ಪುಸ್ತಕನಿಧಿ - ನಾನು ಓದಿದ ಕಾದಂಬರಿ - ಪಿ.ವಿ.ನಾರಾಯಣರ 'ಧರ್ಮಕಾರಣ'

ಈ ಕಾದಂಬರಿಯು https://archive.org/details/pvn.dharmakarana0000drpv ಈ ಕೊಂಡಿಯಲ್ಲಿ ಉಚಿತವಾಗಿ ಲಭ್ಯವಿದೆ.
ಈ ಕಾದಂಬರಿಯು 12 ನೇ ಶತಮಾನದ ಸಾಮಾಜಿಕ ಪರಿಸ್ಥಿತಿಯ ಬಗ್ಗೆ ಮತ್ತು ಬಸವಣ್ಣನ ವ್ಯಕ್ತಿತ್ವದ ಬಗ್ಗೆ ಇದೆ.
ಕಾಡುಬರಿಯಲ್ಲಿ ಬಸವಣ್ಣನವರು ಅನೇಕ ವರ್ಷ ಆದಾಗಲೇ ಸಾಮಾಜಿಕ ಬದಲಾವಣೆಗಾಗಿ ದುಡ್ಡಿದಿದ್ದಾರೆ . ಈಗ ಮಧುವಯ್ಯ ಮತ್ತು ಹರಳಯ್ಯರ ಮಕ್ಕಳ ನಡುವೆ ವಿಲೋಮ ಮದುವೆಯ ಸಂಗತಿ ಅವರ ಮುಂದಿದೆ. ಅದರಿಂದ ಜಾತಿನಿರ್ಮೂಲನ ಆಗುವದೆಂದು ಇವರ ನಿರೀಕ್ಷೆ.
ಕೆಲ ಅಧ್ಯಾಯಗಳು ಈ ಬದಲಾವಣೆಗಳನ್ನು ಹೊರಗಿನಿಂದ ನೋಡಿದರೆ ಇನ್ನು ಕೆಲವು ಅಧ್ಯಾಯಗಳು ಬಸವಣ್ಣನವರ ದೃಷ್ಟಿಯಲ್ಲಿ ಇವೆ. ಇದು ನನ್ನಲ್ಲಿ ಸ್ವಲ್ಪ ಗೊಂದಲವನ್ನು ಉಂಟು ಮಾಡಿತು.
ಕೇತಗ ಹಾಗೂ ಚಂದಲೆಯರ ಮದುವೆಯ ಸಂಗತಿ ಅಂದಿನ ಸಮಾಜದಲ್ಲಿ ತಳಮಳ ಸೃಷ್ಟಿಸಿತು. ಕೆಲವು ಶರಣರೇ ಅದರ ವಿರುದ್ಧ ಇದ್ದರು. ಜಾತಿಯ ನಿರ್ಮೂಲನವು ವಚನ ಚಳುವಳಿಯ ಉದ್ದೇಶವಾಗಿದ್ದರೂ ಕೆಲವರು ಮನಸ್ಸಿನಲ್ಲಿ ಇನ್ನೂ ಜಾತಿವ್ಯವಸ್ಥೆ ಉಳಿದಿತ್ತು ಅವರು ಕೇತಗನನ್ನು ಅಪಹರಣ ಮಾಡಿದರೂ ಬಿಜ್ಜಳನ ಸೈನಿಕರು ಅವನನ್ನು ಹುಡುಕಿ ತೆಗೆಯುತ್ತಾರೆ. ಬಸವಣ್ಣನವರ ಪದತ್ಯಾಗ ಮತ್ತು ಕಲ್ಯಾಣದಿಂದ ನಿರ್ಗಮನ ಸಂಗತಿಗಳು ಇಲ್ಲಿವೆ.
ಇಲ್ಲಿ ಕೆಲವು ವಾಕ್ಯಗಳು ನನಗೆ ಇಷ್ಟವಾಗಿ ಬರೆದಿಟ್ಟುಕೊಂಡೆ.