ಈ ದಿನ ನನಗೆ ಸುದಿನ

ಈ ದಿನ ನನಗೆ ಸುದಿನ

ಅನನ್ಯ publications ಅವರು ನಡೆಸಿದ ಕವನ ಸ್ಪರ್ಧೆಯಲ್ಲಿ ನನ್ನ ಕವನ "ಮಂಜಿನ ಹನಿ" ಆಯ್ಕೆಯಾಗಿದೆ.

ಅವರು ಹೊರ ತರುತ್ತಿರುವ ಹೊಸ ಕವನ ಸಂಕಲನ " ಕವಿಗಳ ಕಲರವ" ದಲ್ಲಿ ನಲ್ಲಿ ನನ್ನ ಕವನ ಪ್ರಕಟಗೊಳ್ಳುತ್ತಿದೆ. ಅವರಿಗೆ ಬಂದಿದ್ದ 781 ಕವನಗಳಲ್ಲಿ, 100 ಕವನಗಳನ್ನು ಆಯ್ಕೆ ಮಾಡಿದ್ದಾರೆ.
ಅದರಲ್ಲಿ ನನ್ನ "ಮಂಜಿನ ಹನಿ" ಕೂಡ ಒಂದು. ಈ ಪುಸ್ತಕವನ್ನು ಬಹುಷಃ ಜಿ.ಎಸ್. ಶಿವರುದ್ರಪ್ಪ ರವರು ಬಿಡುಗಡೆ ಮಾಡುವ ಸಾದ್ಯತೆ ಇದೆ.

ಮಂಜಿನ ಹನಿ

ಹನಿ ಹನಿ ಹನಿ ಮಂಜಿನ ಹನಿ
ಎಲ್ಲರ ಮನಕೆ ಮುದ ನೀಡುವ ಮಂಜಿನ ಹನಿ
ಸದ್ದು ಮಾಡದೆ ಸುದ್ದಿ ಇಲ್ಲದೆ
ಮೆಲ್ಲನೆ ಧರೆಗೆ ಬರುವ ಮಂಜಿನ ಹನಿ

ಸೂರ್ಯನು ಬರುವ ಮುಂಚೆಯೆ ಬಂದು ಕುಳಿತು
ಅವನ ನೋಟಕೆ ಕಾಯುವೆ, ಅವನ ಕಿರಣಕೆ ನಾಚುವೆ
ನನ್ನವಳ ತುಟಿಗಳ ಮೇಲಿನ ಹನಿಗಳಿಗಿಂತ
ವಿಶೇಷವೇನಿದೆಯೇ ನಿನ್ನಲಿ ಮುಂಜಾನೆಯ ಮಂಜಿನ ಹನಿ

ಹುಲ್ಲು ಎಲೆ ಮರಗಿಡಗಳ ಮೇಲೆ ಕುಳಿತಿರುವ ಮಂಜಿನ ಹನಿಯೇ
ರವಿ ಕಿರಣಕೆ ಪಳ ಪಳ ಹೊಳೆಯುತ್ತಿರುವೆಯೇ
ಯಾರೇ ನಿನಗೆ ಹೇಳಿದ್ದು ಭೂಮಿಗೆ ಹೋಗು ಅಂಥ
ನೋಡೋ ಕಣ್ಣುಗಳಿಗೆ ತಂಪು ನೀಡು ಅಂಥ

ಮುಂಜಾನೆಯ ಸವಿ ಸವಿ ಮುದ ನೀಡುವ ನಿನ್ನ ಪರಿ
ನಿನ್ನ ನೋಡುತ ಶುರುವಾಗಲಿ ನಮ್ಮೆಲ್ಲರ ದಿನಚರಿ

- Vರ ( Venkatesha ರಂಗಯ್ಯ )

Rating
No votes yet

Comments