ಎಲ್ಲ ಪುಟಗಳು

ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
June 23, 2022
ನವಕರ್ನಾಟಕ ಪ್ರಕಾಶನ ಇವರು ಹೊರತರುತ್ತಿರುವ 'ವಿಶ್ವ ಮಾನ್ಯರು' ಮಾಲಿಕೆಯಲ್ಲಿ ಹೊರಬಂದ ಕೃತಿಯೇ ನಕ್ಷತ್ರಗಳ ಭವಿಷ್ಯಕಾರ 'ಸುಬ್ರಹ್ಮಣ್ಯನ್ ಚಂದ್ರಶೇಖರ್'. ಈ ಮಾಲಿಕೆಯ ಸಂಪಾದಕರು ಖ್ಯಾತ ಸಾಹಿತಿ ಡಾ. ನಾ ಸೋಮೇಶ್ವರ ಹಾಗೂ ಕೃತಿಯ ಲೇಖಕರು ವಿಜ್ಞಾನ ಬರಹಗಾರರಾದ ರೋಹಿತ್ ಚಕ್ರತೀರ್ಥ ಇವರು. ರೋಹಿತ್ ಅವರು ಕನ್ನಡದಲ್ಲಿ ವಿಜ್ಞಾನ-ಗಣಿತ ಬರಹಗಾರರ ಸಂಖ್ಯೆ ಕಡಿಮೆ ಎಂಬ ಕೊರತೆಯನ್ನು ನೀಗಿಸಿದವರು. ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರ ಹಲವಾರು ಪುಸ್ತಕಗಳನ್ನು ನವಕರ್ನಾಟಕ ಪ್ರಕಾಶನ ಹೊರ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
June 21, 2022
ಸಾಮಾಜಿಕ ಕಳಕಳಿಯ ಧೀಮಂತ ವಿಜ್ಞಾನಿ 'ಸತೀಶ್ ಧವನ್' ಎಂಬ ಪುಸ್ತಕವನ್ನು 'ವಿಶ್ವಮಾನ್ಯರು' ಪ್ರಕಟಣೆಯ ಅಡಿಯಲ್ಲಿ ಮುದ್ರಿಸಿ ಹೊರತಂದಿದ್ದಾರೆ ಬೆಂಗಳೂರಿನ ನವಕರ್ನಾಟಕ ಪ್ರಕಾಶನ ಇವರು. ವಿಶ್ವಮಾನ್ಯರು ಸರಣಿಯ ಸಂಪಾದಕರು ಖ್ಯಾತ ಸಾಹಿತಿ ಡಾ. ನಾ ಸೋಮೇಶ್ವರ ಇವರು. ಸತೀಶ್ ಧವನ್ ಬಗ್ಗೆ ಸೊಗಸಾದ ಮಾಹಿತಿ ಬರೆದಿದ್ದಾರೆ ಡಾ ಬಿ ಆರ್ ಗುರುಪ್ರಸಾದ್ ಇವರು. ಬಾಹ್ಯಾಕಾಶ ಮತ್ತು ಖಗೋಳ ವಿಜ್ಞಾನದ ಕುರಿತು ಸಂಪನ್ಮೂಲ ವ್ಯಕ್ತಿಯಾಗಿರುವ ಗುರುಪ್ರಸಾದ್ ಇವರು ೩೭ ವರ್ಷ ಇಸ್ರೋದಲ್ಲಿ ಸೇವೆ ಸಲ್ಲಿಸಿ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
June 18, 2022
ರಮೇಶ್ ಅರವಿಂದ್ ಕನ್ನಡದ ಖ್ಯಾತ ಚಲನಚಿತ್ರ ನಟರು, ನಿರ್ದೇಶಕರು ಹಾಗೂ ಕಿರುತೆರೆಯ ಕಾರ್ಯಕ್ರಮ ನಿರೂಪಕರು ಎಂಬ ಸಂಗತಿ ನಿಮಗೆ ಗೊತ್ತೇ ಇದೆ. ಕಿರುತೆರೆಯಲ್ಲಿ 'ವೀಕೆಂಡ್ ವಿದ್ ರಮೇಶ್' ಹಾಗೂ 'ಪ್ರೀತಿಯಿಂದ ರಮೇಶ್' ಮೊದಲಾದ ಕಾರ್ಯಕ್ರಮಗಳನ್ನು ಬಹಳ ಸೊಗಸಾಗಿ ನಿರೂಪಿಸಿದ್ದಾರೆ. ರಮೇಶ್ ಅವರ ಲೇಖನಿಯಿಂದ ಮೂಡಿಬಂದ 'ಆರ್ಟ್ ಆಫ್ ಸಕ್ಸಸ್' ಪುಸ್ತಕವನ್ನು ವೀರಲೋಕ ಬುಕ್ಸ್ ಪ್ರಕಾಶನ ಸಂಸ್ಥೆಯವರು ಬಿಡುಗಡೆಗೊಳಿಸಿದ್ದಾರೆ. ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ೧೬೦ ಟಿಪ್ಸ್ ಗಳು ಈ ಪುಸ್ತಕದಲ್ಲಿ…
ಲೇಖಕರು: addoor
ವಿಧ: ಪುಸ್ತಕ ವಿಮರ್ಶೆ
June 17, 2022
"ಸುಬ್ಬರಾಯರು ನಮ್ಮೂರಿನ ಹಿರಿಯರು, ಶತಾಯುಷಿಗಳು. ಅವರಿಗೆ ಈಗ ೧೦೩ ವರ್ಷ. .... ನೂರರ ಮೇಲೆ ಮೂರಾದರೂ ಲವಲವಿಕೆಯಿಂದ ಓಡಾಡಿಕೊಂಡಿರುವ ಒಂದೇ ಕಾರಣದಿಂದ ಅವರು ನಮ್ಮೂರಿನ ಆಕರ್ಷಣೆಯ ಕೇಂದ್ರ" ಎಂದು ಆರಂಭವಾಗುತ್ತದೆ ಮೊದಲ ಅಧ್ಯಾಯ, "ಮರಗಳ ಒಡನಾಟ." ಅದರ ಎರಡನೇ ಪಾರಾದಲ್ಲೇ ಈ ಪ್ರಶ್ನೆ ಎತ್ತುತ್ತಾರೆ, ಲೇಖಕರಾದ ಎಚ್. ಆರ್. ಕೃಷ್ಣಮೂರ್ತಿಯವರು, "ನೂರು ವಸಂತಗಳನ್ನು ಕಂಡ ಸುಬ್ಬರಾಯರೇ ಇಂತಹ ಆಕರ್ಷಣೆಯ ಕೇಂದ್ರವಾದರೆ, ನೂರಾರು ಸಾವಿರಾರು ವರ್ಷಗಳಾದರೂ ಆರೋಗ್ಯಪೂರ್ಣವಾಗಿ ಬದುಕುತ್ತಿರುವ…
ಲೇಖಕರು: Shreerama Diwana
ವಿಧ: ಪುಸ್ತಕ ವಿಮರ್ಶೆ
June 17, 2022
ಮಗ - ಸೊಸೆ ಸಂಪಾದಿಸಿದ ಕೃತಿ "ಪದ್ಮನಾಭ ಪಾಹಿಮಾಂ: ಒಂದು ಸಂಸ್ಮರಣೆ" "ಪದ್ಮನಾಭ ಪಾಹಿಮಾಂ: ಒಂದು ಸಂಸ್ಮರಣೆ", ದಿ | ಕೆ. ಎಸ್. ಪದ್ಮನಾಭ ಆಚಾರ್ಯ ಅವರ ಪುತ್ರ ಕಡಿಯಾಳಿ ಬಾಲಕೃಷ್ಣ ಆಚಾರ್ಯ ಹಾಗೂ ಸೊಸೆ ಶ್ರೀಮತಿ ವಾಣಿ ಬಿ. ಆಚಾರ್ಯ ಅವರು ಜಂಟಿಯಾಗಿ ಜವಾಬ್ದಾರಿ ವಹಿಸಿಕೊಂಡು ಸಂಪಾದಿಸಿ ತಮ್ಮದೇ ಆದ " ಸೌರಭ ಪ್ರಕಾಶನ, ಕೊರಂಗ್ರಪಾಡಿ, ಉಡುಪಿ" ಇದರ ಮೂಲಕ ಪ್ರಕಟಿಸಿದ ಕೃತಿ. ಕಡಿಯಾಳಿ ಬಾಲಕೃಷ್ಣ ಆಚಾರ್ಯರು ಬಹುಮುಖ ಸಾಧಕರಾಗಿ ಪ್ರಸಿದ್ಧಿ ಪಡೆದವರು. ಇವರ ಪತ್ನಿ ವಾಣಿ ಬಿ. ಆಚಾರ್ಯ ಅವರು ಸಹ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
June 16, 2022
"ನನ್ನ ಪುಸ್ತಕ ಹಿಡಿಸದಿದ್ದರೆ ನಿಮ್ಮ ಹಣ ಮರಳಿ ಪಡೆಯಿರಿ" ಎಂದು ವಿನಮ್ರಪೂರ್ವಕವಾಗಿ ಚಾಲೆಂಜ್ ಮಾಡಿದಾಗ ಪತ್ರಕರ್ತ, ಅಂಕಣಕಾರ ಸಂತೋಷಕುಮಾರ ಮೆಹಂದಳೆ ಅವರಿನ್ನೂ ಪುಸ್ತಕವನ್ನು ಬರೆದಿರಲಿಲ್ಲ. ಅವರದ್ದೇ ಮಾತುಗಳಲ್ಲಿ ಹೇಳುವುದಾದರೆ "... ವಿನಮ್ರ ಸವಾಲೆಸೆದು ಬರೆಯಲು ಕೂತ ಮೇಲೆ, ಅದನ್ನು ಹಿಂದೆಗೆದ ದಿನ ಪೆನ್ನು ಕೆಳಗಿಡುತ್ತೇನೆನ್ನುವ ಅಕ್ಷರ ವ್ಯಾಮೋಹಿ ನಾನು. ಇದರರ್ಥ ದುಡ್ಡು ಕೊಟ್ಟೇ ಓದಿರಿ ಎಂದಾದ ಮೇಲೆ ಓದಿಸಬಲ್ಲ ಪುಸ್ತಕಗಳನ್ನೇ ಕೊಡುತ್ತೇನೆನ್ನುವ ಬದ್ಧತೆಯೂ ಲೇಖಕನಿಗೆ ಇರಬೇಕಲ್ಲವೇ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
June 15, 2022
ಡಾ. ಬಸವರಾಜ ಸಾದರ ಅವರ 'ನೋಯುವ ಹಲ್ಲಿಗೆ ಹೊರಳುವ ನಾಲಿಗೆ' ಕೃತಿಯಲ್ಲಿ ಒಟ್ಟು ನಲವತ್ನಾಲ್ಕು ಲೇಖನಗಳಿವೆ. ಕೃತಿಯ ಶೀರ್ಷಿಕೆಯೇ ರೂಪಕದಲ್ಲಿದೆ. ಹನ್ನೆರಡನೆಯ ಶತಮಾನದ ಶರಣರ ಕ್ರಾಂತಿ ಕನ್ನಡಿಗರ ಪ್ರಜ್ಞೆಯಾಳದಲ್ಲಿ ಸದಾ ಕಾಡುವ ನೋಯುವ ಹಲ್ಲಿನ ನೆನಪು. ಇದು ಕೇವಲ ನಾಸ್ಟಾಲ್ಜಿಯಾ ಮಾದರಿಯ ನೆನಪು ಅಲ್ಲ. ಶ್ರೇಣೀಕೃತ ಸಮಾಜದಲ್ಲಿ ಜಾತಿವ್ಯವಸ್ಥೆ ಇರುವವರೆಗೂ ಆ ನೋವು ತಪ್ಪಿದ್ದಲ್ಲ. ಹಾಗಾಗಿ ಆ ಕ್ರಾಂತಿಯ ನೆನಪು ನೇವರಿಕೆಯ ನಿವಾರಣೆಯ ಹಿತದ ನೆನಪಾಗಿ ಬಿಟ್ಟೆನೆಂದರೂ ಬಿಡದ ಅನುಬಂಧದ ಹೊರಳು…
ವಿಧ: ಪುಸ್ತಕ ವಿಮರ್ಶೆ
June 14, 2022
ಈ 'ನಾ. ಕಾರಂತ' ಎಂಬ ಹೆಸರು ನೋಡಿದಾಗಲೆಲ್ಲ ನನಗೆ ನಾನೇ ಕೇಳಿಕೊಳ್ಳುವುದುಂಟು. ಇದೊಂದು ಯಾವ ನಮೂನೆಯ ಜನ ಮಾರಾಯ್ರೆ, ಅಂತ. ಹೇಳಿಕೇಳಿ ಪತ್ರಕರ್ತರು ಮತ್ತು ಯಕ್ಷಗಾನ ಕಲಾವಿದರು. ಯಾವಾಗ ನೋಡಿದರೂ ಯಾವುದೋ ಊರಿನ ಸುತ್ತಾಟದಲ್ಲಿರುತ್ತಾರೆ; ಯಾರೋ ಒಬ್ಬ ಪ್ರಯೋಗಶೀಲ ರೈತ ಅಥವಾ ಕಲಾವಿದರೊಡನೆ ಮಾತಾಡಿಕೊಂಡು ಕೂತಿರುತ್ತಾರೆ; ಇಲ್ಲವೇ ಯಾವುದೋ ಒಂದು ಆಟದಲ್ಲೋ ಕೂಟದಲ್ಲೋ ರಂಗದ ಮೇಲಿರುತ್ತಾರೆ. ಪತ್ರಿಕೆಗಳಲ್ಲಿ ತಿಂಗಳಿಗೆ ಐದಾರು ಬೈಲೈನು ಖಾಯಂ. ಇಂತಿಪ್ಪ ಕಾರಂತರ ಎರಡೋ ಮೂರೋ ಪುಸ್ತಕಗಳು ಪ್ರತೀ…
ಲೇಖಕರು: Ashwin Rao K P
ವಿಧ: ಪುಸ್ತಕ ವಿಮರ್ಶೆ
June 11, 2022
ದುಂಡಿರಾಜರ ಹನಿಗವನ ಎಂದರೆ ಮುಖದಲ್ಲಿ ಮಂದಹಾಸ ಮೂಡುತ್ತದೆ. ನಾಲ್ಕೈದು ಸಾಲುಗಳಲ್ಲೇ ಪಂಚ್ ನೀಡಿ ಮುದಗೊಳಿಸುವ ಹನಿಗವನ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ದುಂಡಿರಾಜ್ ಅವರು ಈ ಹನಿಗವನಗಳನ್ನು ಹೇಗೆ ರಚನೆ ಮಾಡುತ್ತಾರೆ ಎಂಬ ಬಗ್ಗೆ ಆಲೋಚನೆ ಮಾಡಿದ್ದೀರಾ? ಹನಿಗವನದ ಬಗ್ಗೆ ನಿಮಗಿರುವ ಸಂಶಯವನ್ನು ನಿವಾರಣೆ ಮಾಡಲು ಅಂಕಿತ ಪುಸ್ತಕ ಪ್ರಕಾಶನದವರು ನಿಮಗಾಗಿ ದುಂಡಿರಾಜ್ ಅವರ 'ಹನಿಗವನ ಏನು? ಏಕೆ? ಹೇಗೆ?' ಎಂಬ ಪುಸ್ತಕವನ್ನು ಹೊರತಂದಿದ್ದಾರೆ. ಕೃತಿಕಾರರಾದ ಎಚ್ ದುಂಡಿರಾಜ್ ಅವರು ತಮ್ಮ…
ಲೇಖಕರು: venkatesh
ವಿಧ: ಬ್ಲಾಗ್ ಬರಹ
June 11, 2022
ನನಗೋ ಈಗ ೭೭ ತುಂಬಿ ೭೮ ನೇ ವರ್ಷ ಶುರುವಾಗೋ ಸಮಯ; ಆದ್ರೂ, ದಿನಾನೂ ಆ ಮಹಾ ತಾಯಿ, ನಮ್ಮನ ಜ್ಞಾಪಕ ಬರ್ದೇ ಇರಲ್ಲ.ನಾವು ನಾಲ್ಕುಮಂದಿ ಮಕ್ಳೂ ಅಮ್ಮನಿಗೆ ಆಗಾಗ ಸಹಾಯಮಾಡುತ್ತಿದ್ದೆವು. ಕೆಲವು ವೇಳೆ ಅಮ್ಮ ಹೇಳಿದ ಮಾತುಗಳು ನಮಗೆ ಚುಚ್ಚುತ್ತಿದ್ದವು. ಅದೇನೋ ಹೇಳ್ತಾರಲ್ಲ, "ಆಳ್ಮಾಡೊದ್ ಹಾಳು, ಮಗ ಮಾಡೋದ್ ಮಧ್ಯಮ ; ತಾನ್ ಮಾಡೊದ್ ಉತ್ತಮ " ಗೊತ್ತಾಯ್ತಲ್ಲ. ದಿನದಲ್ಲಿ ಅದೆಷ್ಟ್ ಗಾದೆಗಳ್ನ ಹೇಳೋಳು ಅವ್ಳು ಅಂತ ಈಗ್ ಲೆಕ್ಕ ಹಾಕಿದ್ರೆ, ಪ್ರತಿ ಒಂದ್ ಗಂಟೆಗೆ, ೪ ಆದೃ ಇರೋದು ಅಂತ ನನ್ನ ಲೆಕ್ಕ…