ಕಮ್ಮಗೋಲನ ಚತುರ ಬಿಲ್ಗಾರಿಕೆ
ಹಲವು ಬಿಲ್ಲಾರರು ಇರುವರು ಜಗದಲ್ಲಿ
ಅಂಬಿನಲಿ ಒಂದನೆರಡಾಗಿ ಸೀಳುವವರು;
ಕಮ್ಮಗೋಲ*ನೋರ್ವ ಬೇರೆತೆರದ ಬಿಲ್ಲಾಳು
ಗುರಿಯಿಟ್ಟು ಇಬ್ಬರನು ಒಂದಾಗಿಸುವವನು!
ಸಂಸ್ಕೃತ ಮೂಲ:
ಏವಸ್ತುಂ ದ್ವಿಧಾ ಕರ್ತುಮ್ ಬಹವಃ ಸಂತಿ ಧನ್ವಿನಃ ।
ಧನ್ವೀ ಸ ಮಾರ ಏವೈಕೋ ದ್ವಯೋಃ ಐಕ್ಯಃ ಕರೋತಿ ಯಃ ॥
एकवस्तुम् द्विधा कर्तुम् बहवः सन्ति धन्विनः ।
धन्वी स मार एवैको द्वयोः ऐक्यः करोति यः ॥
-ಹಂಸಾನಂದಿ
ಕೊಸರು: ಮನ್ಮಥನು ವಸಂತಕಾಲದಲ್ಲಿ ಕಬ್ಬಿನ ಬಿಲ್ಲಿನಲ್ಲಿ ಐದು ಹೂಗಳ ಬಾಣವನ್ನು (ಅರವಿಂದ, ಅಶೋಕ, ಚೂತ, ನವಮಲ್ಲಿಕಾ ಮತ್ತು ನೀಲೋತ್ಪಲ) ಹೂಡಿ ಪ್ರೇಮಿಗಳ ಮೇಲೆ ಗುರಿಯಿಡುವನೆಂಬುದು ಕವಿಸಮಯ.
ಕೊನೆಯ ಕೊಸರು: ಕಮ್ಮಗೋಲ = ಮನ್ಮಥ - ಅಂದರೆ 'ಕಮ್ಮನೆ ಸುವಾಸನೆಯ ಕೋಲುಗಳ(ಬಾಣಗಳ)ನ್ನು ಧರಿಸಿದವ'. "ಕಮ್ಮಗೋಲನ ವೈರಿ ಸುತನಾದ ಸೊಂಡಿಲ ಹೆಮ್ಮಯ್ಯ ಗಣನಾಥನೇ" ಎಂದು ಕನಕದಾಸರು ಗಣೇಶನ ಬಗ್ಗೆ ಹಾಡಿರುವುದನ್ನು ನೆನೆಯಿರಿ.
Rating
Comments
ಉ: ಕಮ್ಮಗೋಲನ ಚತುರ ಬಿಲ್ಗಾರಿಕೆ
ಉ: ಕಮ್ಮಗೋಲನ ಚತುರ ಬಿಲ್ಗಾರಿಕೆ