ವಿಧ: ಪುಸ್ತಕ ವಿಮರ್ಶೆ
March 24, 2022
ತಮ್ಮ ಕಾವ್ಯಾತ್ಮಕ ಭಾಷೆಯ ಮೂಲಕ ಸಮುದಾಯಗಳ ಅತ್ಯಂತ ಖಾಸಗಿ ಹಾಗೂ ಸಾರ್ವಜನಿಕವಾದ ಸಂಕೀರ್ಣ ಅನುಭವಗಳನ್ನು ದಾಖಲಿಸುತ್ತ ಬಂದವರು ಕೇಶವ ಮಳಗಿ. ಅವರ ಹೊಸ ಬಗೆಯ 26 ಕಥನಗಳು ಇದರಲ್ಲಿವೆ.
ಎಂಬತ್ತರ ದಶಕದಲ್ಲಿ ಬರೆಯಲು ಶುರುವಿಟ್ಟ ಲೇಖಕರಲ್ಲಿ ಕೇಶವ ಮಳಗಿ ಅವರದು ವಿಭಿನ್ನ ಕಥನ ಮಾರ್ಗ. 1963ರಲ್ಲಿ ಜನಿಸಿದ ಇವರು ವಿಜಾಪುರ, ಬಾಗಿಲುಕೋಟೆ, ಕಲಬುರಗಿ ಮತ್ತು ಬಳ್ಳಾರಿ ಜಿಲ್ಲೆಗಳ ಭಾಷೆ ಹಾಗೂ ಸಂಸ್ಕೃತಿಗಳ ಬನಿಯನ್ನು ತಮ್ಮ ಬರಹದಲ್ಲಿ ಇಳಿಸಿದ್ದಾರೆ. ಹೊಸ ಬಗೆಯ ಅಭಿವ್ಯಕ್ತಿ ಶೈಲಿ, ವಸ್ತು…
ವಿಧ: ರುಚಿ
March 23, 2022
ಕಂಚುಹುಳಿ ರಸಹಿಂಡಿ ಇಡಬೇಕು. ತೆಂಗಿನಕಾಯಿ ತುರಿಗೆ ಒಣಮೆಣಸು, ಸಾಸಿವೆ, ಕಾಯಿಮೆಣಸು, ಚಿಟಿಕೆ ಅರಶಿನಹುಡಿ ಹಾಕಿ ರುಬ್ಬಿ, ಹಿಂಡಿ ಇಟ್ಟ ರಸಕ್ಕೆ ಸೇರಿಸಬೇಕು. ಉಪ್ಪು ಮತ್ತು ಬೆಲ್ಲ ಸೇರಿಸಿ ಮಿಶ್ರ ಮಾಡಿ. ಇದಕ್ಕೆ ಬೆಲ್ಲ ಜಾಸ್ತಿ ಹಾಕಬೇಕಾಗುತ್ತದೆ. ಒಗ್ಗರಣೆ ಕೊಡದಿದ್ದರೂ ಆಗುತ್ತದೆ.(ಬಾಣಂತಿಯರಿಗೆ ಕೊಡುವುದಾದರೆ ಸಣ್ಣ ಉರಿಯಲ್ಲಿ ಕುದಿಸಿ ಬಡಿಸಬಹುದು).ಆರೋಗ್ಯಕ್ಕೆ ಒಳ್ಳೆಯದು.
ಪೂರಕ ಮಾಹಿತಿ: *ಇದೇ ಕಾಯಿಯ ಸಿಪ್ಪೆಯನ್ನು ಒಣಗಿಸಿಟ್ಟು ತಂಬುಳಿ ಮಾಡಬಹುದು.
*ಎಳ್ಳೆಣ್ಣೆ ಅಥವಾ…
ವಿಧ: ಪುಸ್ತಕ ವಿಮರ್ಶೆ
March 22, 2022
ಮೂಲತಃ ಗಡಿನಾಡು ಕಾಸರಗೋಡಿನ ಕುಂಬಳೆಯವರಾದ ಸೂರ್ಯ ನಾರಾಯಣ ಹಿಳ್ಳೆಮನೆಯವರ ಮೊದಲ ಪ್ರಯತ್ನವೇ ‘ಗೋವು, ಮಹಿಷಿ ಮತ್ತು ಮಹಾವೃಕ್ಷ' ಎಂಬ ಕಥಾ ಸಂಕಲನ. ಅವರೇ ತಮ್ಮ ಸಂಕಲನದ ಮುನ್ನುಡಿಯಲ್ಲಿ ಬರೆದಂತೆ “ ಈ ಸಂಕಲನದಲ್ಲಿ ಇರುವ ಹೆಚ್ಚಿನ ಬರಹಗಳ ಕಾಲಘಟ್ಟ ೧೯೮೦-೯೦ರ ದಶಕಗಳು. ಶುದ್ಧ ಗ್ರಾಮೀಣ ಪರಿಸರ, ಹಿತ ಮಿತ ಅರಿತು ಬದುಕುವ ಸಣ್ಣ ಹಿಡುವಳಿದಾರ ಕುಟುಂಬಗಳು. ಅವರ ಜನಜೀವನ ಇತ್ಯಾದಿ ಈ ಬರಹಗಳ ಕಥಾ ವಸ್ತು. ಸನಾತನ ಸಂಸ್ಕೃತಿಯಲ್ಲಿ, ಪ್ರಕೃತಿಯನ್ನೂ ಪ್ರಾಣಿಗಳನ್ನೂ ಒಂದು ರೀತಿಯ ಆದರದಿಂದ ಕಾಣುವ…
ವಿಧ: ಪುಸ್ತಕ ವಿಮರ್ಶೆ
March 18, 2022
‘ಕಾನನ ಜನಾರ್ದನ' ಎಂಬುವುದು ಕೆ ಎನ್ ಗಣೇಶಯ್ಯ ಅವರ ಮತ್ತೊಂದು ರೋಚಕ ಕಾದಂಬರಿ. ಪುಸ್ತಕದ ಬೆನ್ನುಡಿಯಲ್ಲಿ “ ಮೇಘಾಲಯದ ಪರ್ವತಗಳ ಮೇಲೆ ಚರಿತ್ರೆಯ ವಿದ್ಯಾರ್ಥಿಗಳಿಗೆ ಶಿಲಾಯುಗದ ಮಾನವನ ಸಂಸ್ಕೃತಿಯ ಪಳೆಯುಳಿಕೆಯೊಂದನ್ನು ಪರಿಚಯಿಸುತ್ತಿದ್ದ ಪಲ್ಲವಿಗೆ ಬಂದ ಕರೆಯೊಂದು ಆಕೆಯನ್ನು ತಲ್ಲಣಗೊಳಿಸುತ್ತದೆ. ಅಮೇರಿಕದ ಕಂಪೆನಿಯೊಂದಿಗೆ ಕೈ ಜೋಡಿಸಿದ ಮುಂಬೈನ ಉದ್ಯಮಿಯೊಬ್ಬ ಭಾರತದ ಧಾರ್ಮಿಕ ಮತ್ತು ಸಂವಿಧಾನದ ನಿಲುವನ್ನೆ ಬದಲಾಯಿಸುವ ಷಡ್ಯಂತ್ರಕ್ಕೆ ಕೈ ಹಾಕುತ್ತಾನೆ. ಕನ್ನಡದ ಕಾದಂಬರಿಕಾರ…
ವಿಧ: ಪುಸ್ತಕ ವಿಮರ್ಶೆ
March 17, 2022
ಕುಸುಮಾ ಶಾನಭಾಗ “ಉದಯವಾಣಿ" ದಿನಪತ್ರಿಕೆಯಲ್ಲಿ ೨೦೦೮-೨೦೦೯ರಲ್ಲಿ ಎಂಟು ತಿಂಗಳ ಅವಧಿಯಲ್ಲಿ ಬರೆದ ಲೇಖನಗಳ ಸಂಗ್ರಹ ಇದು. “ಪ್ರಜಾವಾಣಿ" ವಾರ್ತಾಪತ್ರಿಕೆಯಲ್ಲಿ ಪತ್ರಕರ್ತೆಯಾಗಿ ಸ್ವಯಂನಿವೃತ್ತಿಯ ನಂತರ ಬರೆದ ಬದುಕಿನ ಅನುಭವಗಳು ಮತ್ತು ನಿತ್ಯ ಜೀವನದಲ್ಲಿ ಅವರು ಕಂಡ, ಅನುಭವಿಸಿದ ಕೆಲವು ಘಟನೆಗಳು ಇಲ್ಲಿವೆ.
ಇದರ ಒಂದೊಂದು ಲೇಖನವೂ ಮನಸ್ಸನ್ನು ತಟ್ಟುತ್ತದೆ. ಯಾಕೆಂದರೆ, ಇವೆಲ್ಲವೂ ನೈಜಕತೆಗಳೇ ಆಗಿವೆ. ಬೆಂಗಳೂರಿನ ನಂದಿನಿ ಲೇಔಟಿನಿಂದ ಕಾಣೆಯಾದ ಯುವತಿಯರ ಬಗ್ಗೆ ಬರೆದ “ಎಲ್ಲಿ ಹೋದರು ಈ…
ವಿಧ: ರುಚಿ
March 16, 2022
ಕಲ್ಲಂಗಡಿ (ಬಚ್ಚಂಗಾಯಿ) ಹಣ್ಣಿನ ಸಿಪ್ಪೆಯನ್ನು ಸಣ್ಣಗೆ ಕತ್ತರಿಸಬೇಕು. ಒಗ್ಗರಣೆಗೆ ಒಣಮೆಣಸು, ಸಾಸಿವೆ, ಅರಶಿನ ಹುಡಿ, ಕರಿಬೇವು, ತೊಗರಿ, ಉದ್ದು, ಕಡ್ಲೆ ಬೇಳೆ ಸ್ವಲ್ಪ, ಎಣ್ಣೆ ಸೇರಿಸಿಯಾದಾಗ, ಹಸಿ ಮೆಣಸಿನಕಾಯಿ ಖಾರಕ್ಕೆ ತಕ್ಕಷ್ಟು ಹಾಕಿ, ಹೆಚ್ಚಿಟ್ಟ ಹೋಳುಗಳನ್ನು ಸೇರಿಸಿ. ಸ್ವಲ್ಪ ನೀರು ಹಾಕಿ ಉಪ್ಪು, ಬೆಲ್ಲ ಹಾಕಿ ಬೇಯಿಸಬೇಕು. ಕೊತ್ತಂಬರಿ, ಜೀರಿಗೆ, ನಾಲ್ಕು ಒಣಮೆಣಸು, ತೆಂಗಿನಕಾಯಿ ಎಸಳು ಹಾಕಿ ರುಬ್ಬಿ ಸೇರಿಸಿ ಕುದಿಸಬೇಕು. ಮಸಾಲೆಪಲ್ಯ ಕುಚುಲಕ್ಕಿ ಗಂಜಿ ಜೊತೆ ರುಚಿಕರ. ಚಪಾತಿ,…
ವಿಧ: ಪುಸ್ತಕ ವಿಮರ್ಶೆ
March 15, 2022
ಪತ್ರಕರ್ತರಾದ ಪಿ.ಶ್ರೀಧರ್ ನಾಯಕ್ ಅವರ ಪ್ರಬಂಧ ಮತ್ತು ಲೇಖನಗಳ ಸಂಕಲನವೇ ‘ಭಾವಲೋಕ'. ಈ ಪುಸ್ತಕಕ್ಕೆ ಸೊಗಸಾದ ಮುನ್ನುಡಿ ಬರೆದಿದ್ದಾರೆ ಲೇಖಕ, ಶಿಕ್ಷಣ ತಜ್ಞರಾದ ಡಾ. ಮಹಾಬಲೇಶ್ವರ ರಾವ್. ಅವರು ಹೀಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಾರೆ. “ನವುರಾದ ಹಾಸ್ಯ, ಸರಸ ನಿರೂಪಣೆ, ಸುಂದರ ವರ್ಣನೆ ಸಹಿತವಾದ ‘ತುಂಟಿ ರೂಬಿಯ ದಶಾವತಾರ' ಪ್ರಬಂಧ ಉತ್ತಮ ಲಲಿತ ಪ್ರಬಂಧಗಳ ಸಾಲಿನಲ್ಲಿ ನಿಲ್ಲುವಂತದ್ದು. ಈ ಪ್ರಬಂಧವನ್ನು ಓದುವಾಗ ನನಗೆ ಕೆ.ಎಸ್. ನ. ಅವರ ‘ತುಂಗಭದ್ರೆ', ಡಾ. ಹಾ. ಮ. ನಾಯಕರ ‘…
ವಿಧ: ಪುಸ್ತಕ ವಿಮರ್ಶೆ
March 14, 2022
ಸಂತೋಷಕುಮಾರ ಮೆಹೆಂದಳೆ ಅವರು ಈ ಬಾರಿ ವಿಭಿನ್ನ ಕಥಾ ವಸ್ತುವಿನ ಜೊತೆಗೆ ಹಾಜರಾಗಿದ್ದಾರೆ. ಎಲ್ಲರೂ ಪ್ರತೀ ದಿನ ಗಮನಿಸಿ ಮುಖ ತಿರುಗಿಸಿಕೊಳ್ಳುವ ಮಂಗಳಮುಖಿಯರ ಒಳ ಜಗತ್ತಿನ ಅನಾವರಣ ಮಾಡಿದ್ದಾರೆ. ಪುಸ್ತಕದ ಮುಖ ಪುಟದಲ್ಲೇ ‘ಹಿಜಡಾ ಜಗತ್ತಿನ ಅನುಭವ ಕಥನ...' ಎಂದು ಇದನ್ನು ಕರೆಯಿಸಿಕೊಂಡಿದ್ದಾರೆ.
ಪುಸ್ತಕದ ಬೆನ್ನುಡಿಯಲ್ಲಿ “ನೀವು ಗಂಡು ಅಥವಾ ಹೆಣ್ಣಾಗಿ ಹುಟ್ಟಿದ್ದರೆ, ನಿಖರ ದೇಹ ಹಾಗೂ ಮನಸ್ಥಿತಿ ಕೊಟ್ಟಿದ್ದರೆ ಈ ಜೀವನ ಪೂರ್ತಿ ನೀವು ದೇವರಿಗೆ ಕೃತಜ್ಞರಾಗಿರಲೇ ಬೇಕು. ಇದು ದೇವರು…
ವಿಧ: ಪುಸ್ತಕ ವಿಮರ್ಶೆ
March 10, 2022
ಇದು ಮೂಲಿಕಾ ಸಂರಕ್ಷಣೆ ಮತ್ತು ಪ್ರಾಥಮಿಕ ಆರೋಗ್ಯ ರಕ್ಷಣೆಯ ಕೈಪಿಡಿ. ೬೯ ಪಾರಂಪರಿಕ ವೈದ್ಯರು ಮತ್ತು ೩೭ ಆಯುರ್ವೇದ ತಜ್ನರ ಅನುಭವಗಳನ್ನು ಆಧರಿಸಿದ ಕೈಪಿಡಿ ಎಂಬುದೇ ಇದರ ವಿಶೇಷತೆ.. ಇದನ್ನು ರಚಿಸಿದ ಸಂಪಾದಕೀಯ ಮಂಡಳಿಯಲ್ಲಿ ಗಾ.ನಂ. ಶ್ರೀಕಂಠಯ್ಯ, ಐ.ಎ.ಎಸ್. ಮತ್ತು ೧೯ ಸದಸ್ಯರಿದ್ದರು.
ಭಾರತೀಯ ಪರಂಪರೆಯಲ್ಲಿ ಆರೋಗ್ಯಪೂರ್ಣ ಜೀವನ ನಡೆಸಲು ಬೇಕಾದ ಪಾರಂಪರಿಕ ಆರೋಗ್ಯ ಪದ್ಧತಿಯೊಂದು ಜನರ ನಡುವೆ ಜೀವಂತವಾಗಿತ್ತು. ಸ್ಥಳೀಯವಾಗಿಯೇ ಬೆಳೆಯುತ್ತಿದ್ದ ಮರ, ಗಿಡ, ಬಳ್ಳಿ, ನಾರು, ಬೇರುಗಳನ್ನು…
ವಿಧ: ಪುಸ್ತಕ ವಿಮರ್ಶೆ
March 09, 2022
ಮೊದಲೇ ಹೇಳಿಬಿಡುತ್ತೇನೆ. ನಾನು ಆಸ್ತಿಕ. ನಾನು ಬರೆಯ ಹೊರಟಿರುವುದು ಆಸ್ತಿಕರೊಬ್ಬರು ಬರೆದ ಕಾದಂಬರಿ ರೂಪದ ಜಿಜ್ಞಾಸೆಯ ಬಗ್ಗೆ. ಹಾಗಾಗಿ ಇದೆಲ್ಲ ಕಸ ಅನ್ನುವವರು ಮುಂದೆ ಓದುವುದು ಬೇಡ.
ತುಳುನಾಡಿನ ದೈವಾರಾಧನೆ ನಮಗೆ ನಂಬಿಕೆಯ ಪ್ರಶ್ನೆ. ಹೊರಗಿನವರಿಗೆ ಕೌತುಕ, ತಮಾಷೆಯ ವಸ್ತು. ಈ ಪುಸ್ತಕದ ಕತೆ ಸರಳ. ಕಂಪೆನಿಯೊಂದು ಸ್ವಾಧೀನಪಡಿಸಿಕೊಂಡ ಜಾಗದ ವಿರುದ್ಧ ಅವರಿಗೆ ಪರಿಹಾರ ಕೊಡಿಸಲು ಹೋರಾಟ ಮಾಡುವ ಹೋರಾಟಗಾರನೊಬ್ಬ ಅಪಘಾತಕ್ಕೀಡಾಗಿ ಸಾವಿಗೀಡಾಗುತ್ತಾನೆ. ಸಾವಿನ ರಾತ್ರಿಯವರೆಗೆ ಅವನ ಜೊತೆ…