ಅಕ್ಷರಗಳಿಂದ ದೂರ

ಅಕ್ಷರಗಳಿಂದ ದೂರ

ದಣಿಯದೆ ಇರುವ ಕಲಿತ ಮನುಷ್ಯನನ್ನು ನೀವು ನೋಡಲಾರಿರಿ. ಪಂಡಿತರನ್ನು ನೋಡಿ , ಯಾವಾಗಲೂ ದಣಿದಿರುತ್ತಾರೆ, ಶಬ್ದಗಳೊಂದಿಗೆ ಕೆಲಸ ಮಾಡುತ್ತ ಯಾವಾಗಲೂ ದಣಿದಿರುತ್ತಾರೆ. ಗಮನಿಸಿ , ಒಬ್ಬ ಕೂಲಿಕಾರ್ಮಿಕ ಕೂಡ ಅಷ್ಟೊಂದು ದಣಿದಿರುವದಿಲ್ಲ . ಏಕೆಂದರೆ ಅವನು ಜೀವನದೊಂದಿಗೆ ಕೆಲಸ ಮಾಡುತ್ತಿದ್ದಾನೆ. ನೀವು ತಲೆಯನ್ನು ಮಾತ್ರ ಬಳಸಿ ಶಬ್ದಗಳೊಂದಿಗೆ , ವ್ಯರ್ಥ ಶಬ್ದಗಳೊಂದಿಗೆ ಕೆಲಸ ಮಾಡುತ್ತಿರುವಾಗ ದಣಿಯುತ್ತೀರಿ.

ಜೀವನವು ಚೈತನ್ಯದಾಯಕವಾಗಿದೆ . ಅದೇ ನೀವು ತೋಟದಲ್ಲಿ ಕೆಲಸಮಾಡುವಾಗ , ನೀವು ಬೆವರುತ್ತೀರಿ, ಆದರೆ ನೀವು ಹೆಚ್ಚು ಚೈತನ್ಯ ಪಡೆಯುತ್ತೀರಿ , ಹೊರತು ಕಳೆದುಕೊಳ್ಳುವದಿಲ್ಲ. ವಾಯುವಿಹಾರಕ್ಕೆ ಹೋದಾಗ ನಿಮಗೆ ಹೆಚ್ಚು ಶಕ್ತಿ ಪಡೆಯುತ್ತೀರಿ. ಯಾಕೆಂದರೆ ಆಗ ನೀವು ಪ್ರಸ್ತುತ ಕ್ಷಣದಲ್ಲಿ ಜೀವಿಸಿರುತ್ತೀರಿ. ಆದರೆ ನೀವು ನಿಮ್ಮನ್ನು ಶಬ್ದಗಳೊಂದಿಗೆ ಅಭ್ಯಾಸದೊಡನೆ ತೊಡಗಿದಾಗ , ಯೋಚಿಸುತ್ತಾ ಹೋಗುತ್ತಿರಿ. ಅದು ಎಷ್ಟೊಂದು ನಿರ್ಜೀವ ಕ್ರಿಯೆ ಆಗಿದೆ ಎಂದರೆ ನೀವು ದಣಿದು ಬಿಡುತ್ತೀರಿ. ವಿದ್ವಾಂಸನು ಯಾವಾಗಲೂ ದಣಿದಿರುತ್ತಾನೆ, ಮೂರ್ಖನು ಯಾವಾಗಲೂ ಫ್ರೆಷ್ ಆಗಿ ಇರುತ್ತಾನೆ. ಸಂತನೂ ಕೂಡ ಹಾಗೇ ತಾಜಾ ಆಗಿಯೇ ಇರುತ್ತಾನೆ. ಇಬ್ಬರಲ್ಲೂ ಎಷ್ಟೋ ಸಾಮಾನ್ಯ ಗುಣಗಳಿವೆ.

----- ಎಲ್ಲೋ ಓದಿದ್ದು.

Rating
No votes yet

Comments