ಎಲ್ಲ ಪುಟಗಳು

ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
June 07, 2022
ಜಾಣಗೆರೆ ವೆಂಕಟರಾಮಯ್ಯ ಅವರ ಹೊಸ ಕಾದಂಬರಿ ‘ಭೂಮ್ತಾಯಿ' ಈ ಕಾದಂಬರಿಯ ಬಗ್ಗೆ ಪತ್ರಕರ್ತರಾದ ರಘುನಾಥ ಚ ಹ. ಇವರು ತಮ್ಮ ಅಭಿಪ್ರಾಯವನ್ನು ಪುಸ್ತಕದ ಬೆನ್ನುಡಿಯಲ್ಲಿ ಬರೆದಿದ್ದಾರೆ. ಅವರ ಪ್ರಕಾರ “ ಹೃದಯದಲ್ಲಿ ಪ್ರಾಮಾಣಿಕತೆ ತುಂಬಿದ್ದರೆ ನಿನ್ನ ಶತ್ರು ಮಾತ್ರವಲ್ಲ ಇಡೀ ಪ್ರಪಂಚ ನಿನ್ನೆದುರು ಆಯುಧವನ್ನು ಕೆಳಗಿಡುತ್ತದೆ ಎನ್ನುವ ಸ್ಮಾಮಿ ವಿವೇಕಾನಂದರ ಮಾತಿನೊಂದಿಗೆ ಆರಂಭಗೊಳ್ಳುವ ‘ಭೂಮ್ತಾಯಿ' ಕಾದಂಬರಿ, ಮನುಷ್ಯನ ಒಳ್ಳೆಯತನಕ್ಕೆ ಇರುವ ಶಕ್ತಿಯನ್ನು ನಿರೂಪಿಸುವಂತೆ ರೂಪುಗೊಂಡಿದೆ. ಮನುಷ್ಯನ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
June 04, 2022
ಮಹಾಭಾರತದ ಒಂದು ಪ್ರಮುಖ ಪಾತ್ರವಾದ ಕರ್ಣನಿಗೆ ರಾಧೇಯ ಎಂಬ ಹೆಸರೂ ಇದೆ. ಈ ಹೆಸರಿನಲ್ಲೇ ಡಾ. ವೆಂಕೋಬರಾವ್ ಎಂ. ಹೊಸಕೋಟೆ ಇವರು ಒಂದು ಕೃತಿಯನ್ನು ಹೊರ ತಂದಿದ್ದಾರೆ. ಇದು ಕರ್ಣನ ಆರಂಭ, ಅಂತ್ಯ ಹಾಗೂ ಅನಂತ ಎಂದು ಬರೆದುಕೊಂಡಿದ್ದಾರೆ. ಪುಸ್ತಕದ ಬೆನ್ನುಡಿಯಲ್ಲಿ ವೆಂಕೋಬರಾವ್ ಅವರು ಹೀಗೆ ಬರೆಯುತ್ತಾರೆ.  “ಭೀಷ್ಮ, ದ್ರೋಣ, ಅಶ್ವತ್ಥಾಮ ಮತ್ತು ಶಲ್ಯ ಮೊದಲಾದವರು ಕರ್ಣನು ಕುಲಹೀನನೆಂದು ತಿರಸ್ಕರಿಸುತ್ತಾರೆ. ಕರ್ಣನಿಗೆ ಇವರೆಲ್ಲರ ಸೊಕ್ಕನ್ನು ಕಂಡು ರೋಷ; ದುರ್ಯೋಧನನ ಅನ್ನವನ್ನುಂಡು ಅವನಿಗೆ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
June 03, 2022
ಖ್ಯಾತ ಪತ್ರಕರ್ತ ದಿ.ರವಿ ಬೆಳಗೆರೆ ಅವರ ಹಿಂದಿನ ಕಾದಂಬರಿಗಳಾದ ‘ಮಾಟಗಾತಿ' ಮತ್ತು ‘ಸರ್ಪ ಸಂಬಂಧ' ಇದರ ಮುಂದುವರಿದ ಭಾಗವೇ ‘ಪ್ರದೋಷ'. ಆದರೆ ದುರದೃಷ್ಟವಷಾತ್ ರವಿ ಬೆಳಗೆರೆ ಅವರ ಅಕಾಲ ನಿಧನದಿಂದಾಗಿ ಈ ಕಾದಂಬರಿಯು ಪೂರ್ಣಗೊಂಡಿಲ್ಲ. ಅಪೂರ್ಣವಾಗಿರುವ ಕಾದಂಬರಿಯನ್ನೇ ಪುಸ್ತಕ ರೂಪದಲ್ಲಿ ನೀಡಿದ್ದಾರೆ.  ರವಿ ಬೆಳಗೆರೆ ಅವರು ತಮ್ಮ ಬೆನ್ನುಡಿಯಲ್ಲಿ “ಅದು ಪ್ರದೋಷ ಕಾಲ! ಭಗವಂತ ಇದ್ದಾನಾ? ಗೊತ್ತಿಲ್ಲ. ಪ್ರೇತಾತ್ಮವಿದೆಯಾ? ತಿಳಿದಿಲ್ಲ. ಹೇಗೆ ಭಗವಂತನ ಸುತ್ತ ಗುಡಿ, ಗೋಪುರ, ಕಳಶ, ಮಂತ್ರ,…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
June 02, 2022
ಯಕ್ಷಗಾನದ ಪ್ರಸಿದ್ಧ ಅರ್ಥಧಾರಿಗಳಾದ ಪೊಳಲಿ ನಿತ್ಯಾನಂದ ಕಾರಂತರು ಸುಮಾರು ೨೦ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ ಎಂಬ ಸಂಗತಿ ಹಲವರಿಗೆ ತಿಳಿದಿಲ್ಲ. ಅದಕ್ಕೆ ಒಂದು ಕಾರಣ ಅವು ಪುಸ್ತಕ ರೂಪದಲ್ಲಿ ಪ್ರಕಟವಾಗಿರಲಿಲ್ಲ. ಇದೀಗ “ಯಕ್ಷಗಾನ ಪ್ರಸಂಗ ಸಂಪುಟ”ದಲ್ಲಿ ಅವರು ರಚಿಸಿದ ಆರು ಯಕ್ಷಗಾನ ಪ್ರಸಂಗಗಳು ಪ್ರಕಟವಾಗಿರುವ ಕಾರಣ ಮುಂದಿನ ತಲೆಮಾರುಗಳಿಗೆ ಅವು ಲಭ್ಯವಾಗಿವೆ. ಈ ಸಂಪುಟದಲ್ಲಿರುವ ಆರು ಯಕ್ಷಗಾನ ಪ್ರಸಂಗಗಳು: ಸತ್ಯದಪ್ಪೆ ಚೆನ್ನಮ್ಮ, ನಾಡ ಕೇದಗೆ, ಕಾಂತು ಕಬೇದಿ, ಸಾಮ್ರಾಟ್…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
May 31, 2022
ಟೈಟಾನಿಕ್ ಎಂಬ ಐಷಾರಾಮಿ ಹಡಗಿನ ಬಗ್ಗೆ ಎಷ್ಟೊಂದು ಪುಸ್ತಕಗಳು, ಚಲನಚಿತ್ರಗಳು ಬಂದಿದ್ದರೂ, ಆ ಹಡಗಿನ ಬಗ್ಗೆ, ಅದು ಮುಳುಗಡೆಯಾದ ಬಗ್ಗೆ, ಅದರಲ್ಲಿ ಬದುಕುಳಿದ ಪ್ರಯಾಣಿಕರ ಬಗ್ಗೆ ಕುತೂಹಲಕಾರಿ ಸಂಗತಿಗಳು ಹೊರ ಬರುತ್ತಲೇ ಇವೆ. ಇದೇ ವಿಷಯದ ಬಗ್ಗೆ ಹೊರಬಂದಿರುವ ಹೊಸ ಪುಸ್ತಕ ‘ಮುಳುಗಿದ ಸ್ವರ್ಗ ಟೈಟಾನಿಕ್'. ಲೇಖಕರಾದ ಕೆ ನಟರಾಜ್ ಅವರು ಸಾಗರ ಸುಂದರಿ ಟೈಟಾನಿಕ್ ಮುಳುಗಿದ ಕಥೆ-ವ್ಯಥೆಯನ್ನು ಹೇಳಲು ಹೊರಟಿದ್ದಾರೆ.  ಕೆ.ನಟರಾಜ್ ಅವರು ವಿಜ್ಞಾನ ಮತ್ತು ಇತಿಹಾಸದ ಲೇಖಕರು. ಉತ್ತಮ ಕವಿಯೂ ಹೌದು.…
ವಿಧ: ರುಚಿ
May 30, 2022
ಹಲಸಿನ ಹಣ್ಣಿನ ತೊಳೆಗಳನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿರಿ. ಕುಕ್ಕರಿನಲ್ಲಿ ಎರಡು ವಿಸಿಲ್ ಹಾಕಿ ಕೆಳಗಿಳಿಸಿ. ಬಾಣಲೆಗೆ ತುಪ್ಪ ಹಾಕಿ  ಬೇಯಿಸಿದ ಹಣ್ಣಿನ ಮಿಶ್ರಣವನ್ನು ಸೇರಿಸಿ ೧೦ ನಿಮಿಷ ಸಣ್ಣ ಉರಿಯಲ್ಲಿ ಮಗುಚಿ. ಬೆಲ್ಲ ಕುದಿಸಿ ಕರಗಿಸಿ ಸೋಸಿ ಸೇರಿಸಿ. ತೆಂಗಿನಕಾಯಿ ಹಾಲು ಅಥವಾ ಹಸುವಿನ ಹಾಲು ಸೇರಿಸಿ ಸಣ್ಣ ಉರಿಯಲ್ಲಿ ಕುದಿಸಿ. ಏಲಕ್ಕಿ ಹುಡಿ ಹಾಕಿ, ಗೋಡಂಬಿ ತುಪ್ಪದಲ್ಲಿ ಹುರಿದು ಹಾಕಿ ೧೦ ನಿಮಿಷ ಮುಚ್ಚಿಡಿ. ಹಲಸಿನ ಹಣ್ಣಿನ ಪಾಯಸ ರೆಡಿ.(ನಾನು ದನದ ಹಾಲಿನಲ್ಲಿ ತಯಾರಿಸಿರುವೆ) (…
ಲೇಖಕರು: venkatesh
ವಿಧ: ಬ್ಲಾಗ್ ಬರಹ
May 30, 2022
ಕೈಬರಹವನ್ನು ಇವತ್ತಿಗೂ ಜನಪ್ರಿಯವಾಗಿ ಮಾಡಲು  ತಕ್ಕ ಉಪಾಯವೆಂದರೆ, ಸರಿಯಾಗಿ ಅವಲೋಕಿಸುವುದು, ಮತ್ತು ಕೈನಲ್ಲೇ ಬರೆದು ಬರೆದು ಅದರಲ್ಲಿ ಸಾಧನೆಯ ಸಿದ್ಧಿಯನ್ನು  ಪಡೆಯುವುದು.  ಮಕ್ಕಳಿಗೆ ಈ ಕೈಬರಹವನ್ನು ಹೇಳಿಕೊಡುವ ನಿಟ್ಟಿನಲ್ಲಿ ನಾವು ಪ್ರಯತ್ನಿಸಿದೆ ಇರುವುದೇ,  ಅವರ ಸೃಜನಶೀಲತೆ ಕುಂಠಿತವಾಗಲು ಕಾರಣವಾಗಿದೆಯೆಂದು ನಾನು ನಂಬುತ್ತೇನೆ. ನಾವೆಲ್ಲರೂ  ಅದರ ಬಗ್ಗೆ ಒಮ್ಮೆಯಾದರೂ ಯೋಚಿಸುವುದು ಅತ್ಯಗತ್ಯ.  ಇಂದಿನ ಕಂಪ್ಯೂಟರ್ ಯುಗದಲ್ಲೂ ನಾವು ಮತ್ತು ನಮ್ಮ ಮಕ್ಕಳು ಕೈನಲ್ಲೇ  ಬರೆಯುವ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
May 27, 2022
ಬಹಳಷ್ಟು ಬರಹಗಾರರಿಗೆ ಪತ್ರಿಕೆಗಳಿಗೆ ಯಾವ ರೀತಿಯ ಬರಹಗಳನ್ನು ಬರೆದು ಕಳಿಸಬೇಕು ಎನ್ನುವ ಗೊಂದಲ ಇರುತ್ತದೆ. ಹಲವಾರು ಲೇಖಕರು ಸೊಗಸಾಗಿ ಬರೆಯುತ್ತಾರೆ, ಆದರೆ ಅವರ ಲೇಖನಗಳು ಯಾವುದೇ ಪತ್ರಿಕೆಯ ಪುಟಗಳಿಗೆ ಸರಿಹೊಂದುವುದಿಲ್ಲ. ಯಾವ ರೀತಿಯ ಬರಹ, ಯಾವ ಪತ್ರಿಕೆಯ ಯಾವ ಪುರವಣಿಗೆ ಸೂಕ್ತ ಎನ್ನುವ ಸಾಮಾನ್ಯ ಜ್ಞಾನವನ್ನು ಪ್ರತಿಯೊಬ್ಬ ಲೇಖಕರು ಹೊಂದಿರುವುದು ಅಗತ್ಯ. ಇದರ ಜೊತೆಗೆ ಲೇಖನಗಳಲ್ಲಿನ ಪದಗಳ ಮಿತಿಯನ್ನು ಗಮನಿಸುವುದು ಅತ್ಯಂತ ಅಗತ್ಯ. ಬಹಳಷ್ಟು ಬರಹಗಾರರು ಹೊಂದಿರುವ ಹಲವಾರು…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
May 26, 2022
ದೇಶದ ಆರ್ಥಿಕತೆ, ಬಡತನ - ಶ್ರೀಮಂತಿಕೆ, ಜನಸಾಮಾನ್ಯರ ಬದುಕಿನ ಮೇಲೆ ಸರಕಾರದ ನೀತಿಗಳ ಪರಿಣಾಮಗಳು - ಇಂತಹ ವಿಷಯಗಳ ಬಗ್ಗೆ ಕನ್ನಡದಲ್ಲಿ ಪುಸ್ತಕಗಳು ವಿರಳ. ಅದರಲ್ಲೂ ಇಂತಹ ವಿಷಯಗಳ ಬಗ್ಗೆ ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ, ಪಾರಿಭಾಷಿಕ ಪದಗಳ ಉಸಿರುಗಟ್ಟಿಸುವ ಗೊಂದಲವಿಲ್ಲದ ಪುಸ್ತಕಗಳು ವಿರಳಾತಿ ವಿರಳ. ಆದ್ದರಿಂದಲೇ ಎಂ. ಎಸ್. ಶ್ರೀರಾಮರ “ಶನಿವಾರ ಸಂತೆ" ಪುಸ್ತಕ ಮುಖ್ಯವಾಗುತ್ತದೆ. ಅಂದ ಹಾಗೆ ಇದು ಅವರು “ಉದಯವಾಣಿ"ಯಲ್ಲಿ ಬರೆಯುತ್ತಿದ್ದ ಅಂಕಣ ಬರಹಗಳ ಸಂಕಲನ. “ಒಳಿತು, ಲಾಭ,…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
May 24, 2022
ಖ್ಯಾತ ಪತ್ರಕರ್ತ ವೈಯೆನ್ಕೆ ಅವರ ‘ವಂಡರ್ ಕಣ್ಣು' ಬಹಳ ಜನಪ್ರಿಯ ಅಂಕಣವಾಗಿತ್ತು. ‘ಕೊನೆ ಸಿಡಿ' ಯೊಂದಿಗೆ ಅದು ಕೊನೆಗೊಳ್ಳುತ್ತಿತ್ತು. ಬಹುತೇಕ ಓದುಗರು ‘ಕೊನೆ ಸಿಡಿ' ಯಿಂದಲೇ ಆ ಅಂಕಣವನ್ನು ಆರಂಭ ಮಾಡುತ್ತಿದ್ದರು. ಅದು ‘ಕೊನೆ ಸಿಡಿ' ಯ ಆಕರ್ಷಣೆ. ಪನ್, ಸಿದ್ಧ ಚಾಟೂಕ್ತಿ ಹಾಗೂ ಥಟ್ ಉತ್ತರಕ್ಕೆ ಸಿದ್ಧಹಸ್ತರಾಗಿದ್ದ ವೈಯೆನ್ಕೆ ಜತೆಯಲ್ಲಿ ಮಾತಾಡುತ್ತಿದ್ದರೆ ‘ಕೊನೆ ಸಿಡಿ'ಗಳು ಒಂದೇ ಸಮನೆ ಸಿಡಿಯುತ್ತಿದ್ದವು. ಹತ್ತಾರು ವರ್ಷ ಅವರು ಬರೆದ ‘ಕೊನೆ ಸಿಡಿ' ಗಳನ್ನು ಸಂಗ್ರಹಿಸಿ, ಆ ಪೈಕಿ…