ಎಲ್ಲ ಪುಟಗಳು

ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
February 25, 2022
ಮತ್ತೊಮ್ಮೆ ನಿಮ್ಮ ಮುಂದೆ ಬಂದಿದ್ದಾರೆ, ಗಜಲ್ ನ ಮಗದೊಂದು ಆಯಾಮದೊಂದಿಗೆ, ಅದೂ "ಸ್ನೇಹದ ಮಧುಶಾಲೆ" ಎಂಬ ಗಜಲ್ ಗುಲ್ಜಾರ್ ನೊಂದಿಗೆ ಡಾ. ಮಲ್ಲಿನಾಥ ಎಸ್.ತಳವಾರ ಇವರು. ಮಲ್ಲಿನಾಥ ಇವರ ಮೊದಲ ಗಜಲ್ ಗುಲ್ದಸ್ಥ "ಗಾಲಿಬ್ ಸ್ಮೃತಿ" ಯು ಗಜಲ್ ನ ಉಗಮ, ಸ್ವರೂಪ, ಲಕ್ಷಣ ಹಾಗೂ ಗಜಲ್ ಪ್ರಕಾರಗಳನ್ನು ಉದಾಹರಣೆಯೊಂದಿಗೆ ತಿಳಿ ಹೇಳಿದ್ದರೆ, ಎರಡನೇ ಗಜಲ್ ಸಂಕಲನ "ಮಲ್ಲಿಗೆ ಸಿಂಚನ" ಗಜಲ್ ಹೂದೋಟ ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ಗಜಲ್ ಪಾರಿಭಾಷಿಕ ಪದಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದೆ. ಈ…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
February 24, 2022
ಇದು ಭಾರತದ ಪಾರಂಪರಿಕ ಔಷಧೀಯ ಸಸ್ಯಜ್ನಾನವನ್ನು ಭಟ್ಟಿ ಇಳಿಸಿದ ಪುಸ್ತಕ; ಪಾಣಾಜೆಯ ಪಾರಂಪರಿಕ ಮೂಲಿಕಾ ವೈದ್ಯರಾಗಿದ್ದ ಪಿ. ಎಸ್. ವೆಂಕಟರಾಮ ದೈತೋಟ ಅವರ ಜೀವಮಾನದ ತಪಸ್ಸಿನ ಫಲ ಇದು. ಈ ಪುಸ್ತಕದಲ್ಲಿದೆ 280 ಜನೋಪಯೋಗಿ ಔಷಧೀಯ ಸಸ್ಯಗಳ ಅಪೂರ್ವ ಜ್ನಾನಭಂಡಾರ. ಪ್ರತಿಯೊಂದು ಔಷಧೀಯ ಸಸ್ಯದ ಬಗ್ಗೆ ಮೂರು ವಿಭಾಗಗಳಲ್ಲಿ ಮಾಹಿತಿ ನೀಡಲಾಗಿದೆ: ಸಸ್ಯದ ಹೆಸರುಗಳು, ಮೂಲಿಕಾ ಪರಿಚಯ, ಉಪಯೋಗಗಳು. ಜೊತೆಗೆ ಸಸ್ಯದ ಗುರುತು ಹಿಡಿಯಲು ಸಹಾಯವಾಗಲಿಕ್ಕಾಗಿ ಲೇಖಕರೇ ಚಿತ್ರಿಸಿರುವ ಸಸ್ಯದ ರೇಖಾ ಚಿತ್ರಗಳು.…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
February 23, 2022
ಪುನೀತ್ ರಾಜಕುಮಾರ್ ಅವರ ಜೀವನ ಕಥನವನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ ಲೇಖಕ, ಪತ್ರಕರ್ತರಾದ ಡಾ.ಶರಣು ಹುಲ್ಲೂರು ಇವರು. ಪುನೀತ್ ಬದುಕಿರುವಾಗಲೇ ಈ ಪುಸ್ತಕವನ್ನು ಹೊರ ತರಬೇಕೆಂದು ಲೇಖಕರಿಗೆ ಬಹಳ ಮನಸ್ಸಿತ್ತು. ಆದರೆ ಪುನೀತ್ ತಮ್ಮ ತಂದೆ ಹಾಗೂ ತಾಯಿಯವರ ಪುಸ್ತಕಗಳ ಜೊತೆ ತಮ್ಮ ಪುಸ್ತಕ ಇರಿಸಲು ಮನಸ್ಸು ಒಪ್ಪುತ್ತಿಲ್ಲ ಎಂದು ಹೇಳಿ ಲೇಖಕರಿಗೆ ನಿರಾಸೆ ಮಾಡಿದ್ದರು. ಆದರೆ ಪುನೀತ್ ಅಕಾಲ ಮರಣಕ್ಕೀಡಾದಾಗ ಅವರು ಮಾಡಿದ ಸಾಧನೆಗಳು ಒಂದೊಂದಾಗಿಯೇ ಹೊರಬರಲಾರಂಭಿಸಿತು. ಶರಣು ಅವರೂ…
ವಿಧ: ರುಚಿ
February 23, 2022
ಬದನೆ(ಉಡುಪಿ ಗುಳ್ಳ)ಯನ್ನು ತುಂಡುಗಳನ್ನಾಗಿ ಮಾಡಿ, ಮಜ್ಜಿಗೆ ಅಥವಾ ಅರಶಿನ ಹುಡಿ ಹಾಕಿದ ನೀರಿನಲ್ಲಿ ಹತ್ತು ನಿಮಿಷ ಇಡಬೇಕು. ರುಚಿಗೆ ತಕ್ಕಷ್ಟು ಉಪ್ಪು, ಟೊಮ್ಯಾಟೊ, ಎರಡು ಕಾಯಿಮೆಣಸುಗಳನ್ನು ಬದನೆ ಹೋಳುಗಳಿಗೆ ಹಾಕಿ ಸ್ವಲ್ಪ ನೀರು ಸೇರಿಸಿ ಬೇಯಿಸಬೇಕು. (ಚಿಟಿಕೆ ಅರಶಿನ ಹುಡಿ ಬೇಕಾದರೆ ಹಾಕಬಹುದು) ಈ ಹೋಳುಗಳು ಹತ್ತೇ ನಿಮಿಷದಲ್ಲಿ ಬೇಯುತ್ತದೆ. ತೆಂಗಿನಕಾಯಿ ತುರಿಗೆ ಒಂದು ಕಾಯಿಮೆಣ‌ಸು ಹಾಕಿ ನುಣ್ಣಗೆ ರುಬ್ಬಿ, ಬೆಂದ ಹೋಳುಗಳಿಗೆ ಸೇರಿಸಿ. ಮಜ್ಜಿಗೆ ಸೇರಿಸಿ, ಹದ ಕುದಿಯಲು ಆರಂಭಿಸುವಾಗ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
February 22, 2022
೧೯೭೧ರ ಭಾರತ-ಪಾಕಿಸ್ತಾನ ಯುದ್ಧದ ರೋಚಕ ಕಥೆಗಳನ್ನು ಸುಧೀರ ಸಾಗರ ಇವರು ‘ಆ ಹದಿಮೂರು ದಿನಗಳು' ಎಂಬ ಹೆಸರಿನ ಕೃತಿಯ ಮೂಲಕ ನಿಮಗೆ ಹೇಳಹೊರಟಿದ್ದಾರೆ. ಸೈನ್ಯದ, ಯುದ್ಧದ ಕಥೆಗಳು ಓದುವವರಿಗೆ ರೋಚಕ ಅನುಭವ ನೀಡುತ್ತದೆ, ಆದರೆ ಗಡಿ ಭಾಗದಲ್ಲಿ ವಿದೇಶಿ ಸೈನಿಕರ ಜೊತೆ ಹೋರಾಡುವುದಿದೆಯಲ್ಲ ಅದಕ್ಕೆ ಎಂಟೆದೆಯ ಗುಂಡಿಗೆ ಬೇಕು. ಬಾಂಗ್ಲಾ ದೇಶದ ವಿಮೋಚನಾ ಯುದ್ಧದ ಕಥೆಯನ್ನು ಈ ಕೃತಿಯಲ್ಲಿ ಮಾಹಿತಿಪೂರ್ಣವಾಗಿ, ಸೊಗಸಾಗಿ ವರ್ಣಿಸಿದ್ದಾರೆ. ಪುಸ್ತಕವನ್ನು ಬರೆಯಲು ಕಾರಣವಾದ ಅಂಶಗಳ ಬಗ್ಗೆ ತಮ್ಮ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
February 18, 2022
ದೇವು ಪತ್ತಾರ ಅವರ ಸಂಗ್ರಹ ಗುಣದ ಕಾರಣದಿಂದ ವಿ.ಕೃ.ಗೋಕಾಕರು ಬರೆದ ಮುನ್ನುಡಿಗಳು ಇಲ್ಲಿ ಸಂಕಲನಗೊಂಡಿವೆ. ಇಲ್ಲಿನ ಬಹುಪಾಲು ಮುನ್ನುಡಿಗಳನ್ನು ಗೋಕಾಕರು ಬರೆದ ಸಂಗ್ರಹಗಳ ಮೊದಲ ಮುದ್ರಣದ ಪ್ರತಿಗಳಿಂದಲೇ ಸಂಗ್ರಹಿಸಿದ್ದಾರೆ ಎಂಬುದನ್ನು ಗಮನಿಸಿದ ಅವರ ಸಂಗ್ರಹ ಗುಣದ ವಿಸ್ತಾರ ಮತ್ತು ಪರಿಶ್ರಮ ನಮ್ಮ ಗಮನಕ್ಕೆ ಬಂದೀತು. ಇಲ್ಲಿನ ಮುನ್ನುಡಿಗಳಿಗೆ ಚಾರಿತ್ರಿಕವಾದ ಮಹತ್ವವಿರುವಂತೆ ಸಾಹಿತ್ಯಕ ಮಹತ್ವವೂ ಇದೆ. ಗೋಕಾಕರು ಬರೆದ ಬಹುತೇಕ ಮುನ್ನುಡಿಗಳು ಕಾವ್ಯ ಸಂಕಲನಗಳಿಗೆ ಬರೆದವು ಎಂಬುದನ್ನು…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
February 17, 2022
ಔಷಧೀಯ ಸಸ್ಯಗಳ ಬಗ್ಗೆ ಬಹಳ ಉಪಯುಕ್ತ ಮಾಹಿತಿ ತುಂಬಿದ ಈ ಪುಸ್ತಕ, ಪ್ರಕಟವಾದ ಹತ್ತು ವರುಷಗಳಲ್ಲಿ ಒಂಭತ್ತು ಸಲ ಮುದ್ರಣ ಆಗಿರುವುದೇ ಇದರ ಜನಪ್ರಿಯತೆಗೆ ಪುರಾವೆ. ಮನೆಯ ಮುಂಬದಿ ಅಥವಾ ಹಿಂಬದಿಯಲ್ಲಿ ಅಥವಾ ಟೆರೇಸಿನಲ್ಲಿ ಕೆಲವು ಔಷಧೀಯ ಸಸ್ಯಗಳನ್ನೂ ಸೊಪ್ಪಿನ ಗಿಡಗಳನ್ನೂ ಬೆಳೆಸಿ, ಅವುಗಳ ಪ್ರಯೋಜನ ಹೇಗೆ ಪಡೆದುಕೊಳ್ಳಬಹುದು ಎಂಬುದನ್ನು ತಿಳಿಸಿ ಕೊಡುವ ಪುಸ್ತಕ ಇದು. ಹಲವು ಅನಾರೋಗ್ಯ/ ಜಾಡ್ಯಗಳಿಗೆ ಚಿಕಿತ್ಸೆ ನೀಡಲು ನಮ್ಮ ದೇಶದ ಪಾರಂಪರಿಕ ಚಿಕಿತ್ಸಕರು ಬಳಸುತ್ತಿದ್ದ ಈ ಕೆಳಗಿನ ೩೬ ಔಷಧೀಯ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
February 16, 2022
‘ಎಂಟರ್ ದಿ ಡ್ರಾಗನ್’ ಇದು ಕುಂ.ವೀ. ಎಂದೇ ಖ್ಯಾತರಾದ ಕುಂ.ವೀರಭದ್ರಪ್ಪ ಅವರ ಕಥಾ ಸಂಕಲನ. ಈ ಕಥಾ ಸಂಕಲನದಲ್ಲಿ ಎಂಟರ್ ದಿ ಡ್ರಾಗನ್, ಪಂಪಣ್ಣನ ಗರ್ವಭಂಗ, ಬಟ್ಟೆಹೀನನ ಮನೆಯ..., ಮಸ್ತಾನ್ ಎಂಬ ‘ಆಂಧ್ರ ಫುಲ್ ಮೀಲ್ಸ್', ರತ್ನಳೆಂಬೋ ಬಾಲಕಿಯೂ..., ರಾಧಮ್ಮನ ಪ್ರಣಯ ಪ್ರಸಂಗ, ಅವನು ಮತ್ತು ಅವಳು, ವಿದುಷಿ, ನಂಜು, ತೇಲಲರಿಯರು, ಮುಳುಗಲೂ ಅರಿಯರು, ಎಣ್ಣೆ ಎಣ್ಣೇನೆ...ತುಪ್ಪ ತುಪ್ಪಾನೆ!, ಅಪಸ್ಮಾರ, ಸುಪಾರಿ, ಒತ್ತುವರಿ, ಕರುಳಿನ ಕರೆ, ಸಂಬಂಧ, ಸಿದ್ಧಾರೂಢ ಪುರಾಣವು, ನ್ಯೂ ಭಾರತ್ ಟಾಕೀಸ್,…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
February 14, 2022
‘ಮಣ್ಣೆ' ಕೃತಿಯು ಎಚ್ ಎಸ್ ಗೋಪಾಲ ರಾವ್ ಅವರ ಒಂದು ಪರಿಚಯಾತ್ಮಕ ಅಧ್ಯಯನವಾಗಿದೆ. ಈ ಕೃತಿಯು ೧೨ ಅನುಕ್ರಮಗಳನ್ನು ಒಳಗೊಂಡಿದೆ. ಮಣ್ಣೆ : ಒಂದು ಪರಿಚಯಾತ್ಮಕ ಅಧ್ಯಯನ, ರಾಜಕೀಯ ಹಿನ್ನಲೆಯಲ್ಲಿ ಮಣ್ಣೆ. ಮಣ್ಣೆಯಲ್ಲಿ ದೊರೆತಿರುವ ಮತ್ತು ಮಣ್ಣೆಗೆ ಸಂಬಂಧಿಸಿದ ಶಿಲಾಶಾಸನಗಳು, ಸಾಂಸ್ಕೃತಿಕವಾಗಿ ಮಣ್ಣೆ, ಸಾಹಿತ್ಯಕ್ಷೇತ್ರದಲ್ಲಿ ಮಣ್ಣೆ, ಧಾರ್ಮಿಕವಾಗಿ ಮಣ್ಣೆ, ಸಾಮಾಜಿಕವಾಗಿ ಮಣ್ಣೆ, ಮಣ್ಣೆಯ ಶಾಸನಗಳು, ಪದಸೂಚಿ, ಶಾಸನ ಪುಟ, ಮಣ್ಣೆ ಬಸದಿಯ ಉಹಾ ನಕ್ಷೆಗಳು, ನೇಮಿನಾಥ ಬಸದಿ, ಮಣ್ಣೆ ಚಿತ್ರಗಳು…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
February 11, 2022
ಸರಸ್ವತಿ ಶ್ರೀನಿವಾಸರಾಜು ಹೇಳಿದ ಆತ್ಮಕಥನವೇ ‘ಸೋಜಿಗದ ಬಳ್ಳಿ’ ಎಂಬ ಪುಸ್ತಕ. ಸರಸ್ವತಿಯವರ ಮಾತುಗಳನ್ನು ಅಕ್ಷರ ರೂಪಕ್ಕೆ ಇಳಿಸಿ ಸಂಯೋಜನೆ ಮಾಡಿದ್ದಾರೆ ಎಂ. ಆರ್. ಭಗವತಿಯವರು. ಪುಸ್ತಕದ ಬೆನ್ನುಡಿಯಲ್ಲಿ ಮೈಸೂರಿನ ಬಿ.ಪಿ.ಬಸವರಾಜು ಅವರು ಹೀಗೆ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.  “ಸರಳವಾಗಿ ಕಾಣಿಸಿದರೂ ಈ ಬರಹ ಸುಂದರವಾಗಿದೆ. ಅಚ್ಚುಕಟ್ಟಾಗಿದೆ. ಸಣ್ಣ ಸಣ್ಣ ಸಂಗತಿಗಳನ್ನೇ ಪೋಣಿಸಿ ದೊಡ್ಡ ಚಿತ್ರವನ್ನೇ ಕೊಡಲಾಗಿದೆ. ತೋರುಗಾಣಿಕೆಯಾಗಲಿ, ಅಬ್ಬರವಾಗಲಿ, ಉತ್ಪ್ರೇಕ್ಷೆಯಾಗಲಿ ಇಲ್ಲದ ಸಾಚಾ…