮಾಧ್ಯಮದ ಮೋಹದಲ್ಲಿ, ಖಾಸಗಿ ಶಾಲೆಗಳ ಬಾಲವಾಡಿಗಳ ಇಂಗ್ಲಿಷ್ ಮಾಧ್ಯಮದ ಅಬ್ಬರದಲ್ಲಿ, ಬ್ರಿಟಿಷರು ತಮಗೆ ಬೇಕಾದ ಕಾರಕೂನರನ್ನು ರೂಪಿಸಲು ಆರಂಭಿಸಿದ "ಮೆಕಾಲೆ ಶಿಕ್ಷಣ ಪದ್ಧತಿ”ಯ ಅಂಧ ಅನುಸರಣೆಯಲ್ಲಿ, ಕ್ರಮೇಣ…
ವಿಧ: ಪುಸ್ತಕ ವಿಮರ್ಶೆ
October 25, 2022
ಲೇಖಕ ಗಿರಿರಾಜ ಬಿ ಎಂ ಅವರ ಕಥಾ ಸಂಕಲನ ಸ್ನೇಕ್ ಟ್ಯಾಟು. ಕೃತಿಯಲ್ಲಿ ಲೇಖಕರೇ ಹೇಳಿರುವಂತೆ, ೨೨ ವರ್ಷಗಳ ನಡುವೆ, ಆಗಾಗ ಬರೆದ ಇಲ್ಲಿನ ಕಥೆಗಳು ನನ್ನ ಬದುಕು, ಬದಲಾವಣೆ, ಬೆಳವಣಿಗೆಗೆ ಸಾಕ್ಷಿಯಾಗಿವೆ. ದಾಖಲೀಕರಣದ ವಿಷಯದಲ್ಲಿ ತುಂಬ ಸೋಂಬೇರಿಯಾಗಿರುವುದರಿಂದ ಹಲವಾರು ಕಥೆಗಳು ಕಳೆದುಹೋಗಿವೆ. ಅದ್ಹೇಗೊ ಇಲ್ಲಿನವು ಉಳ್ಕೊಬಿಟ್ಟವು. ಈಗ ಓದಿದರೆ ಕೆಲವು ವಾಕ್ಯಗಳು, ಈಡಿಯಂಗಳು ಬಾಲಿಶ ಅನಿಸಿದರೂ ಅವು ಅವತ್ತಿನ ನನ್ನ ನಿಜ ಅನಿಸಿಕೆಗಳಾದ್ದರಿಂದ, ಅದನ್ನು ತಿದ್ದಿ ಹಾಳೆ ಹಾಳು ಮಾಡುವ ಕೆಲಸಕ್ಕೆ…
ವಿಧ: ಪುಸ್ತಕ ವಿಮರ್ಶೆ
October 21, 2022
‘ಫಾಸಿಗೆ ಸಾಕ್ಷಿ' ಎಂಬ ಕಾದಂಬರಿಯನ್ನು ಬರೆದವರು ಮಾಲತಿ ಮುದಕವಿ ಇವರು. ಮಾಲತಿಯವರು ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿದ್ದಾರೆ. ಕನ್ನಡದ ಹಲವಾರು ಪತ್ರಿಕೆಗಳಲ್ಲಿ ಇವರ ಬರಹಗಳು ಬೆಳಕು ಕಂಡಿವೆ. ಹಲವಾರು ಬಹುಮಾನ, ಪುರಸ್ಕಾರಗಳೂ ಲಭಿಸಿವೆ.
ಮಾಲತಿ ಮುದಕವಿ ಅವರ ಕಾದಂಬರಿ ‘ಫಾಸಿಗೆ ಸಾಕ್ಷಿ’ಯಲ್ಲಿ ಓರ್ವ ವ್ಯಕ್ತಿ ಜೀವನದಲ್ಲಿ ಒಮ್ಮೊಮ್ಮೆ ಅತ್ಯಂತ ವಿಚಿತ್ರ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ. ಒಮ್ಮೆ ಒಬ್ಬ ಮರಣದಂಡನೆ ಕೊಡುವ ವ್ಯಕ್ತಿಯನ್ನು ಭೆಟ್ಟಿಯಾಗುವ ಯೋಗವು ನನಗೆ…
ವಿಧ: ಪುಸ್ತಕ ವಿಮರ್ಶೆ
October 20, 2022
ಎಂ.ಎಸ್. ಶ್ರೀರಾಮ್ ಅವರ ಎಂಟು ಸಣ್ಣಕತೆಗಳ ಸಂಗ್ರಹ “ತೇಲ್ ಮಾಲಿಶ್.” ಇದು ಅವರ ಮೂರನೆಯ ಕಥಾಸಂಕಲನ. ಆಂಧ್ರಪ್ರದೇಶದ ನೆಲ್ಲೂರಿನಲ್ಲಿ 1962ರಲ್ಲಿ ಜನಿಸಿದ ಶ್ರೀರಾಮ್ ಉಡುಪಿ, ಬೆಂಗಳೂರು, ಮೈಸೂರು, ಗುಜರಾತಿನ ಆಣಂದ್ನಲ್ಲಿ ವ್ಯಾಸಂಗ ಮಾಡಿದವರು. ಹೈದರಾಬಾದಿನ ಸ್ವಯಂಸೇವಾ ಸಂಸ್ಥೆಯಲ್ಲಿ ಎರಡು ವರುಷ ಕೆಲಸ ಮಾಡಿದರು. ಅನಂತರ ಆಣಂದದ ಗ್ರಾಮೀಣ ನಿರ್ವಹಣಾ ಸಂಸ್ಥೆಯಲ್ಲಿ ಬೋಧಕರಾಗಿ, ಹೈದರಾಬಾದಿನ ಬೇಸಿಕ್ಸ್ ಸಂಸ್ಥೆಯಲ್ಲಿ ಉಪಾಧ್ಯಕ್ಷರಾಗಿ ಕೆಲಸ ನಿರ್ವಹಿಸಿದರು.
ಈ ಎಲ್ಲ ಅನುಭವಗಳಿಂದ…
ವಿಧ: ಪುಸ್ತಕ ವಿಮರ್ಶೆ
October 20, 2022
ಕಾಡು ಎರಡು ಅಕ್ಷರದ ಈ ಶಬ್ದ ಹಲವರಿಗೆ ಪ್ರೀತಿ. ಇದರ ಗರ್ಭದಲ್ಲಿ ಅಡಗಿರುವ ವಿಸ್ಮಯ ಅನನ್ಯ. ಇಂತಹ ಕಾಡಿನ ಮಧ್ಯೆ ಇದ್ದುಕೊಂಡು ನೈಸರ್ಗಿಕ ಜೀವನಶೈಲಿ ಮೂಲಕ ಆರೋಗ್ಯಕರ ಬದುಕು ಸಾಗಿಸುತ್ತಿರುವ ಬುಡಕಟ್ಟು ಜನಾಂಗವೆಂದರೆ ಕುಣಬಿ ಸಮುದಾಯ. ಒಂದರ್ಥದಲ್ಲಿ ಹೇಳಬೇಕೆಂದರೆ ನಿಜವಾದ ಮಣ್ಣಿನ ಮಕ್ಕಳು ಎಂದು ಕರೆಯಿಸಿಕೊಳ್ಳಲು ಯೋಗ್ಯತೆ ಹೊಂದಿರುವವರು. ಕಾಡಿನ ತಪ್ಪಲಲ್ಲಿ ಇದ್ದರೂ ಸ್ಪಂದನಶೀಲ ಗುಣದೊಂದಿಗೆ ಸಾಂಸ್ಕೃತಿಕ ಸಿರಿವಂತಿಕೆ, ಪಾರಂಪರಿಕ ಜ್ಞಾನದ ಭಂಡಾರವನ್ನೇ ಹೊತ್ತ ಅನೇಕ ಸಮುದಾಯಗಳು ನಮ್ಮ…
ವಿಧ: ಪುಸ್ತಕ ವಿಮರ್ಶೆ
October 18, 2022
ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಜೀವನ ಚರಿತ್ರೆಯನ್ನು ಲೇಖಕರಾದ ಬೆ ಗೋ ರಮೇಶ್ ಅವರು ಸೊಗಸಾಗಿ, ಸಂಕ್ಷಿಪ್ತವಾಗಿ ‘ಶ್ರೀ ರಾಘವೇಂದ್ರ ಚರಿತ್ರೆ' ಎಂಬ ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ. ಇವರು ತಮ್ಮ ಮುನ್ನುಡಿಯಲ್ಲಿ ರಾಘವೇಂದ್ರ ತೀರ್ಥರವರೆಗಿನ ೧೭ ಮಂದಿ ಯತಿಯರ ಹೆಸರು ಮತ್ತು ಕಾಲಾವಧಿಯನ್ನು ನೀಡಿದ್ದಾರೆ. ಶ್ರೀ ರಾಘವೇಂದ್ರ ತೀರ್ಥರ ಬಳಿಕ ಇಪ್ಪತ್ತು ಯತಿಗಳು ಶ್ರೀಮಠದ ಗುರುಗಳಾಗಿ ಹೋಗಿದ್ದಾರೆ. ಅವರ ಮುನ್ನುಡಿಯ ಪ್ರಮುಖಾಂಶ ಹೀಗಿದೆ
“ಶ್ರೀ ಮನ್ಮಧ್ವಾಚಾರ್ಯರ ವೇದಾಂತ ಸಾಮ್ರಾಜ್ಯ…