ಎಲ್ಲ ಪುಟಗಳು

ವಿಧ: ರುಚಿ
March 09, 2022
ಹಾಗಲಕಾಯಿಯನ್ನು ಕತ್ತರಿಸುವ ಮೊದಲೇ ತೊಳೆದು ಕೊಳ್ಳಬೇಕು. ಸಣ್ಣಕೆ ಹೋಳುಗಳಾಗಿ ಮಾಡಿಟ್ಟುಕೊಳ್ಳಬೇಕು. ಒಗ್ಗರಣೆಗೆ ಉದ್ದಿನಬೇಳೆ, ಸಾಸಿವೆ, ಸ್ವಲ್ಪ ಕಡಲೆ ಅಥವಾ ತೊಗರಿಬೇಳೆ, ಒಣಮೆಣಸು ಹಾಕಿ ಅದಕ್ಕೆ ಅರಶಿನ ಹುಡಿ ಮತ್ತು ಎಣ್ಣೆ ಸ್ವಲ್ಪ ಹೆಚ್ಚು ಹಾಕಬೇಕು. ಕಾಯಿ ಮೆಣಸು ಸೇರಿಸಿ. ಕತ್ತರಿಸಿಟ್ಟ ಹೋಳುಗಳನ್ನು ಸೇರಿಸಿ. ಚೆನ್ನಾಗಿ ಹುರಿಯಬೇಕು. ಎಣ್ಣೆಯಲ್ಲಿಯೇ ಹುರಿಯಬೇಕು. ನೀರು ಹಾಕಬಾರದು. ರುಚಿಗೆ ತಕ್ಕಷ್ಟು ಉಪ್ಪು, ಖಾರಪುಡಿ (ನಾನು ಸಾಂಬಾರು ಹುಡಿ ಬಳಸಿರುವೆ) ಬೆಲ್ಲ ಮತ್ತು ಹುಣಿಸೇ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
March 08, 2022
ಅಲ್ಲಮಪ್ರಭು ಪೀಠ, ಕಾಂತಾವರ ಇವರು ಪ್ರಕಾಶಿಸಿರುವ ಕರಣ ಕಾರಣ ಸರಣಿಯ ೯ನೇ ಪುಸ್ತಕ ಇದು. ಅನುಭವದ ನಡೆ- ಅನುಭಾವದ ನುಡಿ ಸರಣಿಯ ೨೦೨೦ರ ಉಪನ್ಯಾಸಗಳು. ಈ ಪುಸ್ತಕವನ್ನು ಉಪನ್ಯಾಸಕರಾದ ಡಾ. ರಾಜಶೇಖರ ಜಮದಂಡಿಯವರು ಸಂಪಾದಿಸಿದ್ದಾರೆ. ಮೌಲ್ಯಯುತವಾದ ೧೩ ಲೇಖನಗಳು ಈ ಪುಸ್ತಕದಲ್ಲಿವೆ. ಅವರ ಪ್ರಕಾರ ‘ಅಲ್ಲಮ ಪ್ರಭು ವಿಶ್ವದ ಶ್ರೇಷ್ಟ ದಾರ್ಶನಿಕ ಮಹಾಜ್ಞಾನಿ. ಮಾನವನಾದಿಯಾಗಿ ಸಕಲ ಜೀವಿಗಳ ಕುಲೋದ್ಧಾರದ ಮಹಾಚಿಂತಕ. ಭಾವುಕವಲ್ಲದ ವೈಚಾರಿಕ ದೃಷ್ಟಿಯಲ್ಲಿ ಆಧ್ಯಾತ್ಮಿಕ ಸಾಧನೆಯಿಂದ ಲೋಕವನ್ನೇ…
ಲೇಖಕರು: venkatesh
ವಿಧ: ಬ್ಲಾಗ್ ಬರಹ
March 07, 2022
ಅಂಬಿಗ ! ದಡ ಹಾಯಿಸು ...  (ಭೌತವಿಜ್ಞಾನದ  ಪ್ರಾಧ್ಯಾಪಕ, ಎಚ್. ಆರ್. ರಾಮಕೃಷ್ಣರಾವ್ ಅವರ ಆತ್ಮಕತೆ)  ನಿರೂಪಣೆ : ಕಲ್ಗುಂಡಿ ನವೀನ್   ಸಂಪಾದಕರು : ಡಾ. ವೈ. ಸಿ. ಕಮಲ, ಸುಮಂಗಲಾ  ಎಸ್.  ಮುಮ್ಮಿಗಟ್ಟಿ  ಉದಯಭಾನು  ಕಲಾಸಂಘ ಉದಯಭಾನು ಉನ್ನತ ಅಧ್ಯಯನ ಕೇಂದ್ರ  ವಿಜ್ಞಾನ-ತಂತ್ರಜ್ಞಾನ ಅಧ್ಯಯನಾಂಗ  ಬೆಂಗಳೂರು -೫೬೦ ೦೧೯  ಪ್ರೊ. ಎಚ್.  ಆರ್. ರಾಮಕೃಷ್ಣರಾಯರ  ಆತ್ಮಕತೆಯಿಂದ ಆಯ್ದ ಕೆಲವು ಭಾಗವನ್ನು, ಓದುಗರ ಮುಂದೆ ಇಡಲು ಇಚ್ಛಿಸುತ್ತೇನೆ.  -ಎಚ್ಚಾರೆಲ್  ಎಚ್.  ಆರ್. ರಾಮಕೃಷ್ಣರಾಯರು…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
March 05, 2022
‘ಕರಮಜೋವ್ ಸಹೋದರರು' ಎಂಬ ಪುಸ್ತಕ ರಚಿಸಿದ ಕೆ.ಶ್ರೀನಾಥ್ ಮತ್ತೆ ‘ಸತ್ಯಕ್ಕೊಂದು ಸಂತಾಪ' ಎಂಬ ಪುಸ್ತಕದೊಂದಿಗೆ ಮರಳಿ ಬಂದಿದ್ದಾರೆ. ಪುಸ್ತಕಕ್ಕೆ ಬೆನ್ನುಡಿ ಬರೆದಿದ್ದಾರೆ ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ. ಅವರು ತಮ್ಮ ನುಡಿಯಲ್ಲಿ “ ಹರಿವ ಹೊಳೆ, ಅಯಾಚಿತ ಹುಟ್ಟು, ಅಕಲ್ಪಿತ ಸಾವಿನ ನಡುವಿನ ನೋವು ನಲಿವು, ವಿಕಲ್ಪ, ದೈನ್ಯ, ಸ್ವಪ್ನ, ವಿಭಾವ ಅಭಾವಗಳ ವಿಲಕ್ಷಣ ಜೀವನ ಪ್ರವಾಹದ ಅಲೆಗಳ ಸಂಗ್ರಹದಂತಿರುವ ಈ ವಿಶಿಷ್ಟ ಕಾದಂಬರಿ ಕೇವಲ ೧೭೨ ಪುಟಗಳಲ್ಲಿ ನಾಲ್ಕು ತಲೆಮಾರಿನ ಕಥನವನ್ನು…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
March 04, 2022
‘ಶನಿ ಮಹಾತ್ಮೆ ಮತ್ತು ಬಜ್ಪೆ ಶನೈಶ್ಚರ ದೇವಸ್ಥಾನ' ಪುಸ್ತಕದ ಲೇಖಕರು ಡಿ.ಎಸ್.ಬೋಳೂರು ಇವರು. ತಮ್ಮ ಮಾತಿನಲ್ಲಿ ಇವರು ಹೀಗೆ ಬರೆಯುತ್ತಾರೆ “ಈ ಕೃತಿಯಲ್ಲಿ ಎರಡು ವಿಭಾಗಗಳಿವೆ. ಒಂದನೇ ಭಾಗದಲ್ಲಿ ಮೂರು ಅಧ್ಯಾಯಗಳನ್ನು ರಚಿಸಿದ್ದೇನೆ. ಒಂದನೇ ಅಧ್ಯಾಯವು ಜ್ಯೋತಿಷ್ಯದ ಸಂಕ್ಷಿಪ್ತ ವಿವರಣೆಗಳೊಂದಿಗೆ ನವಗ್ರಹಗಳ ಪರಿಚಯ, ಏಳುವರೆ ಶನಿ, ಅಷ್ಟಮ ಶನಿ, ಶನಿದೆಸೆ ಮತ್ತು ಇತರ ದೆಶೆಗಳು ಹಾಗೂ ಆ ದೆಶೆಗಳಲ್ಲಿ ಅಂತರ್ಗತವಾಗಿರುವ ಭುಕ್ತಿಗಳ ಕುರಿತಾಗಿ ಸಂಕ್ಷಿಪ್ತವಾಗಿ ನಿರೂಪಿಸಿರುತ್ತೇನೆ.  ಎರಡನೇ…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
March 03, 2022
ಇದು 256 ಔಷಧೀಯ ಗಿಡಮೂಲಿಕೆಗಳ ಪರಿಚಯ ಹಾಗೂ ಉಪಯೋಗ ತಿಳಿಸುವ ಉಪಯುಕ್ತ ಪುಸ್ತಕ. ಪ್ರತಿಯೊಂದು ಔಷಧೀಯ ಸಸ್ಯದ ಸಸ್ಯಶಾಸ್ತ್ರೀಯ ಹೆಸರು ಹಾಗೂ ವರ್ಣ ಮತ್ತು ಕಪ್ಪುಬಿಳುಪು ಚಿತ್ರಗಳನ್ನು ಕೊಟ್ಟಿರುವುದರಿಂದ ಅವನ್ನು ಗುರುತಿಸಲು ಸಹಾಯ. ಜೊತೆಗೆ, ಸಸ್ಯದ ಕನ್ನಡ, ತೆಲುಗು, ತಮಿಳು, ಮಳೆಯಾಳ ಮತ್ತು ಸಂಸ್ಕೃತ ಹೆಸರುಗಳನ್ನೂ ಪ್ರಕಟಿಸಲಾಗಿದೆ. ಬಹುಪಾಲು ಸಸ್ಯಗಳ ಹಿಂದಿ ಹೆಸರುಗಳೂ ಇವೆ. ಅಕಾರಾದಿಯಾಗಿ ಔಷಧೀಯ ಸಸ್ಯಗಳ ಬಗ್ಗೆ ತಲಾ ಒಂದೊಂದು ಪುಟ ಮಾಹಿತಿ ನೀಡಲಾಗಿದೆ. ಆರಂಭದಲ್ಲಿ ಹೆಸರುಗಳ ಪಟ್ಟಿ,…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
March 01, 2022
ಪೂರ್ಣಿಮಾ ಮಾಳಗಿಮನಿಯವರು ‘ಪ್ರೀತಿ ಪ್ರೇಮ-ಪುಸ್ತಕದಾಚೆಯ ಬದನೇಕಾಯಿ' ಎಂಬ ಸೊಗಸಾದ ಪುಸ್ತಕವನ್ನು ಬರೆದಿದ್ದಾರೆ. ಪುಸ್ತಕದ ಬೆನ್ನುಡಿಯಲ್ಲಿ ಓದುಗರ ಅನಿಸಿಕೆಯನ್ನು ಮುದ್ರಿಸಿದ್ದಾರೆ. ಲೇಖಕರಾದ ಗೋಪಾಲಕೃಷ್ಣ ಕುಂಟಿನಿಯವರು "ಇದು ಪ್ರೇಮ ಮತ್ತು ಯಾತನೆಯ ಕತೆ. ನೆಲದ ಮುಖದಿಂದ ಎದ್ದು ಬಂದ ಬದುಕುಗಳ ಕತೆ. ಈ ಪುಸ್ತಕ ಬೋಲ್ಡ್ ಮತ್ತು ಬ್ಯೂಟಿಫುಲ್!” ಎಂದಿದ್ದಾರೆ. ಪತ್ರಕರ್ತ, ಲೇಖಕ ಜೋಗಿಯವರು ತಮ್ಮ ಅಭಿಪ್ರಾಯದಲ್ಲಿ ‘ಒಂದು ಗುಪ್ತ ಪ್ರೇಮ, ಮತ್ತೊಂದು ಭಗ್ನ ಪ್ರೇಮ, ಮುಗಿಯದ ಹುಡುಕಾಟ, ತೀವ್ರ…
ಲೇಖಕರು: venkatesh
ವಿಧ: ಬ್ಲಾಗ್ ಬರಹ
March 01, 2022
ಮುಂಬಯಿನ  ಘಾಟ್ಕೋಪರ್ ಪಶ್ಚಿಮದಲ್ಲಿರುವ ಹಿಮಾಲಯ ಪಾರ್ವತೀಯ ಕೋ-ಆಪರೇಟಿವ್ ಹೌಸಿಂಗ್ ಸೊಸಾಯಿಟಿಯಲ್ಲಿ ನಿರ್ಮಿಸಿರುವ  ‘ಹಿಮಾಲಯೇಶ್ವರ ಮಹದೇವ್ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಹಬ್ಬವನ್ನು ಆಚರಿಸುತ್ತಿರುವುದು’  ! ಹೆಸರೇ ಸೂಚಿಸುವಂತೆ ಶಿವನ ಆರಾಧನೆಗೆ ಮೀಸಲಾದ ಸಮಯ ‘ರಾತ್ರಿ’. ಇಡೀ ರಾತ್ರಿ ನಾವು ಜಾಗರಣೆಯಲ್ಲಿದ್ದು ಶಿವನನ್ನು ಪೂಜಿಸಬೇಕು. ರಾತ್ರಿ ಎಂದರೆ ನಿದ್ರೆ; ತಮಸ್ಸು; ಕತ್ತಲು. ಇವೆಲ್ಲವೂ ನಮ್ಮ ಎಚ್ಚರವನ್ನು ತಪ್ಪಿಸುವಂಥವು; ಪ್ರಮಾದಕ್ಕೆ ಕಾರಣವಾಗಬಲ್ಲಂಥವು. ಇಂಥ ಸಮಯ ದಲ್ಲಿ…
ಲೇಖಕರು: venkatesh
ವಿಧ: ಬ್ಲಾಗ್ ಬರಹ
February 27, 2022
ಲೇಖಕರು : ಎಚ್ಚಾರೆಲ್, (ಸಂಪದ ತಾಣದಲ್ಲಿ ಶುರುವಿನಿಂದ ಲೇಖನಗಳನ್ನು ಬರೆಯುತ್ತಾ ಬಂದಿದ್ದಾರೆ) 'ಕನ್ನಡ ವಿಕಿಪೀಡಿಯದ ಸಂಪಾದಕರು', ಸುಮಾರು ಒಂದು ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಸಂಪಾದಿಸಿದ್ದಾರೆ.  ಬ್ಲಾಗ್ ಲೇಖಕರು, ಫೇಸ್ಬುಕ್, ನಲ್ಲಿ ಸಕ್ರಿಯರಾಗಿದ್ದಾರೆ.  ಹಲವು ಅಂತರ್ಜಾಲ ತಾಣಗಳಲ್ಲಿ ಲೇಖನಗಳನ್ನು ಬರೆಯುತ್ತಾರೆ.  ಲತಾ ಮಂಗೇಶ್ಕರ್, ತಮ್ಮ ಟೆಲಿವಿಷನ್ ಸಂವಾದಗಳಲ್ಲಿ  ಬಡೇಗುಲಾಂ ಖಾನ್  ಹಾಗೂ ನೂರ್ ಜೆಹಾನ್ ಬೇಗಂ ತಮ್ಮ ಪರಮಾಪ್ತ ಮಾರ್ಗದರ್ಶಕರೆಂದು ಪ್ರಶಂಸಿದ್ದಾರೆ.  ಶಂಶಾದ್…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
February 25, 2022
ಆತ ಲೋಕ ಪ್ರಸಿದ್ಧ ಸಾಹಿತಿ ಆಲ್ಬರ್ಟ್ ಕಮೂ - ಕಾಮೂ ಎಂದೂ ಬರೆಯುತ್ತಾರೆ. ಅದಿರಲಿ. ಕನ್ನಡದ ಕಥೆಗಾರ ಕೇಶವ ಮಳಗಿ ಅವರು ಈತನ ಬಗ್ಗೆ ಬರೆದ 'ಕಮೂ - ತರುಣ ವಾಚಿಕೆ, ಎಂಬ ಪುಸ್ತಕವನ್ನು ಓದುತ್ತಿದ್ದೇನೆ. ಅದರಲ್ಲಿನ ಒಂದು ಕಥೆಯನ್ನು ಈಗತಾನೆ  ಓದಿದೆ. ಕಥೆಯು ಸಂಕ್ಷಿಪ್ತವಾಗಿ ಹೀಗಿದೆ. ಊರಿನ ಒಂದು ಶಾಲೆ. ಅಲ್ಲಿ ಒಬ್ಬ ಮಾಸ್ತರ. ಆತನ ಪರಿಚಯದ ಪೊಲೀಸನು ಒಬ್ಬ ಕೈದಿಯನ್ನು ಕರೆತಂದು ಇವನಿಗೆ  ಒಪ್ಪಿಸುತ್ತಾನೆ. ಅವನ ಮೇಲಧಿಕಾರಿಗಳ ಆದೇಶದಂತೆ ಈ ಮಾಸ್ತರನು ಈ ಕೈದಿಯನ್ನು ಹತ್ತಿರದಲ್ಲಿರುವ ಪೊಲೀಸ್…