ವಿಧ: ಪುಸ್ತಕ ವಿಮರ್ಶೆ
April 30, 2022
ಹತ್ತಾರು ಕಿರು ನಾಟಕಗಳನ್ನು ಬರೆದು ಖ್ಯಾತಿ ಪಡೆದ ಪ್ರೊ. ಆರ್. ಎನ್ ಕುಲಕರ್ಣಿ (ಆರ್ ಎನ್ ಕೆ) ಇವರ ಮತ್ತೊಂದು ನಾಟಕದ ಪುಸ್ತಕ ‘ಬೀಗರ ಬಡಾಯಿ'. ಇದೊಂದು ಹಾಸ್ಯಭರಿತ, ವರದಕ್ಷಿಣೆ ಸಮಸ್ಯೆಯ ಮೇಲೆ ಬೆಳಕು ಚೆಲ್ಲುವ ಸಮಸ್ಯಾ ಪ್ರಧಾನ ನಾಟಕ. ರಂಗಸ್ಥಳದಲ್ಲಿ ಸುಮಾರು ೨೦ ರಿಂದ ೩೦ ನಿಮಿಷಗಳಲ್ಲಿ ಮುಗಿದು ಹೋಗುವ ಈ ನಾಟಕವು ಸಮಾಜಕ್ಕೆ ಬಹಳ ಪ್ರಭಾವಶಾಲಿ ಸಂದೇಶವನ್ನು ಕೊಡುತ್ತದೆ.
೭ ಮಂದಿ ಪಾತ್ರಧಾರಿಗಳಿರುವ ಈ ನಾಟಕದಲ್ಲಿ ಮದುಮಗ, ಮದುಮಗಳು, ವರನ ತಂದೆ-ತಾಯಿ, ವರ ಇಬ್ಬರು ಗೆಳೆಯರು ಮತ್ತು…
ವಿಧ: ರುಚಿ
April 28, 2022
ಸೌತೇಕಾಯಿಯನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆದು, ಅದನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ. ಈ ಕತ್ತರಿಸಿದ ತುಂಡುಗಳನ್ನು ಮಿಕ್ಸಿ ಜಾರಿಗೆ ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿರಿ. ಇದನ್ನು ಒಂದು ಪಾತ್ರೆಗೆ ಹಾಕಿ. ಅದೇ ಮಿಕ್ಸಿ ಜಾರಿಗೆ ಬೆಲ್ಲವನ್ನು ಹಾಕಿ ನೀರು ಹಾಕದೇ ರುಬ್ಬಿಕೊಳ್ಳಿರಿ. ಈ ಮಿಶ್ರಣವನ್ನು ಮೊದಲು ಮಾಡಿ ಇಟ್ಟಿದ್ದ ಸೌತೇಕಾಯಿ ಮಿಶ್ರಣಕ್ಕೆ ಸೇರಿಸಿ. ನಂತರ ತೆಂಗಿನ ಕಾಯಿ ತುರಿಯನ್ನು ಬೆಲ್ಲವನ್ನು ರುಬ್ಬಿದ ಮಿಕ್ಸಿ ಜಾರಿಗೇ ಹಾಕಿ ಸ್ವಲ್ಪ ನೀರು ಸೇರಿಸಿ…
ವಿಧ: ಪುಸ್ತಕ ವಿಮರ್ಶೆ
April 27, 2022
ಬೆಂಗಳೂರಿನಲ್ಲಿ ಆರ್ಕಿಟೆಕ್ಟ್ ಆಗಿರುವ ನಾಗರಾಜ ವಸ್ತಾರೆ ಅವರದು ಕಳೆದೆರಡು ದಶಕಗಳಲ್ಲಿ ಹೊಸಗನ್ನಡದ ಕತೆಗಾರರಲ್ಲಿ ಗಮನಾರ್ಹ ಹೆಸರು. ಕತೆ, ಕವನ ಮತ್ತು ಅಂಕಣ ಬರಹ ಅವರ ಆಸಕ್ತಿ. “ಹಳೆಮನೆ ಕತೆ", “ಬಯಲು ಆಲಯ” ಮತ್ತು “ಪಟ್ಟಣ ಪುರಾಣ” ಅವರ ಅಂಕಣ ಬರಹಗಳು. ನಗರ ಬದುಕಿನ ಒಳತೋಟಿಗಳು, ಸಂಕೀರ್ಣ ಸಂಬಂಧಗಳು ಹಾಗೂ ಮೇಲ್ನೋಟಕ್ಕೆ ಕಾಣಿಸದ ಸೂಕ್ಷ್ಮ ಸಂಗತಿಗಳನ್ನು ಕತೆಗಳನ್ನಾಗಿ ಹೆಣೆಯುವುದರಲ್ಲಿ ಅವರು ಸಿದ್ಧಹಸ್ತರು.
ಇಲ್ಲಿನ 18 ಕತೆಗಳ ಬಗ್ಗೆ ಮುನ್ನುಡಿಯಲ್ಲಿ ಕತೆಗಾರ ನಾಗರಾಜ ವಸ್ತಾರೆ…
ವಿಧ: ಪುಸ್ತಕ ವಿಮರ್ಶೆ
April 26, 2022
ಪೆನ್ ಗ್ವಿನ್ ಬುಕ್ಸ್ ಪ್ರಕಾಶನ ಸಂಸ್ಥೆಯವರು ಆಂಗ್ಲ ಭಾಷೆಯಲ್ಲಿ ಪ್ರಕಟಿಸಿದ ‘ಬ್ಲ್ಯಾಕ್ ಫ್ರೈಡೇ’ ಎಂಬ ನೈಜ ಘಟನಾಧಾರಿತ ಕಾದಂಬರಿಯನ್ನು ಕನ್ನಡಕ್ಕೆ ತಂದವರು ಖ್ಯಾತ ಪತ್ರಕರ್ತರಾದ ರವಿ ಬೆಳಗೆರೆ ಇವರು. ಈ ಪುಸ್ತಕದ ಮೂಲ ವಸ್ತು ಮುಂಬಯಿನಲ್ಲಿ ನಡೆದ ಸರಣಿ ಬಾಂಬ್ ಸ್ಪೋಟ ಮತ್ತು ಆ ನಂತರ ನಡೆದ ಘಟನಾವಳಿಗಳ ವಿವರಗಳು ಪತ್ತೇದಾರಿ ಕಾದಂಬರಿಯಂತೆ ಓದಿಸಿಕೊಂಡು ಹೋಗುತ್ತದೆ.
ಈ ಬಗ್ಗೆ ರವಿ ಬೆಳಗೆರೆಯವರು ತಮ್ಮ ಮಾತಿನಲ್ಲಿ ಹೇಳುವುದು ಹೀಗೆ “ಭಾರತವೆಂಬ ಮಹಾದೈತ್ಯ. ಸಾತ್ವಿಕ ಶಕ್ತಿಯ ಕರಡಿಗೆ…
ವಿಧ: ಪುಸ್ತಕ ವಿಮರ್ಶೆ
April 23, 2022
ಜ್ಞಾನಪೀಠ ಪ್ರಶಸ್ತಿ ಪಡೆದ ಐವರು (೧೯೯೧ರ ವರೆಗೆ) ಕನ್ನಡ ಸಾಹಿತಿಗಳ ಸಮಗ್ರ ಮಾಹಿತಿಯನ್ನು ನೀಡುವ ಪುಸ್ತಕವೇ ಎಸ್. ಮಹಾಬಲೇಶ್ವರ ಇವರು ಬರೆದ ‘ಕನ್ನಡದ ಭಾಗ್ಯಶಿಲ್ಪಿಗಳು'. ಜ್ಞಾನಪೀಠ ಪ್ರಶಸ್ತಿಯನ್ನು ಪಡೆದು ಕನ್ನಡದ ಹಿರಿಮೆಯನ್ನು ಹೆಚ್ಚಿಸಿದ ಕುವೆಂಪು, ದ ರಾ ಬೇಂದ್ರೆ, ಶಿವರಾಮ ಕಾರಂತ, ವಿನಾಯಕ ಕೃಷ್ಣ ಗೋಕಾಕ್, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಬದುಕು ಹಾಗೂ ಬರಹವನ್ನು ಜನಸಾಮಾನ್ಯರಿಗೂ ಅರ್ಥವಾಗುವಂತಹ ತಿಳಿಯಾದ ಕನ್ನಡದಲ್ಲಿ ಪರಿಚಯಿಸುವ ಪ್ರಾಮಾಣಿಕ ಪ್ರಯತ್ನ ಇಲ್ಲಿದೆ. ಈ ಐವರು…
ವಿಧ: ಪುಸ್ತಕ ವಿಮರ್ಶೆ
April 22, 2022
ವೃತ್ತಿಯಿಂದ ವಕೀಲರಾಗಿರುವ ಲೋಹಿತ್ ನಾಯ್ಕರ ಅವರ ಮೂರನೆಯ ಕಥಾಸಂಕಲನ ಇದು. ಮಾನವ ಹಕ್ಕುಗಳ ವಿಷಯದಲ್ಲಿ ಅವರಿಗಿರುವ ವಿಶೇಷ ಆಸಕ್ತಿ, ಇಲ್ಲಿನ ಕತೆಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಹಾಗೆಂದು ಇಲ್ಲಿರುವ ಕತೆಗಳು ಜನಸಾಮಾನ್ಯರ ಬದುಕಿನಲ್ಲಿ ಎದುರಾಗುವ ಮಾನವಹಕ್ಕು ಪ್ರಕರಣಗಳ ದಾಖಲಾತಿಗಳಲ್ಲ. ಮಾನವೀಯ ಸಂಬಂಧಗಳು ಮತ್ತು ಮಾನವಹಕ್ಕುಗಳ ಸಂಕೀರ್ಣ ಒಳನೋಟಗಳನ್ನು ಸೃಜನಾತ್ಮಕವಾಗಿ ಅಭಿವ್ಯಕ್ತಿಸುವ ವಿಶಿಷ್ಟ ಬರಹಗಳು ಇವು.
“ಪಿಂಕಿ ಮದುವೆಯಾಗಿ ಹೋದಾಗ” ಎಂಬ ಮೊದಲ ಕತೆ, ಕಥಾನಾಯಕನ…
ವಿಧ: ಪುಸ್ತಕ ವಿಮರ್ಶೆ
April 21, 2022
ಗಂಗಾವತಿಯ ಎಂ ಪರಶುರಾಮ ಪ್ರಿಯರ ಚೊಚ್ಚಲ ಹನಿ ಕವನಗಳ ಸಂಕಲನವೇ ‘ಕೀ ಯಾವದು?’ ಈ ಹನಿಗವನಗಳ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಉಪನ್ಯಾಸಕರಾದ ಬಿ.ಎನ್. ನಾಯಕ ಇವರು. ಇವರು ತಮ್ಮ ಮುನ್ನುಡಿಯಲ್ಲಿ “ಎಂ. ಪರಶುರಾಮ ಪ್ರಿಯ ಅವರು ತಮ್ಮ ಪ್ರಥಮ ಹನಿಗವನಗಳ ಸಂಕಲನ ‘ಕೀ ಯಾವದು?' ವನ್ನು ಸಹೃದಯರೆದುರು ಬಿಡುಗಡೆಗೊಳಿಸಲು ಉತ್ಸುಕರಾಗಿದ್ದಾರೆ. ಪ್ರಸ್ತುತ ಸಂಗ್ರಹದಲ್ಲಿ ಅನೇಕ ಚಿಕ್ಕ ಚಿಕ್ಕ ಹನಿಗವನಗಳಿವೆ. ಮೊದಲೇ ತರುಣ ಕವಿ ತಮ್ಮ ವಯಸ್ಸಿಗನುಗುಣವಾಗಿ ಪ್ರೀತಿ ಪ್ರೇಮಗಳ ವಿವಿಧ ಸ್ತರಗಳ…
ವಿಧ: ಪುಸ್ತಕ ವಿಮರ್ಶೆ
April 19, 2022
‘ಕಡಲ ಸೃಷ್ಟಿ’ ಎಂಬ ಸದಭಿರುಚಿ ಮಾಸಿಕದ ಸಂಪಾದಕರಾದ ಬಿ.ಸಂಜೀವ ಇವರ ಜೀವನದ ಅನುಭವಗಳ ಸಾರವೇ ‘ಸಂಜೀವಿನಿ'. ಇವರು ಈ ಪುಸ್ತಕದಲ್ಲಿ ತಮ್ಮ ಜೀವನದಲ್ಲಿ ಅನುಭವಕ್ಕೆ ಬಂದ ಘಟನಾವಳಿಗಳು, ಸ್ವರಚಿತ ಕವನಗಳು ಎಲ್ಲವನ್ನೂ ಸೇರಿಸಿ ಒಂದು ಮಾಹಿತಿ ಪೂರ್ಣ ಪುಸ್ತಕವನ್ನಾಗಿಸಿದ್ದಾರೆ. ಧ್ಯಾನದ ಬಗ್ಗೆ ಅವರು ಮಾಡಿದ ಅಧ್ಯಯನಗಳ ಬಗ್ಗೆಯೂ ಸವಿವರವಾದ ಮಾಹಿತಿ ನೀಡಿದ್ದಾರೆ.
ಸಂಜೀವ ಅವರು ತಮ್ಮ ‘ಮನದಾಳದ ಮಾತು’ ಎಂಬ ಮುನ್ನುಡಿಯಲ್ಲಿ ಹೀಗೆ ಬರೆಯುತ್ತಾರೆ “ಸಂಜೀವಿನಿ ಈ ಪುಸ್ತಕದಲ್ಲಿ ವಚನ-ಕವನ ರೂಪದಲ್ಲಿ…
ವಿಧ: ಪುಸ್ತಕ ವಿಮರ್ಶೆ
April 15, 2022
ಬಿ. ಜಿ. ಎಲ್. ಸ್ವಾಮಿಯವರು ತಮ್ಮ "ಹಸುರು ಹೊನ್ನು” ಪುಸ್ತಕದಿಂದ ಪ್ರಖ್ಯಾತರು. ಸಸ್ಯಗಳ ಬಗ್ಗೆ ಅದೊಂದು ಅಪರೂಪದ ಪುಸ್ತಕ. ಕತೆ ಹೇಳಿದಂತೆ ಸಸ್ಯಗಳ ಪರಿಚಯವನ್ನು ಮಾಡಿಕೊಡುವ ಪುಸ್ತಕ ಅದು. ಶುಷ್ಕ ಎನಿಸಬಹುದಾದ ವಿಜ್ನಾನದ ವಿಷಯಗಳನ್ನು ಹಾಸ್ಯ ಲೇಪಿಸಿ, ಚೇತೋಹಾರಿಯಾಗಿ ಹೇಗೆ ಓದುಗರಿಗೆ ಉಣಬಡಿಸಬೇಕು ಎಂಬುದಕ್ಕೊಂದು ಮಾದರಿ ಅದು.
“ಬೃಹದಾರಣ್ಯಕ" ಅವರು ಪ್ರಾಣಿಗಳು ಮತ್ತು ಕಾಡಿನ ವಿಸ್ಮಯಗಳ ಬಗ್ಗೆ ಬರೆದಿರುವ 11 ಅಧ್ಯಾಯಗಳ ಪುಸ್ತಕ. ಸಸ್ಯಗಳ ಬಗ್ಗೆ "ಹಸುರು ಹೊನ್ನು” ಬರೆದಂತೆ ಪ್ರಾಣಿಗಳ…
ವಿಧ: ಪುಸ್ತಕ ವಿಮರ್ಶೆ
April 14, 2022
ಇತಿಹಾಸ ಅರಿಯದವನು ಇತಿಹಾಸವನ್ನು ಸೃಷ್ಟಿಸಲೂ ಸಾಧ್ಯವಿಲ್ಲ. ಹೊಸ ಇತಿಹಾಸವನ್ನು ಪುನರ್ ರಚಿಸಲೂ ಸಾಧ್ಯವಿಲ್ಲ. ಜೊತೆಗೆ ಇತಿಹಾಸವನ್ನು ಪುನರ್ ರಚಿಸಲೂ ಸಾಧ್ಯವಿಲ್ಲ ಎನ್ನುವ ಮಾತಿದೆ. ಹೊಸ ಪೀಳಿಗೆಯ ಓದುಗರ ನೆಚ್ಚಿನ ಬರಹಗಾರ ಪ್ರೊ.ಕೆ.ಎನ್. ಗಣೇಶಯ್ಯ ಇತಿಹಾಸದ ಬೆನ್ನು ಹತ್ತಿ ಅದರ ವಿಶಿಷ್ಟ ಹಾಗೂ ವಿಸ್ಮಯಕಾರಿ ಆಯಾಮಗಳನ್ನು ಪುನರ್ ಸೃಷ್ಟಿಸಲು ತೊಡಗಿದ ಲೇಖಕ.
ಮೂಲತಃ ಕೋಲಾರ ಜಿಲ್ಲೆಯ ಕೋಟಗಾನ ಗ್ರಾಮದವರಾದ ಪ್ರೊ. ಕೆ.ಎನ್. ಗಣೇಶಯ್ಯ ವೃತ್ತಿಯಲ್ಲಿ ಕೃಷಿ ವಿಜ್ಞಾನಿ. ಸಾಹಿತ್ಯದಲ್ಲಿ ಅಪಾರ…