ಅರಣ್ಯ ರೋದನ
ಅನಿಲ್ರಮೇಶ್ ಅವರ ಈ ಸುಂದರ ಚಿತ್ರ ನೋಡಿದಾಗ ಆದ ಸಂತೋಷ ಮತ್ತೆ ಶಿವು ಅವರ ‘ಮರ ಉಳಿಸಿ, ಮೆಟ್ರೊ ಕಳಿಸಿ’ ಬ್ಲಾಗ್ ಓದಿದಾಗ ಆದ ಆತಂಕವೇ ನನ್ನ ಈ ಅಳಲಿಗೆ ಕಾರಣವಾದವು.
ಓ ರವಿತೇಜ....
ನಿನ್ನ ತಡೆದು, ಇಳೆಗೆ ನೆರಳನೀವ
ಭಾಗ್ಯ ನನಗಿನ್ನಿಲ್ಲ ದೊರೆಯೇ,
ಹುಲುಮಾನವರೆನ್ನ ಕುಲವನೀಗ
ಸಂಪೂರ್ಣ ನಾಶದಾ ಹಾದಿಗಟ್ಟಿಹರು - ನಿನಗೆ
ತಡೆಯಿಲ್ಲದಂತೆ ಕದವ ತೆರೆದಿಹರು
ಅಲ್ಲಲ್ಲಿ ಓಜೋನ್ ಪದರವ ಕೊರೆದಿಹರು.
ಅನಿಲ್ರವರ ಈ ಚಿತ್ರವನೇ ತೋರಿಸಿ,
ತಮಗರಿವಿಲ್ಲದೇ ಮಾಡಿದ ತಪ್ಪಿಗೆ,
ಅರಿವಿದ್ದೂ ಈಗ ಮಾಡುತಿಹ ತಿಳಿಗೇಡಿತನಕೆ
ವನಸಿರಿಯ ಸೊಬಗು ಹಿಂದಿತ್ತು ಹೀಗೆ
ಎಂದುಲಿಯಲಿ ತಮ್ಮ ಮುಂದಿನ ಪೀಳಿಗೆಗೆ!
ಅವರ ಕರ್ಮವದು ಅನುಭವಿಸಲಿ
ಚಿಂತಿಸಿ ಫಲವೇನು? ಸಾವೆನಗೆ ಕಟ್ಟಿಟ್ಟ ಬುತ್ತಿ
ಬುದ್ಧಿಯಿಲ್ಲದವರಿಗೆ ತಿಳಿಹೇಳಲಾರಿಗಿಹುದು ಶಕ್ತಿ?
Rating
Comments
ಉ: ಅರಣ್ಯ ರೋದನ
In reply to ಉ: ಅರಣ್ಯ ರೋದನ by anil.ramesh
ಉ: ಅರಣ್ಯ ರೋದನ
ಉ: ಅರಣ್ಯ ರೋದನ
In reply to ಉ: ಅರಣ್ಯ ರೋದನ by manjunath s reddy
ಉ: ಅರಣ್ಯ ರೋದನ
ಉ: ಅರಣ್ಯ ರೋದನ
In reply to ಉ: ಅರಣ್ಯ ರೋದನ by asuhegde
ಉ: ಅರಣ್ಯ ರೋದನ
ಉ: ಅರಣ್ಯ ರೋದನ
ಉ: ಅರಣ್ಯ ರೋದನ
In reply to ಉ: ಅರಣ್ಯ ರೋದನ by rasikathe
ಉ: ಅರಣ್ಯ ರೋದನ