ವಿಧ: ಪುಸ್ತಕ ವಿಮರ್ಶೆ
June 10, 2022
ಖ್ಯಾತ ಸಾಹಿತಿ ಖಲೀಲ್ ಗಿಬ್ರಾನ್ ಬರೆದ ಹಲವಾರು ಪುಸ್ತಕಗಳನ್ನು ನೀವು ಓದಿರಬಹುದು. ಆದರೆ ಖಲೀಲ್ ಗಿಬ್ರಾನ್ ಅವರ ಗೆಳತಿ ಬಾರ್ಬರಾ ಯಂಗ್ ಅವರ ಕಂಗಳಲ್ಲಿ ಕಂಡು ಬಂದ ಗಿಬ್ರಾನ್ ಬಗ್ಗೆ ಓದಿರುವಿರಾ? ಇಲ್ಲವೆಂದಾದರೆ 'ಇವ ಲೆಬನಾನಿನವ' ಮೂಲಕ ಕನ್ನಡ ಭಾಷೆಗೆ ಅನುವಾದಗೊಂಡ ಈ ಪುಸ್ತಕ ಓದಲೇ ಬೇಕು. ಅನುವಾದಕರು ಎನ್ ಸಂಧ್ಯಾರಾಣಿ. ಕವಿ ಹಾಗೂ ಅನುವಾದಕರಾದ ಚಿದಂಬರ ನರೇಂದ್ರ ಅವರು ತಮ್ಮ ಬೆನ್ನುಡಿಯಲ್ಲಿ ವ್ಯಕ್ತ ಪಡಿಸಿದ ಅಭಿಪ್ರಾಯ ಹೀಗಿದೆ…
"ಕನ್ನಡಕ್ಕೂ ಲೆಬನಾನ್ ನ ಮಹಾಕವಿ ಖಲೀಲ್ ಗಿಬ್ರಾನ್…
ವಿಧ: ಪುಸ್ತಕ ವಿಮರ್ಶೆ
June 09, 2022
"ದಯವಿಟ್ಟು ನಂತರ ಪ್ರಯತ್ನಿಸಿ..." ಇದೊಂದು ರಾಜಕೀಯ ಕಾದಂಬರಿ, ಆಧುನಿಕತೆಯಲ್ಲಿ ಇಂದಿನ ರಾಜಕೀಯ ರಂಗಿನಾಟಗಳ ಸ್ಪಷ್ಟ ಚಿತ್ರಣವನ್ನು ಕೊಡಲು ಇಲ್ಲಿ ಪ್ರಯತ್ನಿಸಿರುವೆ. ಹಾಗೆಯೇ ಸಾಮಾಂಜಿಕವಾಗಿ ಹೆಣ್ಣು ಹೇಗೆ ಶೋಷಣೆಗೆ ಗುರಿಯಾಗುತ್ತಾಳೆ? ಹೆಣ್ಣು, ಹೆಣ್ಣಿಗೆ ಸಹಾಯ ಮಾಡಿದರೇ, ಆಕೆಯ ಬದುಕನ್ನು ಬದಲಿಸಬಹುದು ಎನ್ನುವುದಕ್ಕೆ ಈ ಕಾದಂಬರಿ ಸಾಕ್ಷಿಯಾಗುತ್ತದೆ. ಅಲ್ಲದೇ ಮನಸ್ಸು ಮಾಡಿದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು ! ತನ್ನ ಗುರಿಯನ್ನು ಮುಟ್ಟಬಹುದು ! ಕುಟುಂಬ, ಸಮುದಾಯ ಮತ್ತು ಸಮಾಜ…
ವಿಧ: ಪುಸ್ತಕ ವಿಮರ್ಶೆ
June 09, 2022
"ಸಸ್ಯ ಪ್ರಪಂಚ" ಒಂದು ಅಪೂರ್ವ ಪುಸ್ತಕ. ಸಸ್ಯಗಳ ಬಗ್ಗೆ ಡಾ. ಕೃಷ್ಣಾನಂದ ಕಾಮತರ ಆಳವಾದ ಅಧ್ಯಯನವನ್ನು ತೆರೆದಿಡುವ ಪುಸ್ತಕ. "....ನಾವು ಇನ್ನೂ ನಿಸರ್ಗಪ್ರೇಮಿಗಳಾಗಲಿಲ್ಲ. ದೇವದತ್ತವಾಗಿ ಬಂದ ಪರಿಸರವನ್ನು ಕಂಡು ಆನಂದಿಸುವ ಕಲೆಯನ್ನು ನಾವಿನ್ನೂ ಕರಗತ ಮಾಡಿಕೊಂಡಿಲ್ಲ .....ಕಾಡು, ನಮ್ಮ ಉಪಯೋಗಕ್ಕಾಗಿಯೇ ನಿರ್ಮಿತವಾದ ಧನರಾಶಿಯೆಂದು ನಾವೂ ಸರಕಾರವೂ ಕೂಡಿಯೇ ಭಾವಿಸಿದ್ದೇವೆಯೇ ಹೊರತು ಈ ಸಂಪತ್ತು ಬೆಳೆಸಲು ನಾವೇನು ಮಾಡಬೇಕು? ಎಂದು ಯೋಚಿಸುವ ಗೋಜಿಗೇ ಹೋಗಿಲ್ಲ" ಎಂಬ ನೇರ ಮಾತುಗಳೊಂದಿಗೆ…
ವಿಧ: ಬ್ಲಾಗ್ ಬರಹ
June 08, 2022
'ರೇಷ್ಮಾ ಔರ್ ಶೇರಾ' ರಾಷ್ಟೀಯ ಹಾಗೂ ಅಂತಾರಾಷ್ಟ್ರೀಯ ವಿಮರ್ಶಕರಿಂದ ಹೆಚ್ಚಿನ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದಚಿತ್ರವಾಗಿತ್ತು. 22 ನೇ ಬರ್ಲಿನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗೋಲ್ಡನ್ ಬೇರ್ಗೆ ನಾಮನಿರ್ದೇಶನಗೊಂಡಿತ್ತು ಸಹಿತ. 44 ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ರೇಷ್ಮಾ ಔರ್ ಶೇರಾ ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರ (ಭಾರತದಿಂದ ಪ್ರವೇಶಕ್ಕೆ ಒಳಗಾದ) ವಾಗಿ ಆಯ್ಕೆಯಾಗಿತ್ತು. ಆದರೆ ನಾಮನಿರ್ದೇಶಿತವಾಗಿ ಸ್ವೀಕೃತವಾಗಿರಲಿಲ್ಲ.
'ಸುನಿಲ್ ದತ್' ರಂತಹ ಕಲಾವಿದ, …
ವಿಧ: ಪುಸ್ತಕ ವಿಮರ್ಶೆ
June 07, 2022
ಜಾಣಗೆರೆ ವೆಂಕಟರಾಮಯ್ಯ ಅವರ ಹೊಸ ಕಾದಂಬರಿ ‘ಭೂಮ್ತಾಯಿ' ಈ ಕಾದಂಬರಿಯ ಬಗ್ಗೆ ಪತ್ರಕರ್ತರಾದ ರಘುನಾಥ ಚ ಹ. ಇವರು ತಮ್ಮ ಅಭಿಪ್ರಾಯವನ್ನು ಪುಸ್ತಕದ ಬೆನ್ನುಡಿಯಲ್ಲಿ ಬರೆದಿದ್ದಾರೆ. ಅವರ ಪ್ರಕಾರ “ ಹೃದಯದಲ್ಲಿ ಪ್ರಾಮಾಣಿಕತೆ ತುಂಬಿದ್ದರೆ ನಿನ್ನ ಶತ್ರು ಮಾತ್ರವಲ್ಲ ಇಡೀ ಪ್ರಪಂಚ ನಿನ್ನೆದುರು ಆಯುಧವನ್ನು ಕೆಳಗಿಡುತ್ತದೆ ಎನ್ನುವ ಸ್ಮಾಮಿ ವಿವೇಕಾನಂದರ ಮಾತಿನೊಂದಿಗೆ ಆರಂಭಗೊಳ್ಳುವ ‘ಭೂಮ್ತಾಯಿ' ಕಾದಂಬರಿ, ಮನುಷ್ಯನ ಒಳ್ಳೆಯತನಕ್ಕೆ ಇರುವ ಶಕ್ತಿಯನ್ನು ನಿರೂಪಿಸುವಂತೆ ರೂಪುಗೊಂಡಿದೆ. ಮನುಷ್ಯನ…
ವಿಧ: ಪುಸ್ತಕ ವಿಮರ್ಶೆ
June 04, 2022
ಮಹಾಭಾರತದ ಒಂದು ಪ್ರಮುಖ ಪಾತ್ರವಾದ ಕರ್ಣನಿಗೆ ರಾಧೇಯ ಎಂಬ ಹೆಸರೂ ಇದೆ. ಈ ಹೆಸರಿನಲ್ಲೇ ಡಾ. ವೆಂಕೋಬರಾವ್ ಎಂ. ಹೊಸಕೋಟೆ ಇವರು ಒಂದು ಕೃತಿಯನ್ನು ಹೊರ ತಂದಿದ್ದಾರೆ. ಇದು ಕರ್ಣನ ಆರಂಭ, ಅಂತ್ಯ ಹಾಗೂ ಅನಂತ ಎಂದು ಬರೆದುಕೊಂಡಿದ್ದಾರೆ. ಪುಸ್ತಕದ ಬೆನ್ನುಡಿಯಲ್ಲಿ ವೆಂಕೋಬರಾವ್ ಅವರು ಹೀಗೆ ಬರೆಯುತ್ತಾರೆ.
“ಭೀಷ್ಮ, ದ್ರೋಣ, ಅಶ್ವತ್ಥಾಮ ಮತ್ತು ಶಲ್ಯ ಮೊದಲಾದವರು ಕರ್ಣನು ಕುಲಹೀನನೆಂದು ತಿರಸ್ಕರಿಸುತ್ತಾರೆ. ಕರ್ಣನಿಗೆ ಇವರೆಲ್ಲರ ಸೊಕ್ಕನ್ನು ಕಂಡು ರೋಷ; ದುರ್ಯೋಧನನ ಅನ್ನವನ್ನುಂಡು ಅವನಿಗೆ…
ವಿಧ: ಪುಸ್ತಕ ವಿಮರ್ಶೆ
June 03, 2022
ಖ್ಯಾತ ಪತ್ರಕರ್ತ ದಿ.ರವಿ ಬೆಳಗೆರೆ ಅವರ ಹಿಂದಿನ ಕಾದಂಬರಿಗಳಾದ ‘ಮಾಟಗಾತಿ' ಮತ್ತು ‘ಸರ್ಪ ಸಂಬಂಧ' ಇದರ ಮುಂದುವರಿದ ಭಾಗವೇ ‘ಪ್ರದೋಷ'. ಆದರೆ ದುರದೃಷ್ಟವಷಾತ್ ರವಿ ಬೆಳಗೆರೆ ಅವರ ಅಕಾಲ ನಿಧನದಿಂದಾಗಿ ಈ ಕಾದಂಬರಿಯು ಪೂರ್ಣಗೊಂಡಿಲ್ಲ. ಅಪೂರ್ಣವಾಗಿರುವ ಕಾದಂಬರಿಯನ್ನೇ ಪುಸ್ತಕ ರೂಪದಲ್ಲಿ ನೀಡಿದ್ದಾರೆ.
ರವಿ ಬೆಳಗೆರೆ ಅವರು ತಮ್ಮ ಬೆನ್ನುಡಿಯಲ್ಲಿ “ಅದು ಪ್ರದೋಷ ಕಾಲ! ಭಗವಂತ ಇದ್ದಾನಾ? ಗೊತ್ತಿಲ್ಲ. ಪ್ರೇತಾತ್ಮವಿದೆಯಾ? ತಿಳಿದಿಲ್ಲ. ಹೇಗೆ ಭಗವಂತನ ಸುತ್ತ ಗುಡಿ, ಗೋಪುರ, ಕಳಶ, ಮಂತ್ರ,…
ವಿಧ: ಪುಸ್ತಕ ವಿಮರ್ಶೆ
June 02, 2022
ಯಕ್ಷಗಾನದ ಪ್ರಸಿದ್ಧ ಅರ್ಥಧಾರಿಗಳಾದ ಪೊಳಲಿ ನಿತ್ಯಾನಂದ ಕಾರಂತರು ಸುಮಾರು ೨೦ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ ಎಂಬ ಸಂಗತಿ ಹಲವರಿಗೆ ತಿಳಿದಿಲ್ಲ. ಅದಕ್ಕೆ ಒಂದು ಕಾರಣ ಅವು ಪುಸ್ತಕ ರೂಪದಲ್ಲಿ ಪ್ರಕಟವಾಗಿರಲಿಲ್ಲ. ಇದೀಗ “ಯಕ್ಷಗಾನ ಪ್ರಸಂಗ ಸಂಪುಟ”ದಲ್ಲಿ ಅವರು ರಚಿಸಿದ ಆರು ಯಕ್ಷಗಾನ ಪ್ರಸಂಗಗಳು ಪ್ರಕಟವಾಗಿರುವ ಕಾರಣ ಮುಂದಿನ ತಲೆಮಾರುಗಳಿಗೆ ಅವು ಲಭ್ಯವಾಗಿವೆ.
ಈ ಸಂಪುಟದಲ್ಲಿರುವ ಆರು ಯಕ್ಷಗಾನ ಪ್ರಸಂಗಗಳು: ಸತ್ಯದಪ್ಪೆ ಚೆನ್ನಮ್ಮ, ನಾಡ ಕೇದಗೆ, ಕಾಂತು ಕಬೇದಿ, ಸಾಮ್ರಾಟ್…
ವಿಧ: ಪುಸ್ತಕ ವಿಮರ್ಶೆ
May 31, 2022
ಟೈಟಾನಿಕ್ ಎಂಬ ಐಷಾರಾಮಿ ಹಡಗಿನ ಬಗ್ಗೆ ಎಷ್ಟೊಂದು ಪುಸ್ತಕಗಳು, ಚಲನಚಿತ್ರಗಳು ಬಂದಿದ್ದರೂ, ಆ ಹಡಗಿನ ಬಗ್ಗೆ, ಅದು ಮುಳುಗಡೆಯಾದ ಬಗ್ಗೆ, ಅದರಲ್ಲಿ ಬದುಕುಳಿದ ಪ್ರಯಾಣಿಕರ ಬಗ್ಗೆ ಕುತೂಹಲಕಾರಿ ಸಂಗತಿಗಳು ಹೊರ ಬರುತ್ತಲೇ ಇವೆ. ಇದೇ ವಿಷಯದ ಬಗ್ಗೆ ಹೊರಬಂದಿರುವ ಹೊಸ ಪುಸ್ತಕ ‘ಮುಳುಗಿದ ಸ್ವರ್ಗ ಟೈಟಾನಿಕ್'. ಲೇಖಕರಾದ ಕೆ ನಟರಾಜ್ ಅವರು ಸಾಗರ ಸುಂದರಿ ಟೈಟಾನಿಕ್ ಮುಳುಗಿದ ಕಥೆ-ವ್ಯಥೆಯನ್ನು ಹೇಳಲು ಹೊರಟಿದ್ದಾರೆ.
ಕೆ.ನಟರಾಜ್ ಅವರು ವಿಜ್ಞಾನ ಮತ್ತು ಇತಿಹಾಸದ ಲೇಖಕರು. ಉತ್ತಮ ಕವಿಯೂ ಹೌದು.…
ವಿಧ: ರುಚಿ
May 30, 2022
ಹಲಸಿನ ಹಣ್ಣಿನ ತೊಳೆಗಳನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿರಿ. ಕುಕ್ಕರಿನಲ್ಲಿ ಎರಡು ವಿಸಿಲ್ ಹಾಕಿ ಕೆಳಗಿಳಿಸಿ. ಬಾಣಲೆಗೆ ತುಪ್ಪ ಹಾಕಿ ಬೇಯಿಸಿದ ಹಣ್ಣಿನ ಮಿಶ್ರಣವನ್ನು ಸೇರಿಸಿ ೧೦ ನಿಮಿಷ ಸಣ್ಣ ಉರಿಯಲ್ಲಿ ಮಗುಚಿ. ಬೆಲ್ಲ ಕುದಿಸಿ ಕರಗಿಸಿ ಸೋಸಿ ಸೇರಿಸಿ. ತೆಂಗಿನಕಾಯಿ ಹಾಲು ಅಥವಾ ಹಸುವಿನ ಹಾಲು ಸೇರಿಸಿ ಸಣ್ಣ ಉರಿಯಲ್ಲಿ ಕುದಿಸಿ. ಏಲಕ್ಕಿ ಹುಡಿ ಹಾಕಿ, ಗೋಡಂಬಿ ತುಪ್ಪದಲ್ಲಿ ಹುರಿದು ಹಾಕಿ ೧೦ ನಿಮಿಷ ಮುಚ್ಚಿಡಿ. ಹಲಸಿನ ಹಣ್ಣಿನ ಪಾಯಸ ರೆಡಿ.(ನಾನು ದನದ ಹಾಲಿನಲ್ಲಿ ತಯಾರಿಸಿರುವೆ)
(…