ಕತ್ತೆಗೊಂದು ಕಿವಿಮಾತು

ಕತ್ತೆಗೊಂದು ಕಿವಿಮಾತು

ಎಲೇ ಕತ್ತೆ, ಬಟ್ಟೆ ಗಂಟನು ಹೊರುತ ಒಣಹುಲ್ಲ ತಿನುವೆಯೇಕೆ?
ರಾಜಲಾಯಕೆ ನಡೆದು ನೀ ಕಡಲೆ ಉಸಳಿಯ ಸುಖದಿ ಮೆಲುತಿರು;
"ಬಾಲವಿದ್ದರೆ ಕುದುರೆ" ಎಂದೆನುವ ಜನರದೇ ಉಸ್ತುವಾರಿ ಅಲ್ಲಿ.
ಅವರು ನುಡಿದರೆ ರಾಜನೊಪ್ಪುವನು ಮಿಕ್ಕವರು ಉಳಿವರು ತೆಪ್ಪಗೆ!

ಸಂಸ್ಕೃತ ಮೂಲ:

ರೇ ರೇ ರಾಸಭ ವಸ್ತ್ರಭಾರವಹನಾತ್ ಕುಗ್ರಾಸಮಶ್ನಾಸಿ ಕಿಂ
ರಾಜಾಶ್ವಾವಸಥಂ ಪ್ರಯಹಿ ಚಣಕಾಭ್ಯೂಷಾನ್ ಸುಖಂ ಭಕ್ಷಯ
ಸರ್ವಾನ್ ಪೃಚ್ಛವತೋ ಹಯಾನಿತಿ ವದಂತ್ಯತ್ರಾಧಿಕಾರೇ ಸ್ಥಿತಾ
ರಾಜಾ ತೈರುದ್ದಿಷ್ಟಮೇವ ಮನುತೇ ಸತ್ಯಂ ತಟಸ್ಥಾಃ ಪರೇ

-ಹಂಸಾನಂದಿ

ಕೊಸರು: ಇತ್ತೀಚೆಗೆ ಕರ್ನಾಟಕ ಸರ್ಕಾರ ’ವಿಕಿಪೀಡಿಯಾ’ ಮಾದರಿಯ ’ಕಣಜ’ (http //kanaja.in/) ಅನ್ನುವ ಜಾಲತಾಣವನ್ನು ಅನಾವರಣೆಗೊಳಿಸಿದ್ದಕ್ಕೂ, ಈ ಪದ್ಯವನ್ನು ನಾನು ಅನುವಾದ ಮಾಡಿದ್ದಕ್ಕೂ ಯಾವುದೇ ನಂಟಿಲ್ಲ ಅನ್ನುವುದನ್ನು ತಿಳಿಯಪಡಿಸಬಯಸುವೆ ;)

Rating
No votes yet

Comments