ಪುಸ್ತಕನಿಧಿ - ಬಾಜೀರಾವ್ ಮಸ್ತಾನಿ - ಸರಜೂ ಕಾಟ್ಕರ್ ಅವರ ಕಾದಂಬರಿ

ಪುಸ್ತಕನಿಧಿ - ಬಾಜೀರಾವ್ ಮಸ್ತಾನಿ - ಸರಜೂ ಕಾಟ್ಕರ್ ಅವರ ಕಾದಂಬರಿ

ಡಾ. ಸರಜೂ ಕಾಟ್ಕರ್  ಅವರ ಈ ಕಾದಂಬರಿಯು ಉಚಿತವಾಗಿ VIVIDLIPI ಎಂಬ App ನಲ್ಲಿ ಈ-ಬುಕ್ ರೂಪದಲ್ಲಿ ಇದೆ.  

 ಇದೇ ಕಥೆಯ ಚಲನಚಿತ್ರವನ್ನು ನೀವು ಹಿಂದಿ ಭಾಷೆಯಲ್ಲಿ ನೋಡಿರಬಹುದು. ಮರಾಠ ಸಾಮ್ರಾಜ್ಯದ  ಬ್ರಾಹ್ಮಣ ಪೇಶ್ವೆ ಬಾಜಿರಾಯನು ಶೂರ ಧೀರ. ಹಿಂದೂ ಸಾಮ್ರಾಜ್ಯದ ರಕ್ಷಣೆಗಾಗಿ ಖಡ್ಗ ಹಿಡಿದು ಕ್ಷತ್ರಿಯ ಕರ್ಮವನ್ನು ಮಾಡುತ್ತಿರುವನು. ಈತನಿಗೆ ಈಗಾಗಲೇ ಮದುವೆಯಾಗಿದ್ದರೂ ಮುಸ್ಲಿಂ ನರ್ತಕಿಯಾದ ಮಸ್ತಾನಿಯ ಪ್ರೇಮದಲ್ಲಿ ಬಿದ್ದು ಅವಳನ್ನು ಮದುವೆಯಾಗುವನು. ಅವಳಿಗೆ ಒಂದು ಗಂಡು ಮಗುವಾಗುವುದು. ಅವಳನ್ನು ಪುಣೆಯ ಸಂಪ್ರದಾಯಸ್ಥ ಬ್ರಾಹ್ಮಣ ಸಮಾಜ ಸ್ವೀಕರಿಸುವುದಿಲ್ಲ. 

ಮಸ್ತಾನಿಯು  ಇದೆಲ್ಲದರಿಂದ ನೊಂದು, 'ನಾನು ಮುಸ್ಲಿಮಳಾಗಿ ಹುಟ್ಟಿರುವುದು ತಪ್ಪೇ ' ಎಂದು ಕೇಳಿದರೆ 'ಇಲ್ಲ ನೀನು ಮುಸ್ಲಿಮಳಾಗಿ ಹುಟ್ಟಿದ್ದು ತಪ್ಪಲ್ಲ; ನಾನು ಬ್ರಾಹ್ಮಣನಾಗಿ ಹುಟ್ಟಿದ್ದು ತಪ್ಪು' ಎಂದ ಬಾಜೀರಾವ್.

ಪುಣೆಯ ಬ್ರಾಹ್ಮಣರು ತನ್ನನ್ನು ಬಹಿಷ್ಕರಿಸುವುದು ನೆನಪಿಸಿಕೊಂಡ. ತಾನು ಮಾಡಿದ ಅಪರಾಧವಾದರೂ ಏನು , ಒಬ್ಬ ಮುಸಲ್ಮಾನ ಸುಂದರಿಯನ್ನು ಇಟ್ಟುಕೊಂಡಿದ್ದು, ಅವಳ ಜೊತೆಗೆ ಮಾಂಸದೂಟ  ಮಾಡಿದ್ದು ಹಾಗೂ ಮದ್ಯಪಾನ ಮಾಡಿದ್ದು.
ನಾನು ಬ್ರಾಹ್ಮಣನಿದ್ದುದರಿಂದ ಇವುಗಳನ್ನು
ಮಾಡಬಾರದೆಂದು ಅವರ ಕಟ್ಟಳೆ, ತಾನು ಬ್ರಾಹ್ಮಣನಾಗಿದ್ದು ಖಡ್ಗವನ್ನು ಹಿಡಿದು ಶತ್ರುಗಳನ್ನು ಕೊಂದೆ, ಯುದ್ಧಗಳನ್ನು ಗೆದ್ದೆ.  ಖಡ್ಗವನ್ನು ಹಿಡಿಯುವುದು ಬ್ರಾಹ್ಮಣ ಧರ್ಮವಲ್ಲ, ಕ್ಷತ್ರಿಯನ ಧರ್ಮ .  ಆಗ ಇವರಾರೂ ಆಕ್ಷೇಪಿಸಲಿಲ್ಲ. ನಾನು ಆಗಲೇ ಬ್ರಾಹ್ಮಣ ಧರ್ಮವನ್ನು ತ್ಯಜಿಸಿ ಕ್ಷತ್ರಿಯನಾಗಿದ್ದೇನೆ. ಕ್ಷತ್ರಿಯ ಧರ್ಮದಂತೆ ನಾನು ಪರಸ್ತ್ರೀ ಗಮನ ಮಾಡಿರಬಹುದು, ಮಾಂಸ ತಿಂದಿರಬಹುದು ಮದ್ಯ ಕುಡಿದಿರಬಹುದು. ಈ ಪಂಡಿತೋತ್ತಮರಿಗೆ ಇದು ಏಕೆ ತಿಳಿಯಲಿಲ್ಲ, ನಮಗೇಕೆ ತೊಂದರೆ ಕೊಡುತ್ತಿದ್ದಾರೆ?  ನಾನು ಬೇರೆ ಯಾವ ಅಪರಾಧ ಮಾಡಿಲ್ಲ ಅಧರ್ಮವನ್ನು ಮಾಡಿಲ್ಲ, ಬದಲಾಗಿ ಧರ್ಮದ ರಕ್ಷಣೆ ಮಾಡಿದ್ದೇನೆ, ಇವರುಗಳ ಧರ್ಮವನ್ನು ದೇವಸ್ಥಾನಗಳನ್ನು ದೇವರುಗಳನ್ನು ಕಾಪಾಡಿದ್ದೇನೆ ಎಂದು ಆತನ ಯೋಚನೆ.

ಮುಂದೆ?

ಈ ಕಾದಂಬರಿಯು ಚೆನ್ನಾಗಿದೆ ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ. 

ಈ ಕಾದಂಬರಿ  ಈ ತಿಂಗಳ ಕೊನೆಯವರೆಗೆ ಉಚಿತವಾಗಿ ವಿವಿಡ್ ಲಿಪಿ ಆಂಡ್ರಾಯ್ಡ್ ಆ್ಯಪ್ನಲ್ಲಿ ಲಭ್ಯವಿದೆ.  ಬೇಕಾದರೆ ಈಗಲೇ  ಓದಿಬಿಡಿ! . ಆಮೇಲೆ ನೀವು ಅದನ್ನು ಕೊಳ್ಳಬೇಕಾಗುತ್ತದೆ. 

Rating
Average: 4 (2 votes)