ಡಾ.ರಾಜ್‌ರಿಲ್ಲದೇ........... ಎರೆಡು ವರ್ಷ : ಒಂದು ನೆನಪು

ಡಾ.ರಾಜ್‌ರಿಲ್ಲದೇ........... ಎರೆಡು ವರ್ಷ : ಒಂದು ನೆನಪು

ಮೊನ್ನೆ ಮಡಿಕೇರಿಯಲ್ಲಿ ನಡೆದ ಹೊಗೇನಕಲ್ ಧರಣಿಯ ಬಗ್ಗೆ ಬರೆಯುತ್ತ ವಿಜಯ ಕರ್ನಾಟಕದಲ್ಲಿ ಒಂದು ವಾಕ್ಯ
"ಮೊಟ್ಟ ಮೊದಲ ಬಾರಿಗೆ ಕರ್ನಾಟಕದ ಹೋರಾಟದಲ್ಲಿ ಒಂದು ನಾಯಕರಿಲ್ಲದ ಅನಾಥ ಪ್ರಜ್ನೆ ಕಾಡಿತು."

ಹೌದು ಕನ್ನಡ ಚಿತ್ರರಂಗದ ಗಣ್ಯರು ಎನಿಸಿಕೊಂಡ ಯಾರಿಗೂ ಈ ಹೊಗೇನಕಲ್ ವಿವಾದದ ಬಗ್ಗೆ ಮಾತನಾಡಲು ದೈರ್ಯ ಅಥವ ಮಾತನಾಡುವುದಿರಲಿ ಅಲ್ಲಿಗೆ ಹಾಜಾರಾಗುವುದಕ್ಕೆ ಪೋಲು ಮಾಡುವಷ್ಟು ಸಮಯವಿರಲಿಲ್ಲ.

ಈ ಹಿಂದೆ ಕರ್ನಾಟಕದ ಹಿತಾಸಕ್ತಿಗೆ ಯವುದೇ ರೀತಿಯ ಕುಂದು ಬಂದರೂ . ಒಂದು ಅಚ್ಚ್ಚ ಕನ್ನಡ ಭಾಷಾ ಪ್ರೇಮಿ ಕೈ ಎತ್ತುತ್ತಿತು . ಕೋಟಿ ಕೋಟಿ ಜನರ ಧ್ವನಿಗೆ ಕೊರಳಾಗುತಿತ್ತು. ಜನರನ್ನು ಸಂಘಟನೆ ಮಾಡಲು ಅವರ ಒಂದು ಕರೆ ಸಾಕಾಗುತ್ತಿತ್ತು.

ಅವರು ನಮ್ಮನ್ನು ಅಗಲಿ ೨ ವರ್ಷಗಳಾಗಿವೆ.

ಆದರೆ ಈ ಅವಧಿಯಲ್ಲಿ ಅವರ ಪ್ರತಿನಿಧಿಯಾಗಿ ಅಥವ ಕನ್ನಡನಾಡಿನ ಕೊರಳಾಗಿ ಕೂಗಲು , ಯಾರು ಮುಂದೆ ಬಂದಿಲ್ಲ

ಚಿತ್ರರಂಗದ ಎಲ್ಲರಿಗೂ ಅವರವರ ಹಿತ , ಪರ, ಸಮಸ್ಯೆಗಳೆ ಮುಖ್ಯವಾಗಿದೆ.

ಅಲ್ಲಿಂದ ಡಾ.ರಾಜರಂತೆ ಒಂದು ಶಕ್ಥಿ ಮುಂದೆ ಬಂದಿಲ್ಲ ಎನ್ನುವುದು ಖೇದದ ಸಂಗತಿಯೇ ಸರಿ

ಡಾ.ರಾಜ್‌ರ ನೆನೆಪು ನನ್ನಂತಹ ಈಗಿನ ಪೀಳಿಗೆಯವರಿಗೆ ಇಷ್ಟು ಕಾಡಿರುವಾಗ ಅವರ ಪ್ರಭಾವ ಎಂತಹ ಅಗಾಧವಾದುದು ಎಂದು ಊಹಿಸಬಹುದು.

ಹೋರಾಟ ದಲ್ಲಿ ಬಿಡಿ

ಸಿನಿಮಾದಲ್ಲಿನ ಅವರ ಆದರ್ಶ , ಕನ್ನಡನುಡಿ, ಅಮ್ಮನ ಪ್ರೇಮ, ಸರಳತೆ ,ಸಜ್ಜನಿಕೆಗಳು ಇಂದು ಮಹಾ ನಟರು ಎಂದು ಕರೆಸಿಕೊಳ್ಳುವವರಲ್ಲಿ ಕಾಣ ಸಿಗದು.
ಅವರಿಗೆ ಪರಭಾಷೆಯಿಂದ ಅಹ್ಹಾನ ಬಂದರೂ ಒಪ್ಪಿರಲಿಲ್ಲ. ರಿಮೇಕ ವಿರೋಧಿಗಳಾಗಿದ್ದರು. ಆ ಭಾಷ ಪ್ರಿಯತೆ ಇಂದು ಯಾರಲ್ಲಿ ಇದೆ.
ಪರಭಾಷೆಯ ಒಂದು ಚಿತ್ರದಲ್ಲಿ ಅಭಿನಯಿಸಲು ತಮ್ಮ ಅಭಿಮಾನವನ್ನಾದರೂ ಒತ್ತೆ ಗಿಡುವ ನಟ ನಟರಿದ್ದಾರೆ.
ಇಲ್ಲಿ ಹೀರೊಗಳಾಗಿ ನಟಿಸಿ ಪರಭಾಷೆಯಲ್ಲಿ ನಾಯಕನ ಕೈನಿಂದ ಒದೆ ತಿನ್ನುವ ಎರೆಡನೆ ಅಥವ ಮೂರನೆ ಖಳನಾಯಕರಾಗಿ ಅನುಭವಿಸಿದವರೂ ಇದ್ದಾರೆ.
ಇವರೆಲ್ಲರ ಮಧ್ಯದಲ್ಲಿ ಪ್ರತ್ಯೇಕ ವಾಗಿ ನಿಲ್ಲುವುದೇ ಡಾ.ರಾಜ್‌ ರವರ ಅಮೋಘ ವ್ಯಕ್ತಿತ್ವ.

ಸದಭಿರುಚಿಯ ಚಿತ್ರಗಳು, ಮಧುರ ಗೀತೆಗಳು, ಅರ್ಥಪೂರ್ಣಾ ಸಾಹಿತ್ಯ ಅವರ ಜೊತೆಗೆ ಹೊರಟು ಹೋಯಿತೇನೊಎಂದು ಕೆಲವೊಮ್ಮೆ ಅನ್ನಿಸುವುದುಂಟು.

ಹಾಗಾಗಿ ಕೆಲವೊಮ್ಮೆ ಡಾ. ರಾಜ್‌ರ ನಂತರ ಯಾರು ? ಎಂಬ ಪ್ರಶ್ನೆಗೆ ಉತ್ತರವೆ ಇಲ್ಲ ಎನ್ನಿಸುವುದೂ ಉಂಟು

ಇದೊಂದು ಆ ಮಹಾನ್ ನಟನಿಗೆ, ಆ ಮಹಾನ್ ಸಂಘಟಿಕನಿಗೆ ನನ್ನ ಶ್ರದ್ದಾಂಜಲಿ
ರೂಪ

Rating
No votes yet

Comments